ETV Bharat / state

ಬಲಿಜ ಸಮುದಾಯವನ್ನು ಬಲಿಷ್ಠ ಸಮುದಾಯ ಮಾಡುತ್ತೇನೆ : ಸಿಎಂ ಬೊಮ್ಮಾಯಿ ಅಭಯ

ಹಿಂದುಳಿದ ವರ್ಗ ಒಂದು ಜಾತಿಗೆ ಸೀಮಿತವಲ್ಲ. ಬಡತನ, ಶಿಕ್ಷಣ ಕೊರತೆ ಇರುವ ಒಂದು ವರ್ಗವಿದು. ಅದರ ಅಭಿವೃದ್ಧಿಯೇ ನಮ್ಮ ನಾಡು, ದೇಶದ ಅಭಿವೃದ್ಧಿ. ನಮ್ಮ ದೇಶದ ಸಂಸ್ಕೃತಿ ಬಹಳ ವೈಶಿಷ್ಟ್ಯವಾದದ್ದು. ದೇಶದಲ್ಲಿ ತತ್ವಜ್ಞಾನಿಗಳು ಹುಟ್ಟಿರುವ ಪುಣ್ಯಭೂಮಿ ಇದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು..

author img

By

Published : Mar 27, 2022, 7:14 PM IST

CM Basavaraj Bommai assured to develop the balija community
ಕೈವಾರ ತಾತಯ್ಯ ಜಯಂತೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

ಬೆಂಗಳೂರು : ಹಿಂದುಳಿದಿರುವ ಬಲಿಜ ಸಮಾಜವನ್ನು ಶಿಕ್ಷಣ, ಉದ್ಯೋಗದಲ್ಲಿ ಮುಂದೆ ತರುವ ಜೊತೆಗೆ ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೈವಾರ ತಾತಯ್ಯ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ, ಯುಗ ಪುರುಷರು ಅಂತಾ ಯುಗಕ್ಕೆ ಒಬ್ಬರು ಹುಟ್ಟುತ್ತಾರೆ. ಸಮಾಜದಲ್ಲಿ ಸ್ಪಷ್ಟತೆ ಇಲ್ಲದೇ ಗೊಂದಲವಿದ್ದಾಗ ಇಂತಹ ಯುಗಪುರುಷರು ಹುಟ್ಟುತ್ತಾರೆ. ಅಂತಹ ಕರ್ನಾಟಕದ ಶ್ರೇಷ್ಠ ಯುಗಪುರುಷರು ಕೈವಾರದ ತಾತಯ್ಯ. ಜ್ಞಾನಿಗಳ ಜ್ಞಾನ ಬಂಡಾರ ಕೆಲವೊಮ್ಮೆ ಸಮಾಜಕ್ಕೆ ಮುಟ್ಟೋದಿಲ್ಲ. ಆದರೆ, ಸರಳವಾಗಿ ಸಾಮಾನ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಕೈವಾರ ತಾತಯ್ಯ ತಮ್ಮ ಕೀರ್ತನೆಗಳಿಂದ ಮಾಡಿದರು.

CM Basavaraj Bommai assured to develop the balija community
ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

ಇವತ್ತು ಕೈವಾರ ತಾತಯ್ಯ ನಮ್ಮ ಮಧ್ಯೆ ನಮ್ಮ ನಡುವೆ ಇಲ್ಲ. ಆದರೆ, ಅವರ ತತ್ವಗಳು, ಕೀರ್ತನೆಗಳು, ವಿಚಾರಧಾರೆಗಳು ಇಂದಿಗೂ ಇವೆ. ಇದೇ ಅವರ ಜೀವಂತಿಕೆಗೆ ಸಾಕ್ಷಿ. ಕಾಲವನ್ನ ಮೀರಿ ಚಿಂತನೆ ಮಾಡುವವರಿಗೆ ಆತ ಅಮರ. ಸೂರ್ಯ- ಚಂದ್ರ ಇರುವವರಿಗೂ ಕೈವಾರ ತಾತಯ್ಯ ಇರ್ತಾರೆ. ಇಂತಹ ಕೈವಾರ ತಾತಯ್ಯರನ್ನ ಸದಾಕಾಲ ನೆನಪಿಡಬೇಕು ಅಂತಾ ಸರ್ಕಾರ ತನ್ನ ಕರ್ತವ್ಯ ಎಂದು ಭಾವಿಸಿ ಜನ್ಮದಿನೋತ್ಸವ ಆಚರಿಸುತ್ತಿದ್ದೇವೆ. ವೈಚಾರಿಕತೆಯ ಪ್ರಚಾರ ಮಾಡುವುದು ಕೂಡ ಸರ್ಕಾರದ ಕರ್ತವ್ಯ ಎಂದರು.

ಸಂಸದ ಪಿ. ಸಿ ಮೋಹನ್ ಸದಾ ಸಮಾಜದ ಹತ್ತಿರದಲ್ಲಿರುತ್ತಾರೆ‌. ಅವರು ಬಡವರ ಪರವಾಗಿ, ಸಮಾಜದ ಪರವಾಗಿ ಮನವಿಗಳನ್ನ ತರುತ್ತಿದ್ದರು. 2ಎಗೆ ಸೇರಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಪಿಸಿ ಮೋಹನ್. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಳಕಳಿಯಿಂದ ಹಾಗೂ ಪಿಸಿ ಮೋಹನ್ ಮೇಲಿನ ಪ್ರೀತಿಗಾಗಿ ಬಿ. ಎಸ್ ಯಡಿಯೂರಪ್ಪ ಸ್ಪಂದಿಸಿ 2ಎಗೆ ಬಲಿಜ ಸಮುದಾಯವನ್ನು ಸೇರಿಸಿದರು.

ಹಿಂದುಳಿದ ವರ್ಗ ಒಂದು ಜಾತಿಗೆ ಸೀಮಿತವಲ್ಲ. ಬಡತನ ಶಿಕ್ಷಣ ಕೊರತೆ ಇರುವ ಒಂದು ವರ್ಗವಿದು. ಅದರ ಅಭಿವೃದ್ಧಿಯೇ ನಮ್ಮ ನಾಡು, ದೇಶದ ಅಭಿವೃದ್ಧಿ. ನಮ್ಮ ದೇಶದ ಸಂಸ್ಕೃತಿ ಬಹಳ ವೈಶಿಷ್ಟ್ಯವಾದದ್ದು. ದೇಶದಲ್ಲಿ ತತ್ವಜ್ಞಾನಿಗಳು ಹುಟ್ಟಿರುವ ಪುಣ್ಯಭೂಮಿ ಇದು. ಭಕ್ತಿಯ ಕ್ರಾಂತಿ ಆಗಿರುವುದು ನಮ್ಮ ದೇಶದಲ್ಲಿ ಮಾತ್ರ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗಬೇಕು. ಹಿಂದುಳಿದ ಶ್ರೇಯೋಭಿವೃದ್ಧಿಯೇ ನಮ್ಮ ಕೆಲಸ. ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯ ಮಾಡುತ್ತೇನೆ ಅನ್ನೋದನ್ನ ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.

ಗ್ರ‍ಾಮೀಣ ಭಾಗದ ಮಕ್ಕಳಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ನಿಮ್ಮ ನಿರೀಕ್ಷೆಗಳನ್ನ ಈಡೇರಿಸುತ್ತೇನೆ. ಈ ಒಂದು ಆಚರಣೆ ಅರ್ಥಪೂರ್ಣವಾಗಿದೆ. ಇನ್ಮುಂದೆ ಕೈವಾರ ತಾತಯ್ಯ ತತ್ವಗಳ ಮೇಲೆ ನಮ್ಮ ಬದುಕುಗಳನ್ನ ರೂಪಿಸಿಕೊಳ್ಳಬೇಕು. ನಮ್ಮ ನಾಯಕರಾದ ಯಡಿಯೂರಪ್ಪನವರಿಗೆ ಬಹಳ ಶಕ್ತಿ ಕೊಟ್ಟಿದ್ದೀರಿ. ಅದೇ ರೀತಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಸರ್ವರಿಗೂ ಸಮಪಾಲು : ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಮಾತನಾಡಿ, ಇವತ್ತು ಕೈವಾರ ತಾತಯ್ಯ ಅವರ ಜನ್ಮದಿನೋತ್ಸವ ಆಚರಣೆ ಮಾಡಲಾಗುತ್ತಿದೆ. ಕೈವಾರ ತಾತಯ್ಯ ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದವರು ಅಂತಾ ಕೇಳಿದ್ದೇನೆ. ಪಿ. ಸಿ ಮೋಹನ್ ಅವರ ಒತ್ತಡಕ್ಕೆ ಮಣಿದು 3ಎಯಿಂದ 2ಎಗೆ ವರ್ಗಾಯಿಸಿದ್ದೆ. ಸರ್ವರಿಗೂ ಸಮಪಾಲು ಎಂಬ ನಂಬಿಕೆಯಿಟ್ಟ ನಾನು ಹಿಂದುಳಿದ ಅಭಿವೃದ್ಧಿ ನಿಗಮಗಳ ಅಭಿವೃದ್ಧಿ ಮಾಡಿದ್ದೇನೆ.

ಪ್ರತಿಯೊಬ್ಬರು ಮುನ್ನಡೆಯಬೇಕು : ಬೊಮ್ಮಾಯಿ ಸರ್ಕಾರವೂ ಹಿಂದುಳಿದ ವರ್ಗದವರಿಗೆ ಸಾಕಷ್ಟು ಯೋಜನೆಗಳನ್ನ ನೀಡುತ್ತಿದೆ. ಪಿ. ಸಿ ಮೋಹನ್ ಅವರು ಸಮಾಜದ ಕಳಕಳಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರು ಮುನ್ನಡೆಯಬೇಕು. ಸಮಾಜದವರು ಪಿ. ಸಿ ಮೋಹನ್ ಅವರನ್ನ ಪಡೆದಿರುವುದು ಧನ್ಯ. ಇವರಿಂದ ಇಂತಹ ಕಾರ್ಯಕ್ರಮಗಳನ್ನ ಮಾಡಬಹುದು. ಇಂತಹ ಅಪರೂಪವಾದ ಕಾರ್ಯಕ್ರಮ ಆಯೋಜಿಸಿದ ಪಿ.ಸಿ ಮೋಹನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಚಿವರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್​, ಸಂಸದ ಪಿ ಸಿ ಮೋಹನ್, ನಟಿ ತಾರಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಓದಿ: ರಾಜ್ಯದ ಮಾಜಿ ಶಾಸಕರು, ಮಾಜಿ ಸಂಸದರಿಗೆ ಸಿಗುತ್ತಿರುವ ಪಿಂಚಣಿ ಇಷ್ಟಿದೆ ಕಣ್ರೀ..

ಬೆಂಗಳೂರು : ಹಿಂದುಳಿದಿರುವ ಬಲಿಜ ಸಮಾಜವನ್ನು ಶಿಕ್ಷಣ, ಉದ್ಯೋಗದಲ್ಲಿ ಮುಂದೆ ತರುವ ಜೊತೆಗೆ ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯವನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕೈವಾರ ತಾತಯ್ಯ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಸಿಎಂ, ಯುಗ ಪುರುಷರು ಅಂತಾ ಯುಗಕ್ಕೆ ಒಬ್ಬರು ಹುಟ್ಟುತ್ತಾರೆ. ಸಮಾಜದಲ್ಲಿ ಸ್ಪಷ್ಟತೆ ಇಲ್ಲದೇ ಗೊಂದಲವಿದ್ದಾಗ ಇಂತಹ ಯುಗಪುರುಷರು ಹುಟ್ಟುತ್ತಾರೆ. ಅಂತಹ ಕರ್ನಾಟಕದ ಶ್ರೇಷ್ಠ ಯುಗಪುರುಷರು ಕೈವಾರದ ತಾತಯ್ಯ. ಜ್ಞಾನಿಗಳ ಜ್ಞಾನ ಬಂಡಾರ ಕೆಲವೊಮ್ಮೆ ಸಮಾಜಕ್ಕೆ ಮುಟ್ಟೋದಿಲ್ಲ. ಆದರೆ, ಸರಳವಾಗಿ ಸಾಮಾನ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಕೈವಾರ ತಾತಯ್ಯ ತಮ್ಮ ಕೀರ್ತನೆಗಳಿಂದ ಮಾಡಿದರು.

CM Basavaraj Bommai assured to develop the balija community
ಕೈವಾರ ತಾತಯ್ಯ ಜಯಂತ್ಯುತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

ಇವತ್ತು ಕೈವಾರ ತಾತಯ್ಯ ನಮ್ಮ ಮಧ್ಯೆ ನಮ್ಮ ನಡುವೆ ಇಲ್ಲ. ಆದರೆ, ಅವರ ತತ್ವಗಳು, ಕೀರ್ತನೆಗಳು, ವಿಚಾರಧಾರೆಗಳು ಇಂದಿಗೂ ಇವೆ. ಇದೇ ಅವರ ಜೀವಂತಿಕೆಗೆ ಸಾಕ್ಷಿ. ಕಾಲವನ್ನ ಮೀರಿ ಚಿಂತನೆ ಮಾಡುವವರಿಗೆ ಆತ ಅಮರ. ಸೂರ್ಯ- ಚಂದ್ರ ಇರುವವರಿಗೂ ಕೈವಾರ ತಾತಯ್ಯ ಇರ್ತಾರೆ. ಇಂತಹ ಕೈವಾರ ತಾತಯ್ಯರನ್ನ ಸದಾಕಾಲ ನೆನಪಿಡಬೇಕು ಅಂತಾ ಸರ್ಕಾರ ತನ್ನ ಕರ್ತವ್ಯ ಎಂದು ಭಾವಿಸಿ ಜನ್ಮದಿನೋತ್ಸವ ಆಚರಿಸುತ್ತಿದ್ದೇವೆ. ವೈಚಾರಿಕತೆಯ ಪ್ರಚಾರ ಮಾಡುವುದು ಕೂಡ ಸರ್ಕಾರದ ಕರ್ತವ್ಯ ಎಂದರು.

ಸಂಸದ ಪಿ. ಸಿ ಮೋಹನ್ ಸದಾ ಸಮಾಜದ ಹತ್ತಿರದಲ್ಲಿರುತ್ತಾರೆ‌. ಅವರು ಬಡವರ ಪರವಾಗಿ, ಸಮಾಜದ ಪರವಾಗಿ ಮನವಿಗಳನ್ನ ತರುತ್ತಿದ್ದರು. 2ಎಗೆ ಸೇರಿಸುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಪಿಸಿ ಮೋಹನ್. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಳಕಳಿಯಿಂದ ಹಾಗೂ ಪಿಸಿ ಮೋಹನ್ ಮೇಲಿನ ಪ್ರೀತಿಗಾಗಿ ಬಿ. ಎಸ್ ಯಡಿಯೂರಪ್ಪ ಸ್ಪಂದಿಸಿ 2ಎಗೆ ಬಲಿಜ ಸಮುದಾಯವನ್ನು ಸೇರಿಸಿದರು.

ಹಿಂದುಳಿದ ವರ್ಗ ಒಂದು ಜಾತಿಗೆ ಸೀಮಿತವಲ್ಲ. ಬಡತನ ಶಿಕ್ಷಣ ಕೊರತೆ ಇರುವ ಒಂದು ವರ್ಗವಿದು. ಅದರ ಅಭಿವೃದ್ಧಿಯೇ ನಮ್ಮ ನಾಡು, ದೇಶದ ಅಭಿವೃದ್ಧಿ. ನಮ್ಮ ದೇಶದ ಸಂಸ್ಕೃತಿ ಬಹಳ ವೈಶಿಷ್ಟ್ಯವಾದದ್ದು. ದೇಶದಲ್ಲಿ ತತ್ವಜ್ಞಾನಿಗಳು ಹುಟ್ಟಿರುವ ಪುಣ್ಯಭೂಮಿ ಇದು. ಭಕ್ತಿಯ ಕ್ರಾಂತಿ ಆಗಿರುವುದು ನಮ್ಮ ದೇಶದಲ್ಲಿ ಮಾತ್ರ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗಬೇಕು. ಹಿಂದುಳಿದ ಶ್ರೇಯೋಭಿವೃದ್ಧಿಯೇ ನಮ್ಮ ಕೆಲಸ. ಬಲಿಜ ಸಮುದಾಯದವನ್ನ ಬಲಿಷ್ಠ ಸಮುದಾಯ ಮಾಡುತ್ತೇನೆ ಅನ್ನೋದನ್ನ ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.

ಗ್ರ‍ಾಮೀಣ ಭಾಗದ ಮಕ್ಕಳಿಗೆ ಉದ್ಯೋಗ, ಶಿಕ್ಷಣ ಸೇರಿದಂತೆ ನಿಮ್ಮ ನಿರೀಕ್ಷೆಗಳನ್ನ ಈಡೇರಿಸುತ್ತೇನೆ. ಈ ಒಂದು ಆಚರಣೆ ಅರ್ಥಪೂರ್ಣವಾಗಿದೆ. ಇನ್ಮುಂದೆ ಕೈವಾರ ತಾತಯ್ಯ ತತ್ವಗಳ ಮೇಲೆ ನಮ್ಮ ಬದುಕುಗಳನ್ನ ರೂಪಿಸಿಕೊಳ್ಳಬೇಕು. ನಮ್ಮ ನಾಯಕರಾದ ಯಡಿಯೂರಪ್ಪನವರಿಗೆ ಬಹಳ ಶಕ್ತಿ ಕೊಟ್ಟಿದ್ದೀರಿ. ಅದೇ ರೀತಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಸರ್ವರಿಗೂ ಸಮಪಾಲು : ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ಮಾತನಾಡಿ, ಇವತ್ತು ಕೈವಾರ ತಾತಯ್ಯ ಅವರ ಜನ್ಮದಿನೋತ್ಸವ ಆಚರಣೆ ಮಾಡಲಾಗುತ್ತಿದೆ. ಕೈವಾರ ತಾತಯ್ಯ ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಪಡೆದಿದ್ದವರು ಅಂತಾ ಕೇಳಿದ್ದೇನೆ. ಪಿ. ಸಿ ಮೋಹನ್ ಅವರ ಒತ್ತಡಕ್ಕೆ ಮಣಿದು 3ಎಯಿಂದ 2ಎಗೆ ವರ್ಗಾಯಿಸಿದ್ದೆ. ಸರ್ವರಿಗೂ ಸಮಪಾಲು ಎಂಬ ನಂಬಿಕೆಯಿಟ್ಟ ನಾನು ಹಿಂದುಳಿದ ಅಭಿವೃದ್ಧಿ ನಿಗಮಗಳ ಅಭಿವೃದ್ಧಿ ಮಾಡಿದ್ದೇನೆ.

ಪ್ರತಿಯೊಬ್ಬರು ಮುನ್ನಡೆಯಬೇಕು : ಬೊಮ್ಮಾಯಿ ಸರ್ಕಾರವೂ ಹಿಂದುಳಿದ ವರ್ಗದವರಿಗೆ ಸಾಕಷ್ಟು ಯೋಜನೆಗಳನ್ನ ನೀಡುತ್ತಿದೆ. ಪಿ. ಸಿ ಮೋಹನ್ ಅವರು ಸಮಾಜದ ಕಳಕಳಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬರು ಮುನ್ನಡೆಯಬೇಕು. ಸಮಾಜದವರು ಪಿ. ಸಿ ಮೋಹನ್ ಅವರನ್ನ ಪಡೆದಿರುವುದು ಧನ್ಯ. ಇವರಿಂದ ಇಂತಹ ಕಾರ್ಯಕ್ರಮಗಳನ್ನ ಮಾಡಬಹುದು. ಇಂತಹ ಅಪರೂಪವಾದ ಕಾರ್ಯಕ್ರಮ ಆಯೋಜಿಸಿದ ಪಿ.ಸಿ ಮೋಹನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಚಿವರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್​, ಸಂಸದ ಪಿ ಸಿ ಮೋಹನ್, ನಟಿ ತಾರಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಓದಿ: ರಾಜ್ಯದ ಮಾಜಿ ಶಾಸಕರು, ಮಾಜಿ ಸಂಸದರಿಗೆ ಸಿಗುತ್ತಿರುವ ಪಿಂಚಣಿ ಇಷ್ಟಿದೆ ಕಣ್ರೀ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.