ETV Bharat / state

ಮಾಜಿ ಮೇಯರ್, ಕಾರ್ಪೊರೇಟರ್​ ಶುರುವಾಯ್ತು ನಡುಕ: ಮತ್ತೆ ಸಿಸಿಬಿ ವಿಚಾರಣೆಗೆ ಬುಲಾವ್ ನೀಡಲು ನಿರ್ಧಾರ

ಡಿ.ಜೆ ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಎದುರಿಸಿ ಹೋದ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್​ ಜಾಕೀರ್ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್​ ನೀಡಲು ಸಿಸಿಬಿ ನಿರ್ಧರಿಸಿದೆ.

author img

By

Published : Aug 25, 2020, 1:36 PM IST

Bangalore riot case
ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಜಾಕೀರ್

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಹುಸೇನ್​​​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಾಥಮಿಕ ತನಿಖೆ ಎದುರಿಸಿ ಹೋಗಿದ್ದ ಇಬ್ಬರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಬುಲಾವ್ ನೀಡಲು ನಿರ್ಧರಿಸಿದೆ.

CCB enquiries
ಮಾಜಿ ಮೇಯರ್ ಸಂಪತ್ ರಾಜ್

ಸದ್ಯ ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ಹೇಳಿಕೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಹೇಳಿಕೆ, ಗಲಭೆ ನಡೆಯುವ ಮುಂಚಿನ ದಿನ ಏನಾಗಿತ್ತು, ಸಂಪತ್​​ ರಾಜ್, ಜಾಕೀರ್ ಹುಸೇನ್ ಚಲನವಲನ ಏನಾಗಿತ್ತು? ಹಾಗೆ ಮಾಜಿ‌ ಮೇಯರ್ ಪಿಎ ಅರುಣ್ ಹೇಳಿಕೆ ಹಾಗೆ ಇಂದು ಸಿಸಿಬಿ ತನಿಖಾಧಿಕಾರಿಗಳ ಕೈಗೆ ಟೆಕ್ನಿಕಲ್ ವರದಿಯನ್ನ ಎಫ್ಎಸ್​​ಎಲ್ ನೀಡಲಿದ್ದು, ಇದರ ಆಧಾರದ ಮೇಲೆ ಸಾಕ್ಷಿಗಳನ್ನ ಇಟ್ಟುಕೊಂಡು ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಈ ಪ್ರಕರಣ ಇಬ್ಬರು ಪಾಲಿಕೆ ಸದಸ್ಯರ ಪಾಲಿಗೆ ಕರಾಳವಾಗುತ್ತಾ? ಸಿಸಿಬಿ ಕೈ ಸೇರಲಿರೋ ಎಫ್​​ಎಸ್ಎಲ್ ವರದಿ ಸಂಪತ್ ರಾಜ್, ಜಾಕೀರ್​​ ಹಣೆಬರಹ ನಿರ್ಧರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ. ಗಲಭೆ ದಿನದಿಂದ ಹಲವರೊಂದಿಗೆ ಇಂಟರ್​ನೆಟ್ ಕಾಲ್, ವಾಟ್ಸಾಪ್ ಮಾಡಿದ್ದ ಶಂಕೆ ಹಿನ್ನೆಲೆ, ಡೇಟಾ ರಿಟ್ರೀವ್​​​ಗಾಗಿ ಮೊಬೈಲ್​​ಗಳನ್ನು ಎಫ್ ಎಸ್ ಎಲ್ ಕೇಂದ್ರಕ್ಕೆ ರವಾನಿಸಿದ್ದಾರೆ. ಸದ್ಯ ಮೊಬೈಲ್ ರಿಟ್ರೀವ್ ವರದಿ ತಡವಾಗುವ ಕಾರಣ ಇರುವ ಸಾಕ್ಷಧಾರದ ಮೇಲೆ ಸಂಪತ್ ರಾಜ್ ‌ಮತ್ತು ಜಾಕೀರ್ ಅವರನ್ನು ತನಿಖೆಗೆ ಕರೆಯಲು ಸಿಸಿಬಿ ನಿರ್ಧರಿಸಿದೆ.

ಘಟನೆ ಸಂಬಂಧ ಇತ್ತೀಚೆಗಷ್ಟೇ ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು, ಪ್ರಕರಣ ಹೆಚ್ಚಾಗಿ ರಾಜಕೀಯ ಮಜಲು ಪಡೆಯುತ್ತಿರುವ ಕಾರಣ ಮತ್ತಷ್ಟು ವಿಚಾರಣೆ ನಡೆಸಲು ನಿರ್ಧಾರ ಮಾಡಿದ್ದಾರೆ. ಇಂದು ಅಥವಾ ಈ ವಾರ ಕೈ ನಾಯಕರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಕಾರ್ಪೊರೇಟರ್ ಜಾಕೀರ್ ಹುಸೇನ್​​​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಾಥಮಿಕ ತನಿಖೆ ಎದುರಿಸಿ ಹೋಗಿದ್ದ ಇಬ್ಬರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಬುಲಾವ್ ನೀಡಲು ನಿರ್ಧರಿಸಿದೆ.

CCB enquiries
ಮಾಜಿ ಮೇಯರ್ ಸಂಪತ್ ರಾಜ್

ಸದ್ಯ ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ಹೇಳಿಕೆ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಹೇಳಿಕೆ, ಗಲಭೆ ನಡೆಯುವ ಮುಂಚಿನ ದಿನ ಏನಾಗಿತ್ತು, ಸಂಪತ್​​ ರಾಜ್, ಜಾಕೀರ್ ಹುಸೇನ್ ಚಲನವಲನ ಏನಾಗಿತ್ತು? ಹಾಗೆ ಮಾಜಿ‌ ಮೇಯರ್ ಪಿಎ ಅರುಣ್ ಹೇಳಿಕೆ ಹಾಗೆ ಇಂದು ಸಿಸಿಬಿ ತನಿಖಾಧಿಕಾರಿಗಳ ಕೈಗೆ ಟೆಕ್ನಿಕಲ್ ವರದಿಯನ್ನ ಎಫ್ಎಸ್​​ಎಲ್ ನೀಡಲಿದ್ದು, ಇದರ ಆಧಾರದ ಮೇಲೆ ಸಾಕ್ಷಿಗಳನ್ನ ಇಟ್ಟುಕೊಂಡು ಸಿಸಿಬಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಈ ಪ್ರಕರಣ ಇಬ್ಬರು ಪಾಲಿಕೆ ಸದಸ್ಯರ ಪಾಲಿಗೆ ಕರಾಳವಾಗುತ್ತಾ? ಸಿಸಿಬಿ ಕೈ ಸೇರಲಿರೋ ಎಫ್​​ಎಸ್ಎಲ್ ವರದಿ ಸಂಪತ್ ರಾಜ್, ಜಾಕೀರ್​​ ಹಣೆಬರಹ ನಿರ್ಧರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ. ಗಲಭೆ ದಿನದಿಂದ ಹಲವರೊಂದಿಗೆ ಇಂಟರ್​ನೆಟ್ ಕಾಲ್, ವಾಟ್ಸಾಪ್ ಮಾಡಿದ್ದ ಶಂಕೆ ಹಿನ್ನೆಲೆ, ಡೇಟಾ ರಿಟ್ರೀವ್​​​ಗಾಗಿ ಮೊಬೈಲ್​​ಗಳನ್ನು ಎಫ್ ಎಸ್ ಎಲ್ ಕೇಂದ್ರಕ್ಕೆ ರವಾನಿಸಿದ್ದಾರೆ. ಸದ್ಯ ಮೊಬೈಲ್ ರಿಟ್ರೀವ್ ವರದಿ ತಡವಾಗುವ ಕಾರಣ ಇರುವ ಸಾಕ್ಷಧಾರದ ಮೇಲೆ ಸಂಪತ್ ರಾಜ್ ‌ಮತ್ತು ಜಾಕೀರ್ ಅವರನ್ನು ತನಿಖೆಗೆ ಕರೆಯಲು ಸಿಸಿಬಿ ನಿರ್ಧರಿಸಿದೆ.

ಘಟನೆ ಸಂಬಂಧ ಇತ್ತೀಚೆಗಷ್ಟೇ ಇಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು, ಪ್ರಕರಣ ಹೆಚ್ಚಾಗಿ ರಾಜಕೀಯ ಮಜಲು ಪಡೆಯುತ್ತಿರುವ ಕಾರಣ ಮತ್ತಷ್ಟು ವಿಚಾರಣೆ ನಡೆಸಲು ನಿರ್ಧಾರ ಮಾಡಿದ್ದಾರೆ. ಇಂದು ಅಥವಾ ಈ ವಾರ ಕೈ ನಾಯಕರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.