ETV Bharat / state

ದಂಡ ಭೀತಿಯಿಂದ ಆರ್​ಟಿಒ ಆಫೀಸ್​ಗೆ ಹೋದ್ರೆ... ಅಲ್ಲಿಯೂ ಜನರ ಜೇಬಿಗೆ ಕತ್ತರಿ ಆರೋಪ! - ಆರ್​ಟಿಓ ಇನ್ಸ್​​ಸ್ಪೆಕ್ಟರ್ ಕುಮಾರ್

ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್​ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೋರಮಂಗಲ ಆರ್​ಟಿಓ ಇನ್ಸ್​ಸ್ಪೆಕ್ಟರ್ ಮೇಲೆ ಹಣ ವಸೂಲಿ‌ ಆರೋಪ..!
author img

By

Published : Sep 14, 2019, 8:24 AM IST

Updated : Sep 14, 2019, 9:41 AM IST

ಬೆಂಗಳೂರು: ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್​ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ತಿದ್ದಾರೆ. ಕೋರಮಂಗಲ ಆರ್​ಟಿಒ ಇನ್ಸ್​​ಪೆಕ್ಟರ್ ಕುಮಾರ್ ಕೂಡಾ ಜನರಿಂದ ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಮೇಲೆ ಹಣ ವಸೂಲಿ‌ ಆರೋಪ..!

ಹೆಚ್ಚು ಫೈನ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಈಗ ಜನ ಎಲ್​ಎಲ್​ಆರ್ ಮತ್ತು ಡಿಎಲ್ ಮಾಡಿಸಿಕೊಳ್ಳೋದಕ್ಕೆ ಆರ್​ಟಿಒ ಆಫೀಸ್​ಗೆ ಹೋಗ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಟ್ಟರೆ ಮಾತ್ರ ಎಲ್​ಎಲ್​ಆರ್ ಕೊಡುತ್ತಾರೆ. ಇಲ್ಲದಿದ್ರೆ, ಟೆಸ್ಟ್ ಡ್ರೈವ್​ನಲ್ಲೇ ಫೇಲ್ ಮಾಡ್ತಾರೆ. ಅಲ್ಲದೆ, ಜನರಿಂದ ಹಣವನ್ನ ವಸೂಲಿ ಮಾಡೋದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂದು ವಿಡಿಯೋನ ಸಮೇತ ಜನರು ಆರೋಪಿಸುತ್ತಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಹಣ ವಸೂಲಿ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾಗಿ ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.

ಬೆಂಗಳೂರು: ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್​ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ತಿದ್ದಾರೆ. ಕೋರಮಂಗಲ ಆರ್​ಟಿಒ ಇನ್ಸ್​​ಪೆಕ್ಟರ್ ಕುಮಾರ್ ಕೂಡಾ ಜನರಿಂದ ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಮೇಲೆ ಹಣ ವಸೂಲಿ‌ ಆರೋಪ..!

ಹೆಚ್ಚು ಫೈನ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಈಗ ಜನ ಎಲ್​ಎಲ್​ಆರ್ ಮತ್ತು ಡಿಎಲ್ ಮಾಡಿಸಿಕೊಳ್ಳೋದಕ್ಕೆ ಆರ್​ಟಿಒ ಆಫೀಸ್​ಗೆ ಹೋಗ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಟ್ಟರೆ ಮಾತ್ರ ಎಲ್​ಎಲ್​ಆರ್ ಕೊಡುತ್ತಾರೆ. ಇಲ್ಲದಿದ್ರೆ, ಟೆಸ್ಟ್ ಡ್ರೈವ್​ನಲ್ಲೇ ಫೇಲ್ ಮಾಡ್ತಾರೆ. ಅಲ್ಲದೆ, ಜನರಿಂದ ಹಣವನ್ನ ವಸೂಲಿ ಮಾಡೋದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂದು ವಿಡಿಯೋನ ಸಮೇತ ಜನರು ಆರೋಪಿಸುತ್ತಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಹಣ ವಸೂಲಿ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾಗಿ ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.

Intro:Body: ಆರ್ ಟಿಒ‌ ಇನ್ ಸ್ಪೆಕ್ಟರ್ ಜನರಿಂದ ಹಣ ವಸೂಲಿ‌ ಮಾಡಿದ ಆರೋಪ

ಬೆಂಗಳೂರು: ಆರ್ ಟಿಓ ಅಧಿಕಾರಿಗಳಿಗೆ ಈಗ ದೀಪಾವಳಿ ಹಬ್ಬ. ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸ್ತಿದ್ದ ಹಾಗೆ ಆರ್ ಟಿಓ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ತಿದ್ದಾರೆ. ಹಾಗೆ ಕೋರಮಂಗಲ ಆರ್ ಟಿಓ ಇನ್ ಸ್ಪೆಕ್ಟರ್ ಕುಮಾರ್ ಕೂಡಾ ಜನರಿಂದ ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆಚ್ಚು ಫೈನ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಈಗ ಜನ ಎಲ್ ಎಲ್ ಆರ್ ಮತ್ತು ಡಿಎಲ್ ಮಾಡಿಸಿಕೊಳ್ಳೋದಕ್ಕೆ ಆರ್ ಟಿಓ ಆಫೀಸ್ ಹೋಗ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಟ್ರೆ ಮಾತ್ರ ಎಲ್ ಎಲ್ ಆರ್ ಕೊಡ್ತಾರೆ. ಇಲ್ಲದಿದ್ರೆ ಟೆಸ್ಟ್ ಡ್ರೈವ್ ನಲ್ಲೇ ಫೇಲ್ ಮಾಡ್ತಾರೆ. ಅಲ್ಲದೆ ಜನರಿಂದ ಹಣವನ್ನ ವಸೂಲಿ ಮಾಡೋದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಕೋರಮಂಗಲ ಆರ್ ಟಿಓ ಇನ್ ಸ್ಪೆಕ್ಟರ್ ಹಣ ವಸೂಲಿ ಮಾಡ್ತಿರೋದನ್ನ ಸಾರ್ವಜನಿಕರೊಬ್ಬರು ವೀಡಿಯೋ ಮಾಡಿದ್ದಾರೆ. ಆದ್ರೆ ಅದಕ್ಕೂ ಬಗ್ಗದ ಕುಮಾರ್ ಅದೇನು ಮಾಡ್ಕೊತ್ತೀಯೋ ಮಾಡ್ಕೋ ಅಂತ ಅವಾಜ್ ಹಾಕಿದ್ದಾರೆ.Conclusion:
Last Updated : Sep 14, 2019, 9:41 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.