ಬೆಂಗಳೂರು: ಸರ್ಕಾರದ ಸ್ಥಳೀಯ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಸರ್ಕಾರದ ಆದೇಶ ಧಿಕ್ಕರಿಸಿದೆ.
ಒಂದು ವಾರ ಕಾಲ ಯಾವುದೇ ಸಭೆ, ಸಮಾರಂಭ, ನಡೆಸದಂತೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಪಾಲಿಕೆಯೇ 300ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಭೆ ನಡೆಸಿದೆ. ನಗರದಲ್ಲಿರುವ ಮಾಲ್, ಥಿಯೇಟರ್ಗಳನ್ನು ಬಂದ್ ಮಾಡಿಸಿ, ಮದುವೆ ಮಂಟಪಗಳಿಗೂ ನೋಟಿಸ್ ನೀಡಿದ್ದ ಬಿಬಿಎಂಪಿ, 100 ಕ್ಕಿಂತ ಹೆಚ್ಚು ಜನರು ಸೇರದಂತೆ ಎಲ್ಲರಿಗೂ ಖಡಕ್ ಆದೇಶ ನೀಡಿತ್ತು.
ಆದರೆ ಬಿಬಿಎಂಪಿಯಿಂದಲೇ ಆದೇಶ ಉಲ್ಲಂಘನೆಯಾಗಿದ್ದು, ನಗರದ ಟೌನ್ಹಾಲ್ನಲ್ಲಿ 300 ಕ್ಕೂ ಅಧಿಕ ಸಿಬ್ಬಂದಿಗೆ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಕ್ರಮಗಳು, ಮುನ್ನೆಚ್ಚರಿಕೆ ಬಗ್ಗೆ ಸಭೆ ಹಾಗೂ ತರಬೇತಿ ಕಾರ್ಯಕ್ರಮ ನಡೆಸಿದೆ. ಪಾಲಿಕೆಯ ಆರೋಗ್ಯಾಧಿಕಾರಿ, ಜಂಟಿ ಆಯುಕ್ತರು , ಸಿಬ್ಬಂದಿ ಸೇರಿ ಸಭೆ ನಡೆಸಿದರು. ಬಿಬಿಎಂಪಿಯ ಈ ಕೆಲಸ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.