ETV Bharat / state

ಶಂಕಿತ‌ ಉಗ್ರರ ಬಂಧನದಿಂದ ರಾಜ್ಯದಲ್ಲಿ ದೊಡ್ಡ ಅನಾಹುತ ತಪ್ಪಿದೆ: ಎಡಿಜಿಪಿ ಅಲೋಕ್ ಕುಮಾರ್

author img

By

Published : Sep 23, 2022, 8:09 PM IST

ಶಿವಮೊಗ್ಗ ಶಂಕಿತ ಉಗ್ರರ ಬಂಧನ ಪ್ರಕರಣ ಎನ್​ಐಎಗೆ ವರ್ಗಾವಣೆ ಆಗಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದರು.

ಎಡಿಜಿಪಿ ಅಲೋಕ್ ಕುಮಾರ್
ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನದಿಂದ ಮುಂದಾಗುವ ಅನಾಹುತ ತಪ್ಪಿಸಲಾಗಿದೆ. ಮತ್ತೋರ್ವ ಶಂಕಿತ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ‌ ಪ್ರಕರಣ ಸಂಬಂಧ‌‌ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಶಿವಮೊಗ್ಗದ ಸೈಯ್ಯದ್‌ ಯಾಸಿನ್‌ (21) ಹಾಗೂ ಮಂಗಳೂರಿನ ಮಾಝ್ ಮುನೀರ್‌ (22) ಎಂಬುವರನ್ನು ಕಳೆದ ಮಂಗಳವಾರ ಬಂಧಿಸಿತ್ತು. ವಿಚಾರಣೆ ವೇಳೆ‌ ಶಂಕಿತರು ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದರು ಎಂಬ ವಿಚಾರ ಹೊರಬಂದಿತ್ತು.

ಈ ಸಂಬಂಧ‌‌‌ ಅಲೋಕ್‌‌ ಕುಮಾರ್ ಮಾತನಾಡಿ, ನದಿ ತೀರದಲ್ಲಿ ಯಾರು ಇಲ್ಲದ ಜಾಗ ಗುರುತಿಸಿ ಟ್ರಯಲ್ ಬ್ಲಾಸ್ಟ್ ಮಾಡಿದ್ದಾರೆ. ಬ್ಲಾಸ್ಟ್ ಮಾಡಿದ ನಂತರ ಗುರುತು ಉಳಿಯದಂತೆ ನದಿಯಲ್ಲಿ ಅವಶೇಷಗಳು ಹೋಗುತ್ತವೆ. ಹೀಗಾಗಿ ನದಿ ತೀರ ಆಯ್ಕೆ ಮಾಡಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯಿಂದ ಸ್ಲೀಪರ್ ಸೆಲ್​​ಗಳನ್ನ ರೀಚ್ ಆಗಿದ್ದೇವೆ. ನಾಪತ್ತೆಯಾಗಿರುವ ಶಂಕಿತ ಶಾರೀಕ್‌‌ ಮೊಹಮ್ಮದ್ ಟಾರ್ಗೆಟ್ ಸೆಲೆಕ್ಟ್ ಮಾಡುವ ಕೆಲಸ ಮಾಡಿದ್ದ. ಶಾರೀಕ್ ಸಿಕ್ಕ ನಂತರ ಶಂಕಿತರ ಉದ್ದೇಶ ಗೊತ್ತಾಗಲಿದೆ. ಬಂಧಿತರಿಗೆ ಕರ್ನಾಟಕದಲ್ಲಿ ಆಸ್ತಿಪಾಸ್ತಿಗಳ ನಾಶ ಮಾಡುವ ಉದ್ದೇಶವಿತ್ತು ಎಂದರು.

(ಓದಿ: ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್​ಪಿ ಮಾಹಿತಿ)

ಆರೋಪಿಗಳು ಬಾಂಬ್ ತಯಾರಿಸಿರುವ ಕಚ್ಚಾವಸ್ತುಗಳು ಸಿಕ್ಕಿವೆ. ಬಾಂಬ್ ತಯಾರಿಕೆಯ ಬಗ್ಗೆ ಪಿಡಿಎಫ್ ಸಿಕ್ಕಿದೆ. ಶಿವಮೊಗ್ಗ ಪೊಲೀಸರ ಕಾರ್ಯಾಚರಣೆಯಿಂದ ಮುಂದೆ ಆಗುವ ಭಾರೀ ಅನಾಹುತ ತಪ್ಪಿದೆ. 2020 ರಲ್ಲಿ ಕದ್ರಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ತಲೆಮರೆ ಮಾಝ್ ಮುನೀರ್ ಹಾಗೂ ಶಾರೀಕ್ ಮೇಲೆ ಕೇಸ್‌ ದಾಖಲಾಗಿತ್ತು. ಕಳೆದ ಎರಡು ವರ್ಷಗಳಿಂದ ಶಂಕಿತ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಜ್ಯದ ಶಾಂತಿ ಕೆಡಿಸುವ ಬಗ್ಗೆ ಸಂಚು ಮಾಡಿದ್ದರು. ಶಾರೀಕ್ ಸಿಕ್ಕ ನಂತರ ಇವರ ಜೊತೆ ಯಾರೆಲ್ಲಾ ಇದ್ದಾರೆ ಎಂಬುವುದು ಗೊತ್ತಾಗಲಿದೆ. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಾಗಿರುವುದರಿಂದ ಎನ್ಐಎಗೆ ವರ್ಗಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು.

(ಓದಿ: ವಿಡಿಯೋ ನೋಡಿ ಬಾಂಬ್ ತಯಾರಿಕೆ, ತುಂಗಾ ನದಿ ಬಳಿ ಟ್ರಯಲ್ ಬ್ಲಾಸ್ಟ್: ಶಂಕಿತ ಉಗ್ರರ ಸಂಚಿನ ಬಗ್ಗೆ ಶಿವಮೊಗ್ಗ ಎಸ್ಪಿ ಮಾಹಿತಿ)

ಬೆಂಗಳೂರು: ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನದಿಂದ ಮುಂದಾಗುವ ಅನಾಹುತ ತಪ್ಪಿಸಲಾಗಿದೆ. ಮತ್ತೋರ್ವ ಶಂಕಿತ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ‌ ಪ್ರಕರಣ ಸಂಬಂಧ‌‌ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಶಿವಮೊಗ್ಗದ ಸೈಯ್ಯದ್‌ ಯಾಸಿನ್‌ (21) ಹಾಗೂ ಮಂಗಳೂರಿನ ಮಾಝ್ ಮುನೀರ್‌ (22) ಎಂಬುವರನ್ನು ಕಳೆದ ಮಂಗಳವಾರ ಬಂಧಿಸಿತ್ತು. ವಿಚಾರಣೆ ವೇಳೆ‌ ಶಂಕಿತರು ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದರು ಎಂಬ ವಿಚಾರ ಹೊರಬಂದಿತ್ತು.

ಈ ಸಂಬಂಧ‌‌‌ ಅಲೋಕ್‌‌ ಕುಮಾರ್ ಮಾತನಾಡಿ, ನದಿ ತೀರದಲ್ಲಿ ಯಾರು ಇಲ್ಲದ ಜಾಗ ಗುರುತಿಸಿ ಟ್ರಯಲ್ ಬ್ಲಾಸ್ಟ್ ಮಾಡಿದ್ದಾರೆ. ಬ್ಲಾಸ್ಟ್ ಮಾಡಿದ ನಂತರ ಗುರುತು ಉಳಿಯದಂತೆ ನದಿಯಲ್ಲಿ ಅವಶೇಷಗಳು ಹೋಗುತ್ತವೆ. ಹೀಗಾಗಿ ನದಿ ತೀರ ಆಯ್ಕೆ ಮಾಡಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯಿಂದ ಸ್ಲೀಪರ್ ಸೆಲ್​​ಗಳನ್ನ ರೀಚ್ ಆಗಿದ್ದೇವೆ. ನಾಪತ್ತೆಯಾಗಿರುವ ಶಂಕಿತ ಶಾರೀಕ್‌‌ ಮೊಹಮ್ಮದ್ ಟಾರ್ಗೆಟ್ ಸೆಲೆಕ್ಟ್ ಮಾಡುವ ಕೆಲಸ ಮಾಡಿದ್ದ. ಶಾರೀಕ್ ಸಿಕ್ಕ ನಂತರ ಶಂಕಿತರ ಉದ್ದೇಶ ಗೊತ್ತಾಗಲಿದೆ. ಬಂಧಿತರಿಗೆ ಕರ್ನಾಟಕದಲ್ಲಿ ಆಸ್ತಿಪಾಸ್ತಿಗಳ ನಾಶ ಮಾಡುವ ಉದ್ದೇಶವಿತ್ತು ಎಂದರು.

(ಓದಿ: ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್​ಪಿ ಮಾಹಿತಿ)

ಆರೋಪಿಗಳು ಬಾಂಬ್ ತಯಾರಿಸಿರುವ ಕಚ್ಚಾವಸ್ತುಗಳು ಸಿಕ್ಕಿವೆ. ಬಾಂಬ್ ತಯಾರಿಕೆಯ ಬಗ್ಗೆ ಪಿಡಿಎಫ್ ಸಿಕ್ಕಿದೆ. ಶಿವಮೊಗ್ಗ ಪೊಲೀಸರ ಕಾರ್ಯಾಚರಣೆಯಿಂದ ಮುಂದೆ ಆಗುವ ಭಾರೀ ಅನಾಹುತ ತಪ್ಪಿದೆ. 2020 ರಲ್ಲಿ ಕದ್ರಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ತಲೆಮರೆ ಮಾಝ್ ಮುನೀರ್ ಹಾಗೂ ಶಾರೀಕ್ ಮೇಲೆ ಕೇಸ್‌ ದಾಖಲಾಗಿತ್ತು. ಕಳೆದ ಎರಡು ವರ್ಷಗಳಿಂದ ಶಂಕಿತ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಜ್ಯದ ಶಾಂತಿ ಕೆಡಿಸುವ ಬಗ್ಗೆ ಸಂಚು ಮಾಡಿದ್ದರು. ಶಾರೀಕ್ ಸಿಕ್ಕ ನಂತರ ಇವರ ಜೊತೆ ಯಾರೆಲ್ಲಾ ಇದ್ದಾರೆ ಎಂಬುವುದು ಗೊತ್ತಾಗಲಿದೆ. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಾಗಿರುವುದರಿಂದ ಎನ್ಐಎಗೆ ವರ್ಗಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು.

(ಓದಿ: ವಿಡಿಯೋ ನೋಡಿ ಬಾಂಬ್ ತಯಾರಿಕೆ, ತುಂಗಾ ನದಿ ಬಳಿ ಟ್ರಯಲ್ ಬ್ಲಾಸ್ಟ್: ಶಂಕಿತ ಉಗ್ರರ ಸಂಚಿನ ಬಗ್ಗೆ ಶಿವಮೊಗ್ಗ ಎಸ್ಪಿ ಮಾಹಿತಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.