ETV Bharat / state

ಕಾವೇರಿ ಕೂಗು ಕಾರ್ಯಕ್ರಮಕ್ಕೆ ವಕೀಲರ ತಗಾದೆ, ಹೈಕೋರ್ಟ್ ಅಸಮಾಧಾನ

author img

By

Published : Sep 8, 2020, 11:28 PM IST

ಖಾಸಗಿ ಚಾನೆಲ್​ಗೆ ನೋಟಿಸ್ ನೀಡಿದ್ದ ಕ್ರಮ ಸಮರ್ಥಿಸಿಕೊಂಡ ಅರ್ಜಿದಾರ ವಕೀಲರ ಕ್ರಮಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಾರ್ಯಕ್ರಮ ಪ್ರಸಾರದಿಂದ ನ್ಯಾಯಾಂಗ ನಿಂದನೆ ಹೇಗಾಗಲಿದ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ತಾಕೀತು ಮಾಡಿದೆ.

Cauvery Koogu issue: High Court resentment for petitioner's action
ಹೈಕೋರ್ಟ್

ಬೆಂಗಳೂರು : ಈಶ ಫೌಂಡೇಷನ್‌ನ ‘ಕಾವೇರಿ ಕೂಗು’ ಅಭಿಯಾನದ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಖಾಸಗಿ ಚಾನೆಲ್​ಗೆ ಬೆದರಿಕೆ ರೀತಿಯಲ್ಲಿ ನೋಟಿಸ್ ನೀಡಿದ್ದ ವಕೀಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

ಕಾವೇರಿ ಕೂಗು ಅಭಿಯಾನದ ಹೆಸರಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಕ್ಷೇಪಿಸಿ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಚಾನೆಲ್​ಗೆ ನೋಟಿಸ್ ನೀಡಿದ್ದ ಕ್ರಮ ಸಮರ್ಥಿಸಿಕೊಂಡ ಅರ್ಜಿದಾರ ವಕೀಲರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕಾರ್ಯಕ್ರಮ ಪ್ರಸಾರವಾದರೆ ಅದು ನ್ಯಾಯಾಂಗ ನಿಂದನೆ ಹೇಗಾಗುತ್ತದೆ? ನೀವು ಹೇಗೆ ಈ ನಿರ್ಣಯ ಕೈಗೊಂಡಿರಿ? ಯಾವ ಆಧಾರದಲ್ಲಿ ಇಂತಹ ನೋಟಿಸ್ ನೀಡಿದ್ದೀರಿ? ಈ ಕುರಿತ ಸ್ಪಷ್ಟನೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.

ಹಿಂದಿನ ವಿಚಾರಣೆ ವೇಳೆ ಈಶ ಫೌಂಡೇಶನ್ ಪರ ವಾದಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ಖಾಸಗಿ ಚಾನೆಲ್ ಈಶ ಫೌಂಡೇಶನ್ ಕೈಗೊಂಡಿರುವ ಕಾವೇರಿ ಕೂಗು ಕುರಿತಂತೆ ಕಾರ್ಯಕ್ರಮ ರೂಪಿಸಿತ್ತು. ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿತ್ತು. ಆದರೆ, ಅರ್ಜಿದಾರ ವಕೀಲ ಎ.ವಿ. ಅಮರನಾಥನ್ ಅವರು ಚಾನೆಲ್​ಗೆ ಬೆದರಿಕೆ ರೀತಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ, ಕಾರ್ಯಕ್ರಮ ಪ್ರಸಾರ ಮಾಡಿದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ಹೆದರಿಸಿದ್ದಾರೆ ಎಂದಿದ್ದರು.

ಹೇಳಿಕೆ ದಾಖಲಿಸಿಕೊಂಡಿದ್ದ ಪೀಠ, ಈ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. ನೋಟಿಸ್ ನೀಡಿದ್ದಕ್ಕೆ ಲಿಖಿತ ಸ್ಪಷ್ಟನೆ ನೀಡಿದ್ದ ಅರ್ಜಿದಾರ ವಕೀಲರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕ್ರಮ ಪ್ರಸಾರದಿಂದ ನ್ಯಾಯಾಂಗ ನಿಂದನೆ ಹೇಗಾಗಲಿದ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.

ಬೆಂಗಳೂರು : ಈಶ ಫೌಂಡೇಷನ್‌ನ ‘ಕಾವೇರಿ ಕೂಗು’ ಅಭಿಯಾನದ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆ ಆಗಲಿದೆ ಎಂದು ಖಾಸಗಿ ಚಾನೆಲ್​ಗೆ ಬೆದರಿಕೆ ರೀತಿಯಲ್ಲಿ ನೋಟಿಸ್ ನೀಡಿದ್ದ ವಕೀಲರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

ಕಾವೇರಿ ಕೂಗು ಅಭಿಯಾನದ ಹೆಸರಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಕ್ಷೇಪಿಸಿ ವಕೀಲ ಎ.ವಿ. ಅಮರನಾಥನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಚಾನೆಲ್​ಗೆ ನೋಟಿಸ್ ನೀಡಿದ್ದ ಕ್ರಮ ಸಮರ್ಥಿಸಿಕೊಂಡ ಅರ್ಜಿದಾರ ವಕೀಲರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕಾರ್ಯಕ್ರಮ ಪ್ರಸಾರವಾದರೆ ಅದು ನ್ಯಾಯಾಂಗ ನಿಂದನೆ ಹೇಗಾಗುತ್ತದೆ? ನೀವು ಹೇಗೆ ಈ ನಿರ್ಣಯ ಕೈಗೊಂಡಿರಿ? ಯಾವ ಆಧಾರದಲ್ಲಿ ಇಂತಹ ನೋಟಿಸ್ ನೀಡಿದ್ದೀರಿ? ಈ ಕುರಿತ ಸ್ಪಷ್ಟನೆಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿ ಎಂದು ತಾಕೀತು ಮಾಡಿ, ವಿಚಾರಣೆ ಮುಂದೂಡಿತು.

ಹಿಂದಿನ ವಿಚಾರಣೆ ವೇಳೆ ಈಶ ಫೌಂಡೇಶನ್ ಪರ ವಾದಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ಖಾಸಗಿ ಚಾನೆಲ್ ಈಶ ಫೌಂಡೇಶನ್ ಕೈಗೊಂಡಿರುವ ಕಾವೇರಿ ಕೂಗು ಕುರಿತಂತೆ ಕಾರ್ಯಕ್ರಮ ರೂಪಿಸಿತ್ತು. ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿತ್ತು. ಆದರೆ, ಅರ್ಜಿದಾರ ವಕೀಲ ಎ.ವಿ. ಅಮರನಾಥನ್ ಅವರು ಚಾನೆಲ್​ಗೆ ಬೆದರಿಕೆ ರೀತಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೇ, ಕಾರ್ಯಕ್ರಮ ಪ್ರಸಾರ ಮಾಡಿದರೆ ಅದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ಹೆದರಿಸಿದ್ದಾರೆ ಎಂದಿದ್ದರು.

ಹೇಳಿಕೆ ದಾಖಲಿಸಿಕೊಂಡಿದ್ದ ಪೀಠ, ಈ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಿತ್ತು. ನೋಟಿಸ್ ನೀಡಿದ್ದಕ್ಕೆ ಲಿಖಿತ ಸ್ಪಷ್ಟನೆ ನೀಡಿದ್ದ ಅರ್ಜಿದಾರ ವಕೀಲರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದು ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕ್ರಮ ಪ್ರಸಾರದಿಂದ ನ್ಯಾಯಾಂಗ ನಿಂದನೆ ಹೇಗಾಗಲಿದ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.