ETV Bharat / state

ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರಿಂದ ಸಂಚಾರಿ ವಿಜಯ್ ಅಂತಿಮ ದರ್ಶನ

author img

By

Published : Jun 15, 2021, 1:00 PM IST

ವಿವಿಧ ಕ್ಷೇತ್ರಗಳ ಗಣ್ಯರು ನಟ ಸಂಚಾರಿ ವಿಜಯ್ ಅವರ ಅಂತಿಮ ದರ್ಶನ ಪಡೆದರು. ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ನಟ, ನಟಿಯರು ಮತ್ತು ರಾಜಕೀಯ ಮುಖಂಡರು ಅಂತಿಮ ನಮನ ಸಲ್ಲಿಸಿದರು.

last respect to Sanchari Vijay
ಗಣ್ಯರು ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು

ಬೆಂಗಳೂರು: ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ರಾಜಕೀಯ, ಸಿನಿಮಾ ರಂಗದ ಗಣ್ಯರು ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟರಾದ ಶಿವರಾಜ್‌ಕುಮಾರ್, ಧನಂಜಯ್, ಹಿರಿಯ ನಟ‌ ಮುಖ್ಯಮಂತ್ರಿ ಚಂದ್ರು, ನಟಿಯರಾದ ಪಾರೂಲ್ ಯಾದವ್, ರೂಪಿಕಾ, ನಿರ್ದೇಶಕ ಪನ್ನಗ ನಾಗಾಭರಣ, ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್​ ಕುಮಾರ್, ನನಗೆ ಮಾತುಗಳು ಬರ್ತಿಲ್ಲ. ವಿಜಯ್ ಅಗಲಿರುವುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಸಂಚಾರಿ ವಿಜಯ್ ಜೊತೆ ನಾನು ಚಿತ್ರ ಮಾಡಿದ್ದೆ. ಅವರ 'ನಾನು ಅವನಲ್ಲ, ಅವಳು' ಚಿತ್ರ ನೋಡಿದಾಗ ತುಂಬಾ ಖುಷಿ ಆಗಿತ್ತು. ಈಗ ಅವರಿಲ್ಲ ಎಂಬುವುದನ್ನು ಕೇಳಲು ನೋವಾಗ್ತಿದೆ. ವಿಜಯ್​ಗೆ​ ಸಹಾಯ ಮಾಡುವ ಮನೋಭಾವ ಇತ್ತು. ಹಾಗಾಗಿ ತನ್ನ ಅಂಗಾಗ ದಾನ ಮಾಡಿದ್ದಾನೆ. ಹೆಲ್ಮೆಟ್ ಹಾಕಿದ್ದರೆ ವಿಜಯ್ ಅವರ ಜೀವ ಉಳಿಯುತ್ತಿತ್ತು. ಬೈಕ್​ನಲ್ಲಿ ಸಂಚರಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿದರು.

ಗಣ್ಯರು ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು

ಡಾಲಿ‌ ಧನಂಜಯ್: ವಿಜಯ್ ತುಂಬಾ ಚಿಕ್ಕವರು, ಒಳ್ಳೆಯ ವ್ಯಕ್ತಿಯಾಗಿದ್ದರು. ತುಂಬಾ ಚೆನ್ನಾಗಿ ಎಲ್ಲದಕ್ಕೂ ಸ್ಪಂದಿಸುತ್ತಿದ್ದ ಜೀವ, ದುರಂತ ಅಂತ್ಯ ಕಂಡಿದೆ. ತುಂಬಾ ಒಳ್ಳೆಯ ದಿನಗಳನ್ನು ನಾವು ಅವರ ಜೊತೆ ಕಳೆದಿದ್ದೇವೆ. ಒಬ್ಬ ಮನುಷ್ಯನಾಗಿ, ಕಲಾವಿದನಾಗಿ ನಮ್ಮ ಜೊತೆ ಅವರು ಇರುತ್ತಾರೆ ಎಂದರು.

ನಟಿ ರೂಪಿಕಾ: ತುಂಬಾ ಬೇಜಾರಾಗುತ್ತಿದೆ. ಯಾವುದೇ ಅಹಂ ಇಲ್ಲದೆ ಇದ್ದ ನಟ, ಅದ್ಭುತವಾದ ವ್ಯಕ್ತಿತ್ವ. ಅವರು ಇಲ್ಲ ಎಂದು ಹೇಳಲು ಬೇಜಾರು ಆಗುತ್ತಿದೆ. ವಿಜಿ ಸಿನಿಮಾ, ಪುಸ್ತಕಗಳ ಬಗ್ಗೆ ಯಾವಾಗ್ಲೂ ಹೇಳ್ತಿದ್ರು. ಸೋಷಿಯಲ್ ವರ್ಕ್​ ನಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ದಿನದ ಹಿಂದೆ ನಾವು ಮಾತನಾಡಿದ್ವಿ. ಇಂತಹ ಪರಿಸ್ತಿತಿಯಲ್ಲೂ ಅಂಗಾಂಗ ದಾನ ಮಾಡಿದ್ದಾರೆ. ಅವರ ಇಡೀ ಕುಟುಂಬಕ್ಕೆ‌ ಧನ್ಯವಾದ ಎಂದು ಹೇಳಿದರು.

ನಾಗತಿಹಳ್ಳಿ ಚಂದ್ರಶೇಖರ: ಇದು ಸಾವಿನ ಅಟ್ಟಹಾಸ, ವಿಧಿ ಅಟ್ಟಹಾಸ ಮೆರೆದಿದೆ. ಸಾಕಷ್ಟು ಪ್ರತಿಭಾಶಾಲಿ ಕಲಾವಿದ ಆಗಿದ್ದ. ನಮ್ಮ ಜೊತೆ ಇನ್ನಷ್ಟು ಕಾಲ ಇದ್ದು ಸಾಧನೆ ಮಾಡಬೇಕಿತ್ತು. ಈ ದುರಂತ ಸರಮಾಲೆ ಅಂತ್ಯವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಕಂಬನಿ ಮಿಡಿದರು.

ನಟಿ ಪಾರೂಲ್ ಯಾದವ್: ಸಂಚಾರಿ ವಿಜಯ್ ಜೊತೆ ನಾನು ಸಿನಿಮಾ ಮಾಡಿದ್ದೆ. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಅವರ ಜೊತೆ ಅಭಿನಯಿಸಿದ್ದೆ. ತುಂಬಾ ಒಳ್ಳೆಯ ಮನುಷ್ಯ, ರಾಷ್ಟ್ರೀಯ ಪ್ರಶಸ್ತಿ ವಿನ್ನರ್ ಆಗಿದ್ದರು. ಅವರು ತುಂಬಾ ಡೌನ್ ಟೂ ಅರ್ಥ್ ಮನುಷ್ಯ, ನನಗೆ ಸಿನಿಮಾದ ಕೊನೆ ದಿನಗಳಲ್ಲಿ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತರು ಅಂತ ಗೊತ್ತಾಯ್ತು. ನಂತರ ನಾನೇ ಹೋಗಿ ಮಾತನಾಡಿಸಿದ್ದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ದೇವರು ಶಕ್ತಿ ನೀಡಲಿ ಎಂದರು.

ಪನ್ನಗ ನಾಗಾಭರಣ: ನನ್ನ ಗೆಳೆಯ ಸಂಚಾರಿ ವಿಜಯ್ ನಾಟಕದ ದಿನಗಳಿಂದ ನಮ್ಮ ಅಕ್ಕನ ಫ್ರೆಂಡ್. ಸಿನಿಮಾದಲ್ಲಿನ ಆಸಕ್ತಿ ಬಗ್ಗೆ ಮಾತಾಡಿದ್ವಿ, ಅಲ್ಲಮ ಸಿನಿಮಾದಲ್ಲಿ ಬಸವಣ್ಣನ ಪಾತ್ರ ಮಾಡಿದ್ರು. ನಾನು ಅವರನ್ನು ಬಸವಣ್ಣ ಅಂತಾನೆ ಕರೀತಿದ್ದೆ. ಕಳೆದ ವರ್ಷ ಚಿರು ಹೋದ, ಆಗ ಬಂದಿದ್ರು. ಚಿರು ಯಾಕೆ ಇಷ್ಟು ಬೇಗ ಹೊರಟುಬಿಟ್ರು ಅಂದಿದ್ದರು. ಇವತ್ತು ಸಂಚಾರಿಯವರೇ ಹೊರಟಿದ್ದಾರೆ, ತುಂಬಾ ಕಷ್ಟ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಿಳೆಗೆ ಕಿಡ್ನಿ, ಇಬ್ಬರು ಅಂಧರಿಗೆ ಕಣ್ಣು ಕೊಟ್ಟು ಜಗತ್ತು ತೋರಿಸಿದ ಸಂಚಾರಿ ವಿಜಯ್‌

ಬೆಂಗಳೂರು: ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ರಾಜಕೀಯ, ಸಿನಿಮಾ ರಂಗದ ಗಣ್ಯರು ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟರಾದ ಶಿವರಾಜ್‌ಕುಮಾರ್, ಧನಂಜಯ್, ಹಿರಿಯ ನಟ‌ ಮುಖ್ಯಮಂತ್ರಿ ಚಂದ್ರು, ನಟಿಯರಾದ ಪಾರೂಲ್ ಯಾದವ್, ರೂಪಿಕಾ, ನಿರ್ದೇಶಕ ಪನ್ನಗ ನಾಗಾಭರಣ, ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್​ ಕುಮಾರ್, ನನಗೆ ಮಾತುಗಳು ಬರ್ತಿಲ್ಲ. ವಿಜಯ್ ಅಗಲಿರುವುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಸಂಚಾರಿ ವಿಜಯ್ ಜೊತೆ ನಾನು ಚಿತ್ರ ಮಾಡಿದ್ದೆ. ಅವರ 'ನಾನು ಅವನಲ್ಲ, ಅವಳು' ಚಿತ್ರ ನೋಡಿದಾಗ ತುಂಬಾ ಖುಷಿ ಆಗಿತ್ತು. ಈಗ ಅವರಿಲ್ಲ ಎಂಬುವುದನ್ನು ಕೇಳಲು ನೋವಾಗ್ತಿದೆ. ವಿಜಯ್​ಗೆ​ ಸಹಾಯ ಮಾಡುವ ಮನೋಭಾವ ಇತ್ತು. ಹಾಗಾಗಿ ತನ್ನ ಅಂಗಾಗ ದಾನ ಮಾಡಿದ್ದಾನೆ. ಹೆಲ್ಮೆಟ್ ಹಾಕಿದ್ದರೆ ವಿಜಯ್ ಅವರ ಜೀವ ಉಳಿಯುತ್ತಿತ್ತು. ಬೈಕ್​ನಲ್ಲಿ ಸಂಚರಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿದರು.

ಗಣ್ಯರು ಸಂಚಾರಿ ವಿಜಯ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು

ಡಾಲಿ‌ ಧನಂಜಯ್: ವಿಜಯ್ ತುಂಬಾ ಚಿಕ್ಕವರು, ಒಳ್ಳೆಯ ವ್ಯಕ್ತಿಯಾಗಿದ್ದರು. ತುಂಬಾ ಚೆನ್ನಾಗಿ ಎಲ್ಲದಕ್ಕೂ ಸ್ಪಂದಿಸುತ್ತಿದ್ದ ಜೀವ, ದುರಂತ ಅಂತ್ಯ ಕಂಡಿದೆ. ತುಂಬಾ ಒಳ್ಳೆಯ ದಿನಗಳನ್ನು ನಾವು ಅವರ ಜೊತೆ ಕಳೆದಿದ್ದೇವೆ. ಒಬ್ಬ ಮನುಷ್ಯನಾಗಿ, ಕಲಾವಿದನಾಗಿ ನಮ್ಮ ಜೊತೆ ಅವರು ಇರುತ್ತಾರೆ ಎಂದರು.

ನಟಿ ರೂಪಿಕಾ: ತುಂಬಾ ಬೇಜಾರಾಗುತ್ತಿದೆ. ಯಾವುದೇ ಅಹಂ ಇಲ್ಲದೆ ಇದ್ದ ನಟ, ಅದ್ಭುತವಾದ ವ್ಯಕ್ತಿತ್ವ. ಅವರು ಇಲ್ಲ ಎಂದು ಹೇಳಲು ಬೇಜಾರು ಆಗುತ್ತಿದೆ. ವಿಜಿ ಸಿನಿಮಾ, ಪುಸ್ತಕಗಳ ಬಗ್ಗೆ ಯಾವಾಗ್ಲೂ ಹೇಳ್ತಿದ್ರು. ಸೋಷಿಯಲ್ ವರ್ಕ್​ ನಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ದಿನದ ಹಿಂದೆ ನಾವು ಮಾತನಾಡಿದ್ವಿ. ಇಂತಹ ಪರಿಸ್ತಿತಿಯಲ್ಲೂ ಅಂಗಾಂಗ ದಾನ ಮಾಡಿದ್ದಾರೆ. ಅವರ ಇಡೀ ಕುಟುಂಬಕ್ಕೆ‌ ಧನ್ಯವಾದ ಎಂದು ಹೇಳಿದರು.

ನಾಗತಿಹಳ್ಳಿ ಚಂದ್ರಶೇಖರ: ಇದು ಸಾವಿನ ಅಟ್ಟಹಾಸ, ವಿಧಿ ಅಟ್ಟಹಾಸ ಮೆರೆದಿದೆ. ಸಾಕಷ್ಟು ಪ್ರತಿಭಾಶಾಲಿ ಕಲಾವಿದ ಆಗಿದ್ದ. ನಮ್ಮ ಜೊತೆ ಇನ್ನಷ್ಟು ಕಾಲ ಇದ್ದು ಸಾಧನೆ ಮಾಡಬೇಕಿತ್ತು. ಈ ದುರಂತ ಸರಮಾಲೆ ಅಂತ್ಯವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಕಂಬನಿ ಮಿಡಿದರು.

ನಟಿ ಪಾರೂಲ್ ಯಾದವ್: ಸಂಚಾರಿ ವಿಜಯ್ ಜೊತೆ ನಾನು ಸಿನಿಮಾ ಮಾಡಿದ್ದೆ. 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಅವರ ಜೊತೆ ಅಭಿನಯಿಸಿದ್ದೆ. ತುಂಬಾ ಒಳ್ಳೆಯ ಮನುಷ್ಯ, ರಾಷ್ಟ್ರೀಯ ಪ್ರಶಸ್ತಿ ವಿನ್ನರ್ ಆಗಿದ್ದರು. ಅವರು ತುಂಬಾ ಡೌನ್ ಟೂ ಅರ್ಥ್ ಮನುಷ್ಯ, ನನಗೆ ಸಿನಿಮಾದ ಕೊನೆ ದಿನಗಳಲ್ಲಿ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತರು ಅಂತ ಗೊತ್ತಾಯ್ತು. ನಂತರ ನಾನೇ ಹೋಗಿ ಮಾತನಾಡಿಸಿದ್ದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ದೇವರು ಶಕ್ತಿ ನೀಡಲಿ ಎಂದರು.

ಪನ್ನಗ ನಾಗಾಭರಣ: ನನ್ನ ಗೆಳೆಯ ಸಂಚಾರಿ ವಿಜಯ್ ನಾಟಕದ ದಿನಗಳಿಂದ ನಮ್ಮ ಅಕ್ಕನ ಫ್ರೆಂಡ್. ಸಿನಿಮಾದಲ್ಲಿನ ಆಸಕ್ತಿ ಬಗ್ಗೆ ಮಾತಾಡಿದ್ವಿ, ಅಲ್ಲಮ ಸಿನಿಮಾದಲ್ಲಿ ಬಸವಣ್ಣನ ಪಾತ್ರ ಮಾಡಿದ್ರು. ನಾನು ಅವರನ್ನು ಬಸವಣ್ಣ ಅಂತಾನೆ ಕರೀತಿದ್ದೆ. ಕಳೆದ ವರ್ಷ ಚಿರು ಹೋದ, ಆಗ ಬಂದಿದ್ರು. ಚಿರು ಯಾಕೆ ಇಷ್ಟು ಬೇಗ ಹೊರಟುಬಿಟ್ರು ಅಂದಿದ್ದರು. ಇವತ್ತು ಸಂಚಾರಿಯವರೇ ಹೊರಟಿದ್ದಾರೆ, ತುಂಬಾ ಕಷ್ಟ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಿಳೆಗೆ ಕಿಡ್ನಿ, ಇಬ್ಬರು ಅಂಧರಿಗೆ ಕಣ್ಣು ಕೊಟ್ಟು ಜಗತ್ತು ತೋರಿಸಿದ ಸಂಚಾರಿ ವಿಜಯ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.