ETV Bharat / state

ವಿಶೇಷ ಚೇತನ ಅಭಿಮಾನಿಯ ಅಭಿಮಾನಕ್ಕೆ ಅಭಿನಯ ಚಕ್ರವರ್ತಿ ಭಾವುಕ...

author img

By

Published : Dec 1, 2019, 8:36 AM IST

Updated : Dec 1, 2019, 8:48 AM IST

ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ತನಗಾಗಿ ಭೇಟಿ ಮಾಡಲು ಬಂದ ವಿಶೇಚ ಚೇತನ ಅಭಿಮಾನಿಯನ್ನು ಪ್ರೀತಿಯಿಂದ ತಬ್ಬಿ ಹುರಿದುಂಬಿಸಿ ಆಕೆಯ ಪ್ರೀತಿಗೆ ಭಾವುಕರಾಗಿದ್ದಾರೆ.

Actor sudeep visit to Special fans
ವಿಶೇಚ ಚೇತನ ಆಭಿಮಾನಿಯ ಭೇಟಿಯಾದ ನಟ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ.. ಅದೇ ರೀತಿ ಅಭಿನಯ ಚಕ್ರವರ್ತಿಗೆ ಅಭಿಮಾನಿಗಳು ಅಂದರೆ ದೇವರ ಸಮಾನ. ವಿಶೇಷ ಚೇತನಳ ವಿಶೇಷ ಅಭಿಮಾನಕ್ಕೆ ಕಿಚ್ಚ ಸುದೀಪ್ ಮನ ಕರಗಿದೆ. ತಮ್ಮನ್ನ ಭೇಟಿಮಾಡಲು ಬಂದ ಪುಟ್ಟ ಕಂದಮಳನ್ನ ಪ್ರೀತಿಯಿಂದ ತಬ್ಬಿ ಹುರಿದುಂಬಿಸಿ ಆಕೆಯ ಪ್ರೀತಿಗೆ ಭಾವುಕರಾಗಿದ್ದಾರೆ.

ವಿಶೇಷ ಚೇತನ ಅಭಿಮಾನಿ ಭೇಟಿಯಾದ ನಟ ಸುದೀಪ್..

ಮಂಗಳೂರಿನ ಮೂಲ್ಕಿ ಸಮೀಪದ ದೀಪಿಕಾ ಕವತಾರು ಅನ್ನೋ ವಿಶೇಷ ಚೇತನ ಮಗು ಕಿಚ್ಚನ ಅಭಿಮಾನಿ. ಅನಾರೋಗ್ಯ ಪೀಡಿತ ಈ ಮಗುವಿಗೆ ಔಷಧಿ ಕೊಡಬೇಕು ಅಂದ್ರೆ ಕಿಚ್ಚ ಮಾತನಾಡಿಸಬೇಕು. ಅದೇ ರೀತಿ 3 ವರ್ಷಗಳಿಂದ ಕಿಚ್ಚ ಈ ಮಗು ಜೊತೆ ಆಗಾಗ ವಿಡಿಯೋ ಕಾಲ್ ಮೂಲಕ ಮಾತನಾಡಿ ಮಾನವೀಯತೆ ಮೆರಿದಿದ್ದಾರೆ. ಆದರೆ, ಇತ್ತೀಚಿಗೆ ಕಳೆದ ಕೆಲವು ದಿನಗಳಿಂದ ಆ ಮಗು ಕಿಚ್ಚನನ್ನು ನೋಡಲೇಬೇಕು ಎಂದು ಹಠ ಮಾಡಿದೆ.

ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ಸುದೀಪ್ ಆ ಮಗು ಜೊತೆ ಕಾಲ್ ಮಾಡಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಮಗುವಿನ ತಂದೆ ಸಂತೋಷ್ ಹಾಗೂ ತಾಯಿ ಲಕ್ಷ್ಮಿ ಹೇಗೋ ಕಷ್ಟಪಟ್ಟು ಸುದೀಪ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಹೇಗಾದರೂ ನಿಮ್ಮನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಇಲ್ಲ ಎನ್ನದ ಕಿಚ್ಚ ಭೇಟಿ ಮಾಡುವುದಕ್ಕೆ ಅವಕಾಶ ಮಾಡಿ‌ ಕೊಟ್ಟಿದ್ದು, ನಿನ್ನೆ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿದ್ದ ದೀಕಾಳನ್ನು, ಕಿಚ್ಚ ಸುದೀಪ್ ಕೊಟಿಗೋಬ್ಬ-3 ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಕರೆಯಿಸಿ ಕೊಂಡಿದ್ದಾರೆ. ತಾಯಿ ಲಕ್ಷ್ಮಿ, ತಂದೆ ಸಂತೋಷ್ ಜೊತೆಗೆ ದೀಪಿಕಾ ಕಿಚ್ಚ ಸುದೀಪ್ ಅವರನ್ನು ಭೇಟಿಯಾದರು. ದೀಪಿಕಾ, ಸುದೀಪ್‌ರನ್ನ ಕಂಡು ಸಂತೋಷದಿಂದ‌ ಕುಣಿದಾಡಿದ್ದಾಳೆ.

ಅಲ್ಲದೆ ಭೇಟಿ ಮಾಡಿದ್ದ ವೇಳೆ ಕಿಚ್ಚ ದೀಪಿಕಾಳಿಗೆ ಚಾಕೊಲೇಟ್ ಕೊಡಲು ಹೋದಾಗ ವಿಶೇಷ ಅಭಿಮಾನಿಯೇ ಕಿಚ್ಚನಿಗೆ ಕನ್ನಡಕ ಕೊಟ್ಟಿದ್ದಾಳೆ. ಅಲ್ಲದೆ ಸ್ಪೆಷಲ್ ಅಭಿಮಾನಿಯ ಉಡುಗೊರೆಯನ್ನ ಅಭಿನಯ ಚಕ್ರವರ್ತಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅಲ್ಲದೆ ದೀಪಿಕಾ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಏನ್ ಆಗಲಿ ಮುಂದೇ ಸಾಗು ನೀ.. ಬಯಸ್ಸಿದ್ದೆಲ್ಲ ಸಿಗದು ಬಾಳಲಿ.. ಹಾಡನ್ನು ಹಾಡಿದ್ದಾಳೆ. ವಿಶೇಷ ಅಭಿಮಾನಿಯ ಅಭಿಮಾನ ಕಂಡು ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ.

ಬೆಂಗಳೂರು: ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ.. ಅದೇ ರೀತಿ ಅಭಿನಯ ಚಕ್ರವರ್ತಿಗೆ ಅಭಿಮಾನಿಗಳು ಅಂದರೆ ದೇವರ ಸಮಾನ. ವಿಶೇಷ ಚೇತನಳ ವಿಶೇಷ ಅಭಿಮಾನಕ್ಕೆ ಕಿಚ್ಚ ಸುದೀಪ್ ಮನ ಕರಗಿದೆ. ತಮ್ಮನ್ನ ಭೇಟಿಮಾಡಲು ಬಂದ ಪುಟ್ಟ ಕಂದಮಳನ್ನ ಪ್ರೀತಿಯಿಂದ ತಬ್ಬಿ ಹುರಿದುಂಬಿಸಿ ಆಕೆಯ ಪ್ರೀತಿಗೆ ಭಾವುಕರಾಗಿದ್ದಾರೆ.

ವಿಶೇಷ ಚೇತನ ಅಭಿಮಾನಿ ಭೇಟಿಯಾದ ನಟ ಸುದೀಪ್..

ಮಂಗಳೂರಿನ ಮೂಲ್ಕಿ ಸಮೀಪದ ದೀಪಿಕಾ ಕವತಾರು ಅನ್ನೋ ವಿಶೇಷ ಚೇತನ ಮಗು ಕಿಚ್ಚನ ಅಭಿಮಾನಿ. ಅನಾರೋಗ್ಯ ಪೀಡಿತ ಈ ಮಗುವಿಗೆ ಔಷಧಿ ಕೊಡಬೇಕು ಅಂದ್ರೆ ಕಿಚ್ಚ ಮಾತನಾಡಿಸಬೇಕು. ಅದೇ ರೀತಿ 3 ವರ್ಷಗಳಿಂದ ಕಿಚ್ಚ ಈ ಮಗು ಜೊತೆ ಆಗಾಗ ವಿಡಿಯೋ ಕಾಲ್ ಮೂಲಕ ಮಾತನಾಡಿ ಮಾನವೀಯತೆ ಮೆರಿದಿದ್ದಾರೆ. ಆದರೆ, ಇತ್ತೀಚಿಗೆ ಕಳೆದ ಕೆಲವು ದಿನಗಳಿಂದ ಆ ಮಗು ಕಿಚ್ಚನನ್ನು ನೋಡಲೇಬೇಕು ಎಂದು ಹಠ ಮಾಡಿದೆ.

ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ಸುದೀಪ್ ಆ ಮಗು ಜೊತೆ ಕಾಲ್ ಮಾಡಿ ಮಾತನಾಡಲು ಸಾಧ್ಯವಾಗಿರಲಿಲ್ಲ. ಮಗುವಿನ ತಂದೆ ಸಂತೋಷ್ ಹಾಗೂ ತಾಯಿ ಲಕ್ಷ್ಮಿ ಹೇಗೋ ಕಷ್ಟಪಟ್ಟು ಸುದೀಪ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಹೇಗಾದರೂ ನಿಮ್ಮನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಇಲ್ಲ ಎನ್ನದ ಕಿಚ್ಚ ಭೇಟಿ ಮಾಡುವುದಕ್ಕೆ ಅವಕಾಶ ಮಾಡಿ‌ ಕೊಟ್ಟಿದ್ದು, ನಿನ್ನೆ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿದ್ದ ದೀಕಾಳನ್ನು, ಕಿಚ್ಚ ಸುದೀಪ್ ಕೊಟಿಗೋಬ್ಬ-3 ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಕರೆಯಿಸಿ ಕೊಂಡಿದ್ದಾರೆ. ತಾಯಿ ಲಕ್ಷ್ಮಿ, ತಂದೆ ಸಂತೋಷ್ ಜೊತೆಗೆ ದೀಪಿಕಾ ಕಿಚ್ಚ ಸುದೀಪ್ ಅವರನ್ನು ಭೇಟಿಯಾದರು. ದೀಪಿಕಾ, ಸುದೀಪ್‌ರನ್ನ ಕಂಡು ಸಂತೋಷದಿಂದ‌ ಕುಣಿದಾಡಿದ್ದಾಳೆ.

ಅಲ್ಲದೆ ಭೇಟಿ ಮಾಡಿದ್ದ ವೇಳೆ ಕಿಚ್ಚ ದೀಪಿಕಾಳಿಗೆ ಚಾಕೊಲೇಟ್ ಕೊಡಲು ಹೋದಾಗ ವಿಶೇಷ ಅಭಿಮಾನಿಯೇ ಕಿಚ್ಚನಿಗೆ ಕನ್ನಡಕ ಕೊಟ್ಟಿದ್ದಾಳೆ. ಅಲ್ಲದೆ ಸ್ಪೆಷಲ್ ಅಭಿಮಾನಿಯ ಉಡುಗೊರೆಯನ್ನ ಅಭಿನಯ ಚಕ್ರವರ್ತಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅಲ್ಲದೆ ದೀಪಿಕಾ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಏನ್ ಆಗಲಿ ಮುಂದೇ ಸಾಗು ನೀ.. ಬಯಸ್ಸಿದ್ದೆಲ್ಲ ಸಿಗದು ಬಾಳಲಿ.. ಹಾಡನ್ನು ಹಾಡಿದ್ದಾಳೆ. ವಿಶೇಷ ಅಭಿಮಾನಿಯ ಅಭಿಮಾನ ಕಂಡು ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ.

Intro:ವಿಶೇಷ ಅಭಿಮಾನಿಯ ಅಭಿಮಾನಕ್ಕೆ ಭಾವುಕನಾದ ಅಭಿನಯ ಚಕ್ರವರ್ತಿ.


ಅಭಿಮಾನಿಗಳ ಆರಾಧ್ಯ ದೈವ ಕಿಚ್ಚ ಸುದೀಪ್ ಅಂದರೆ ಅಭಿಮಾನಿಗಳಿಗೆಅದೇನೋಪ್ರೀತಿ.ಅದೇರೀತಿಅಭಿನಯ
ಚಕ್ರವರ್ತಿಗೆ ಅಭಿಮಾನಿಗಳು ಅಂದರೆ ದೇವರ ಸಮಾನ ನೋಡ್ತಾರೆ. ಹೌದು ಈಗ ಕಿಚ್ಚ ಸುದೀಪ್ ಅವರ ವಿಶೇಷ ಅಭಿಮಾನಿಯ ಜೊತೆ ನಡೆದುಕೊಂಡ ರೀತಿ ನೋಡಿದರೆ.
ಕಿಚ್ಚನ ಅಭಿಮಾನಿಗಳು ಕಂಡ್ರೆ ಫುಲ್‌ ಖುಷ್ ಆಗೋದು ಗ್ಯಾರಂಟಿ ಹೌದು ವಿಕಾಲಂಗ ಚೇತನಳ ವಿಶೇಷ ಅಭಿಮಾನಕ್ಕ ಕಿಚ್ಚ ಸುದೀಪ್ ಮನ ಕರಗಿದೆ.ತನಗಾಗಿ ಭೇಟಿಮಾಡಲು ಬಂದ ಪುಟ್ಟ ಕಂದಮಳನ್ನಪ್ರೀತಿಯಿಂದ
ತಬ್ಬಿ ಹುರಿದುಂಬಿಸಿದ ಪೈಲ್ವಾನ.ವಿಶೇಷ ಅಭಿಮಾನಿಯ ಪ್ರೀತಿಗೆಭಾವುಕರಾಗಿದ್ದಾರೆ.ಹೌದುಮಂಗಳೂರಿನಮೂಲ್ಕಿ ಸಮೀಪದ ದೀಪಿಕಾ ಕವತಾರು ಅನ್ನೋ ವಿಶೇಷ ಚೇತನದ ಮಗು ಕಿಚ್ಚನ ಅಭಿಮಾನಿ, ಅನಾರೋಗ್ಯ ಪೀಡಿತ.ಈ ಮಗುವಿಗೆ ಔಷದಿ ಕೊಡ ಬೇಕು ಅಂದ್ರ ಕಿಚ್ಚ ಮಾತನಾಡಿಸ ಬೇಕು.ಅದೇ ರೀತಿ 3ವರ್ಷಗಳಿಂದ ಕಿಚ್ಚ ಈ ಮಗು ಜೊತೆ ಆಗಾಗ ವಿಡಿಯೋ ಕಾಲ್ ಮೂಲಕ ಮಾತನಾಡಿ ಮಾನವೀಯತೆ ಮೆರಿದಿದ್ದಾರೆಅದ್ರೆ ಇತ್ತೀಚಿಗೆ ಕಳೆದ ಕೆಲವು ದಿನಗಳಿಂದ ಆ ಮಗು ಕಿಚ್ಚನನ್ನು ನೋಡಲೇ ಬೇಕು ಎಂದು ಹಠ ಮಾಡಿದೆ.ಅದರೆ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಸುದೀಪ್ ಆ ಮಗು ಜೊತೆ ಕಾಲ್ ಮಾಡಿ ಮಾತನಾಡಲು ಸಾಧ್ಯವಾಗಲಿಲ್ಲ.Body:ಅದರೆ ಮಗುವಿನ ತಂದೆ ಸಂತೋಷ್ ಹಾಗೂ ತಾಯಿ ಲಕ್ಷ್ಮಿ ಹೆಗೋ ಕಷ್ಟ ಪಟ್ಟು ಸುದೀಪ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಹೇಗಾದರು ನಿಮ್ಮನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ಕಿಚ್ಚ ನಲ್ಲಿ ಮನವಿಮಾಡಿದ್ದಾರೆ.ಅಭಿಮಾನಿಗಳಅಭಿಮಾನಕ್ಕೆ ,ನ ಎನ್ನದ ಕಿಚ್ಚ ಭೇಟಿ ಮಾಡುವುದಕ್ಕೆ ಅವಕಾಶ ಮಾಡಿ‌ ಕೊಟ್ಟಿದ್ದು.ನಿನ್ನೆ ಮಗುವಿನ‌ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿದ್ದ ದಿಪೀಕಾಳನ್ನು ಕಿಚ್ಚ ಸುದೀಪ್ ಕೊಟಿಗೋಬ್ಬ 3ಚಿತ್ರದ ಶೂಟಿಂಗ್ನಡೆಯುತ್ತಿದ್ದಕಂಠೀರವಸ್ಟುಡಿಯೋಗೆ
ಕರೆಸಿ ಕೊಂಡಿದ್ದಾರೆ.ತಾಯಿ ಲಕ್ಷ್ಮಿ ತಂದೆ ಸಂತೋಷ್ ಜೊತೆಗೆ ದೀಪಿಕಾ ಕಿಚ್ಚ ಸುದೀಪ್ಅವರನ್ನು ಭೇಟಿಯಾದ
ದಿಪೀಕಾ ಸುದೀಪ್ ರನ್ನು ಕಂಡು ಸಂತೋಷದಿಂದ‌ ಕುಣಿದಾಡಿದ್ದಾಳೆ.ಅಲ್ಲದೆ ಭೇಟಿ ಮಾಡಿದ್ದ ವೇಳೆ ಕಿಚ್ಚ ದಿಪೀಕಾಳಿಗೆ ಚಾಕೊಲೇಟ್ ಕೊಡಲು ಹೋದಾಗ ವಿಶೇಷ
ಅಭಿಮಾನಿಯೇ ಕಿಚ್ಚನಿಗೆ ಕನ್ನಡ್ಕ ಕೊಟ್ಟಿದ್ದಾಳೆ.ಅಲ್ಲದೆ ಸ್ಪೆಷಲ್ ಅಭಿಮಾನಿಯ ಉಡುಗೊರೆಯನ್ನ ಅಭಿನಯ
ಚಕ್ರವರ್ತಿ ಪ್ರೀತಿಯಿಂದ ಸ್ವೀಕರಿಸಿದ್ದಾರೆ.ಅಲ್ಲದೆ ದಿಪೀಕಾ
ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಏನ್ ಆಗಲಿ ಮುಂದೇ ಸಾಗು ನೀ ಬಯಸ್ಸಿದ್ದೇಲ‌‌ಸಿಗದು
ಬಾಳಲಿ ಹಾಡನ್ನು ಹಾಡಿದ್ದಾಳೆ. ವಿಶೇಷ ಅಭಿಮಾನಿಯ ಅಭಿಮಾನ ಕಂಡು" ರನ್ನ"ದಂತ ಮನಸ್ಸಿನ" ಮಾಣಿಕ್ಯ"
ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ.

ಸತೀಶ ಎಂಬಿ







Conclusion:
Last Updated : Dec 1, 2019, 8:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.