ಬೆಂಗಳೂರು: ಕಳೆದ ಒಂದು ಶತಮಾನದಲ್ಲಿ ಭಾರತ ದೇಶದಲ್ಲಿ ಮಾನ್ಸೂನು ಕೈಕೊಟ್ಟು ಬರಗಾಲಕ್ಕೆ ಕಾರಣವಾಗಿದೆ. ಹೀಗೆ ಸಂಭವಿಸಿದ ಅರ್ಧದಷ್ಟು ಬರಗಾಲಗಳು ಉತ್ತರ ಅಟ್ಲಾಂಟಿಕ್ ಪ್ರದೇಶದಲ್ಲಿ ಉಂಟಾದ ವಾತಾವರಣದ ಅಡಚಣೆಯಿಂದಾಗಿ ಸಂಭವಿಸಿರಬಹುದು ಎಂದು ವಿಜ್ಞಾನದಲ್ಲಿ ಪ್ರಕಟವಾದ ಹೊಸ ಅಧ್ಯಯನವು ಕಂಡು ಹಿಡಿದಿದೆ. ಇದನ್ನು ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ಅಂಡ್ ಓಷಿಯಾನಿಕ್ ಸೈನ್ಸಸ್ (ಸಿಎಒಎಸ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸಂಶೋಧಕರು ಕಂಡು ಹಿಡಿದಿದ್ದಾರೆ.
ಒಂದು ಶತಕೋಟಿಗೂ ಹೆಚ್ಚು ಜನರು ವಾರ್ಷಿಕ ಭಾರತೀಯ ಬೇಸಿಗೆ ಮಾನ್ಸೂನ್ ಅನ್ನು ಅವಲಂಬಿಸಿದ್ದಾರೆ. ಏಕೆಂದರೆ ಇದು ಜೂನ್ ಮತ್ತು ಸೆಪ್ಟೆಂಬರ್ ನಡುವೆ ದೇಶದ ವಿವಿಧ ಪ್ರದೇಶಗಳಲ್ಲಿ ಸುರಿಯುವ ಮಳೆಗೆ ಕಾರಣವಾಗಿದೆ. ಈ ಕಾಲಘಟ್ಟದಲ್ಲಿ ಮಳೆ ಬಾರದೇ ಹೋದಾಗ ದೇಶ ಬಹುಪಾಲು ಬರಗಾಲದಲ್ಲಿ ಮುಳುಗುತ್ತದೆ. ಕಳೆದ ಶತಮಾನದಲ್ಲಿ ಭಾರತ ಎದುರಿಸಿದ 23 ಬರಗಾಲಗಳಲ್ಲಿ 10ಕ್ಕೆ ಕಾರಣ ಇಎಲ್ ಗೈರು ಎಂದು ತಿಳಿದು ಬಂದಿದೆ. ಹಾಗಾದರೆ, ಇನ್ನುಳಿದ ಬರಗಳಿಗೆ ಏನು ಕಾರಣವಿರಬಹುದು?