ETV Bharat / state

ಟಿಹೆಚ್‌ಒ ನಾಪತ್ತೆ ಪ್ರಕರಣ: ಇದು ಶಾಸಕ ಶರತ್ ಆಪ್ತನ ಸಂಚು ಎಂದು ಜಯರಾಜ್ ಆರೋಪ - ಹೊಸಕೋಟೆ ಟಿಹೆಚ್​​ಒ ಕಿಡ್ನಾಪ್​ ಕೇಸ್ ಆರೋಪಿ ಜಯರಾಜ್​ ಸುದ್ದಿಗೋಷ್ಟಿ

ಹೊಸಕೋಟೆ ಟಿಹೆಚ್​​ಒ ಡಾ. ಮಂಜುನಾಥ್ ನಾಪತ್ತೆ ಹಿಂದೆ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುರಾಜ್ ಅವರ ಕೈವಾಡವಿದೆ ಎಂದು ಅಪಹರಣದ ಆರೋಪಿ ಜಯರಾಜ್​​ ಗಂಭೀರ ಆರೋಪ ಮಾಡಿದ್ದಾರೆ.

hoskote tho missing case accuse jayraj pressmeet
ಜಯರಾಜ್ ಸುದ್ದಿಗೋಷ್ಟಿ
author img

By

Published : Dec 22, 2020, 6:33 PM IST

ಹೊಸಕೋಟೆ: ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ನಾಪತ್ತೆ ಹಿಂದೆ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುರಾಜ್ ಸಂಚು ಇದೆ ಎಂದು ಪ್ರಕರಣದ ಆರೋಪಿ ಜಯರಾಜ್ ಆರೋಪಿಸಿದ್ದಾರೆ.

ಜಯರಾಜ್ ಸುದ್ದಿಗೋಷ್ಠಿ
ನಾಪತ್ತೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಜಯರಾಜ್, “ನನ್ನನ್ನು ರಾಜಕೀಯವಾಗಿ ಮುಗಿಸಲು ಟಿಹೆಚ್‌ಒ ಅವರನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಟಿಹೆಚ್‌ಒ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಆಡಿಯೋವನ್ನು ಟಿಹೆಚ್ಒ ರೆಕಾರ್ಡ್ ಮಾಡಿಕೊಂಡ ದಿನ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಆದರೆ ಆಡಿಯೋ ಲೀಕ್ ಆಗಿರುವ ವಿಚಾರ ತಿಳಿದ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುಗೌಡ, ಟಿಹೆಚ್‌ಒ ಅವರ ಬಳಿ ಮಾತನಾಡಿ ಅವರನ್ನು ನಾಪತ್ತೆ ಮಾಡಿಸಿ, ಆಡಿಯೋ ಬಳಕೆ ಮಾಡಿಕೊಂಡು ನನ್ನ ಮೇಲೆ ಕಿಡ್ನಾಪ್ ಕೇಸ್ ದಾಖಲು ಮಾಡಿಸಿ ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ. ಈ ವಿಚಾರವಾಗಿ ಅವರ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ಸಹ ದಾಖಲು ಮಾಡಿದ್ದೇನೆ'' ಎಂದು ಹೇಳಿದ್ರು.
ಎಂಟಿಬಿ ಆಪ್ತನಿಂದ ಟಿಹೆಚ್‌ಒಗೆ ಧಮ್ಕಿ ಎಂದು ಮಾಧ್ಯಮದವರು ತೋರಿಸಿದ್ದಾರೆ. ಅದರೆ ನಾನು ಎಂಟಿಬಿಗೆ ಆಪ್ತನಾಗುವ ಮೊದಲು ಬಚ್ಚೇಗೌಡರ ಆಪ್ತನಾಗಿ ಸಾಕಷ್ಟು ದಶಕಗಳನ್ನು ಕಳೆದಿದ್ದೇನೆ. ಕಳೆದ ಕೆಲ ದಿನಗಳಿಂದ ರಾಜಕೀಯದಿಂದ ದೂರ ಉಳಿದಿದ್ದೆ. ಎಂಟಿಬಿ ಬಿಜೆಪಿಗೆ ಬಂದಾಗ ಮತ್ತೆ ಸಕ್ರಿಯನಾದೆ. ಬಚ್ಚೇಗೌಡ ಅವರಿಂದ ದೂರವಾಗಿ ಎಂಟಿಬಿ ಬಳಿ ಇರುವುದಕ್ಕೆ ಈ ರೀತಿ ಮಾಡುವುದು ಸರಿಯಲ್ಲ ಎಂದರು.
ನಾನು ಆಡಿಯೋದಲ್ಲಿ ಮಾತನಾಡಿರುವುದು ನಿಜ:

ಟಿಎಚ್ಒ ಮಂಜುನಾಥ್ ಅವರು ಸುಜಾತಾ ಕ್ಲಿನಿಕ್ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ವಶಪಡಿಸಿಕೊಂಡಿದ್ದರು. ಸುಜಾತಾ ಕ್ಲಿನಿಕ್​​ನ ಮೋಹನ್ ನನಗೆ ಪರಿಚಯಸ್ಥರು. ಅವರು ಹೊಸಕೋಟೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಮೋಹನ್ ಅವರು ಆಯುರ್ವೇದಿಕ್ ಡಾಕ್ಟರ್. ನಾನು ಔಷಧಿ ಕೇಳಲು ಟಿಹೆಚ್​​ಒ ಬಳಿ ಹೋದಾಗ ಟಿಎಚ್ಒ ಮಂಜುನಾಥ್​ ರೆಕಾರ್ಡ್ ಮಾಡಲು ಮುಂದಾದರು. ಇದರಿಂದ ನಾನು ಉದ್ವೇಗಗೊಂಡು ಮಾತನಾಡಿದ್ದು ನಿಜ ಎಂದರು.

ಇನ್ನು ಈ ಸಂಬಂಧ ಪೊಲೀಸ್ ಠಾಣೆಗೆ ಬಂದು ಪಿಎಸ್​ಐ ರಾಜು ರಾಜಿ ಮಾಡಿದ್ರು. ಅವತ್ತು ಟಿಎಚ್ಒ ಮಂಜುನಾಥ್ ಬರ್ತ್ ಡೇ ಸಹ ಇತ್ತು. ಪೊಲೀಸ್ ಠಾಣೆಯಲ್ಲಿ ಕೇಕ್ ಸಹ ಕಟ್ ಮಾಡಿದ್ವಿ. ನಾನು ಟಿಹೆಚ್​ಒ ಬಳಿ ಕ್ಷಮೆ ಸಹ ಕೇಳಿದ್ದೆ. ಅದಕ್ಕೆ ಅವರು ಸರಿ ಎಂದ್ರು. ನಂತ್ರ ಡಾ. ಮಂಜುನಾಥ್ ಪೊಲೀಸ್ ಠಾಣೆಯಿಂದ ಸೀದಾ ಆಸ್ಪತ್ರೆಗೆ ಹೋದರು. ಹೀಗಾಗಿ ಪೊಲೀಸ್ ಠಾಣೆಯಲ್ಲೇ ಎಲ್ಲಾ ಸರಿ ಹೋಗಿತ್ತು ಎಂದುಕೊಂಡೆ. ಬಳಿಕ ಆಡಿಯೋ ವಿರೋಧ ಪಕ್ಷದವರಿಗೆ ಸಿಕ್ಕಿದೆ. ನಂತರ ಈ ಎಲ್ಲಾ ರೀತಿಯ ಬೆಳವಣಿಗೆ ನಡೆದಿದೆ. ಇದೆಲ್ಲಾ ರಾಜಕೀಯ ದುರುದ್ದೇಶದಿಂದ ನಡೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷದ ನಾಯಕರು ಸಂಚು ಹೂಡಿದ್ದಾರೆ ಎಂದು ಜಯರಾಜ್​ ಆರೋಪಿಸಿದರು.

ಹೊಸಕೋಟೆ: ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ನಾಪತ್ತೆ ಹಿಂದೆ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುರಾಜ್ ಸಂಚು ಇದೆ ಎಂದು ಪ್ರಕರಣದ ಆರೋಪಿ ಜಯರಾಜ್ ಆರೋಪಿಸಿದ್ದಾರೆ.

ಜಯರಾಜ್ ಸುದ್ದಿಗೋಷ್ಠಿ
ನಾಪತ್ತೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಜಯರಾಜ್, “ನನ್ನನ್ನು ರಾಜಕೀಯವಾಗಿ ಮುಗಿಸಲು ಟಿಹೆಚ್‌ಒ ಅವರನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಟಿಹೆಚ್‌ಒ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಿದ ಆಡಿಯೋವನ್ನು ಟಿಹೆಚ್ಒ ರೆಕಾರ್ಡ್ ಮಾಡಿಕೊಂಡ ದಿನ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಆದರೆ ಆಡಿಯೋ ಲೀಕ್ ಆಗಿರುವ ವಿಚಾರ ತಿಳಿದ ಶಾಸಕ ಶರತ್ ಬಚ್ಚೇಗೌಡ ಅವರ ಆಪ್ತ ಸಹಾಯಕ ಮುತ್ತುಗೌಡ, ಟಿಹೆಚ್‌ಒ ಅವರ ಬಳಿ ಮಾತನಾಡಿ ಅವರನ್ನು ನಾಪತ್ತೆ ಮಾಡಿಸಿ, ಆಡಿಯೋ ಬಳಕೆ ಮಾಡಿಕೊಂಡು ನನ್ನ ಮೇಲೆ ಕಿಡ್ನಾಪ್ ಕೇಸ್ ದಾಖಲು ಮಾಡಿಸಿ ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಿದ್ದಾರೆ. ಈ ವಿಚಾರವಾಗಿ ಅವರ ವಿರುದ್ಧ ಹೊಸಕೋಟೆ ಠಾಣೆಯಲ್ಲಿ ಪ್ರಕರಣ ಸಹ ದಾಖಲು ಮಾಡಿದ್ದೇನೆ'' ಎಂದು ಹೇಳಿದ್ರು.
ಎಂಟಿಬಿ ಆಪ್ತನಿಂದ ಟಿಹೆಚ್‌ಒಗೆ ಧಮ್ಕಿ ಎಂದು ಮಾಧ್ಯಮದವರು ತೋರಿಸಿದ್ದಾರೆ. ಅದರೆ ನಾನು ಎಂಟಿಬಿಗೆ ಆಪ್ತನಾಗುವ ಮೊದಲು ಬಚ್ಚೇಗೌಡರ ಆಪ್ತನಾಗಿ ಸಾಕಷ್ಟು ದಶಕಗಳನ್ನು ಕಳೆದಿದ್ದೇನೆ. ಕಳೆದ ಕೆಲ ದಿನಗಳಿಂದ ರಾಜಕೀಯದಿಂದ ದೂರ ಉಳಿದಿದ್ದೆ. ಎಂಟಿಬಿ ಬಿಜೆಪಿಗೆ ಬಂದಾಗ ಮತ್ತೆ ಸಕ್ರಿಯನಾದೆ. ಬಚ್ಚೇಗೌಡ ಅವರಿಂದ ದೂರವಾಗಿ ಎಂಟಿಬಿ ಬಳಿ ಇರುವುದಕ್ಕೆ ಈ ರೀತಿ ಮಾಡುವುದು ಸರಿಯಲ್ಲ ಎಂದರು.
ನಾನು ಆಡಿಯೋದಲ್ಲಿ ಮಾತನಾಡಿರುವುದು ನಿಜ:

ಟಿಎಚ್ಒ ಮಂಜುನಾಥ್ ಅವರು ಸುಜಾತಾ ಕ್ಲಿನಿಕ್ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ವಶಪಡಿಸಿಕೊಂಡಿದ್ದರು. ಸುಜಾತಾ ಕ್ಲಿನಿಕ್​​ನ ಮೋಹನ್ ನನಗೆ ಪರಿಚಯಸ್ಥರು. ಅವರು ಹೊಸಕೋಟೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಮೋಹನ್ ಅವರು ಆಯುರ್ವೇದಿಕ್ ಡಾಕ್ಟರ್. ನಾನು ಔಷಧಿ ಕೇಳಲು ಟಿಹೆಚ್​​ಒ ಬಳಿ ಹೋದಾಗ ಟಿಎಚ್ಒ ಮಂಜುನಾಥ್​ ರೆಕಾರ್ಡ್ ಮಾಡಲು ಮುಂದಾದರು. ಇದರಿಂದ ನಾನು ಉದ್ವೇಗಗೊಂಡು ಮಾತನಾಡಿದ್ದು ನಿಜ ಎಂದರು.

ಇನ್ನು ಈ ಸಂಬಂಧ ಪೊಲೀಸ್ ಠಾಣೆಗೆ ಬಂದು ಪಿಎಸ್​ಐ ರಾಜು ರಾಜಿ ಮಾಡಿದ್ರು. ಅವತ್ತು ಟಿಎಚ್ಒ ಮಂಜುನಾಥ್ ಬರ್ತ್ ಡೇ ಸಹ ಇತ್ತು. ಪೊಲೀಸ್ ಠಾಣೆಯಲ್ಲಿ ಕೇಕ್ ಸಹ ಕಟ್ ಮಾಡಿದ್ವಿ. ನಾನು ಟಿಹೆಚ್​ಒ ಬಳಿ ಕ್ಷಮೆ ಸಹ ಕೇಳಿದ್ದೆ. ಅದಕ್ಕೆ ಅವರು ಸರಿ ಎಂದ್ರು. ನಂತ್ರ ಡಾ. ಮಂಜುನಾಥ್ ಪೊಲೀಸ್ ಠಾಣೆಯಿಂದ ಸೀದಾ ಆಸ್ಪತ್ರೆಗೆ ಹೋದರು. ಹೀಗಾಗಿ ಪೊಲೀಸ್ ಠಾಣೆಯಲ್ಲೇ ಎಲ್ಲಾ ಸರಿ ಹೋಗಿತ್ತು ಎಂದುಕೊಂಡೆ. ಬಳಿಕ ಆಡಿಯೋ ವಿರೋಧ ಪಕ್ಷದವರಿಗೆ ಸಿಕ್ಕಿದೆ. ನಂತರ ಈ ಎಲ್ಲಾ ರೀತಿಯ ಬೆಳವಣಿಗೆ ನಡೆದಿದೆ. ಇದೆಲ್ಲಾ ರಾಜಕೀಯ ದುರುದ್ದೇಶದಿಂದ ನಡೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ವಿರೋಧ ಪಕ್ಷದ ನಾಯಕರು ಸಂಚು ಹೂಡಿದ್ದಾರೆ ಎಂದು ಜಯರಾಜ್​ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.