ದೊಡ್ಡಬಳ್ಳಾಪುರ: ಹೊಟ್ಟೆ ನೋವಿನ ವೇದನೆ ತಾಳಲಾರದೆ ವ್ಯಕ್ತಿವೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ನಂದಿಮೋರಿಯ ರೈಲ್ವೆ ಟ್ರ್ಯಾಕ್ ಬಳಿ ಘಟನೆ ನಡೆದಿದೆ. ನಗರದ ಮುತ್ಸಂದ್ರ ನಿವಾಸಿ ಮುನಿರಾಜು (40) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಕೂಲಿ ಕೆಲಸ ಮಾಡುವ ಮುನಿರಾಜುಗೆ ಹೊಟ್ಟೆಯಲ್ಲಿ ಗಡ್ಡೆಗಳಾಗಿದ್ದವು. ಈತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸ್ಕೊಂಡಿದ್ದನಂತೆ. ಶಸ್ತ್ರಚಿಕಿತ್ಸೆ ಬಳಿಕವೂ ಹೊಟ್ಟೆನೋವು ಕಡಿಮೆಯಾಗದ್ದಕ್ಕೆ ಮದ್ಯ ವ್ಯಸನಿಯಾಗಿದ್ದನಂತೆ. ಕುಡಿತದಿಂದ ರೋಗ ಮತ್ತಷ್ಟು ಉಲ್ಬಣಗೊಂಡು ಅತಿಯಾಗಿ ನೋವು ಕಾಡಲಾರಂಭಿಸಿದ್ದರಿಂದ ಮುನಿರಾಜು ನಿನ್ನೆ ರಾತ್ರಿ ರೈಲಿಗೆ ತಲೆಕೊಟ್ಟಿದ್ದಾನೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನಿಡಿ ಪರಿಶೀಲಿಸಿದ್ದಾರೆ.