ETV Bharat / state

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ - ಭ್ರಷ್ಟ ನಿಗ್ರಹ ದಳ ಅಧಿಕಾರಗಳ ಬಲೆಗೆ ಬಿದ್ದ ಆನೇಕಲ್ ಸರ್ವೇ ಅಧಿಕಾರಿ

ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಎನ್. ಎಸ್. ಜಯಪ್ರಕಾಶ್, ಲಂಚ ಸ್ವಿಕರಿಸುವಾಗ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ವೇಯರ್
author img

By

Published : Nov 5, 2019, 1:40 AM IST

ಬೆಂಗಳೂರು : ಆನೇಕಲ್ ಸರ್ವೆ ಇಲಾಖೆ ಅಧಿಕಾರಿ ಎನ್​. ಎಸ್​. ಜಯಪ್ರಕಾಶ್ ಲಂಚ ಸ್ವೀಕರಿಸುವಾಗ ​ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ನಿವಾಸಿ ನೀಡಿದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೆ ಇಲಾಖೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎನ್. ಎಸ್. ಜಯಪ್ರಕಾಶ್ ಲಂಚ ಸ್ವಿಕರಿಸುವಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ

ಘಟನೆ ವಿವರ...

ಶಿವರಾಜ್ ಕುಮಾರ್ ಎಂಬವವರ ಅತ್ತಿಗೆ ಧನಲಕ್ಷ್ಮಿಗೆ ಆಕೆಯ ತಂದೆಯಿಂದ ಕೋರ್ಟ್ ಧಾವೆಯ ಆದೇಶದಂತೆ ಜಮೀನು ಬರಬೇಕಿತ್ತು. ಅದರ ಪೋಡಿಗಾಗಿ ಲೆವೆನ್ ಇ ಸ್ಕೆಚ್ ಮಾಡಿಸಲು ಆನೇಕಲ್ ಸರ್ವೆ ಇಲಾಖೆಯ ಎಡಿಎಲ್ಆರ್ ಆಯ್ಕೆಯಂತೆ ಎನ್. ಎಸ್. ಜಯಪ್ರಕಾಶ್​ಗೆ ಜವಾಬ್ದಾರಿ ವಹಿಸಲಾಗಿತ್ತು. ಸ್ಕೆಚ್ ಮಾಡಲು ಶಿವರಾಜ್ ಕುಮಾರ್​ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಂತಿಮವಾಗಿ 28. ಸಾವಿರ ರೂ.ಗಳಿಗೆ ವ್ಯವಹಾರ ಕುದುರಿತ್ತು.

ಇಂದು ಹಣವನ್ನು ನಗದು ರೂಪದಲ್ಲಿ ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್​ಪಿ ಗೋಪಾಲ ರೋಹಿತ್, ಸಿಐ ಕುಮಾರಸ್ವಾಮಿ, ಎಸ್ಐ ಮಧುಕುಮಾರ್ ತಂಡದ ಬಲೆಗೆ ಜಯಪ್ರಕಾಶ್​ ಸಿಕ್ಕಿ ಬಿದ್ದಿದ್ದಾನೆ.

ಬೆಂಗಳೂರು : ಆನೇಕಲ್ ಸರ್ವೆ ಇಲಾಖೆ ಅಧಿಕಾರಿ ಎನ್​. ಎಸ್​. ಜಯಪ್ರಕಾಶ್ ಲಂಚ ಸ್ವೀಕರಿಸುವಾಗ ​ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆನೇಕಲ್ ತಾಲೂಕಿನ ಮಾರನಾಯಕನಹಳ್ಳಿ ಗ್ರಾಮದ ನಿವಾಸಿ ನೀಡಿದ ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೆ ಇಲಾಖೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎನ್. ಎಸ್. ಜಯಪ್ರಕಾಶ್ ಲಂಚ ಸ್ವಿಕರಿಸುವಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಅಧಿಕಾರಿ

ಘಟನೆ ವಿವರ...

ಶಿವರಾಜ್ ಕುಮಾರ್ ಎಂಬವವರ ಅತ್ತಿಗೆ ಧನಲಕ್ಷ್ಮಿಗೆ ಆಕೆಯ ತಂದೆಯಿಂದ ಕೋರ್ಟ್ ಧಾವೆಯ ಆದೇಶದಂತೆ ಜಮೀನು ಬರಬೇಕಿತ್ತು. ಅದರ ಪೋಡಿಗಾಗಿ ಲೆವೆನ್ ಇ ಸ್ಕೆಚ್ ಮಾಡಿಸಲು ಆನೇಕಲ್ ಸರ್ವೆ ಇಲಾಖೆಯ ಎಡಿಎಲ್ಆರ್ ಆಯ್ಕೆಯಂತೆ ಎನ್. ಎಸ್. ಜಯಪ್ರಕಾಶ್​ಗೆ ಜವಾಬ್ದಾರಿ ವಹಿಸಲಾಗಿತ್ತು. ಸ್ಕೆಚ್ ಮಾಡಲು ಶಿವರಾಜ್ ಕುಮಾರ್​ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಂತಿಮವಾಗಿ 28. ಸಾವಿರ ರೂ.ಗಳಿಗೆ ವ್ಯವಹಾರ ಕುದುರಿತ್ತು.

ಇಂದು ಹಣವನ್ನು ನಗದು ರೂಪದಲ್ಲಿ ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್​ಪಿ ಗೋಪಾಲ ರೋಹಿತ್, ಸಿಐ ಕುಮಾರಸ್ವಾಮಿ, ಎಸ್ಐ ಮಧುಕುಮಾರ್ ತಂಡದ ಬಲೆಗೆ ಜಯಪ್ರಕಾಶ್​ ಸಿಕ್ಕಿ ಬಿದ್ದಿದ್ದಾನೆ.

Intro:ಸರ್ಕಾರಿ ಕೆಲಸ ದೇವರ ಕೆಲಸ ಅಂತ ಪದಗಳಲ್ಲಷ್ಟೇ ಜಾರಿಯಲ್ಲಿದೆ. ಆದರೆ ಸರ್ಕಾರದ ಸಂಬಳದ ಜೊತೆಗೆ ಅಷ್ಟೇ ಪ್ರಮಾಣದ ಲಂಚ ಸ್ವೀಕರಿಸುವ ಭ್ರಷ್ಟ ಅಧಿಕಾರಿಗ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಲಾಖೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಡವರ ಕೆಲಸ ಕಾಂಚಾಣವಿಲ್ಲದೆ ಆಗೋಲ್ಲ ಅನ್ನೋದಕ್ಕೆ ಇಂತಹದೊಂದು ಉದಾಹರಣೆಗಳು ಸಾಕ್ಷಿಯಾಗುತ್ತಲೇ ಇವೆ. ಹೌದು ಆನೇಕಲ್ ಶಕ್ತಿ ಸೌಧದಲ್ಲಿ ಸರ್ವೇ ಇಲಾಖೆಯಲ್ಲಿ ಹತ್ತು ವರ್ಷಗಳಿಗೂ ಅಧಿಕವಾಗಿ ಸೇವೆ ಸಲ್ಲಿಸುತ್ತಿದ್ದ ಜಯಪ್ರಕಾಶ್ ಎನ್ ಎಸ್ ಭ್ರಷ್ಟ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಖುದ್ದು ಸಿಕ್ಕಿಬಿದ್ದಿದ್ದಾನೆ.

. Body:ಘಟನೆ ವಿವರ: ಆನೇಕಲ್ ತಾಲೂಕಿಗೆ ಸೇರಿದ ಮಾರನಾಯಕನಹಳ್ಳಿ ಗ್ರಾಮದ ವಾಸಿ ಶಿವರಾಜ್ ಕುಮಾರ್ ದೂರುದಾರನಾಗಿದ್ದು. ತನ್ನ ಅತ್ತಿಗೆ ಧನಲಕ್ಷ್ಮಿಗೆ ಆಕೆಯ ತಂದೆಯಿಂದ ಕೋರ್ಟ್ ಧಾವೆಯ ಆದೇಶದಂತೆ ಜಮೀನು ಬರಬೇಕಿತ್ತು. ಅದರ ಪೋಡಿಗಾಗಿ ಲೆವೆನ್ ಇ ಸ್ಕೆಚ್ ಮಾಡಿಸಲು ಆನೇಕಲ್ ಸರ್ವೆ ಇಲಾಖೆಯ ಎಡಿಎಲ್ಆರ್ ಆಯ್ಕೆಯಂತೆ ಆರೋಪಿ (ಜೆಪಿ) ಎನ್ ಎಸ್ ಜಯಪ್ರಕಾಶ್ ರಿಗೆ ಒಲಿದು ಬಂದಿತ್ತು. ಈ ಸ್ಕೆಚ್ ಮಾಡಲು ಶಿವರಾಜ್ ಕುಮಾರ್ ರಿಂದ ಮುವತ್ತು ಸಾವಿರ ಲಂಚಕ್ಕೆ ಬೇಡಿಕೆಯಿದ್ದು 28,ಸಾವಿರ ರೂಗಳಿಗೆ ವ್ಯವಹಾರ ಕುದುರಿದ್ದು ಇಂದು ಈ ಹಣವನ್ನು ನಗದು ರೂಪದಲ್ಲಿ ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗೋಪಾಲ ರೋಹಿತ್, ಸಿಐ ಕುಮಾರಸ್ವಾಮಿ, ಎಸ್ಐ ಮಧುಕುಮಾರ್ ತಂಡದ ಬಲೆಗೆ ಜೆಪಿ ಸಿಕ್ಕಿ ಬಿದ್ದಿದ್ದಾರೆConclusion:ಇದೇ ಪ್ರಕರಣದಲ್ಲಿ ಈ ಹಿಂದೆ ಕೃಷ್ಣಮೂರ್ತಿ ಕಂದಾಯ ಇಲಾಖೆಯಲ್ಲಿ ಸಿಕ್ಕಿಬಿದ್ದಿದ್ದನ್ನ ನೆನಪಿಸಬಹುದು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.