ETV Bharat / state

ನಾಳೆ ಬೆಂಗಳೂರಲ್ಲಿ ಬೃಹತ್​ ಪ್ರತಿಭಟನೆ: ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ರಾಜಧಾನಿಯಲ್ಲಿ ನಾಳೆ ಬಹುತೇಕ ಸಂಚಾರ ವ್ಯತ್ಯವಾಗಲಿದೆ, ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಭಟನೆ ಸೇರಲಿದ್ದು ನಗರ ಸಂಚಾರದಲ್ಲಿ ಭಾರಿ ಬದಲಾವಣೆಯಾಗಲಿದೆ, ಇದಕ್ಕಾಗಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ.

author img

By

Published : Dec 22, 2019, 10:15 PM IST

Updated : Dec 22, 2019, 11:23 PM IST

Bangalore Traffic Zam
ಪೌರತ್ವ ಕಾಯ್ದೆ ಕಿಚ್ಚು : ಮುಸ್ಲಿಂ ಸಮುದಾಯದಿಂದ ಬಹೃತ್ ಸಭೆ ಆಯೋಜನೆ: ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಬೆಂಗಳೂರು: ರಾಜಧಾನಿಯಲ್ಲಿ ನಾಳೆ ಬಹುತೇಕ ಸಂಚಾರ ವ್ಯತ್ಯವಾಗಲಿದೆ, ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು ನಗರ ಸಂಚಾರದಲ್ಲಿ ಭಾರಿ ಬದಲಾವಣೆಯಾಗಲಿದೆ, ಇದಕ್ಕಾಗಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ.

ನಾಳೆ ಬೆಂಗಳೂರಲ್ಲಿ ಬೃಹತ್​ ಪ್ರತಿಭಟನೆ: ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಾಳೆ ಬೆಂಗಳೂರಲ್ಲಿ ಬರೊಬ್ಬರೀ 35 ಮುಸ್ಲಿಂ ಸಂಘಟನೆಗಳು ಬೃಹತ್ ರ‍್ಯಾಲಿಯನ್ನ ಆಯೋಜಿಸಿದ್ದು, ಮಹಾನಗರಿ ನಾಲ್ಕೂ ದಿಕ್ಕುಗಳಿಂದಲೂ ಸಂಚಾರ ವ್ಯತ್ಯಯವಾಗಲಿದೆ, ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ಖುದ್ದೂಸ್‌ ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ನಿಶ್ಚಿತ. ಹೀಗಾಗಿ ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದ್ದು ಅದರ ಮಾರ್ಗಸೂಚಿ ಇಲ್ಲಿದೆ. ಖುದ್ದೂಸ್‌ಸಾಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಬೃಹತ್ ರ್ಯಾಲಿ‌ ಸಲುವಾಗಿ

ಮಿಲ್ಲರ್ ರಸ್ತೆಯ ಕಂಟೋನ್ಮೆಂಟ್ ರಸ್ತೆಯಿಂದ ಹೇನ್ಸ್ ಜಂಕ್ಷನ್‌ವರೆಗೆ, ನಂದಿ ದುರ್ಗಾ ರಸ್ತೆ ಹಜ್‌ ಕ್ಯಾಂಪ್‌ನಿಂದ ಜಯಮಹಲ್ ಜಂಕ್ಷನ್‌ವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಗೀತಾ ಜಂಕ್ಷನ್ - ಸೌತ್‌ಎಂಡ್ ಸರ್ಕಲ್ - ಮಿನರ್ವ ಸರ್ಕಲ್- ಟೌನ್‌ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮಾರ್ಗವಾಗಿ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್, ಲಗ್ಗೆರೆ-ರಾಜಾಜಿನಗರ-ನವರಂಗ-ರೇಸ್‌ಕೋರ್ಸ್ -ಮೇಖ್ರಿ ವೃತ್ತ-ಜಯಮಹಲ್ ಮೂಲಕ, ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್‌ಏರ್‌ಪೋರ್ಟ್‌ರೋಡ್ ರಸ್ತೆ, ಹಲಸೂರು ಮಾರ್ಗ, ಹೊಸೂರು, ಬನ್ನೇರುಘಟ್ಟ ಮೂಲಕವೂ ಸಭೆಗಾಗಿ ಜನರು ಆಗಮಿಸಲಿದ್ದಾರೆ.

ಪೌರತ್ವ ಕಾಯ್ದೆ ಕಿಚ್ಚು : ಮುಸ್ಲಿಂ ಸಮುದಾಯದಿಂದ ಬಹೃತ್ ಸಭೆ ಆಯೋಜನೆ: ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಅಲ್ಪಸಂಖ್ಯಾತರ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದ್ದು. ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣಿಡಲು ಒಂದು ಸಾವಿರ ಕ್ಯಾಮರಾ 60 ಸಿಎಆರ್ 53 ಕೆಎಸ್​​ಆರ್​ಪಿ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಜೊತೆಗೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರುವುದು, ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ 2 ಗಂಟೆಯಿಂದ ಸಂಜೆ 4ರವರೆಗೆ ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಲಿದ್ದು ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಬೆಂಗಳೂರು: ರಾಜಧಾನಿಯಲ್ಲಿ ನಾಳೆ ಬಹುತೇಕ ಸಂಚಾರ ವ್ಯತ್ಯವಾಗಲಿದೆ, ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು ನಗರ ಸಂಚಾರದಲ್ಲಿ ಭಾರಿ ಬದಲಾವಣೆಯಾಗಲಿದೆ, ಇದಕ್ಕಾಗಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ.

ನಾಳೆ ಬೆಂಗಳೂರಲ್ಲಿ ಬೃಹತ್​ ಪ್ರತಿಭಟನೆ: ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಾಳೆ ಬೆಂಗಳೂರಲ್ಲಿ ಬರೊಬ್ಬರೀ 35 ಮುಸ್ಲಿಂ ಸಂಘಟನೆಗಳು ಬೃಹತ್ ರ‍್ಯಾಲಿಯನ್ನ ಆಯೋಜಿಸಿದ್ದು, ಮಹಾನಗರಿ ನಾಲ್ಕೂ ದಿಕ್ಕುಗಳಿಂದಲೂ ಸಂಚಾರ ವ್ಯತ್ಯಯವಾಗಲಿದೆ, ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ಖುದ್ದೂಸ್‌ ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ನಿಶ್ಚಿತ. ಹೀಗಾಗಿ ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದ್ದು ಅದರ ಮಾರ್ಗಸೂಚಿ ಇಲ್ಲಿದೆ. ಖುದ್ದೂಸ್‌ಸಾಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಬೃಹತ್ ರ್ಯಾಲಿ‌ ಸಲುವಾಗಿ

ಮಿಲ್ಲರ್ ರಸ್ತೆಯ ಕಂಟೋನ್ಮೆಂಟ್ ರಸ್ತೆಯಿಂದ ಹೇನ್ಸ್ ಜಂಕ್ಷನ್‌ವರೆಗೆ, ನಂದಿ ದುರ್ಗಾ ರಸ್ತೆ ಹಜ್‌ ಕ್ಯಾಂಪ್‌ನಿಂದ ಜಯಮಹಲ್ ಜಂಕ್ಷನ್‌ವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಗೀತಾ ಜಂಕ್ಷನ್ - ಸೌತ್‌ಎಂಡ್ ಸರ್ಕಲ್ - ಮಿನರ್ವ ಸರ್ಕಲ್- ಟೌನ್‌ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮಾರ್ಗವಾಗಿ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್, ಲಗ್ಗೆರೆ-ರಾಜಾಜಿನಗರ-ನವರಂಗ-ರೇಸ್‌ಕೋರ್ಸ್ -ಮೇಖ್ರಿ ವೃತ್ತ-ಜಯಮಹಲ್ ಮೂಲಕ, ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್‌ಏರ್‌ಪೋರ್ಟ್‌ರೋಡ್ ರಸ್ತೆ, ಹಲಸೂರು ಮಾರ್ಗ, ಹೊಸೂರು, ಬನ್ನೇರುಘಟ್ಟ ಮೂಲಕವೂ ಸಭೆಗಾಗಿ ಜನರು ಆಗಮಿಸಲಿದ್ದಾರೆ.

ಪೌರತ್ವ ಕಾಯ್ದೆ ಕಿಚ್ಚು : ಮುಸ್ಲಿಂ ಸಮುದಾಯದಿಂದ ಬಹೃತ್ ಸಭೆ ಆಯೋಜನೆ: ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಅಲ್ಪಸಂಖ್ಯಾತರ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದ್ದು. ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣಿಡಲು ಒಂದು ಸಾವಿರ ಕ್ಯಾಮರಾ 60 ಸಿಎಆರ್ 53 ಕೆಎಸ್​​ಆರ್​ಪಿ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಜೊತೆಗೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರುವುದು, ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ 2 ಗಂಟೆಯಿಂದ ಸಂಜೆ 4ರವರೆಗೆ ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಲಿದ್ದು ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

Intro:Body:ಪೌರತ್ವ ಕಾಯ್ದೆ ವಿಚಾರ: ಮುಸ್ಲಿಂ ಸಮುದಾಯದಿಂದ ಬಹೃತ್ ಸಭೆ ಆಯೋಜನೆ: ನಾಳೆ ನಗರದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳ ಸಾಧ್ಯತೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಳೆ ಬಹುತೇಕ ಸಂಚಾರ ವ್ಯತ್ಯವಾಗಲಿದೆ. ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಭಟನೆ ಸೇರಲಿದ್ದು ನಗರದ ಸಂಚಾರದಲ್ಲಿ ಭಾರಿ ಬದಲಾವಣೆಯಾಗಲಿದೆ. ಇದಕ್ಕಾಗಿ ಪೊಲೀಸರು ಸರ್ವ ಸನ್ನದ್ಧವಾಗಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನಾಳೆ ಬೆಂಗಳೂರಲ್ಲಿ ಬರೊಬ್ಬರೀ 35 ಮುಸ್ಲಿಂ ಸಂಘಟನೆಗಳು ಬೃಹತ್ ರ‍್ಯಾಲಿಯನ್ನ ಆಯೋಜಿಸಿದ್ದು, ಮಹಾನಗರಿ ನಾಲ್ಕೂ ದಿಕ್ಕುಗಳಿಂದಲೂ ಸಂಚಾರ ವ್ಯತ್ಯಯವಾಗಲಿದೆ.. ಪುಲಿಕೇಶಿ ನಗರ ಠಾಣಾ ವ್ಯಾಪ್ತಿಯ ಖುದ್ದೂಸ್‌ಸಾಬ್ ಈದ್ಗಾ ಮೈದಾನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಜನಸಾಮಾನ್ಯರು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುವುದು ನಿಶ್ಚಿತ. ಹೀಗಾಗಿ ಬೃಹತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿ ಮತ್ತು ಕಾಲ್ನಡಿಗೆ ಮೂಲಕ ಮೆರವಣಿಗೆ ಬರಲಿದ್ದು ಅದರ ಮಾರ್ಗಸೂಚಿ ಇಲ್ಲಿದೆ. ಖುದ್ದೂಸ್‌ಸಾಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಬೃಹತ್ ರ್ಯಾಲಿ‌ ಸಲುವಾಗಿ
ಮಿಲ್ಲರ್ ರಸ್ತೆಯ ಕಂಟೋನ್ಮೆಂಟ್ ರಸ್ತೆಯಿಂದ ಹೇನ್ಸ್ ಜಂಕ್ಷನ್‌ವರೆಗೆ, ನಂದಿ ದುರ್ಗಾ ರಸ್ತೆ ಹಜ್‌ ಕ್ಯಾಂಪ್‌ನಿಂದ ಜಯಮಹಲ್ ಜಂಕ್ಷನ್‌ವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಗೀತಾ ಜಂಕ್ಷನ್ - ಸೌತ್‌ಎಂಡ್ ಸರ್ಕಲ್ - ಮಿನರ್ವ ಸರ್ಕಲ್- ಟೌನ್‌ಹಾಲ್- ಮೈಸೂರು ಬ್ಯಾಂಕ್ ಸರ್ಕಲ್-ಜಯಮಹಲ್ ಮಾರ್ಗವಾಗಿ ಚಿಕ್ಕಬಾಣಾವರ-ಬಾಗಲಗುಂಟೆ-ಗೊರಗುಂಟೆಪಾಳ್ಯ-ಯಶವಂತಪುರ ಸರ್ಕಲ್-ಕಾವೇರಿ ಥಿಯೇಟರ್-ಜಯಮಹಲ್, ಲಗ್ಗೆರೆ-ರಾಜಾಜಿನಗರ-ನವರಂಗ-ರೇಸ್‌ಕೋರ್ಸ್ -ಮೇಖ್ರಿ ವೃತ್ತ-ಜಯಮಹಲ್ ಮೂಲಕ,
ನಾಗವಾರ-ಥಣಿಸಂದ್ರ ಮಾರ್ಗ, ಬಾಣಸವಾಡಿ, ಕೆ ಆರ್ ಪುರಂ, ಇಂದಿರಾನಗರ, ಜೆಬಿ ನಗರ, ಓಲ್ಡ್‌ಏರ್‌ಪೋರ್ಟ್‌ರೋಡ್ ರಸ್ತೆ, ಹಲಸೂರು ಮಾರ್ಗ, ಹೊಸೂರು, ಬನ್ನೇರುಘಟ್ಟ ಮೂಲಕವೂ ಸಭೆಗಾಗಿ ಜನರು ಆಗಮಿಸಲಿದ್ದಾರೆ.

ಅಲ್ಪಸಂಖ್ಯಾತ ರ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಸೇರುವ ಸಾಧ್ಯತೆಯಿದ್ದು .. ಕಾರ್ಯಕ್ರಮದ ಮೇಲೆ ಹದ್ದಿನ ಕಣ್ಣಿಡಲು ಒಂದು ಸಾವಿರ ಕ್ಯಾಮರಾ 60 ಸಿಎಆರ್ 53 ಕೆಎಸ್ ಆರ್ಪಿ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಜೊತೆಗೆ ಬಲವಂತವಾಗಿ ಬಂದ್ ಅಂಗಡಿ ಮುಂಗಟ್ಟು ಮುಚ್ಚುವಂತೆ ಒತ್ತಡ ಹೇರುವುದು, ಕಾರ್ಯಕ್ರಮದ ವೇಳೆ ಅಹಿತಕರ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವದ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ 2 ಗಂಟೆಯಿಂದ ಸಂಜೆ 4ರವರೆಗೆ ರಾಜಧಾನಿಯ ಸಂಚಾರ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗಲಿದ್ದು ಸವಾರರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

.Conclusion:
Last Updated : Dec 22, 2019, 11:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.