ದೇವನಹಳ್ಳಿ: ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕ ಚೆಕ್ ಇನ್ನಲ್ಲಿ ಬ್ಯಾಗೇಜ್ ತೆಗೆದುಕೊಳ್ಳುವಾಗ ಬ್ಯಾಗ್ ಓಪನ್ ಆಗಿದ್ದು 15 ಸಾವಿರ ರೂ.ಮೌಲ್ಯದ ವಸ್ತುಗಳ ಕಳವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಲೊಲ್ಲ ಎಂಬುವರು ನ.12 ರಂದು ಅಹಮದಾಬಾದ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ. 6E 481 ವಿಮಾನದಲ್ಲಿ ಬೆಂಗಳೂರಿಗೆ ಬಂದ ಅವರು ಚೆಕ್ ಇನ್ನಲ್ಲಿ ಬ್ಯಾಗೇಜ್ ತೆಗೆದುಕೊಳ್ಳುವಾಗ ಅವರ ಬ್ಯಾಗ್ ಒಪನ್ ಆಗಿರುವುದು ಗಮನಕ್ಕೆ ಬರುತ್ತದೆ. ಬ್ಯಾಗ್ನಲ್ಲಿದ್ದ ಬೆಲೆ ಬಾಳುವ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ.
ಬೆಲೆ ಬಾಳುವ ವಸ್ತುಗಳು ಕಳವಾಗಿರುವ ಬಗ್ಗೆ ಸುರೇಶ್ ಕುಮಾರ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿ, ಇದು ನಿಭಾಯಿಸುವ ವಿಧಾನವೇ ಎಂದು ಪ್ರಶ್ನಿಸಿದ್ದಾರೆ. ಸುರೇಶ್ ಕುಮಾರ್ ಲೊಲ್ಲ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ ಸಂಸ್ಥೆ ವಸ್ತುಗಳು ಕಳವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಫೋರ್ಕ್, ಚಮಚ, ಟಿಫಿನ್ನೊಂದಿಗೆ ಪ್ರಯಾಣಿಕ: ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ