ETV Bharat / state

ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹತ್ಯೆಗೊಳಗಾದ ಅಣ್ಣ: ನಾಲ್ವರ ಬಂಧನ

author img

By

Published : Nov 29, 2022, 9:56 PM IST

ತಮ್ಮನ ಸಂಸಾರ ಸರಿಪಡಿಸಲು ಹೋದ ಅಣ್ಣನಿಗೆ ಹೆಂಡತಿಯ ಮನೆಯವರು ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Kn_bng
ಮೃತ ವ್ಯಕ್ತಿ

ಬೆಂಗಳೂರು: ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಅಣ್ಣನನ್ನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಜೆಜೆ ನಗರ ನಿವಾಸಿ ಇಮಾಯುನ್ ಎಂಬುವರನ್ನು ಕೊಲೆ ಮಾಡಿದ ಆರೋಪದಡಿ ಸೈಯ್ಯದ್ ಫೈಸಲ್, ಸೈಯ್ಯದ್ ಮುಬಾರಕ್, ಸೈಯದ್​ ಅಸ್ಮತುಲ್ಲಾ, ಸುಲತಾನ್​ ಶಾ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೊಳಗಾದ ಇಮಾಯುನ್ ಜೀವನಕ್ಕಾಗಿ ಸ್ಕ್ರಾಪ್ ವ್ಯಾಪಾರ ಮಾಡುತ್ತಿದ್ದ.

ಈತನ ಸಹೋದರ ಜಾವೀದ್​ನ ಮದುವೆ ನಾಲ್ಕು ತಿಂಗಳ ಹಿಂದೆ ಮುಸ್ಕಾನ್ ಎಂಬಾಕೆಯೊಂದಿಗೆ ಆಗಿತ್ತು. ಕೌಟುಂಬಿಕ ಕಾರಣಗಳಿಂದಾಗಿ ಗಂಡ-ಹೆಂಡತಿ ದೂರವಾಗಿದ್ದರು. ಈ ಮಧ್ಯೆ ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಇಮಾಯುನ್, ಸೋಮವಾರ ಮಧ್ಯಾಹ್ನ ಮುಸ್ಕಾನ್ ಮನೆಗೆ ಹೋಗಿದ್ದ. ಈ ವೇಳೆ ಮುಸ್ಕಾನ್ ಸಹೋದರರು ಜೊತೆಗಿದ್ದರು‌‌.

ರಾಜಿ ಮಾತುಕತೆ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಮುಸ್ಕಾನ್ ಸಹೋದರರು ಹಾಗೂ ಇಮಾಯುಲ್ ಸಹೋದರರ ನಡುವೆ ಗಲಾಟೆಯಾಗಿದೆ‌. ಕೋಪಗೊಂಡ ಮುಸ್ಕಾನ್​ ಸಹೋದರರು ಜಾವೀದ್​ಗೆ ಕಬ್ಬಿಣದ ರಾಡ್​ಗಳಿಂದ ಹೊಡೆಯಲು ಮುಂದಾಗಿರುತ್ತಾರೆ. ಇನ್ನು ಇದನ್ನು ತಡೆಯಲು ಮುಂದಾದ ಇಮಾಯುನ್​ಗೆ ರಾಡ್​ ಮತ್ತು ಕೈಯಿಂದ ಎದೆಗೆ ಬಲವಾಗಿ ಗುದ್ದಿದ್ದಾರೆ.

ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹತ್ಯೆಗೊಳಗಾದ ಅಣ್ಣ

ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇಮಾಯುನ್ ಏಕಾಏಕಿ‌ ಕುಸಿದು ಬಿದ್ದಿದ್ದಾರೆ.‌ ಕೂಡಲೇ ಸಮೀಪದ‌ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಇಮಾಯುನ್​ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ

ಬೆಂಗಳೂರು: ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಅಣ್ಣನನ್ನ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ.

ಜೆಜೆ ನಗರ ನಿವಾಸಿ ಇಮಾಯುನ್ ಎಂಬುವರನ್ನು ಕೊಲೆ ಮಾಡಿದ ಆರೋಪದಡಿ ಸೈಯ್ಯದ್ ಫೈಸಲ್, ಸೈಯ್ಯದ್ ಮುಬಾರಕ್, ಸೈಯದ್​ ಅಸ್ಮತುಲ್ಲಾ, ಸುಲತಾನ್​ ಶಾ ನಾಲ್ವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೊಳಗಾದ ಇಮಾಯುನ್ ಜೀವನಕ್ಕಾಗಿ ಸ್ಕ್ರಾಪ್ ವ್ಯಾಪಾರ ಮಾಡುತ್ತಿದ್ದ.

ಈತನ ಸಹೋದರ ಜಾವೀದ್​ನ ಮದುವೆ ನಾಲ್ಕು ತಿಂಗಳ ಹಿಂದೆ ಮುಸ್ಕಾನ್ ಎಂಬಾಕೆಯೊಂದಿಗೆ ಆಗಿತ್ತು. ಕೌಟುಂಬಿಕ ಕಾರಣಗಳಿಂದಾಗಿ ಗಂಡ-ಹೆಂಡತಿ ದೂರವಾಗಿದ್ದರು. ಈ ಮಧ್ಯೆ ತಮ್ಮನ ಸಂಸಾರ ಸರಿಪಡಿಸಲು ಮುಂದಾಗಿದ್ದ ಇಮಾಯುನ್, ಸೋಮವಾರ ಮಧ್ಯಾಹ್ನ ಮುಸ್ಕಾನ್ ಮನೆಗೆ ಹೋಗಿದ್ದ. ಈ ವೇಳೆ ಮುಸ್ಕಾನ್ ಸಹೋದರರು ಜೊತೆಗಿದ್ದರು‌‌.

ರಾಜಿ ಮಾತುಕತೆ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಮುಸ್ಕಾನ್ ಸಹೋದರರು ಹಾಗೂ ಇಮಾಯುಲ್ ಸಹೋದರರ ನಡುವೆ ಗಲಾಟೆಯಾಗಿದೆ‌. ಕೋಪಗೊಂಡ ಮುಸ್ಕಾನ್​ ಸಹೋದರರು ಜಾವೀದ್​ಗೆ ಕಬ್ಬಿಣದ ರಾಡ್​ಗಳಿಂದ ಹೊಡೆಯಲು ಮುಂದಾಗಿರುತ್ತಾರೆ. ಇನ್ನು ಇದನ್ನು ತಡೆಯಲು ಮುಂದಾದ ಇಮಾಯುನ್​ಗೆ ರಾಡ್​ ಮತ್ತು ಕೈಯಿಂದ ಎದೆಗೆ ಬಲವಾಗಿ ಗುದ್ದಿದ್ದಾರೆ.

ತಮ್ಮನ ಸಂಸಾರ ಸರಿಪಡಿಸಲು ಹೋಗಿ ಹತ್ಯೆಗೊಳಗಾದ ಅಣ್ಣ

ಮೊದಲೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇಮಾಯುನ್ ಏಕಾಏಕಿ‌ ಕುಸಿದು ಬಿದ್ದಿದ್ದಾರೆ.‌ ಕೂಡಲೇ ಸಮೀಪದ‌ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಇಮಾಯುನ್​ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.