ETV Bharat / state

ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ದೂರು: ಬೀಗಮುದ್ರೆ ಹಾಕುವಂತೆ ಕೆಪಿಎಮ್ಇ ಆದೇಶ

author img

By ETV Bharat Karnataka Team

Published : Nov 22, 2023, 3:31 PM IST

ಮೈಸೂರಿನಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ಬೀಗಮುದ್ರೆ ಹಾಕುವಂತೆ ಕೆಪಿಎಮ್​ಇ ಆದೇಶ ಮಾಡಿದೆ.

ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ದೂರು
ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ದೂರು

ಮೈಸೂರು: ರೋಗಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದು ಹಾಗೂ ವೈದ್ಯಕೀಯ ಅರ್ಹತೆ ಇಲ್ಲದ ವೈದ್ಯರಿಂದ ಚಿಕಿತ್ಸೆ ನೀಡಿಸಿದ ಆಸ್ಪತ್ರೆ ವಿರುದ್ಧ ನೊಂದ ವ್ಯಕ್ತಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (KPME) ಪ್ರಾಧಿಕಾರಕ್ಕೆ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡ ಕೆಪಿಎಮ್ಇ ಅಧ್ಯಕ್ಷರು ಆಸ್ಪತ್ರೆಗೆ ಬೀಗಮುದ್ರೆ ಹಾಕುವಂತೆ ಆದೇಶ ಮಾಡಿದ್ದಾರೆ.

ಮೈಸೂರು ನಗರದ ಗೋಕುಲಂನಲ್ಲಿ ಇರುವ ಆದಿತ್ಯ ಅಧಿಕಾರಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ಡಾ.ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿ, ಆಸ್ಪತ್ರೆಯನ್ನು ಬೀಗ ಮುದ್ರೆಗೊಳಿಸಬೇಕೆಂದು ಮುಖ್ಯ ಜಾಗೃತ ಅಧಿಕಾರಿಗಳು ಜಾಗೃತಿ ಕೋಶ ಬೆಂಗಳೂರು, ಇವರ ನಿರ್ದೇಶನದಂತೆ ಮೈಸೂರಿನ ಸಹ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಮೈಸೂರು, ಇವರು ತನಿಖಾ ವರದಿಯಲ್ಲಿ ಈ ಆದೇಶ ಮಾಡಿದ್ದಾರೆ.

ಘಟನೆಯ ಹಿನ್ನೆಲೆ: ದೂರುದಾರ ರವಿಗೌಡ ಎಂಬುವವರ ಅಪಘಾತದಲ್ಲಿ ಗಾಯಗೊಂಡ ಅವರ ಚಿಕ್ಕಪ್ಪ ಶಿವಣ್ಣ ಎಂಬುವವರನ್ನು ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇವರಿಗೆ ಚಿಕಿತ್ಸೆ ನೀಡುವಾಗ ಸರಿಯಾಗಿ ಚಿಕಿತ್ಸೆ ನೀಡದೇ, ಕುಟುಂಬಸ್ಥರ ಅನುಮತಿ ಪಡೆಯದೇ ವೈದ್ಯರು ನಾಲ್ಕು ಅಪರೇಷನ್ ಮಾಡಿದ್ದರು, ಇದರಿಂದಾಗಿ ರೋಗಿ ಶಿವಣ್ಣ ಸಾವನ್ನಪ್ಪಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2017ರಲ್ಲಿ ಈ ಖಾಸಗಿ ಆಸ್ಪತ್ರೆ ವಿರುದ್ಧ ಕೆಪಿಎಮ್ಇ ಜೊತೆಗೆ ಗ್ರಾಹಕರ ನ್ಯಾಯಾಲಯದಲ್ಲಿ ರವಿಗೌಡ ದೂರು ದಾಖಲಿಸಿದ್ದರು.

2018ರಲ್ಲಿ ಗ್ರಾಹಕ ನ್ಯಾಯಾಲಯ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ತನಿಖೆ ಮಾಡಿ 15 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಇದರ ಜೊತೆಗೆ ಆರೋಗ್ಯ ಇಲಾಖೆಯ ಜಾಗೃತ ಕೋಶದ ಜಾಗೃತಾಧಿಕಾರಿಗಳಿಗೂ ದೂರು ಸಲ್ಲಿಸಿದ್ದರು.

ಆಸ್ಪತ್ರೆ ಮುಚ್ಚುವಂತೆ ಆದೇಶ: ರವಿಗೌಡ ಎಂಬುವವರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಮೈಸೂರಿನ ಜಾಗೃತ ತನಿಖಾ ದಳದ ಸಹ ನಿರ್ದೇಶಕರು, ದೂರುದಾರ ಆರೋಪಿಸಿದ 10 ದೂರಿನ ಅಂಶಗಳಲ್ಲಿ, 5 ಅಂಶಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಮೈಸೂರು ವಿಭಾಗದ ಸಹ ನಿರ್ದೇಶಕ ಆಡಳಿತಾಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.

ಇದರನ್ವಯ ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ಕೆಪಿಎಮ್ಇ ಕಾಯ್ದೆ ಅನ್ವಯ ಕಲಂ 15(5) ಹಾಗೂ 19 ಉಲ್ಲಂಘನೆ ಆಗಿರುವುದರಿಂದ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿ, ರೋಗಿಗಳ ಸ್ಥಳಾಂತರಕ್ಕೆ ಗಡುವು ನೀಡಿ, ಆಸ್ಪತ್ರೆಯನ್ನು ಬೀಗ ಮುದ್ರೆಗೊಳಿಸಬೇಕು ಹಾಗೂ ಸದರಿ ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಬೇಕು ಎಂಬ ಆದೇಶ ಮಾಡಿದೆ.

ಇದನ್ನೂ ಓದಿ: ಮೈಸೂರು: ವಿಚಾರಣೆಗೆ ಕರೆತಂದಿದ್ದ ಯುವಕ ಆತ್ಮಹತ್ಯೆ, ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಮೈಸೂರು: ರೋಗಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದು ಹಾಗೂ ವೈದ್ಯಕೀಯ ಅರ್ಹತೆ ಇಲ್ಲದ ವೈದ್ಯರಿಂದ ಚಿಕಿತ್ಸೆ ನೀಡಿಸಿದ ಆಸ್ಪತ್ರೆ ವಿರುದ್ಧ ನೊಂದ ವ್ಯಕ್ತಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (KPME) ಪ್ರಾಧಿಕಾರಕ್ಕೆ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡ ಕೆಪಿಎಮ್ಇ ಅಧ್ಯಕ್ಷರು ಆಸ್ಪತ್ರೆಗೆ ಬೀಗಮುದ್ರೆ ಹಾಕುವಂತೆ ಆದೇಶ ಮಾಡಿದ್ದಾರೆ.

ಮೈಸೂರು ನಗರದ ಗೋಕುಲಂನಲ್ಲಿ ಇರುವ ಆದಿತ್ಯ ಅಧಿಕಾರಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ಡಾ.ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿ, ಆಸ್ಪತ್ರೆಯನ್ನು ಬೀಗ ಮುದ್ರೆಗೊಳಿಸಬೇಕೆಂದು ಮುಖ್ಯ ಜಾಗೃತ ಅಧಿಕಾರಿಗಳು ಜಾಗೃತಿ ಕೋಶ ಬೆಂಗಳೂರು, ಇವರ ನಿರ್ದೇಶನದಂತೆ ಮೈಸೂರಿನ ಸಹ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಮೈಸೂರು, ಇವರು ತನಿಖಾ ವರದಿಯಲ್ಲಿ ಈ ಆದೇಶ ಮಾಡಿದ್ದಾರೆ.

ಘಟನೆಯ ಹಿನ್ನೆಲೆ: ದೂರುದಾರ ರವಿಗೌಡ ಎಂಬುವವರ ಅಪಘಾತದಲ್ಲಿ ಗಾಯಗೊಂಡ ಅವರ ಚಿಕ್ಕಪ್ಪ ಶಿವಣ್ಣ ಎಂಬುವವರನ್ನು ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇವರಿಗೆ ಚಿಕಿತ್ಸೆ ನೀಡುವಾಗ ಸರಿಯಾಗಿ ಚಿಕಿತ್ಸೆ ನೀಡದೇ, ಕುಟುಂಬಸ್ಥರ ಅನುಮತಿ ಪಡೆಯದೇ ವೈದ್ಯರು ನಾಲ್ಕು ಅಪರೇಷನ್ ಮಾಡಿದ್ದರು, ಇದರಿಂದಾಗಿ ರೋಗಿ ಶಿವಣ್ಣ ಸಾವನ್ನಪ್ಪಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2017ರಲ್ಲಿ ಈ ಖಾಸಗಿ ಆಸ್ಪತ್ರೆ ವಿರುದ್ಧ ಕೆಪಿಎಮ್ಇ ಜೊತೆಗೆ ಗ್ರಾಹಕರ ನ್ಯಾಯಾಲಯದಲ್ಲಿ ರವಿಗೌಡ ದೂರು ದಾಖಲಿಸಿದ್ದರು.

2018ರಲ್ಲಿ ಗ್ರಾಹಕ ನ್ಯಾಯಾಲಯ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ತನಿಖೆ ಮಾಡಿ 15 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಇದರ ಜೊತೆಗೆ ಆರೋಗ್ಯ ಇಲಾಖೆಯ ಜಾಗೃತ ಕೋಶದ ಜಾಗೃತಾಧಿಕಾರಿಗಳಿಗೂ ದೂರು ಸಲ್ಲಿಸಿದ್ದರು.

ಆಸ್ಪತ್ರೆ ಮುಚ್ಚುವಂತೆ ಆದೇಶ: ರವಿಗೌಡ ಎಂಬುವವರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಮೈಸೂರಿನ ಜಾಗೃತ ತನಿಖಾ ದಳದ ಸಹ ನಿರ್ದೇಶಕರು, ದೂರುದಾರ ಆರೋಪಿಸಿದ 10 ದೂರಿನ ಅಂಶಗಳಲ್ಲಿ, 5 ಅಂಶಗಳು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಮೈಸೂರು ವಿಭಾಗದ ಸಹ ನಿರ್ದೇಶಕ ಆಡಳಿತಾಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.

ಇದರನ್ವಯ ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ಕೆಪಿಎಮ್ಇ ಕಾಯ್ದೆ ಅನ್ವಯ ಕಲಂ 15(5) ಹಾಗೂ 19 ಉಲ್ಲಂಘನೆ ಆಗಿರುವುದರಿಂದ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿ, ರೋಗಿಗಳ ಸ್ಥಳಾಂತರಕ್ಕೆ ಗಡುವು ನೀಡಿ, ಆಸ್ಪತ್ರೆಯನ್ನು ಬೀಗ ಮುದ್ರೆಗೊಳಿಸಬೇಕು ಹಾಗೂ ಸದರಿ ಆದಿತ್ಯ ಅಧಿಕಾರಿ ಆಸ್ಪತ್ರೆಯ ಡಾ.ಚಂದ್ರಶೇಖರ್ ವಿರುದ್ಧ ದೂರು ದಾಖಲಿಸಬೇಕು ಎಂಬ ಆದೇಶ ಮಾಡಿದೆ.

ಇದನ್ನೂ ಓದಿ: ಮೈಸೂರು: ವಿಚಾರಣೆಗೆ ಕರೆತಂದಿದ್ದ ಯುವಕ ಆತ್ಮಹತ್ಯೆ, ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.