ETV Bharat / state

ರಾಜಕಾಲುವೆಗೆ ಬಿದ್ದು ಮಗು ನಾಪತ್ತೆ.. ಮುಂದುವರೆದ ಶೋಧನಾ ಕಾರ್ಯ..

ಕಸ ಹಾಕುವ ವೇಳೆ ಆಯತಪ್ಪಿ ಕಾಲುವೆಗೆ ಬಿದ್ದು ನಾಪತ್ತೆಯಾಗಿರುವ ಮಗುವಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮಗುವಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.

author img

By

Published : Sep 2, 2019, 5:29 PM IST

ಮುಂದುವರೆದ ಶೋಧ ಕಾರ್ಯ

ಬೆಂಗಳೂರು: ಮೋರಿಯ ಬಳಿ ಕಸ ಹಾಕಲು ಹೋದ ಮಗು ಆಯತಪ್ಪಿ ಕಾಲುವೆಗೆ ಬಿದ್ದುಕೊಚ್ಚಿ ಹೋದ ಘಟನೆ ಗೋರಿಪಾಳ್ಯ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ನಡೆದಿದೆ.

ನಗರದ ಗುಡ್ಡದಹಳ್ಳಿ ನಿವಾಸಿಗಳಾದ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿ ಪುತ್ರ ಮಹ್ಮದ್ ಝೈನ್ (5) ನಾಪತ್ತೆಯಾದ ಬಾಲಕ.

ಮುಂದುವರೆದ ಶೋಧ ಕಾರ್ಯ..

ಮಹ್ಮದ್ ಝೈನ್ ಕಳೆದ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗೆಳತಿ ಜೊತೆ ಕಸ ಹಾಕಲು ಹೋಗಿದ್ದ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದಿದ್ದ. ರಾತ್ರಿಯಾದ ಕಾರಣ ಮರುದಿನ ಬೆಳಗ್ಗೆ ಜೆಜೆನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆದಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಮಹ್ಮದ್ ಝೈನ್ ತಂದೆ, ಇಮ್ರಾನ್ ಶರೀಫ್ ಸಾವನ್ನಪ್ಪಿದ್ದರು. ಹೀಗಾಗಿ ತಾಯಿಯೊಂದಿಗೆ ಝೈನ್ ವಾಸವಾಗಿದ್ದ, ಸದ್ಯ ಮಗುವನ್ನ ಕಳೆದುಕೊಂಡ ತಾಯಿ ಕಂಗಾಲಾಗಿದ್ದಾರೆ

ಬೆಂಗಳೂರು: ಮೋರಿಯ ಬಳಿ ಕಸ ಹಾಕಲು ಹೋದ ಮಗು ಆಯತಪ್ಪಿ ಕಾಲುವೆಗೆ ಬಿದ್ದುಕೊಚ್ಚಿ ಹೋದ ಘಟನೆ ಗೋರಿಪಾಳ್ಯ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ನಡೆದಿದೆ.

ನಗರದ ಗುಡ್ಡದಹಳ್ಳಿ ನಿವಾಸಿಗಳಾದ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿ ಪುತ್ರ ಮಹ್ಮದ್ ಝೈನ್ (5) ನಾಪತ್ತೆಯಾದ ಬಾಲಕ.

ಮುಂದುವರೆದ ಶೋಧ ಕಾರ್ಯ..

ಮಹ್ಮದ್ ಝೈನ್ ಕಳೆದ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗೆಳತಿ ಜೊತೆ ಕಸ ಹಾಕಲು ಹೋಗಿದ್ದ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದಿದ್ದ. ರಾತ್ರಿಯಾದ ಕಾರಣ ಮರುದಿನ ಬೆಳಗ್ಗೆ ಜೆಜೆನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆದಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಮಹ್ಮದ್ ಝೈನ್ ತಂದೆ, ಇಮ್ರಾನ್ ಶರೀಫ್ ಸಾವನ್ನಪ್ಪಿದ್ದರು. ಹೀಗಾಗಿ ತಾಯಿಯೊಂದಿಗೆ ಝೈನ್ ವಾಸವಾಗಿದ್ದ, ಸದ್ಯ ಮಗುವನ್ನ ಕಳೆದುಕೊಂಡ ತಾಯಿ ಕಂಗಾಲಾಗಿದ್ದಾರೆ

Intro:ರಾಜಕಾಲುವೆಗೆ ಮಗು ಬಿದ್ದು ನಾಪತ್ತೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

ಮೊರಿಯ ಬಳಿ ಕಸ ಹಾಕಲು ಹೋದ ಮಗು ಕೊಚ್ಚಿ ಹೊದ ಘಟನೆ
ಗೊರಿಪಾಳ್ಯದ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ನಡೆದಿದೆ.
ಮಹಮದ್ ಜೈನ್ (೫) ನಾಪತ್ತೆಯಾದ ಬಾಲಕ..

ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ಅವ್ರ ಪುತ್ರ ನಾಗಿದ್ದು
ಶುಕ್ರವಾರ ರಾತ್ರಿ ೧೧ ಘಂಟೆ ಸಮಯದಲ್ಲಿ ಗೆಳತಿಯ ಜೊತೆ ಕಸ ಹಾಕಲು ಹೋಗಿದ್ದ ಆದರೆ ಈ ವೇಳೆ ಆಯಾತಪ್ಪಿ ಮೊರಿಯೊಳಗೆ ಬಿದ್ದಿದ್ದ ‌ಬಾಲಕ. ರಾತ್ರಿಯಾದ ಕಾರಣ ಮರುದಿನ ಬೆಳಿಗ್ಗೆ ಜೆ.ಜೆನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದ್ಯ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಜೆಜೆನಗರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಮಹಮ್ಮ ದ್ ಜೈನ್ ತಂದೆ ಇಮ್ರಾನ್ ಶರೀಫ್ ಸಾವನ್ನಪ್ಪಿದ್ದರು. ಹೀಗಾಗಿ ತಾಯಿಯೊಂದಿಗೆ ಝೈನ್ ವಾಸವಾಗಿದ್ದ ಸದ್ಯ ಮಗುವನ್ನ ಕಳೆದುಕೊಂಡ ತಾಯಿ ಕಂಗಲಾಗಿದ್ದಾರೆ
Body:KN_BNG_06_CHILD_MIISING_7204498Conclusion:KN_BNG_06_CHILD_MIISING_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.