ETV Bharat / state

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕನ ಕಟೌಟ್​ಗೆ ಕ್ಷೀರಾಭಿಷೇಕ

author img

By

Published : Sep 22, 2022, 7:12 AM IST

Updated : Sep 22, 2022, 7:36 AM IST

ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿರುವ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದ ಕೀರ್ತಿ ಎಂಬಾತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದರು.

organ donate by accident victim
ಯುವಕನ ಕಟೌಟ್​ಗೆ ಗ್ರಾಮಸ್ಥರಿಂದ ಹಾಲಿನ ಅಭಿಷೇಕ

ದೊಡ್ಡಬಳ್ಳಾಪುರ: ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಮೂವರ ಬಾಳಿಗೆ ಬೆಳಕಾದ ಯುವಕನ ಕಟೌಟ್​ಗೆ ಗ್ರಾಮಸ್ಥರು ಹಾಲೆರೆದು, ಕಂಬನಿ ಮಿಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದಲ್ಲಿ ನಡೆಯಿತು.

ಯುವಕನ ಕಟೌಟ್​ಗೆ ಗ್ರಾಮಸ್ಥರಿಂದ ಹಾಲಿನ ಅಭಿಷೇಕ

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೊನಘಟ್ಟದ ನಿವಾಸಿ ಕೀರ್ತಿ ಕಳೆದೊಂದು ವಾರದಿಂದ ಕೋಮಾದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಆದ್ರೆ, ಮಗನ ಸಾವಿನ ದುಃಖದಲ್ಲೂ ಕುಟುಂಬದ ಸದಸ್ಯರು ಮಹತ್ವದ ನಿರ್ಧಾರ ತೆಗೆದುಕೊಂಡು, ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಯುವಕ ಮೃತಪಟ್ಟರೂ ಆತನ ಕಿಡ್ನಿ, ಹೃದಯ, ಕಣ್ಣುಗಳು ಮತ್ತೊಬ್ಬರಿಗೆ ಆಸರೆಯಾಗಿದೆ.

ಇದನ್ನೂ ಓದಿ: ನನ್ನ ಮಗಳು ಇನ್ನೂ ನಾಲ್ಕು ದಿನ ನಮ್ಮೊಂದಿಗೆ ಜೀವಿಸಬೇಕು.. ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

ಕೀರ್ತಿ ಸಾವಿನ ಸಾರ್ಥಕತೆ ಕಂಡು ಕೊನಘಟ್ಟ ಗ್ರಾಮಸ್ಥರು ಕಂಬನಿ ಮಿಡಿದರು. ಅಷ್ಟೇ ಅಲ್ಲ, ಆತನ ಕಟೌಟ್​ಗೆ ಹಾಲೆರೆದರು. ನಿನ್ನೆ ರಾತ್ರಿ ಮೃತ ಯುವಕನ ಭಾವಚಿತ್ರದ ಮುಂದೆ ಮೇಣದಬತ್ತಿ ಬೆಳಗಿಸಿ ಸಾಮೂಹಿಕವಾಗಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ದೊಡ್ಡಬಳ್ಳಾಪುರ: ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಮೂವರ ಬಾಳಿಗೆ ಬೆಳಕಾದ ಯುವಕನ ಕಟೌಟ್​ಗೆ ಗ್ರಾಮಸ್ಥರು ಹಾಲೆರೆದು, ಕಂಬನಿ ಮಿಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟದಲ್ಲಿ ನಡೆಯಿತು.

ಯುವಕನ ಕಟೌಟ್​ಗೆ ಗ್ರಾಮಸ್ಥರಿಂದ ಹಾಲಿನ ಅಭಿಷೇಕ

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೊನಘಟ್ಟದ ನಿವಾಸಿ ಕೀರ್ತಿ ಕಳೆದೊಂದು ವಾರದಿಂದ ಕೋಮಾದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. ಆದ್ರೆ, ಮಗನ ಸಾವಿನ ದುಃಖದಲ್ಲೂ ಕುಟುಂಬದ ಸದಸ್ಯರು ಮಹತ್ವದ ನಿರ್ಧಾರ ತೆಗೆದುಕೊಂಡು, ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಯುವಕ ಮೃತಪಟ್ಟರೂ ಆತನ ಕಿಡ್ನಿ, ಹೃದಯ, ಕಣ್ಣುಗಳು ಮತ್ತೊಬ್ಬರಿಗೆ ಆಸರೆಯಾಗಿದೆ.

ಇದನ್ನೂ ಓದಿ: ನನ್ನ ಮಗಳು ಇನ್ನೂ ನಾಲ್ಕು ದಿನ ನಮ್ಮೊಂದಿಗೆ ಜೀವಿಸಬೇಕು.. ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ

ಕೀರ್ತಿ ಸಾವಿನ ಸಾರ್ಥಕತೆ ಕಂಡು ಕೊನಘಟ್ಟ ಗ್ರಾಮಸ್ಥರು ಕಂಬನಿ ಮಿಡಿದರು. ಅಷ್ಟೇ ಅಲ್ಲ, ಆತನ ಕಟೌಟ್​ಗೆ ಹಾಲೆರೆದರು. ನಿನ್ನೆ ರಾತ್ರಿ ಮೃತ ಯುವಕನ ಭಾವಚಿತ್ರದ ಮುಂದೆ ಮೇಣದಬತ್ತಿ ಬೆಳಗಿಸಿ ಸಾಮೂಹಿಕವಾಗಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Last Updated : Sep 22, 2022, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.