ETV Bharat / state

ಟ್ರ್ಯಾಕ್ಟರ್​ ಕದ್ದು ತಮಿಳುನಾಡಿಗೆ ಪರಾರಿಯಾಗಿದ್ದ 'ಗಲೀಜು' ಅರೆಸ್ಟ್​ ​

author img

By

Published : Aug 6, 2020, 5:14 PM IST

Updated : Aug 6, 2020, 5:32 PM IST

ಟ್ರ್ಯಾಕ್ಟರ್ ಕದ್ದು ತಮಿಳುನಾಡಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಂಡೇಪಾಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಆರೋಪಿ ಗಣೇಶನನ್ನು ಬಂಧಿಸಲಾಗಿದೆ.

Arrested for Tractor Theft in bangalore
ಟ್ರ್ಯಾಕ್ಟರ್​ ಕಳ್ಳತನ ಆರೋಪಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಟ್ರ್ಯಾಕ್ಟರ್​ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡೇಪಾಳ್ಯದ ಮಾಲೀಕರೊಬ್ಬರ ಮನೆಯಲ್ಲಿ ಟ್ರ್ಯಾಕ್ಟರ್​ ಚಾಲಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಬೊಡ್ಡಪಲ್ಲಿ ನಿವಾಸಿ ಗಣೇಶ ಅಲಿಯಾಸ್​ ಗಲೀಜು ಎಂಬಾತನನ್ನು ಬಂಧಿಸಿ, ಟ್ರ್ಯಾಕ್ಟರ್​ ವಶಪಡಿಸಿಕೊಳ್ಳಲಾಗಿದೆ.

ಜನವರಿ 25ರಂದು ಮಾಲೀಕನ ಟ್ರ್ಯಾಕ್ಟರ್ ಕದಿಯಲು ಮುಂದಾಗಿದ್ದ ಆರೋಪಿ ಗಣೇಶ್ ಕೊನೆ ಗಳಿಗೆಯಲ್ಲಿ ಮಂಗನಮ್ಮನಪಾಳ್ಯ ಕೆರೆ ಬಳಿ ನಿಲ್ಲಿಸಿದ್ದ ನವಾಬ್ ಜಾನ್​ ಎಂಬುವವರ ಟ್ರ್ಯಾಕ್ಟರ್​ನೊಂದಿಗೆ ತಮಿಳುನಾಡಿಗೆ ಪರಾರಿಯಾಗಿದ್ದ.

ನವಾಬ್​ನ ಜೀವನಾಧಾರಕ್ಕೆ ಇದ್ದ ಟ್ರ್ಯಾಕ್ಟರ್ ಕಳೆದುಕೊಂಡು ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಕ್​ಡೌನ್​ನಿಂದಾಗಿ ಆರೋಪಿಯನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಲಾಕ್​ಡೌನ್ ತೆರವಾಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಸ್ವಂತ ಊರಲ್ಲಿ ಹಲವು ಕಳ್ಳತನವೆಸಗಿ ಸಿಕ್ಕಿ ಹಾಕಿಕೊಂಡಿದ್ದ. ನಂತರ ಮಾಲೂರಿನಲ್ಲಿ ಇದೇ ರೀತಿ ಟ್ರ್ಯಾಕ್ಟರ್ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.

ಬೆಂಗಳೂರು: ಟ್ರ್ಯಾಕ್ಟರ್​ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡೇಪಾಳ್ಯದ ಮಾಲೀಕರೊಬ್ಬರ ಮನೆಯಲ್ಲಿ ಟ್ರ್ಯಾಕ್ಟರ್​ ಚಾಲಕನಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಬೊಡ್ಡಪಲ್ಲಿ ನಿವಾಸಿ ಗಣೇಶ ಅಲಿಯಾಸ್​ ಗಲೀಜು ಎಂಬಾತನನ್ನು ಬಂಧಿಸಿ, ಟ್ರ್ಯಾಕ್ಟರ್​ ವಶಪಡಿಸಿಕೊಳ್ಳಲಾಗಿದೆ.

ಜನವರಿ 25ರಂದು ಮಾಲೀಕನ ಟ್ರ್ಯಾಕ್ಟರ್ ಕದಿಯಲು ಮುಂದಾಗಿದ್ದ ಆರೋಪಿ ಗಣೇಶ್ ಕೊನೆ ಗಳಿಗೆಯಲ್ಲಿ ಮಂಗನಮ್ಮನಪಾಳ್ಯ ಕೆರೆ ಬಳಿ ನಿಲ್ಲಿಸಿದ್ದ ನವಾಬ್ ಜಾನ್​ ಎಂಬುವವರ ಟ್ರ್ಯಾಕ್ಟರ್​ನೊಂದಿಗೆ ತಮಿಳುನಾಡಿಗೆ ಪರಾರಿಯಾಗಿದ್ದ.

ನವಾಬ್​ನ ಜೀವನಾಧಾರಕ್ಕೆ ಇದ್ದ ಟ್ರ್ಯಾಕ್ಟರ್ ಕಳೆದುಕೊಂಡು ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಕ್​ಡೌನ್​ನಿಂದಾಗಿ ಆರೋಪಿಯನ್ನ ಬಂಧಿಸಲು ಸಾಧ್ಯವಾಗಿರಲಿಲ್ಲ. ಲಾಕ್​ಡೌನ್ ತೆರವಾಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಸ್ವಂತ ಊರಲ್ಲಿ ಹಲವು ಕಳ್ಳತನವೆಸಗಿ ಸಿಕ್ಕಿ ಹಾಕಿಕೊಂಡಿದ್ದ. ನಂತರ ಮಾಲೂರಿನಲ್ಲಿ ಇದೇ ರೀತಿ ಟ್ರ್ಯಾಕ್ಟರ್ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.

Last Updated : Aug 6, 2020, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.