ಬೆಂಗಳೂರು: ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ತಿದ್ದಾರೆ. ಕೋರಮಂಗಲ ಆರ್ಟಿಒ ಇನ್ಸ್ಪೆಕ್ಟರ್ ಕುಮಾರ್ ಕೂಡಾ ಜನರಿಂದ ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆಚ್ಚು ಫೈನ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಈಗ ಜನ ಎಲ್ಎಲ್ಆರ್ ಮತ್ತು ಡಿಎಲ್ ಮಾಡಿಸಿಕೊಳ್ಳೋದಕ್ಕೆ ಆರ್ಟಿಒ ಆಫೀಸ್ಗೆ ಹೋಗ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಟ್ಟರೆ ಮಾತ್ರ ಎಲ್ಎಲ್ಆರ್ ಕೊಡುತ್ತಾರೆ. ಇಲ್ಲದಿದ್ರೆ, ಟೆಸ್ಟ್ ಡ್ರೈವ್ನಲ್ಲೇ ಫೇಲ್ ಮಾಡ್ತಾರೆ. ಅಲ್ಲದೆ, ಜನರಿಂದ ಹಣವನ್ನ ವಸೂಲಿ ಮಾಡೋದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂದು ವಿಡಿಯೋನ ಸಮೇತ ಜನರು ಆರೋಪಿಸುತ್ತಿದ್ದಾರೆ.
ಕೋರಮಂಗಲ ಆರ್ಟಿಓ ಇನ್ಸ್ಪೆಕ್ಟರ್ ಹಣ ವಸೂಲಿ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾಗಿ ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.