ETV Bharat / state

ಹೈಟೆನ್ಶನ್ ವೈರ್ ಸಮೀಪದಲ್ಲೇ ಕಟ್ಟಡಗಳ ನಿರ್ಮಾಣ... ಪ್ರಾಣ ಕಳೆದುಕೊಳ್ಳುತ್ತಿರುವ ಅಮಾಯಕರು

author img

By

Published : Jun 1, 2019, 10:37 AM IST

ಬೆಂಗಳೂರಿನ ಹಲವೆಡೆ ಹೈಟೆನ್ಶನ್​ ವೈರ್​ ಹಾದು ಹೋಗುವಲ್ಲೆ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಅಮಾಯಕರ ಪ್ರಾಣಕ್ಕೆ ಕುತ್ತಾಗಿದೆ.

ಹೈಟೆಂನ್ಷನ್ ವಿದ್ಯುತ್​ ತಂತಿ

ಬೆಂಗಳೂರು: ಹೈಟೆನ್ಶನ್ ತಂತಿ ಹಾದುಹೋಗಿರುವ ಆಸುಪಾಸಿನಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದ್ದರೂ ಕೂಡಾ ಅನಧಿಕೃತವಾಗಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು ಹಲವರ ಸಾವಿಗೆ ಕಾರಣವಾಗಿದೆ.

ಕಟ್ಟಡಗಳಿಗೆ ತಾಗಿಕೊಂಡಿರುವ ಹೈಟೆನ್ಶನ್ ವಿದ್ಯುತ್​ ತಂತಿ

ಹೈಟೆನ್ಶನ್ ವೈರ್​ಗಳು ಕೆಆರ್​ಪುರದ ಮುನೇಶ್ವರ ಬಡಾವಣೆ, ಅಯ್ಯಪ್ಪ ನಗರ, ಹೂಡಿ, ಬಸವನಪುರ, ಭಟ್ಟರಹಳ್ಳಿಯ ಮುಖಾಂತರ ಹಾದು ಹೋಗಿ ಹೂಡಿ ಸ್ಟೇಷನ್ ಸೇರುತ್ತದೆ. ಇನ್ನೂ ಈ ತಂತಿಗಳು ಹಾದು ಹೋಗಿರುವ ಕೆಲ ಬಡಾವಣೆಗಳಲ್ಲಿ ಕೈಗೆಟುಕುವಷ್ಟು ಸಮೀಪದಲ್ಲಿದ್ದು, ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ತಂತಿಗಳು ಹಾದು ಹೋಗಿರುವ ಪಕ್ಕದಲ್ಲೆ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.

ನಗರದಲ್ಲಿ ಭೂಮಿಗೆ ಬಂಗಾರಕ್ಕೂ ಮೀರಿದ ಬೆಲೆ ಇರುವುದೇನೊ ನಿಜ. ಆದರೇ, ಜಾಗ ಎಲ್ಲಿ ವ್ಯರ್ಥವಾಗುತ್ತದೊ ಎಂದು ಒಂದು ಅಡಿಯನ್ನು ಬಿಡದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದುರದೃಷ್ಟ ಎಂದರೆ ಹೈಟೆನ್ಷನ್ ವೈರ್​ಗಳ ಅವಘಡಗಳಿಗೆ ಬಲಿಯಾಗುತ್ತಿರುವುದು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡ ಕೂಲಿ ಕಾರ್ಮಿಕರೆ ಹೊರತು ಕಟ್ಟಡ ಮಾಲಿಕರನಲ್ಲ.

ಕೇವಲ ಎರಡು ವರ್ಷಗಳಲ್ಲಿ 4-5 ಜನ ಇದೇ ಕಾರಣದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮನೆ ಮೇಲೆ ಪೈಟಿಂಗ್ ಮಾಡುವ ವೇಳೆ ತಂತಿ ಸ್ಪರ್ಶಿಸಿ ಒರ್ವ ಮೃತಪಟ್ಟಿದ್ದ. ಆದರೆ, ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಇಂತಹ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಮಾಯಕರ ಪ್ರಾಣಕ್ಕೆ ಕುತ್ತು ಬರದಂತೆ ಕಾಪಾಡಬೇಕಾಗಿದೆ.

ಬೆಂಗಳೂರು: ಹೈಟೆನ್ಶನ್ ತಂತಿ ಹಾದುಹೋಗಿರುವ ಆಸುಪಾಸಿನಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದ್ದರೂ ಕೂಡಾ ಅನಧಿಕೃತವಾಗಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು ಹಲವರ ಸಾವಿಗೆ ಕಾರಣವಾಗಿದೆ.

ಕಟ್ಟಡಗಳಿಗೆ ತಾಗಿಕೊಂಡಿರುವ ಹೈಟೆನ್ಶನ್ ವಿದ್ಯುತ್​ ತಂತಿ

ಹೈಟೆನ್ಶನ್ ವೈರ್​ಗಳು ಕೆಆರ್​ಪುರದ ಮುನೇಶ್ವರ ಬಡಾವಣೆ, ಅಯ್ಯಪ್ಪ ನಗರ, ಹೂಡಿ, ಬಸವನಪುರ, ಭಟ್ಟರಹಳ್ಳಿಯ ಮುಖಾಂತರ ಹಾದು ಹೋಗಿ ಹೂಡಿ ಸ್ಟೇಷನ್ ಸೇರುತ್ತದೆ. ಇನ್ನೂ ಈ ತಂತಿಗಳು ಹಾದು ಹೋಗಿರುವ ಕೆಲ ಬಡಾವಣೆಗಳಲ್ಲಿ ಕೈಗೆಟುಕುವಷ್ಟು ಸಮೀಪದಲ್ಲಿದ್ದು, ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ತಂತಿಗಳು ಹಾದು ಹೋಗಿರುವ ಪಕ್ಕದಲ್ಲೆ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.

ನಗರದಲ್ಲಿ ಭೂಮಿಗೆ ಬಂಗಾರಕ್ಕೂ ಮೀರಿದ ಬೆಲೆ ಇರುವುದೇನೊ ನಿಜ. ಆದರೇ, ಜಾಗ ಎಲ್ಲಿ ವ್ಯರ್ಥವಾಗುತ್ತದೊ ಎಂದು ಒಂದು ಅಡಿಯನ್ನು ಬಿಡದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದುರದೃಷ್ಟ ಎಂದರೆ ಹೈಟೆನ್ಷನ್ ವೈರ್​ಗಳ ಅವಘಡಗಳಿಗೆ ಬಲಿಯಾಗುತ್ತಿರುವುದು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡ ಕೂಲಿ ಕಾರ್ಮಿಕರೆ ಹೊರತು ಕಟ್ಟಡ ಮಾಲಿಕರನಲ್ಲ.

ಕೇವಲ ಎರಡು ವರ್ಷಗಳಲ್ಲಿ 4-5 ಜನ ಇದೇ ಕಾರಣದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮನೆ ಮೇಲೆ ಪೈಟಿಂಗ್ ಮಾಡುವ ವೇಳೆ ತಂತಿ ಸ್ಪರ್ಶಿಸಿ ಒರ್ವ ಮೃತಪಟ್ಟಿದ್ದ. ಆದರೆ, ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಇಂತಹ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಮಾಯಕರ ಪ್ರಾಣಕ್ಕೆ ಕುತ್ತು ಬರದಂತೆ ಕಾಪಾಡಬೇಕಾಗಿದೆ.

Intro:ಕೈಗೆಟುಕುವ ಹೈಟೆನ್ಷನ್ ತಂತಿ, ಅಮಾಯಕರ ಪ್ರಾಣಕ್ಕೆ ಸಂಚಕಾರ.


ಹೈಟೆಂನ್ಷನ್ ತಂತಿ ಹಾದುಹೋಗಿರುವ ಆಸುಪಾಸಿನಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದ್ದರೂ ಕೂಡಾ ಅನಧಿಕೃತವಾಗಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು ಹಲವರ ಸಾವಿಗೆ ಕಾರಣವಾಗಿರುವುದು ಒಂದೆಡೆಯಾದರೇ, ಅಂತಹ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡುವ ಮೂಲಕ ಅಧಿಕಾರಿಗಳು ಪರೋಕ್ಷವಾಗಿ ಸಾವುನೋವುಗಳಿಗೆ ಕಾರಣವಾಗುತ್ತಿದ್ದಾರೆ.


ಕೆಆರ್ ಪುರದ ಬಸವನಪುರ ವಾರ್ಡ್ ಮುನೇಶ್ವರನಗರ .ಈ ಹೈ ಟೆನ್ಷನ್ ವೈರ್ ಗಳು ಕೆಆರ್ ಪುರದ ಮುನೇಶ್ವರ ಬಡಾವಣೆ, ಅಯ್ಯಪ್ಪ ನಗರ, ಹೂಡಿ, ಬಸವನಪುರ, ಭಟ್ಟರಹಳ್ಳಿಯ ಮುಖಾಂತರ ಹಾದು ಹೋಗಿವೆ. ಬಹಳಷ್ಟು ಹೈ ಟೆನ್ಷನ್ ವೈರ್ ಗಳು ಹಾದು ಹೋಗಿರುವ ಈ ಹೈಟೆನ್ಷನ್ ತಂತಿಗಳು ಹಲವು ಬಡಾವಣೆಗಳನ್ನು ದಾಟಿ ಹೂಡಿ ಸ್ಟೇಷನ್ ಗೆ ಸೇರುತ್ತದೆ. ಈ ತಂತಿಗಳು ಹಾದು ಹೋಗಿರುವ ಕೆಲ ಬಡಾವಣೆಗಳಲ್ಲಿ ಕೈಗೆಟುಕುವಂತಿವೆ. ಅಲ್ಲದೇ ತಂತಿಗಳು ಹಾದು ಹೋಗಿರುವ ಪಕ್ಕದಲ್ಲೆ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ, ನಗರದಲ್ಲಿ ಭೂಮಿಗೆ ಬಂಗಾರಕ್ಕೂ ಮೀರಿದ ಬೆಲೆ ಇರುವುದು ನಿಜ.
ಆದರೇ ಜಾಗ ಎಲ್ಲಿ ವ್ಯರ್ಥವಾಗುತ್ತದೆ ಎಂದು ಒಂದು ಅಡಿಯನ್ನು ಬಿಡದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಾಗ ಎಲ್ಲಿ ವ್ಯರ್ಥವಾಗುತ್ತದೆ ಎಂದು ಆಲೋಚಿಸುವವರು, ಪ್ರಾಣ ಹಾನಿಯಾಗುತ್ತದೆ ಎಂಬ ಅರಿವಿಲ್ಲದೆ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೂಡಾ ಮನೆ ಮಾಲಿಕರು ಬಲಿಯಾಗುತ್ತಿಲ್ಲ, ಬದಲಾಗಿ ಕಟ್ಟಡ ನಿರ್ಮಿಸುವ ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ.


Body:ಕೆಲ ದಿನಗಳ ಹಿಂದೆ ಮನೆ ಮೇಲೆ ಫೈಟಿಂಗ್ ಮಾಡುವ ವೇಳೆ ತಂತಿ ಸ್ಪರ್ಶಿಸಿ ಒರ್ವ ಮೃತಪಟ್ಟನು. ಮಳೆ ಬಂದಾಗ ಜೋರಾದ ಶಬ್ದ ಬರುತ್ತದೆ. ಮನೆ ಮೇಲೆ ಬಟ್ಟೆಗಳನ್ನು ಮತ್ತು ಮಕ್ಕಳು ಆಟವಾಡಲು ಹೋಗಲು ಆಗುವುದಿಲ್ಲ ಎರಡು ವರ್ಷದಲ್ಲಿ ನಾಲ್ಕರಿಂದ ಐದು ಜನ ಮೃತಪಟ್ಟಿದ್ದಾರೆ. ಇದೇ ತಿಂಗಳ 6 ರಂದು ಕೆಆರ್ ಪುರಂನ ಮುನೇಶ್ವರನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಬಣ್ಣ ಬಳಿಯುವ ಸಂದರ್ಭದಲ್ಲಿ ತಂತಿ ತಗುಲಿ ದೇಹ 60% ರಷ್ಟು ಸುಟ್ಟಿತ್ತು, ಸ್ಥಳೀಯರ ನೆರವಿನಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೇ ಎರಡು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಇಷ್ಟೆಲ್ಲಾ ಆದರೂ ಕೂಡಾ ಅಧಿಕಾರಿಗಳು ಮಾತ್ರ ಇಂತಹ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ.


Conclusion:ಏನೇ ಆದರೂ ಇಲ್ಲಿ ಯಾರೋ ಮಾಡಿದ ತಪ್ಪಿಗೆ ಮತ್ತಿನ್ಯಾರೋ ತಮ್ಮ ಅಮೂಲ್ಯ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವುದು ಮಾತ್ರ
ದುರಾದೃಷ್ಟಕರ ...

ಧರ್ಮರಾಜು ಎಂ ಕೆಆರ್ ಪುರ.



ಬೈಟ್ ೧....ನಳಿನಿ, ಸ್ಥಳೀಯರು


ಬೈಟ್೨....ವೆಂಕಟೇಶ್
ಸ್ಥಳೀಯರು

ಬೈಟ್ ೩....ಕೆಂಪೇಗೌಡ, ಸ್ಥಳೀಯರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.