ETV Bharat / state

ಇಸ್ಲಾಂನ 72 ಪಂಗಡದವರು ವಾಸ ಮಾಡುವ ವಿಶ್ವದ ಏಕೈಕ ರಾಷ್ಟ್ರ ಭಾರತ : ರಾಮ್​ ಮಾಧವ್ - BJP office latest news

ನಮ್ಮ ಪ್ರತಿಪಕ್ಷ ನಾಯಕರುಗಳು ನಾಲೆಡ್ಜ್ ಫ್ರೂಫ್ ಹಾಗೂ ಇನ್ ಫರ್ಮೇಶನ್ ಫ್ರೂಫ್ ಆಗಿದ್ದಾರೆ. ಅವರ ತಲೆಗೆ ಮಾಹಿತಿಯೂ ಹೋಗಲ್ಲ. ಬುದ್ದಿಮತ್ತೆಯೂ ಹೋಗಲ್ಲ. ಅದಕ್ಕೆ ಪೌರತ್ವ ಕಾಯ್ದೆಯನ್ನು ಆಧರಿಸಿ ವಿಚಾರಹೀನ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್ ಹೇಳಿದ್ದಾರೆ

meeting
ಸಭೆ
author img

By

Published : Dec 30, 2019, 7:50 PM IST

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿ ನಾಯಕರ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸಿಎಂ ಬಿಎಸ್​ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್, ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಆರ್​.ಅಶೋಕ್ ಸೇರಿದಂತೆ ಸಚಿವರು ಶಾಸಕರು ಭಾಗವಹಿಸಿದ್ದರು.

ಬಿಜೆಪಿ ನಾಯಕರ ಸಭೆ

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್ ಮಾತನಾಡಿ, ಪೌರತ್ವ ಕಾಯಿದೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ನಮ್ಮ ಪ್ರತಿಪಕ್ಷ ನಾಯಕರುಗಳು ನಾಲೆಡ್ಜ್ ಫ್ರೂಫ್ ಹಾಗೂ ಇನ್ ಫರ್ಮೇಷನ್ ಫ್ರೂಫ್ ಆಗಿದ್ದಾರೆ. ಅವರ ತಲೆಗೆ ಮಾಹಿತಿಯೂ ಹೋಗಲ್ಲ. ಬುದ್ದಿಮತ್ತೆಯೂ ಹೋಗಲ್ಲ. ಅದಕ್ಕೆ ಪೌರತ್ವ ಕಾಯ್ದೆಯನ್ನು ಆಧರಿಸಿ ವಿಚಾರಹೀನ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಪೌರತ್ವ ಕಾಯ್ದೆ ಯಾರ ವಿರೋಧಿಯೂ ಅಲ್ಲ ಎಂದರು.

ಸೋನಿಯಾಗಾಂಧಿ ಭಾರತೀಯರಾದ ರಾಜೀವ್ ಗಾಂಧಿ ಅವರನ್ನು ವಿವಾಹವಾದ 12 ವರ್ಷಗಳ ಬಳಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ರು. ಅವರಿಗೆ ಪೌರತ್ವ ನೀಡಬೇಕಾದರೆ ಅವರ ಧರ್ಮ ಯಾವುದು ಎಂದು ಪ್ರಶ್ನಿಸಿದರೇನು. ವಿಶ್ವದ ಯಾವುದೇ ದೇಶದ ಮುಸ್ಲಿಂ ಭಾರತದ ಪೌರತ್ವ ಪಡೆಯಬಹುದು. ಆದರೆ, ಅವರು ಪೌರತ್ವ ಕಾಯ್ದೆ ನಿಯಮಾವಳಿಗಳನ್ನು ಪೂರ್ಣಗೊಳಿಸಬೇಕು. ಪಾಕಿಸ್ತಾನಿ ನಾಗರೀಕರಾಗಿದ್ದ ಹಿನ್ನೆಲೆ ಗಾಯಕ ಅದ್ನಾನ್ ಸಾಮಿ ಭಾರತೀಯ ಪೌರತ್ವ ಪಡೆದರು. ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲೇ ಅದ್ನಾನ್ ಸಮಿಗೆ ಪೌರತ್ವ ನೀಡಲಾಯ್ತು. ಅವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನಿರಾಕರಿಸಲಿಲ್ಲ. ಏಕೆಂದರೆ ಅವರು ಕಾನೂನು ಬದ್ದ ನಿಯಮಾವಳಿಗಳನ್ನು ಪೂರೈಸಿದ್ರು ಎಂದರು.

ಅಲ್ಲದೇ ಇಸ್ಲಾಮ್ ನ 72 ಪಂಗಡದವರು ವಾಸ ಮಾಡುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪಾಕಿಸ್ತಾನ ಹಾಗಲ್ಲ. ಅದು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. 1952ರಲ್ಲಿ ಪಾಕಿಸ್ತಾನದ ಪ್ರಧಾನಿಯೇ ಮುಸ್ಲಿಂ ಹಾಗೂ ಮುಸ್ಲಿಮೇತರರನ್ನು ಸಮಾನವಾಗಿ ಕಾಣುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ರು. ಹಾಗಾಗಿಯೇ ಪಾಕಿಸ್ತಾನದ ಕಡೆಯಿಂದ ಮುಸ್ಲಿಮೇತರರ ವಲಸೆ ಹೆಚ್ಚಾಯಿತು.1970ರಲ್ಲಿ ನಿರ್ಮಾಣವಾದ ಬಾಂಗ್ಲಾದೇಶ ಕೂಡ ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಮುಸ್ಲಿಮೇತರರಿಗೆ ಅಲ್ಲಿ ನಿರಂತರ ಕಿರುಕುಳ ನಡೆಯುತ್ತಲೇ ಇದೆ. ಅಲ್ಲಿಂದಲೂ ಭಾರತಕ್ಕೆ ವಲಸೆ ಹೆಚ್ಚಾಗಿದೆ. ಎನ್​ಆರ್​ಸಿ ಪ್ರಕ್ರಿಯೆಯೇ ಶುರುವಾಗಿಲ್ಲ. ಆಗಲೇ ಪ್ರತಿಪಕ್ಷಗಳವರು ಗಲಾಟೆ ಮಾಡುತ್ತಿದ್ದಾರೆ. ಮದುವೆಯೇ ಆಗಿಲ್ಲ. ಮಗುವಿನ ಬಗ್ಗೆ ಗಲಾಟೆ ಮಾಡಿದಂತೆ ಇದು ಎಂದರು.

ಸಭೆಗೆ ಅನೇಕ ಶಾಸಕರು, ಸಂಸದರು ಗೈರು : ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಾಲ್ಗೊಂಡ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಬಹುತೇಕ ಗೈರಾಗಿದ್ದರು. ಬಿಜೆಪಿ ಶಾಸಕರ ಗೈರು ಹಾಜರಾತಿಯಿಂದ ರಾಷ್ಟ್ರೀಯ ಬಿಜೆಪಿ ನಾಯಕನ ಮುಂದೆ ಮುಜುಗರ ಅನುಭವಿಸಿದಂತಾಯಿತು. ಸಂಸದರ ಪೈಕಿ , ಪ್ರತಾಪ್ ಸಿಂಹ್, ರಮೇಶ ಜಿಗಜಿಣಗಿ, ಬಿ.ವೈ.ರಾಘವೇಂದ್ರ, ಆನೇಕಲ್ ನಾರಾಯಣಸ್ವಾಮಿ, ಗದ್ದಿಗೌಡರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಗೈರಾಗಿದ್ದರು.

ಸಭೆ ಬಳಿಕ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಗೊಂದಲ ಮೂಡಿಸಿ, ಅಲ್ಪಸಂಖ್ಯಾತರಲ್ಲಿ ತಪ್ಪು ಭಾವನೆ ಉಂಟು ಮಾಡುವ ಪ್ರಯತ್ನ ವಿರೋಧ ಪಕ್ಷಗಳು ಮಾಡುತ್ತಿವೆ. ನಮ್ಮ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಜನರ ಮನೆ ಮನೆಗೆ ಹೋಗಿ ಈ ಕಾಯ್ದೆ ಬಗ್ಗೆ ಸತ್ಯ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡನೇ ತಾರೀಖು ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ, ಕಾಯಿದೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಎಲ್ಲ ಪ್ರಮುಖ ನಗರಗಳಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿ ನಾಯಕರ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸಿಎಂ ಬಿಎಸ್​ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್, ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ ಆರ್​.ಅಶೋಕ್ ಸೇರಿದಂತೆ ಸಚಿವರು ಶಾಸಕರು ಭಾಗವಹಿಸಿದ್ದರು.

ಬಿಜೆಪಿ ನಾಯಕರ ಸಭೆ

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್​ ಮಾಧವ್ ಮಾತನಾಡಿ, ಪೌರತ್ವ ಕಾಯಿದೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ನಮ್ಮ ಪ್ರತಿಪಕ್ಷ ನಾಯಕರುಗಳು ನಾಲೆಡ್ಜ್ ಫ್ರೂಫ್ ಹಾಗೂ ಇನ್ ಫರ್ಮೇಷನ್ ಫ್ರೂಫ್ ಆಗಿದ್ದಾರೆ. ಅವರ ತಲೆಗೆ ಮಾಹಿತಿಯೂ ಹೋಗಲ್ಲ. ಬುದ್ದಿಮತ್ತೆಯೂ ಹೋಗಲ್ಲ. ಅದಕ್ಕೆ ಪೌರತ್ವ ಕಾಯ್ದೆಯನ್ನು ಆಧರಿಸಿ ವಿಚಾರಹೀನ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಪೌರತ್ವ ಕಾಯ್ದೆ ಯಾರ ವಿರೋಧಿಯೂ ಅಲ್ಲ ಎಂದರು.

ಸೋನಿಯಾಗಾಂಧಿ ಭಾರತೀಯರಾದ ರಾಜೀವ್ ಗಾಂಧಿ ಅವರನ್ನು ವಿವಾಹವಾದ 12 ವರ್ಷಗಳ ಬಳಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ರು. ಅವರಿಗೆ ಪೌರತ್ವ ನೀಡಬೇಕಾದರೆ ಅವರ ಧರ್ಮ ಯಾವುದು ಎಂದು ಪ್ರಶ್ನಿಸಿದರೇನು. ವಿಶ್ವದ ಯಾವುದೇ ದೇಶದ ಮುಸ್ಲಿಂ ಭಾರತದ ಪೌರತ್ವ ಪಡೆಯಬಹುದು. ಆದರೆ, ಅವರು ಪೌರತ್ವ ಕಾಯ್ದೆ ನಿಯಮಾವಳಿಗಳನ್ನು ಪೂರ್ಣಗೊಳಿಸಬೇಕು. ಪಾಕಿಸ್ತಾನಿ ನಾಗರೀಕರಾಗಿದ್ದ ಹಿನ್ನೆಲೆ ಗಾಯಕ ಅದ್ನಾನ್ ಸಾಮಿ ಭಾರತೀಯ ಪೌರತ್ವ ಪಡೆದರು. ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲೇ ಅದ್ನಾನ್ ಸಮಿಗೆ ಪೌರತ್ವ ನೀಡಲಾಯ್ತು. ಅವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನಿರಾಕರಿಸಲಿಲ್ಲ. ಏಕೆಂದರೆ ಅವರು ಕಾನೂನು ಬದ್ದ ನಿಯಮಾವಳಿಗಳನ್ನು ಪೂರೈಸಿದ್ರು ಎಂದರು.

ಅಲ್ಲದೇ ಇಸ್ಲಾಮ್ ನ 72 ಪಂಗಡದವರು ವಾಸ ಮಾಡುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪಾಕಿಸ್ತಾನ ಹಾಗಲ್ಲ. ಅದು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. 1952ರಲ್ಲಿ ಪಾಕಿಸ್ತಾನದ ಪ್ರಧಾನಿಯೇ ಮುಸ್ಲಿಂ ಹಾಗೂ ಮುಸ್ಲಿಮೇತರರನ್ನು ಸಮಾನವಾಗಿ ಕಾಣುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ರು. ಹಾಗಾಗಿಯೇ ಪಾಕಿಸ್ತಾನದ ಕಡೆಯಿಂದ ಮುಸ್ಲಿಮೇತರರ ವಲಸೆ ಹೆಚ್ಚಾಯಿತು.1970ರಲ್ಲಿ ನಿರ್ಮಾಣವಾದ ಬಾಂಗ್ಲಾದೇಶ ಕೂಡ ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಮುಸ್ಲಿಮೇತರರಿಗೆ ಅಲ್ಲಿ ನಿರಂತರ ಕಿರುಕುಳ ನಡೆಯುತ್ತಲೇ ಇದೆ. ಅಲ್ಲಿಂದಲೂ ಭಾರತಕ್ಕೆ ವಲಸೆ ಹೆಚ್ಚಾಗಿದೆ. ಎನ್​ಆರ್​ಸಿ ಪ್ರಕ್ರಿಯೆಯೇ ಶುರುವಾಗಿಲ್ಲ. ಆಗಲೇ ಪ್ರತಿಪಕ್ಷಗಳವರು ಗಲಾಟೆ ಮಾಡುತ್ತಿದ್ದಾರೆ. ಮದುವೆಯೇ ಆಗಿಲ್ಲ. ಮಗುವಿನ ಬಗ್ಗೆ ಗಲಾಟೆ ಮಾಡಿದಂತೆ ಇದು ಎಂದರು.

ಸಭೆಗೆ ಅನೇಕ ಶಾಸಕರು, ಸಂಸದರು ಗೈರು : ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಾಲ್ಗೊಂಡ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಬಹುತೇಕ ಗೈರಾಗಿದ್ದರು. ಬಿಜೆಪಿ ಶಾಸಕರ ಗೈರು ಹಾಜರಾತಿಯಿಂದ ರಾಷ್ಟ್ರೀಯ ಬಿಜೆಪಿ ನಾಯಕನ ಮುಂದೆ ಮುಜುಗರ ಅನುಭವಿಸಿದಂತಾಯಿತು. ಸಂಸದರ ಪೈಕಿ , ಪ್ರತಾಪ್ ಸಿಂಹ್, ರಮೇಶ ಜಿಗಜಿಣಗಿ, ಬಿ.ವೈ.ರಾಘವೇಂದ್ರ, ಆನೇಕಲ್ ನಾರಾಯಣಸ್ವಾಮಿ, ಗದ್ದಿಗೌಡರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಗೈರಾಗಿದ್ದರು.

ಸಭೆ ಬಳಿಕ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಗೊಂದಲ ಮೂಡಿಸಿ, ಅಲ್ಪಸಂಖ್ಯಾತರಲ್ಲಿ ತಪ್ಪು ಭಾವನೆ ಉಂಟು ಮಾಡುವ ಪ್ರಯತ್ನ ವಿರೋಧ ಪಕ್ಷಗಳು ಮಾಡುತ್ತಿವೆ. ನಮ್ಮ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಜನರ ಮನೆ ಮನೆಗೆ ಹೋಗಿ ಈ ಕಾಯ್ದೆ ಬಗ್ಗೆ ಸತ್ಯ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡನೇ ತಾರೀಖು ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ, ಕಾಯಿದೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಎಲ್ಲ ಪ್ರಮುಖ ನಗರಗಳಲ್ಲಿ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

Intro:ಪೌರತ್ವ ಕಾಯ್ದೆ ಯಾರ ವಿರೋಧಿಯೂ ಅಲ್ಲ- ಅಗತ್ಯ ದಾಖಲೆಗಳನ್ನು ಕೊಟ್ಟರೆ ಭಾರತದ ಪೌರತ್ವ ಪಡೆಯಬಹುದು- ರಾಮ್ ಮಾಧವ್


ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಬಿಜೆಪಿ ಕಛೇರಿಯಲ್ಲಿ ಬಿಜೆಪಿ ನಾಯಕರ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಸಿಎಂ ಬಿಎಸ್ ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಮಮಾದವ್ ಯಾದವ್, ಶೋಭಾ ಕರಂದ್ಲಾಜೆ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ , ಸಿಟಿ ರವಿ ಅರ್ ಅಶೋಕ್ ಸೇರಿದಂತೆ ಸಚಿವರು ಶಾಸಕರು ಭಾಗಿಯಾಗಿದ್ರು.
ಸಭೆಗೂ ಮುನ್ನ ಪೇಜಾವರ ಶ್ರೀಗಳ ಫೋಟೋಗೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ಮಾಡಲಾಯಿತು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಮಾಧವ್ ಮಾತನಾಡಿ, ಪಕ್ಷಕ್ಕೆ ಅತ್ಯಂತ ಸಂಕಷ್ಟ ಸಮಯದಲ್ಲಿ ಉತ್ಸಾಹದ ಗೋಲಿ ಅಗತ್ಯವಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ 12 ಸ್ಥಾನಗಳ ವಿಜಯ ತಂದುಕೊಟ್ಟಿದ್ದಾರೆ ಎಂದರು.
ಬಳಿಕ ಕಾಯಿದೆ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿ, ನಮ್ಮಪ್ರತಿಪಕ್ಷ ನಾಯಕರುಗಳು ನಾಲೆಡ್ಜ್ ಫ್ರೂಫ್ ಹಾಗೂ ಇನ್ ಫರ್ಮೇಶನ್ ಫ್ರೂಫ್ ಆಗಿದ್ದಾರೆ.ಅವರ ತಲೆಗೆ ಮಾಹಿತಿಯೂ ಹೋಗಲ್ಲ.ಬುದ್ದಿಮತ್ತೆಯೂ ಹೋಗಲ್ಲ.ಅದಕ್ಕೆ ಪೌರತ್ವ ಕಾಯ್ದೆಯನ್ನು ಆಧರಿಸಿ ವಿಚಾರಹೀನ ಅನಗತ್ಯ ವಿವಾದ ಸೃಷ್ಟಿಸಿದ್ದಾರೆ.ಪೌರತ್ವ ಕಾಯ್ದೆ ಯಾರ ವಿರೋಧಿಯೂ ಅಲ್ಲ ಎಂದರು.
ಸೋನಿಯಾಗಾಂಧಿ ಭಾರತೀಯರಾದ ರಾಜೀವ್ ಗಾಂಧಿಯವರನ್ನು ವಿವಾಹವಾದ 12 ವರ್ಷಗಳ ಬಳಿಕ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ರು. ಅವರಿಗೆ ಪೌರತ್ವ ನೀಡಬೇಕಾದರೆ ಅವರ ಧರ್ಮಯಾವುದು ಎಂದು ಪ್ರಶ್ನಿಸಿದರೇನು. ವಿಶ್ವದ ಯಾವುದೇ ದೇಶದ ಮುಸ್ಲಿಂ ಭಾರತದ ಪೌರತ್ವ ಪಡೆಯಬಹುದು. ಆದರೆ ಅವರು ಪೌರತ್ವ ಕಾಯ್ದೆ ನಿಯಮಾವಳಿಗಳನ್ನು ಪೂರ್ಣಗೊಳಿಸಬೇಕು. ಪಾಕಿಸ್ತಾನಿ ನಾಗರೀಕರಾಗಿದ್ದ ಹಿನ್ನೆಲೆ ಗಾಯಕ ಅದ್ನಾನ್ ಸಾಮಿ ಭಾರತೀಯ ಪೌರತ್ವ ಪಡೆದರು.ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲೇ ಅದ್ನಾನ್ ಸಾಮಿಗೆ ಪೌರತ್ವ ನೀಡಲಾಯ್ತು. ಅವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನಿರಾಕರಿಸಲಿಲ್ಲ.ಏಕೆಂದರೆ ಅವರು ಕಾನೂನು ಬದ್ದ ನಿಯಮಾವಳಿಗಳನ್ನು ಪೂರೈಸಿದ್ರು ಎಂದರು.. ಇಸ್ಲಾಮ್ ನ 72 ಪಂಗಡಗಳವರು ವಾಸ ಮಾಡುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಪಾಕಿಸ್ತಾನ ಹಾಗಲ್ಲ..ಅದು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ.1952ರಲ್ಲಿ ಪಾಕಿಸ್ತಾನದ ಪ್ರಧಾನಿಯೇ ಮುಸ್ಲೀಮ್ ಹಾಗೂ ಮುಸ್ಲೀಮೇತರರನ್ನು ಸಮಾನವಾಗಿ ಕಾಣುವುದಿಲ್ಲ ಎಂದು ಸ್ಪಷ್ಟ ಘೋಷಣೆ ಮಾಡಿದ್ರು.ಹಾಗಾಗಿಯೇ ಪಾಕಿಸ್ತಾನದ ಕಡೆಯಿಂದ ಮುಸ್ಲಿಮೇತರರ ವಲಸೆ ಹೆಚ್ಚಾಯಿತು.1970ರಲ್ಲಿ ನಿರ್ಮಾಣವಾದ ಬಾಂಗ್ಲಾದೇಶ ಕೂಡ ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸಿಕೊಂಡಿದೆ.ಮುಸ್ಲೀಮೇತರರಿಗೆ ಅಲ್ಲಿ ನಿರಂತರ ಕಿರುಕುಳ ನಡೆಯುತ್ತಲೇ ಇದೆ.ಅಲ್ಲಿಂದಲೂ ಭಾರತಕ್ಕೆ ವಲಸೆ ಹೆಚ್ಚಾಗಿದೆ ಎಂದರು. .
ಎನ್ ಆರ್ ಸಿ ಪ್ರಕ್ರಿಯೆಯೇ ಶುರುವಾಗಿಲ್ಲ.ಆಗಲೇ ಪ್ರತಿಪಕ್ಷಗಳವರು ಗಲಾಟೆ ಮಾಡುತ್ತಿದ್ದಾರೆ.ಮದುವೆಯೇ ಆಗಿಲ್ಲ.ಮಗುವಿನ ಬಗ್ಗೆ ಗಲಾಟೆ ಮಾಡಿದಂತೆ ಇದು.ಇನ್ನು ಎನ್ ಪಿ ಆರ್ ಸಾಮಾನ್ಯ ಮಾಹಿತಿ ಪಡೆಯುವ ಗಣತಿ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿದ್ದು.ಅಂದಿನ ಗೃಹಮಂತ್ರಿ ಚಿದಂಬರಂ ಮೊದಲ ಎನ್ ಪಿಆರ್ ಕಾರ್ಡ್ ನ್ನು ಅಂದಿನ ರಾಷ್ಟ್ರಪತಿ ಪ್ರತಿಭಾಪಾಟೀಲ್ ಗೆ ಹಸ್ತಾಂತರಿಸಿದ್ದರು. ಆಗ ಎನ್ ಪಿಆರ್ ಬಗ್ಗೆ ಇಲ್ಲದ ಗೊಂದಲ ಈಗೇಕೆ ಎಂದರು.


ಸಭೆಗೆ ಅನೇಕ ಶಾಸಕರ ಗೈರು
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪಾಲ್ಗೊಂಡ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು ಬಹುತೇಕ ಗೈರಾಗಿದ್ದರು. ಬಿಜೆಪಿ ಶಾಸಕರ ಗೈರು ಹಾಜರಾತಿಯಿಂದ ರಾಷ್ಟ್ರೀಯ ಬಿಜೆಪಿ ನಾಯಕನ ಮುಂದೆ ಮುಜುಗರ ಅನುಭವಿಸಿದಂತಾಯಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಶಾಸಕರು ಭಾಗಿಯಾಗದ ಹಿನ್ನೆಲೆ
ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಕಚೇರಿಗೆ ಬಂದಿದ್ದ ವಿವಿಧ ಮೋರ್ಚಾಗಳ ಕಾರ್ಯಕರ್ತರನ್ನ ಕರೆದು ರಾಮ್ ಮಾಧವ್ ಕಾರ್ಯಕ್ರಮಕ್ಕೆ ಹಾಜರಾತಿ ತೋರಿಸಿದರು. ರಾಮ್ ಮಾಧವ್ ಭಾಷಣ ಆರಂಭ ಆಗುವ ಮುನ್ನ ಖಾಲಿಯಿದ್ದ ಆಸನಗಳನ್ನು ತುಂಬಿಸಿದರು.
ಸಂಸದರ ಪೈಕಿ , ಪ್ರತಾಪ್ ಸಿಂಹ್, ರಮೇಶ ಜಿಗಜಿಣಗಿ, ಬಿ.ವೈ.ರಾಘವೇಂದ್ರ, ಆನೇಕಲ್ ನಾರಾಯಣಸ್ವಾಮಿ, ಗದ್ದಿಗೌಡರ, ಕೇಂದ್ರ ಸಚಿವ ಪ್ರಲ್ಹಾದ್ ಜ್ಯೋಷಿ, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಗೈರಾಗಿದ್ದರು.


ಸಭೆ ಬಳಿಕ ಶೋಭ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ಗೊಂದಲ ಮೂಡಿಸಿ, ಅಲ್ಪಸಂಖ್ಯಾತರಲ್ಲಿ ತಪ್ಪು ಭಾವನೆ ಉಂಟು ಮಾಡುವ ಪ್ರಯತ್ನ ವಿರೋಧ ಪಕ್ಷಗಳು ಮಾಡ್ತಿವೆ. ನಮ್ಮ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಜನರ ಮನೆ ಮನೆಗೆ ಹೋಗಿ ಈ ಕಾಯ್ದೆ ಬಗ್ಗೆ ಸತ್ಯವನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎರಡನೇ ತಾರೀಕು ತುಮಕೂರು ಜಿಲ್ಲೆಯಲ್ಲಿ ಪ್ರಧಾನಿ ಮೋದಿ, ಕಾಯಿದೆ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಎಲ್ಲಾ ಪ್ರಮುಖ ನಗರಗಳಲ್ಲಿ ರ್ಯಾಲಿ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಒಂದು ಕೋಟಿ ಪತ್ರಗಳಿಗೆ ಸಹಿ ಸಂಗ್ರಹಿಸಿ, ಪ್ರಧಾನಿಗಳಿಗೆ ಬೆಂಬಲ ಸೂಚಿಸಿ ಪತ್ರ ತಲುಪಿಸಬೇಕು ಎಂಬ ಗುರಿ ಹೊಂದಲಾಗಿದೆ ಎಂದರು.


ಸೌಮ್ಯಶ್ರೀ
Kn_Bng_05_NRC_7202707Body:
..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.