ದೊಡ್ಡಬಳ್ಳಾಪುರ: ಹಾಲಿನ ಗುಣಮಟ್ಟ ಸರಿಯಿಲ್ಲವೆಂದು ತಿರಸ್ಕೃತಗೊಂಡ 2 ಸಾವಿರ ಲೀಟರ್ ಹಾಲನ್ನು ಬಮೂಲ್ ಸಿಬ್ಬಂದಿ ಚರಂಡಿಗೆ ಸುರಿದಿದ್ದಾರೆ.
ದೊಡ್ಡಬಳ್ಳಾಪುರದ ಹಾಲು ಶಿಥಿಲೀಕರಣ ಘಟಕದಲ್ಲಿ ಘಟನೆ ನಡೆದಿದ್ದು, ರೈತರಿಂದ ಸಂಗ್ರಹಿಸಿದ ಹಾಲಿನ ಗುಣಮಟ್ಟದಲ್ಲಿ ಕೊರತೆಯಿದ್ದ ಕಾರಣ ತಿರಸ್ಕೃತಗೊಂಡಿದೆ. ಹಾಗಾಗಿ ಹಾಲನ್ನು ಬಮೂಲ್ ಸಿಬ್ಬಂದಿ ಚರಂಡಿಗೆ ಸುರಿದಿದ್ದಾರೆ. ಸಿಬ್ಬಂದಿಯ ಈ ವರ್ತನೆ ವಿರುದ್ಧ ರೈತ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬಮೂಲ್ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ದೊಡ್ಡಬಳ್ಳಾಪುರ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲಿನ ಗುಣಮಟ್ಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಎಸ್ಎನ್ಎಫ್ 8.5 ಗಿಂತ ಕಡಿಮೆಯಾದರೆ ಹಾಲಿನ ಪುಡಿ ತಯಾರಿಸಲು ಆಗುವುದಿಲ್ಲ. ಹಾಲಿನ ಕ್ಯಾನ್ಗಳಲ್ಲಿ ಪಾಚಿ, ಕೆಚ್ಚಲು ಬಾವು ರೋಗ ಬಂದಿರುವ ಹಸುಗಳ ಹಾಲನ್ನು ಸಹ ಹಾಕುತ್ತಿರುವುದರಿಂದ ತಿರಸ್ಕೃತವಾಗಿದೆ ಎಂದರು.