ETV Bharat / state

ಬಸ್​ ನಿಲ್ದಾಣದಲ್ಲಿ ಬೋರ್​ವೆಲ್​​ಗೆ ಸೇರುತ್ತಿರುವ ಶೌಚಾಲಯದ ನೀರು; ಸ್ಥಳೀಯರ ಬೇಸರ

ಬಸ್​​ ನಿಲ್ದಾಣದಲ್ಲಿ ಶೌಚಾಲಯದ ನೀರು ಚರಂಡಿಗೆ ಸೇರದೇ ನೇರವಾಗಿ ಅಲ್ಲಿಯ ಬೋರ್​ವೆಲ್​ಗೆ ಸೇರುತ್ತಿದ್ದು, ಈ ಕುರಿತು ಇಲಾಖೆಗೆ ತಿಳಿಸಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ.

author img

By

Published : Nov 22, 2022, 10:09 PM IST

kn_bng
ಬೋರ್​ವೆಲ್​​ಗೆ ಸೇರುತ್ತಿರುವ ಶೌಚಾಲಯದ ನೀರು

ದೊಡ್ಡಬಳ್ಳಾಪುರ: ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಅಲ್ಲಿಯ ಬೋರ್​ವೆಲ್​ಗೆ ಸೇರುತ್ತಿದ್ದು, ಬೋರ್​ವೆಲ್​ ನೀರನ್ನು ಪ್ರಯಾಣಿಕರು ಮತ್ತು ಸಂಸ್ಥೆಯ ಸಿಬ್ಬಂದಿು ಬಳಕೆ ಮಾಡುತ್ತಿದ್ದು, ಈ ಬಗ್ಗೆ ಮನವಿ ಮಾಡಿದರೂ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ, ನಿತ್ಯ 300ಕ್ಕೂ ಹೆಚ್ಚು ಬಸ್​ಗಳ ಸಂಚಾರವಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿನ ನೀರು ಕುಡಿಯುವ ಮತ್ತು ಬಳಸುವ ಮುನ್ನ ಯೋಚಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಬೋರ್​ವೆಲ್​ ಸೇರುತ್ತಿವೆ. ಇದೇ ಬೋರ್​ವೆಲ್​ ನೀರನ್ನ ಬಸ್ ನಿಲ್ದಾಣದಲ್ಲಿರುವ ಹೋಟೆಲ್​​ ಮತ್ತು ಕಾಂಡಿಮೆಂಟ್ಸ್​ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಶೌಚಾಲಯದ ನೀರಿನ ಬಳಕೆಯಿಂದ ತೊಂದರೆಯಾದರೆ ಯಾರು ಹೊಣೆ ಎಂಬ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಸ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್​ ಟೆಂಡರ್​ ತೆಗೆದುಕೊಂಡಿರುವ ಅಂಬರೀಶ್ ಎನ್ನುವವರು ಮಾತನಾಡಿ, ಪ್ರತಿ ತಿಂಗಳು 65 ಸಾವಿರ ಹಣವನ್ನ ಟೆಂಡರ್​ಗೆ ಪ್ರತಿಯಾಗಿ ಕೆಎಸ್​ಆರ್​ಟಿಸಿ ಸಂಸ್ಥೆಗೆ ಕಟ್ಟುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ಸರಾಗವಾಗಿ ಹರಿದು ಹೋಗದೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದ್ದು, ಸುಮಾರು 20 ಮೀಟರ್ ನಷ್ಟು ನೀರು ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದೆ.

ಈ ಜಾಗದಲ್ಲಿ ಸವಾರರು ವಾಹನಗಳ ಪಾರ್ಕಿಂಗ್ ಮಾಡುತ್ತಿಲ್ಲ, ಇದರಿಂದ ನಷ್ಟವಾಗುತ್ತಿದೆ. ಅಲ್ಲದೇ ಈ ನೀರು ಬೋರ್​ವೆಲ್​ಗೂ ಸೇರುತ್ತಿದ್ದು, ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳು ದೇಶದ ಪ್ರತಿಭಾವಂತ ಸಂಪನ್ಮೂಲವಾಗಬೇಕು: ಸಚಿವ ಡಾ.ಕೆ.ಸುಧಾಕರ್

ದೊಡ್ಡಬಳ್ಳಾಪುರ: ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಅಲ್ಲಿಯ ಬೋರ್​ವೆಲ್​ಗೆ ಸೇರುತ್ತಿದ್ದು, ಬೋರ್​ವೆಲ್​ ನೀರನ್ನು ಪ್ರಯಾಣಿಕರು ಮತ್ತು ಸಂಸ್ಥೆಯ ಸಿಬ್ಬಂದಿು ಬಳಕೆ ಮಾಡುತ್ತಿದ್ದು, ಈ ಬಗ್ಗೆ ಮನವಿ ಮಾಡಿದರೂ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ, ನಿತ್ಯ 300ಕ್ಕೂ ಹೆಚ್ಚು ಬಸ್​ಗಳ ಸಂಚಾರವಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿನ ನೀರು ಕುಡಿಯುವ ಮತ್ತು ಬಳಸುವ ಮುನ್ನ ಯೋಚಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಬೋರ್​ವೆಲ್​ ಸೇರುತ್ತಿವೆ. ಇದೇ ಬೋರ್​ವೆಲ್​ ನೀರನ್ನ ಬಸ್ ನಿಲ್ದಾಣದಲ್ಲಿರುವ ಹೋಟೆಲ್​​ ಮತ್ತು ಕಾಂಡಿಮೆಂಟ್ಸ್​ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಶೌಚಾಲಯದ ನೀರಿನ ಬಳಕೆಯಿಂದ ತೊಂದರೆಯಾದರೆ ಯಾರು ಹೊಣೆ ಎಂಬ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಬಸ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್​ ಟೆಂಡರ್​ ತೆಗೆದುಕೊಂಡಿರುವ ಅಂಬರೀಶ್ ಎನ್ನುವವರು ಮಾತನಾಡಿ, ಪ್ರತಿ ತಿಂಗಳು 65 ಸಾವಿರ ಹಣವನ್ನ ಟೆಂಡರ್​ಗೆ ಪ್ರತಿಯಾಗಿ ಕೆಎಸ್​ಆರ್​ಟಿಸಿ ಸಂಸ್ಥೆಗೆ ಕಟ್ಟುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ಸರಾಗವಾಗಿ ಹರಿದು ಹೋಗದೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದ್ದು, ಸುಮಾರು 20 ಮೀಟರ್ ನಷ್ಟು ನೀರು ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದೆ.

ಈ ಜಾಗದಲ್ಲಿ ಸವಾರರು ವಾಹನಗಳ ಪಾರ್ಕಿಂಗ್ ಮಾಡುತ್ತಿಲ್ಲ, ಇದರಿಂದ ನಷ್ಟವಾಗುತ್ತಿದೆ. ಅಲ್ಲದೇ ಈ ನೀರು ಬೋರ್​ವೆಲ್​ಗೂ ಸೇರುತ್ತಿದ್ದು, ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಕ್ಕಳು ದೇಶದ ಪ್ರತಿಭಾವಂತ ಸಂಪನ್ಮೂಲವಾಗಬೇಕು: ಸಚಿವ ಡಾ.ಕೆ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.