ETV Bharat / state

ಸಂಘಟನೆ ಹೆಸರಿನಲ್ಲಿ ಸಹಾಯಕ್ಕೆ ಬಂದು ಹಣ ವಸೂಲಿಗೆ ಯತ್ನಿಸಿದವನ ಬಂಧನ - ಈಟಿವಿ ಭಾರತ್​ ಕರ್ನಾಟಕ

ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಎಂದು ಅಮಾಯಕರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ಪ್ರಕಾಶ್​ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

Arrest
ಪ್ರಕಾಶ ಮೂರ್ತಿ
author img

By

Published : Sep 24, 2022, 7:23 PM IST

ಬೆಂಗಳೂರು: ನೊಂದ ಮಹಿಳೆಗೆ ಸಹಾಯ ಮಾಡಿದ್ದ ಸಂಘಟನೆಯ ಅಧ್ಯಕ್ಷ ಇಂದು ಅದೇ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ ಜೈಲು ಸೇರಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಹಣಕ್ಕಾಗಿ ದಿಕ್ಕಿಲ್ಲದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಕಾಶ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ. ಮಾನವ ಹಕ್ಕುಗಳ ರಕ್ಷಣೆ ಮಾಡುತ್ತೇನೆ ಎಂದು ಅಮಾಯಕರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ. ಗಂಡ ತುಂಬಾ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರತಿಭಾ ಎಂಬಾಕೆ ಬೆಳ್ಳಂದೂರು ಠಾಣೆಯ ಮೆಟ್ಟಿಲೇರಿದ್ದರು.

ಸಿಬ್ಬಂದಿ ಗಂಡ ಹೆಂಡತಿ ಜಗಳ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇಷ್ಟಾದರೂ ಸುಮ್ಮನಿರದ ಪ್ರತಿಭಾ ಪತಿ ಜನಾರ್ದನ, ಆಸ್ತಿಗಾಗಿ ಪ್ರತಿಭಾಳಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ. ನೊಂದಿದ್ದ ಪ್ರತಿಭಾಗೆ ಸಂಘಟನೆ ಹೆಸರಲ್ಲಿ ಪಕ್ಕದ ಮನೆ ರಾಣಿ ಮೂಲಕ ಪ್ರಕಾಶ್ ಮೂರ್ತಿ ಪರಿಚಯವಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಆರೋಪಿ: ತಾನೊಬ್ಬ ಮಹಾನ್ ಹೋರಾಟಗಾರ. ನೀನೊಬ್ಬಳೇ ಸ್ಟೇಷನ್​ಗೆ ಹೋದರೆ ಏನು ಆಗಲ್ಲ, ನಾಳೆ ನನ್ನೊಂದಿಗೆ ಬಾ ಎಂದು ಸೀದಾ ಕಮಿಷನರ್ ಕಚೇರಿಗೆ ಕರೆದುಕೊಂಡು ಹೋಗಿದ್ದ. ಕಮಿಷನರ್ ನಿರ್ದೇಶನದಂತೆ ಪ್ರತಿಭಾ ಗಂಡನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಜನಾರ್ದನ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅತ್ತೆ ಕೊಡಿಸಿದ್ದ ಕಾರು, ಆಭರಣಗಳನ್ನು ಪ್ರತಿಭಾಗೆ ಪ್ರಕಾಶ್ ವಾಪಸ್ ಕೊಡಿಸಿದ್ದ.

ಪ್ರತಿಭಾ ಗಂಡ ಜೈಲಿಗೆ ಹೋಗುತ್ತಿದ್ದಂತೆ ಪ್ರಕಾಶನ ಅಸಲಿ ಮುಖ‌ ಪ್ರದರ್ಶನವಾಗಿತ್ತು. ನಿನ್ನ ಕೇಸ್ ದಾಖಲಿಸಲು ಹಾಗೂ ನಿನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಿದ್ದು ನಾನು. ಹೀಗಾಗಿ ನನಗೆ ಐದು ಲಕ್ಷ ಹಣ ನೀಡುವಂತೆ ಪ್ರಕಾಶ್ ಒತ್ತಾಯ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಪ್ರತಿಭಾ ತಾಯಿ ಸುಮಾರು 1.75 ರೂಪಾಯಿ ಲಕ್ಷ ಹಣ ಹೊಂದಿಸಿ ಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ ಹಣ ನೀಡದಿದ್ದರೆ ನಿನ್ನ ಗಂಡನ ಪರ ನಿಂತು ನಿಮ್ಮ ಮೇಲೆ ಕೇಸ್ ಹಾಕಿಸಿವುದಾಗಿ ಬೆದರಿಕೆ ಹಾಕಿದ್ದ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಪ್ರಕಾಶನ ಹಿಂಸೆ ತಾಳಲಾರದೇ ಪ್ರತಿಭಾ ತಾಯಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಆರೋಪಿ ಪ್ರಕಾಶನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಹೆಂಡ್ತೀರ ಜಗಳ ನಿಲ್ಲಿಸಲು ಗಂಡ ಆಯ್ದುಕೊಂಡಿದ್ದು ಕೊಲೆ.. 2ನೇ ಹಂಡತಿಗೆ ಇಂಜೆಕ್ಷನ್​ ನೀಡಿ ಕೊಂದ ಪತಿ ರಾಯ

ಬೆಂಗಳೂರು: ನೊಂದ ಮಹಿಳೆಗೆ ಸಹಾಯ ಮಾಡಿದ್ದ ಸಂಘಟನೆಯ ಅಧ್ಯಕ್ಷ ಇಂದು ಅದೇ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ ಜೈಲು ಸೇರಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಹಣಕ್ಕಾಗಿ ದಿಕ್ಕಿಲ್ಲದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಕಾಶ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ. ಮಾನವ ಹಕ್ಕುಗಳ ರಕ್ಷಣೆ ಮಾಡುತ್ತೇನೆ ಎಂದು ಅಮಾಯಕರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ. ಗಂಡ ತುಂಬಾ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರತಿಭಾ ಎಂಬಾಕೆ ಬೆಳ್ಳಂದೂರು ಠಾಣೆಯ ಮೆಟ್ಟಿಲೇರಿದ್ದರು.

ಸಿಬ್ಬಂದಿ ಗಂಡ ಹೆಂಡತಿ ಜಗಳ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇಷ್ಟಾದರೂ ಸುಮ್ಮನಿರದ ಪ್ರತಿಭಾ ಪತಿ ಜನಾರ್ದನ, ಆಸ್ತಿಗಾಗಿ ಪ್ರತಿಭಾಳಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ. ನೊಂದಿದ್ದ ಪ್ರತಿಭಾಗೆ ಸಂಘಟನೆ ಹೆಸರಲ್ಲಿ ಪಕ್ಕದ ಮನೆ ರಾಣಿ ಮೂಲಕ ಪ್ರಕಾಶ್ ಮೂರ್ತಿ ಪರಿಚಯವಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಆರೋಪಿ: ತಾನೊಬ್ಬ ಮಹಾನ್ ಹೋರಾಟಗಾರ. ನೀನೊಬ್ಬಳೇ ಸ್ಟೇಷನ್​ಗೆ ಹೋದರೆ ಏನು ಆಗಲ್ಲ, ನಾಳೆ ನನ್ನೊಂದಿಗೆ ಬಾ ಎಂದು ಸೀದಾ ಕಮಿಷನರ್ ಕಚೇರಿಗೆ ಕರೆದುಕೊಂಡು ಹೋಗಿದ್ದ. ಕಮಿಷನರ್ ನಿರ್ದೇಶನದಂತೆ ಪ್ರತಿಭಾ ಗಂಡನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಜನಾರ್ದನ್ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅತ್ತೆ ಕೊಡಿಸಿದ್ದ ಕಾರು, ಆಭರಣಗಳನ್ನು ಪ್ರತಿಭಾಗೆ ಪ್ರಕಾಶ್ ವಾಪಸ್ ಕೊಡಿಸಿದ್ದ.

ಪ್ರತಿಭಾ ಗಂಡ ಜೈಲಿಗೆ ಹೋಗುತ್ತಿದ್ದಂತೆ ಪ್ರಕಾಶನ ಅಸಲಿ ಮುಖ‌ ಪ್ರದರ್ಶನವಾಗಿತ್ತು. ನಿನ್ನ ಕೇಸ್ ದಾಖಲಿಸಲು ಹಾಗೂ ನಿನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಿದ್ದು ನಾನು. ಹೀಗಾಗಿ ನನಗೆ ಐದು ಲಕ್ಷ ಹಣ ನೀಡುವಂತೆ ಪ್ರಕಾಶ್ ಒತ್ತಾಯ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಪ್ರತಿಭಾ ತಾಯಿ ಸುಮಾರು 1.75 ರೂಪಾಯಿ ಲಕ್ಷ ಹಣ ಹೊಂದಿಸಿ ಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ ಹಣ ನೀಡದಿದ್ದರೆ ನಿನ್ನ ಗಂಡನ ಪರ ನಿಂತು ನಿಮ್ಮ ಮೇಲೆ ಕೇಸ್ ಹಾಕಿಸಿವುದಾಗಿ ಬೆದರಿಕೆ ಹಾಕಿದ್ದ. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಪ್ರಕಾಶನ ಹಿಂಸೆ ತಾಳಲಾರದೇ ಪ್ರತಿಭಾ ತಾಯಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಆರೋಪಿ ಪ್ರಕಾಶನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಹೆಂಡ್ತೀರ ಜಗಳ ನಿಲ್ಲಿಸಲು ಗಂಡ ಆಯ್ದುಕೊಂಡಿದ್ದು ಕೊಲೆ.. 2ನೇ ಹಂಡತಿಗೆ ಇಂಜೆಕ್ಷನ್​ ನೀಡಿ ಕೊಂದ ಪತಿ ರಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.