ETV Bharat / state

ಯಶವಂತಪುರದಲ್ಲಿ​ ಚಾಲೆಂಜಿಂಗ್ ಸ್ಟಾರ್ 'ದರ್ಶನ'ಕ್ಕೆ ಜಮಾಯಿಸಿದ ಜನತೆ

ಯಶವಂತಪುರ ರೈಲ್ವೆ ನಿಲ್ದಾಣದಿಂದ ನಟ ದರ್ಶನ್ ಚುನಾವಣಾ ಪ್ರಚಾರ ಆರಂಭಿಸಲಿದ್ದು, ಚಾಲೆಂಜಿಂಗ್​ ಸ್ಟಾರ್ ಆಗಮನಕ್ಕೂ ಮುನ್ನ ಸಾವಿರಾರು ಜನರು ಜಮಾಯಿಸಿದ್ದಾರೆ.

author img

By

Published : Oct 30, 2020, 11:00 AM IST

Darshan campaign latest news
ನಟ ದರ್ಶನ್ ನೋಡಲು ಜಮಾಯಿಸಿದ ಜನತೆ

ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಕಣ ಮತ್ತಷ್ಟು ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ನಟ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಖಾಕಿ ಪಡೆ ಬಿಗಿ ಭದ್ರತೆ ಕೈಗೊಂಡಿದೆ.

ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಚಾರ ಕಾರ್ಯ ಆರಂಭವಾಗಲಿದೆ. ದರ್ಶನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದು, ನೆಚ್ಚಿನ ನಟನ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ನಟ ದರ್ಶನ್ ನೋಡಲು ಜಮಾಯಿಸಿದ ಜನತೆ

ಮುನಿರತ್ನ ಪರ ಪ್ರಚಾರ ಮಾಡುವ ವಾಹನ ಸಿದ್ದವಾಗಿದ್ದು, ಬೆಳಗ್ಗೆ 10:30ಕ್ಕೆ ಕ್ಯಾಂಪೇನ್ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭದ್ರತೆಯ ನೇತೃತ್ವ ಹೊಂದಿದ್ದಾರೆ.

ಒಬ್ಬರು ಡಿಸಿಪಿ, 3 ಜನ ಎಸಿಪಿ, ಐವರು ಇನ್ಸ್​ಪೆಕ್ಟರ್,15 ಸಬ್​ಇನ್ಸ್​ಪೆಕ್ಟರ್, 50 ಪೊಲೀಸ್ ಸಿಬ್ಬಂದಿ, 2 ಕೆಎಸ್​ಆರ್​ಪಿ ತುಕಡಿ, 1 ಸಿಎಆರ್​ ತುಕಡಿಯನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇದರ ಜೊತೆ ಗುಪ್ತಚರ ಇಲಾಖೆ ಕೂಡ ಕಣ್ಣಿಟ್ಟಿದೆ.

ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಕಣ ಮತ್ತಷ್ಟು ರಂಗೇರಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಂದು ನಟ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಖಾಕಿ ಪಡೆ ಬಿಗಿ ಭದ್ರತೆ ಕೈಗೊಂಡಿದೆ.

ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ರಚಾರ ಕಾರ್ಯ ಆರಂಭವಾಗಲಿದೆ. ದರ್ಶನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದು, ನೆಚ್ಚಿನ ನಟನ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ನಟ ದರ್ಶನ್ ನೋಡಲು ಜಮಾಯಿಸಿದ ಜನತೆ

ಮುನಿರತ್ನ ಪರ ಪ್ರಚಾರ ಮಾಡುವ ವಾಹನ ಸಿದ್ದವಾಗಿದ್ದು, ಬೆಳಗ್ಗೆ 10:30ಕ್ಕೆ ಕ್ಯಾಂಪೇನ್ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಭದ್ರತೆಯ ನೇತೃತ್ವ ಹೊಂದಿದ್ದಾರೆ.

ಒಬ್ಬರು ಡಿಸಿಪಿ, 3 ಜನ ಎಸಿಪಿ, ಐವರು ಇನ್ಸ್​ಪೆಕ್ಟರ್,15 ಸಬ್​ಇನ್ಸ್​ಪೆಕ್ಟರ್, 50 ಪೊಲೀಸ್ ಸಿಬ್ಬಂದಿ, 2 ಕೆಎಸ್​ಆರ್​ಪಿ ತುಕಡಿ, 1 ಸಿಎಆರ್​ ತುಕಡಿಯನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇದರ ಜೊತೆ ಗುಪ್ತಚರ ಇಲಾಖೆ ಕೂಡ ಕಣ್ಣಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.