ದೊಡ್ಡಬಳ್ಳಾಪುರ: ಸಾಲದ ಸುಳಿಗೆ ಸಿಲುಕಿದ್ದ ಉರಗ ರಕ್ಷಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಬಳ್ಳಾಪುರ ನಗರದ ಶಾಂತಿನಗರದ 7ನೇ ಕ್ರಾಸ್ನಲ್ಲಿ ಘಟನೆ ನಡೆದಿದ್ದು, ಪುನೀತ್ ರಾಂ (28) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ಮೃತ ಯುವಕ ರೆಸಾರ್ಟ್ನಲ್ಲಿ ಸಾಹಸ ಕ್ರೀಡೆಗಳ ಅಯೋಜನೆ ಮಾಡುತ್ತಿದ್ದು, ಇದಕ್ಕಾಗಿ ಬಂಡವಾಳ ಹಾಕಿದ್ದ. ಆದರೆ, ನಷ್ಟಕ್ಕೊಳಗಾದ ಹಿನ್ನೆಲೆಯಲ್ಲಿ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗುತ್ತಿದೆ. ಉರಗ ಸಂರಕ್ಷಣೆ ಮಾಡುತ್ತಿದ್ದ ಪುನೀತ್, ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಿದ್ದ. ಜೊತೆಗೆ ಹಿಂದೂ ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದ.
![snake-rescuer-commits-suicide-in-doddaballapura](https://etvbharatimages.akamaized.net/etvbharat/prod-images/kn-bng-02-sucide-av-ka10057_03062022190124_0306f_1654263084_18.jpg)
ಸಾಲ ಬಾಧೆಯಿಂದ ಬೇಸತ್ತ ಪುನೀತ್ ಶುಕ್ರವಾರ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಶುದ್ಧ ನೀರು ಪೂರೈಕೆ ಆರೋಪ: ಸಾವಿನ ಬಾಗಿಲು ತಟ್ಟುತ್ತಿದ್ದಾರೆ ಇಲ್ಲಿನ ಜನ!