ETV Bharat / state

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ ಕ್ರಿಕೆಟ್: ಪಂದ್ಯ ವೀಕ್ಷಿಸಿದ ಗೃಹ ಸಚಿವ ಜಿ. ಪರಮೇಶ್ವರ್

author img

By ETV Bharat Karnataka Team

Published : Dec 10, 2023, 10:49 PM IST

Bangalore City Police Commissioner Cup: ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್​​ನ ಚಾಂಪಿಯನ್​ ಆಗಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಹೊರಹೊಮ್ಮಿತು.

Bangalore City Police Commissioner Cup Cricket
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ ಕ್ರಿಕೆಟ್

ಬೆಂಗಳೂರು: ಬಹುತೇಕ ಸದಾ ಬಿಡುವಿರದೇ ಕರ್ತವ್ಯ ನಿರ್ವಹಿಸುವ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳು ಹಾಗೂ ಅಪರಾಧ ವರದಿಗಾರರಿಗಾಗಿ "ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ 2023" ಕ್ರಿಕೆಟ್ ಟೂರ್ನಮೆಂಟ್‌ನ್ನು ಆಯೋಜಿಸಲಾಗಿತ್ತು. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ಮತ್ತು ಬೆಂಗಳೂರು ನಗರ ಕ್ರೈಂ ನ್ಯೂಸ್​ ವರದಿಗಾರರ ಜ್ಯೂನಿಯರ್ಸ್ ತಂಡ ಮುಖಾಮುಖಿ ಆಗಿತ್ತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ ಫೈನಲ್​ ವೀಕ್ಷಣೆಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಆಗಮಿಸಿದ್ದರು. ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಶುಭ ಕೋರಿದರು. ದಿನನಿತ್ಯ ಬಿಡುವಿಲ್ಲದೆ ಕರ್ತವ್ಯದಲ್ಲಿ ತೊಡಗಿರುವ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾಧ್ಯಮಮಿತ್ರರಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಸ್ಟೇಡಿಯಂನ ಗ್ರೌಂಡ್ಸ್ ಮೆನ್‌ ಹಾಗೂ ಆಟದ ತೀರ್ಪುಗಾರರಿಗೆ 20 ಸಾವಿರ ರೂ. ಪ್ರೋತ್ಸಾಹಧನವನ್ನ ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರು ವಿತರಿಸಿದರು.

Bangalore City Police Commissioner Cup Cricket
ರನ್ನರ್ ಅಪ್ ಆದ ಬೆಂಗಳೂರು ನಗರ ಅಪರಾಧ ವರದಿಗಾರರ ಜ್ಯೂನಿಯರ್ಸ್ ತಂಡ

ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳು, ಐಪಿಎಸ್ ಅಧಿಕಾರಿಗಳು, ಬೆಂಗಳೂರು ನಗರ ಅಪರಾಧ ವರದಿಗಾರರು ಜೂನಿಯರ್ಸ್, ಬೆಂಗಳೂರು ನಗರ ಅಪರಾಧ ವರದಿಗಾರರು ಸೀನಿಯರ್ಸ್ ಹಾಗೂ ರಾಷ್ಟ್ರೀಯ ಮಾಧ್ಯಮ ವರದಿಗಾರರ ತಂಡಗಳನ್ನೊಳಗೊಂಡ ಎರಡು ದಿನಗಳ ಸರಣಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಚಾಂಪಿಯನ್ ಆದರೆ, ಬೆಂಗಳೂರು ನಗರ ಅಪರಾಧ ವರದಿಗಾರರ ಜ್ಯೂನಿಯರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಪ್ರಶಸ್ತಿ ವಿತರರಣೆ ಬಳಿಕ‌ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ''ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತಿದೆ. ಇಲಾಖೆಯಲ್ಲಿನ ಕ್ರೀಡಾಪಟು ಸಿಬ್ಬಂದಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಲಾಗುವುದು. ರಾಷ್ಟ್ರೀಯ ಮಟ್ಟದವರೆಗೂ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಬದ್ಧ" ಎಂದು ತಿಳಿಸಿದರು.

ಇದನ್ನೂ ಓದಿ: ಶಿವರಾಜಕುಮಾರ್​ಗೆ ಎಂಪಿ ಟಿಕೆಟ್ ಆಫರ್​ ಕೊಟ್ಟ ಡಿಕೆಶಿ: ಶಿವಣ್ಣ ಹೇಳಿದ್ದೇನು?

ಬೆಂಗಳೂರು: ಬಹುತೇಕ ಸದಾ ಬಿಡುವಿರದೇ ಕರ್ತವ್ಯ ನಿರ್ವಹಿಸುವ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳು ಹಾಗೂ ಅಪರಾಧ ವರದಿಗಾರರಿಗಾಗಿ "ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ 2023" ಕ್ರಿಕೆಟ್ ಟೂರ್ನಮೆಂಟ್‌ನ್ನು ಆಯೋಜಿಸಲಾಗಿತ್ತು. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ಮತ್ತು ಬೆಂಗಳೂರು ನಗರ ಕ್ರೈಂ ನ್ಯೂಸ್​ ವರದಿಗಾರರ ಜ್ಯೂನಿಯರ್ಸ್ ತಂಡ ಮುಖಾಮುಖಿ ಆಗಿತ್ತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಪ್ ಫೈನಲ್​ ವೀಕ್ಷಣೆಗೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಆಗಮಿಸಿದ್ದರು. ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಶುಭ ಕೋರಿದರು. ದಿನನಿತ್ಯ ಬಿಡುವಿಲ್ಲದೆ ಕರ್ತವ್ಯದಲ್ಲಿ ತೊಡಗಿರುವ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾಧ್ಯಮಮಿತ್ರರಿಗಾಗಿ ಕ್ರಿಕೆಟ್ ಪಂದ್ಯ ಆಯೋಜಿಸಿರುವ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಸ್ಟೇಡಿಯಂನ ಗ್ರೌಂಡ್ಸ್ ಮೆನ್‌ ಹಾಗೂ ಆಟದ ತೀರ್ಪುಗಾರರಿಗೆ 20 ಸಾವಿರ ರೂ. ಪ್ರೋತ್ಸಾಹಧನವನ್ನ ಇದೇ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರು ವಿತರಿಸಿದರು.

Bangalore City Police Commissioner Cup Cricket
ರನ್ನರ್ ಅಪ್ ಆದ ಬೆಂಗಳೂರು ನಗರ ಅಪರಾಧ ವರದಿಗಾರರ ಜ್ಯೂನಿಯರ್ಸ್ ತಂಡ

ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳು, ಐಪಿಎಸ್ ಅಧಿಕಾರಿಗಳು, ಬೆಂಗಳೂರು ನಗರ ಅಪರಾಧ ವರದಿಗಾರರು ಜೂನಿಯರ್ಸ್, ಬೆಂಗಳೂರು ನಗರ ಅಪರಾಧ ವರದಿಗಾರರು ಸೀನಿಯರ್ಸ್ ಹಾಗೂ ರಾಷ್ಟ್ರೀಯ ಮಾಧ್ಯಮ ವರದಿಗಾರರ ತಂಡಗಳನ್ನೊಳಗೊಂಡ ಎರಡು ದಿನಗಳ ಸರಣಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳ ತಂಡ ಚಾಂಪಿಯನ್ ಆದರೆ, ಬೆಂಗಳೂರು ನಗರ ಅಪರಾಧ ವರದಿಗಾರರ ಜ್ಯೂನಿಯರ್ಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಪ್ರಶಸ್ತಿ ವಿತರರಣೆ ಬಳಿಕ‌ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ''ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲಾತಿಯನ್ನು ಕ್ರೀಡಾಪಟುಗಳಿಗೆ ನೀಡಲಾಗುತ್ತಿದೆ. ಇಲಾಖೆಯಲ್ಲಿನ ಕ್ರೀಡಾಪಟು ಸಿಬ್ಬಂದಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಲಾಗುವುದು. ರಾಷ್ಟ್ರೀಯ ಮಟ್ಟದವರೆಗೂ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಬದ್ಧ" ಎಂದು ತಿಳಿಸಿದರು.

ಇದನ್ನೂ ಓದಿ: ಶಿವರಾಜಕುಮಾರ್​ಗೆ ಎಂಪಿ ಟಿಕೆಟ್ ಆಫರ್​ ಕೊಟ್ಟ ಡಿಕೆಶಿ: ಶಿವಣ್ಣ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.