ETV Bharat / state

ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕ್ಷೇತ್ರ? - Mahalakshmi Layout BJP candidate Gopalya

ಜೆಡಿಎಸ್ ಗೆ ಗುಡ್ ಬೈ ಹೇಳಿ, ಬಿಜೆಪಿಗೆ ಹಾಯ್ ಹೇಳಿರುವ ಗೋಪಾಲಯ್ಯ ಸತತ ಮೂರು ಬಾರಿ ಮಹಾಲಕ್ಷ್ಮಿ ಲೇಔಟ್ ಮತದಾರರನ್ನ ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡು ಬಂದಿದ್ದಾರೆ. ಈಗ ಪಕ್ಷ ಬದಲಿಸಿರುವ ಗೋಪಾಲಯ್ಯರಿಂದ ಬಿಜೆಪಿಗೆ ಮಹಾ 'ಲಕ್ಷ್ಮೀ' ಕಟಾಕ್ಷ ಸಿಗಲಿದೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕಟಾಕ್ಷ!!!
author img

By

Published : Nov 17, 2019, 7:35 PM IST

ಬೆಂಗಳೂರು: ವಿಧಾನಸಭೆ ಉಪಚುನಾವಣೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಗರಿಗೆದರಿವೆ. ಪಕ್ಷದೊಳಗಿದ್ದ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನವನ್ನು ಶಮನಗೊಳಿಸಿಕೊಂಡು ಅಭ್ಯರ್ಥಿ ಪರ ನಿಲ್ಲುವ ಕಸರತ್ತು ತೀವ್ರಗೊಂಡಿದೆ.

ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕಟಾಕ್ಷ?

ಸದ್ಯ, ಜೆಡಿಎಸ್‌ಗೆ ಗುಡ್ ಬೈ ಹೇಳಿ, ಕಮಲ ಹಿಡಿದಿರುವ ಗೋಪಾಲಯ್ಯ ಸತತ ಮೂರು ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತದಾರರನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡು ಬಂದಿದ್ದಾರೆ. ಈಗ ಪಕ್ಷ ಬದಲಿಸಿರುವ ಗೋಪಾಲಯ್ಯರಿಂದ ಬಿಜೆಪಿಗೆ ಮಹಾ 'ಲಕ್ಷ್ಮೀ' ಕ್ಷೇತ್ರ ಸಿಗಲಿದೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾಕೆಂದರೆ ಮಹಾಲಕ್ಷ್ಮೀ ಲೇಔಟ್​ನಲ್ಲಿ 1967 ರಿಂದಲೂ ಬಿಜೆಪಿಗೆ ಅಸ್ತಿತ್ವವಿಲ್ಲ. ಆದರೆ 2008 ರಲ್ಲಿ‌ ಆರ್. ವಿ. ಹರೀಶ್ ಬಿಜೆಪಿಯಿಂದ ಸ್ಪರ್ಧಿಸಿ ನೆ.ಲ ನರೇಂದ್ರ ಬಾಬು ವಿರುದ್ಧ 3,225 ಮತಗಳಿಂದ ಸೋಲು ಅನುಭವಿಸಿದರು.‌‌ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವಿನ ಸನಿಹ ಬಂದಿದ್ದು ಇದೇ ಫಲಿತಾಂಶದಲ್ಲಿ.

ನಂತರ 2018 ರಲ್ಲೂ ವಲಸೆ ಅಭ್ಯರ್ಥಿಗೆ ಮಣೆ ಹಾಕಿದರೂ ಕೂಡ ಬಿಜೆಪಿಗೆ ಲಕ್ಷ್ಮಿ ಜಾಗ ಆವರಿಸಲು ಆಗಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಂದರೆ 2018 ರ ವಿಧಾನಸಭಾ ಚುನಾವಣೆ. ಈ ವೇಳೆ ಕಾಂಗ್ರೆಸ್​ನಲ್ಲಿದ್ದ ನೆ.ಲ. ನರೇಂದ್ರ ಬಾಬು ಅವರನ್ನು ಸೆಳೆದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಕಾಂಗ್ರೆಸ್​ನಲ್ಲಿದ್ದಾಗ ಗೆಲುವಿನ ರುಚಿ ಅನುಭವಿಸಿದ ನರೇಂದ್ರ ಬಾಬು, ಬಿಜೆಪಿಗೆ ಬಂದು ಸೋಲು ಅನುಭವಿಸಿದರು. ಜೆಡಿಎಸ್‌ನ ಗೋಪಾಲಯ್ಯ ಅವರಿಗೆ ಅಲ್ಲಿನ ಮತದಾರರು ಮಣೆ ಹಾಕಿ, ನರೇಂದ್ರ ಬಾಬು ಅವರನ್ನು 41,000 ಮತಗಳಿಂದ ಸೋಲಿಸಿದರು.

ಈಗ ಅದೇ ನೆಲದಲ್ಲಿ ಹಳೇ ಅಭ್ಯರ್ಥಿ, ಹೊಸ ಪಕ್ಷದಿಂದ ಅಖಾಡಕ್ಕೆ ಇಳೀತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತಗಳು ಬರುತ್ತೆ‌‌. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಿನ ರುಚಿ ತಿಂದಿದ್ದಾರೆ.‌ ಸದ್ಯ ನಾಳೆ ಬಿಜೆಪಿಯಿಂದ ಗೋಪಾಲಯ್ಯ ನಾಮಪತ್ರ ಸಲ್ಲಿಸಲಿದ್ದು, ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಿಜೆಪಿಗೆ ಸಿಗುತ್ತಾ ಮೊದಲ ಗೆಲುವು ಅನ್ನೋದನ್ನು ಮತದಾರರು ನಿರ್ಧರಿಸಬೇಕಿದೆ.‌ ಇದಕ್ಕೆ ಸ್ಪಷ್ಟ ಉತ್ತರ ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾದಾಗ ತಿಳಿಯಲಿದೆ‌.

ಬೆಂಗಳೂರು: ವಿಧಾನಸಭೆ ಉಪಚುನಾವಣೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಗರಿಗೆದರಿವೆ. ಪಕ್ಷದೊಳಗಿದ್ದ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನವನ್ನು ಶಮನಗೊಳಿಸಿಕೊಂಡು ಅಭ್ಯರ್ಥಿ ಪರ ನಿಲ್ಲುವ ಕಸರತ್ತು ತೀವ್ರಗೊಂಡಿದೆ.

ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕಟಾಕ್ಷ?

ಸದ್ಯ, ಜೆಡಿಎಸ್‌ಗೆ ಗುಡ್ ಬೈ ಹೇಳಿ, ಕಮಲ ಹಿಡಿದಿರುವ ಗೋಪಾಲಯ್ಯ ಸತತ ಮೂರು ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತದಾರರನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡು ಬಂದಿದ್ದಾರೆ. ಈಗ ಪಕ್ಷ ಬದಲಿಸಿರುವ ಗೋಪಾಲಯ್ಯರಿಂದ ಬಿಜೆಪಿಗೆ ಮಹಾ 'ಲಕ್ಷ್ಮೀ' ಕ್ಷೇತ್ರ ಸಿಗಲಿದೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಾಕೆಂದರೆ ಮಹಾಲಕ್ಷ್ಮೀ ಲೇಔಟ್​ನಲ್ಲಿ 1967 ರಿಂದಲೂ ಬಿಜೆಪಿಗೆ ಅಸ್ತಿತ್ವವಿಲ್ಲ. ಆದರೆ 2008 ರಲ್ಲಿ‌ ಆರ್. ವಿ. ಹರೀಶ್ ಬಿಜೆಪಿಯಿಂದ ಸ್ಪರ್ಧಿಸಿ ನೆ.ಲ ನರೇಂದ್ರ ಬಾಬು ವಿರುದ್ಧ 3,225 ಮತಗಳಿಂದ ಸೋಲು ಅನುಭವಿಸಿದರು.‌‌ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವಿನ ಸನಿಹ ಬಂದಿದ್ದು ಇದೇ ಫಲಿತಾಂಶದಲ್ಲಿ.

ನಂತರ 2018 ರಲ್ಲೂ ವಲಸೆ ಅಭ್ಯರ್ಥಿಗೆ ಮಣೆ ಹಾಕಿದರೂ ಕೂಡ ಬಿಜೆಪಿಗೆ ಲಕ್ಷ್ಮಿ ಜಾಗ ಆವರಿಸಲು ಆಗಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಂದರೆ 2018 ರ ವಿಧಾನಸಭಾ ಚುನಾವಣೆ. ಈ ವೇಳೆ ಕಾಂಗ್ರೆಸ್​ನಲ್ಲಿದ್ದ ನೆ.ಲ. ನರೇಂದ್ರ ಬಾಬು ಅವರನ್ನು ಸೆಳೆದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಕಾಂಗ್ರೆಸ್​ನಲ್ಲಿದ್ದಾಗ ಗೆಲುವಿನ ರುಚಿ ಅನುಭವಿಸಿದ ನರೇಂದ್ರ ಬಾಬು, ಬಿಜೆಪಿಗೆ ಬಂದು ಸೋಲು ಅನುಭವಿಸಿದರು. ಜೆಡಿಎಸ್‌ನ ಗೋಪಾಲಯ್ಯ ಅವರಿಗೆ ಅಲ್ಲಿನ ಮತದಾರರು ಮಣೆ ಹಾಕಿ, ನರೇಂದ್ರ ಬಾಬು ಅವರನ್ನು 41,000 ಮತಗಳಿಂದ ಸೋಲಿಸಿದರು.

ಈಗ ಅದೇ ನೆಲದಲ್ಲಿ ಹಳೇ ಅಭ್ಯರ್ಥಿ, ಹೊಸ ಪಕ್ಷದಿಂದ ಅಖಾಡಕ್ಕೆ ಇಳೀತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತಗಳು ಬರುತ್ತೆ‌‌. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಿನ ರುಚಿ ತಿಂದಿದ್ದಾರೆ.‌ ಸದ್ಯ ನಾಳೆ ಬಿಜೆಪಿಯಿಂದ ಗೋಪಾಲಯ್ಯ ನಾಮಪತ್ರ ಸಲ್ಲಿಸಲಿದ್ದು, ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಿಜೆಪಿಗೆ ಸಿಗುತ್ತಾ ಮೊದಲ ಗೆಲುವು ಅನ್ನೋದನ್ನು ಮತದಾರರು ನಿರ್ಧರಿಸಬೇಕಿದೆ.‌ ಇದಕ್ಕೆ ಸ್ಪಷ್ಟ ಉತ್ತರ ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾದಾಗ ತಿಳಿಯಲಿದೆ‌.

Intro:ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕಟಾಕ್ಷ!!!

ಬೆಂಗಳೂರು: ವಿಧಾನಸಭೆ ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.. ಪಕ್ಷದ ಒಳಗೆ ಇದ್ದ ಟಿಕೆಟ್ ಅಕಾಂಕ್ಷಿಗಳ ಅಸಮಾಧಾನವನ್ನ ಶಮನಗೊಳಿಸಿಕೊಂಡು ಅಭ್ಯರ್ಥಿ ಪರ ನಿಲ್ಲಲು ಮನವೊಲಿಸಲಾಗಿದೆ..

ಸದ್ಯ, ಜೆಡಿಎಸ್ ಗೆ ಗುಡ್ ಬೈ ಹೇಳಿ, ಬಿಜೆಪಿಗೆ ಹಾಯ್ ಹೇಳಿರುವ ಗೋಪಾಲಯ್ಯ ಸತತ ಮೂರು ಬಾರಿ ಮಹಾಲಕ್ಷ್ಮಿ ಲೇಔಟ್ ಮತದಾರರನ್ನ ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡು ಇದ್ದಾರೆ‌‌... ಈಗ ಪಕ್ಷ ಬದಲು ಮಾಡಿರೋ ಗೋಪಾಲಯ್ಯರಿಂದ ಬಿಜೆಪಿಗೆ ಸಿಗುತ್ತಾ ಮಹಾ 'ಲಕ್ಷ್ಮೀ' ಕಟಾಕ್ಷ ಎಂಬ ಮಾತುಗಳು ಕೇಳಿ ಬರುತ್ತಿವೆ..‌

ಯಾಕೆಂದರೆ ಮಹಾಲಕ್ಷ್ಮೀ ಲೇಔಟ್ ನಲ್ಲಿ ಭಾರತೀಯ ಜನತಾ ಪಾರ್ಟಿ ಗೆ ಇದುವರೆಗೂ ಸರಿಯಾದ ನೆಲೆಯನ್ನ ಕಂಡಿಲ್ಲ.. 1967 ಯಿಂದ ಬಿಜೆಪಿಗೆ ಈ ಕ್ಷೇತ್ರದಲ್ಲಿ ನೆಲೆಯೇ ಸಿಕ್ಕಿಲ್ಲ.. ಆದರೆ 2008 ರಲ್ಲಿ‌ ಆರ್ ವಿ ಹರೀಶ್ ಬಿಜೆಪಿಯಿಂದ ಸ್ಪರ್ಧಿಸಿ, ನೆ ಲ ನರೇಂದ್ರ ಬಾಬುವಿನ ವಿರುದ್ಧ 3225 ಮತಗಳಿಂದ ಸೋಲು ಅನುಭವಿಸಿದರು.‌‌ಇದಾದ ಬಳಿಕ‌ 2013ರಲ್ಲಿ ಬಿಜೆಪಿ ಮಹಾಲಕ್ಷ್ಮಿ ಲೇಔಟ್ ನಲ್ಲಿ ಸುಳಿವು ಇಲ್ಲದಂತೆ ಆಗಿತ್ತು...

ನಂತರ 2018 ರಲ್ಲೂ ವಲಸೆಗೆ ಮಣೆ ಹಾಕಿದರು ಕೂಡ ಬಿಜೆಪಿ ಮಾತ್ರ ಲಕ್ಷ್ಮಿ ಜಾಗ ಆವರಿಸಲು ಆಗಲಿಲ್ಲ..ಇದಕ್ಕೆ ಉತ್ತಮ ಉದಾಹರಣೆ ಅಂದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ನೆ ಲ ನರೇಂದ್ರ ಬಾಬು ಮನಸೆಳೆದು, ಬಿಜೆಪಿಗೆ ಟಿಕೆಟ್ ನೀಡಲಾಯಿತು.. ಕಾಂಗ್ರೆಸ್ ನಲ್ಲಿ ಇದ್ದಾಗ ಗೆಲುವಿನ ರುಚಿ ನೀಡದ ನರೇಂದ್ರ ಬಾಬು, ಬಿಜೆಪಿಗೆ ಬಂದು ಸೋಲನ್ನ ಅನುಭವಿಸಿದರು.. ಜೆಡಿಎಸ್ ಗೋಪಾಲಯ್ಯ ರಿಗೆ ಅಲ್ಲಿನ ಮತದಾರರು ಮಣೆಹಾಕಿ, ನರೇಂದ್ರ ಬಾಬು ಅವರನ್ನ 41,000 ಮತಗಳಿಂದ ಸೋಲಿಸಿದರು..

ಈಗ ಅದೇ ನೆಲದಲ್ಲಿ ಹಳೇ ಅಭ್ಯರ್ಥಿ, ಹೊಸ ಪಕ್ಷದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ‌‌. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತಗಳು ಬರುತ್ತೆ‌‌.. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಿನ ರುಚಿ ತಿಂದಿದ್ದಾರೆ.‌ ಸದ್ಯ‌ ನಾಳೆ ಬಿಜೆಪಿಯಿಂದ ಗೋಪಾಲಯ್ಯ ನಾಮಪತ್ರ ಸಲ್ಲಿಸಲಿದ್ದು, ಮಹಾಲಕ್ಷ್ಮಿ ಲೇಔಟ್- ನಲ್ಲಿ ಬಿಜೆಪಿಗೆ ಸಿಗುತ್ತಾ ಮೊದಲ ಗೆಲುವು ಅನ್ನೋದನ್ನ ಮತದಾರರು ನಿರ್ಧರಿಸಬೇಕಿದೆ..‌ ಇದಕ್ಕೆ ಉತ್ತರ ಡಿಸೆಂಬರ್ ನಲ್ಲಿ ಫಲಿತಾಂಶ ಪ್ರಕಟವಾದಾಗಲೇ ತಿಳಿಯಲಿದೆ‌‌..

KN_BNG_5_ELECTION_MAHALAKSHMI_LAYOUT_BJP_SPECAIL_STORY_7201801



Body:..Conclusion:..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.