ETV Bharat / state

ಮಹಿಳೆ ಜೊತೆ ಅನುಚಿತ ವರ್ತನೆ ಆರೋಪ: ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿದ 10 ಮಂದಿ ಸೆರೆ - ಬಾಗಲಕೋಟೆಯಲ್ಲಿ ಆಸ್ಟ್ರೇಲಿಯಾ ಪ್ರಜೆ ಮೇಲೆ ಹಲ್ಲೆ

ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಂಕಣಕೊಪ್ಪ ಗ್ರಾಮಸ್ಥರಿಂದ ಹಲ್ಲೆಗೆಗೊಳಗಾಗಿದ್ದ ಆಸ್ಟ್ರೇಲಿಯಾ ಪ್ರಜೆ ವಿಲಿಯಂ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಗ್ರಾಮದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ

ಹಲ್ಲೆಗೊಳಗಾದ ವಿದೇಶಿ ಪ್ರಜೆ ವಿಲಿಯಂ ಚೇತರಿಕೆ
author img

By

Published : Nov 21, 2019, 4:51 PM IST

ಬಾಗಲಕೋಟೆ: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಂಕಣಕೊಪ್ಪ ಗ್ರಾಮಸ್ಥರಿಂದ ಹಲ್ಲೆಗೆಗೊಳಗಾಗಿದ್ದ ಆಸ್ಟ್ರೇಲಿಯಾ ಪ್ರಜೆ ವಿಲಿಯಂ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಗ್ರಾಮದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ವಿದೇಶಿ ಪ್ರಜೆ ವಿಲಿಯಂ ಚೇತರಿಕೆ

ವಿಲಿಯಂ, ಎಸ್.ನಿಜಲಿಂಗಪ್ಪ ಹಾಗೂ‌ ಹಾನಗಲ್ ಕುಮಾರಸ್ವಾಮಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,

ಈ ಕುರಿತು ಯಾವುದೇ ಪ್ರಚಾರಕ್ಕೆ ಅವಕಾಶ ಕೊಡುವುದು ಬೇಡ ಎಂದು ವಿನಂತಿ ಮಾಡಿಕೊಂಡಿದ್ದಾನೆ.

ತಲೆನೋವಾದ ಪ್ರಕರಣ: ಹಲ್ಲೆ ಪ್ರಕರಣವು ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ವಿಲಿಯಂ ಏನೇ ಕೇಳಿದರೂ ಪೋಲಿಸರೆ ತಂದು ಕೊಡಬೇಕಾಗಿದೆ. ಫೋಟೋ, ವಿಡಿಯೋ ಮಾಡಲು ನಿರಾಕರಿಸುತ್ತಿದ್ದು, ಈ ಕುರಿತು ಪ್ರಚಾರ ಬೇಡ ಎನ್ನುತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದಕೊಂಡ ವಿಲಿಯಂ, ನನ್ನಿಂದ ಗ್ರಾಮದ ಜನತೆಗೆ ತೊಂದರೆ ಉಂಟಾಗಿಲ್ಲ ಎನ್ನುತ್ತಿದ್ದಾನೆ. ಗ್ರಾಮದ ಕೆಲ ಯುವಕರು ಊರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೊಂಕಣಕೊಪ್ಪ ಗ್ರಾಮಸ್ಥರಿಂದ ಹಲ್ಲೆಗೆಗೊಳಗಾಗಿದ್ದ ಆಸ್ಟ್ರೇಲಿಯಾ ಪ್ರಜೆ ವಿಲಿಯಂ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಗ್ರಾಮದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ವಿದೇಶಿ ಪ್ರಜೆ ವಿಲಿಯಂ ಚೇತರಿಕೆ

ವಿಲಿಯಂ, ಎಸ್.ನಿಜಲಿಂಗಪ್ಪ ಹಾಗೂ‌ ಹಾನಗಲ್ ಕುಮಾರಸ್ವಾಮಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,

ಈ ಕುರಿತು ಯಾವುದೇ ಪ್ರಚಾರಕ್ಕೆ ಅವಕಾಶ ಕೊಡುವುದು ಬೇಡ ಎಂದು ವಿನಂತಿ ಮಾಡಿಕೊಂಡಿದ್ದಾನೆ.

ತಲೆನೋವಾದ ಪ್ರಕರಣ: ಹಲ್ಲೆ ಪ್ರಕರಣವು ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ವಿಲಿಯಂ ಏನೇ ಕೇಳಿದರೂ ಪೋಲಿಸರೆ ತಂದು ಕೊಡಬೇಕಾಗಿದೆ. ಫೋಟೋ, ವಿಡಿಯೋ ಮಾಡಲು ನಿರಾಕರಿಸುತ್ತಿದ್ದು, ಈ ಕುರಿತು ಪ್ರಚಾರ ಬೇಡ ಎನ್ನುತ್ತಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದಕೊಂಡ ವಿಲಿಯಂ, ನನ್ನಿಂದ ಗ್ರಾಮದ ಜನತೆಗೆ ತೊಂದರೆ ಉಂಟಾಗಿಲ್ಲ ಎನ್ನುತ್ತಿದ್ದಾನೆ. ಗ್ರಾಮದ ಕೆಲ ಯುವಕರು ಊರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

Intro:Anchor


Body:ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದ ಜನತೆ ,ಹಲ್ಲೆ ಮಾಡಿರುವ ವಿದೇಶಿ ಪ್ರಜೆ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು,ಆರಾಮವಾಗಿದ್ದಾನೆ.ಆದರೆ ಘಟನೆ ಬಗ್ಗೆ ಸೂಕ್ತ ಮಾಹಿತಿ ಸಿಗದೆ ಊಹಾಪೋಹಗಳು ಕೇಳಿ ಬರುತ್ತಿದೆ.ಆಸ್ಟ್ರೇಲಿಯಾ ದೇಶದ ವಿಲಿಯಂ ಕೈರನ್ ಜೇಮ್ಸ ಎಂಬುವ ವ್ಯಕ್ತಿಯು ಈಗ ಎಸ್.ನಿಜಲಿಂಗಪ್ಪ ಹಾಗೂ‌ ಹಾನಗಲ್ ಕುಮಾರಸ್ವಾಮಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಯ ಐಸಿಯು ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೈಯಲ್ಲಿ ಚಿಕ್ಕಪುಟ್ಟ ಗಾಯಗಳಾಗಿದ್ದು,ಚಿಕಿತ್ಸೆ ನಂತರ ಚೇತರಿಸಿಕೊಂಡು ಆರಾಮವಾಗಿದ್ದಾರೆ.ಆದರೆ ಪ್ರತಿ ನಿತ್ಯ ಹಣ್ಣಿನ ಜ್ಯೂಸ್ ಮಾತ್ರ ಸೇವನೆ ಮಾಡುತ್ತಿದ್ದು,ಯಾವುದೇ ಆಹಾರ ಕೇಳಿಲ್ಲ.ಸದಾ ಜ್ಞಾನ ದಲ್ಲಿ ಇರುತ್ತಿದ್ದು,ಹೆಚ್ಚು ಮಾತನಾಡದೆ,ಯಾವುದೇ ಇತರ ಆಹಾರ ಕೇಳದೆ ಬರೀ ಜ್ಯೂಸ್ ಮಾತ್ರ ಕೇಳುತ್ತಿದ್ದಾರೆ ಎನ್ನಲಾಗಿದೆ.
ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆ ಮೂರು ಜನ ಪೊಲೀಸ್ ಸಿಬ್ಬಂದಿ ಸದಾ ಕಾವಲು ಕಾಯುತ್ತಿದ್ದಾರೆ.ವಿದೇಶಿಗ ಏನೇ ಕೇಳಿದರೂ ಪೋಲಿಸರೆ ತಂದು ಕೂಡಬೇಕಾಗಿದೆ.ಬೆಡ್ ಮೇಲೆ ಮಲಗಿದಲ್ಲಿಯೇ ಕಣ್ಣು ಮುಚ್ಚಿ ಜ್ಣಾನ ಮಾಡುತ್ತಾ ಇರುತ್ತಾನೆ ಎಂದು ನೋಡಿಕೊಳ್ಳುವ ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಪೋಟೋ ವಿಡಿಯೋ ಮಾಡಲು ಅನುಮತಿ‌ ನೀಡುತ್ತಿಲ್ಲ.ಪೊಲೀಸರು ಸೇರಿದಂತೆ ಇತರರು ಯಾರೇ ಹೋದರು ಪೋಟೋ, ವಿಡಿಯೋ ಗೆ ಅವಕಾಶ ನೀಡದೆ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ.ಹೆಚ್ಚಿನ ಪ್ರಚಾರ ಬೇಡಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಇದರ ಜೊತೆಗೆ ವಿದೇಶಿ ಗ ಮೇಲೆ ಹಲ್ಲೆ ಪ್ರಕರಣ ಹಿನ್ನೆಲೆ ಕೊಂಕಣಕೊಪ್ಪ ಗ್ರಾಮದ ಹತ್ತು ಜನರನ್ನು ಬಂಧನ ಮಾಡಿ,ಪೊಲೀಸರು ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ.ಈ ಘಟನೆಯ ಬಗ್ಗೆ ಮಾಹಿತಿ ತಿಳಿದಕೊಂಡ ವಿಲಿಯಂ,ನನ್ನಿಂದ ಗ್ರಾಮದ ಜನತೆಗೆ ತೊಂದರೆ ಉಂಟಾಗಿತಲ್ಲ ಎಂದು‌ ನೊಂದ ಕೊಂಡಿದ್ದಾನೆ ಎನ್ನಲಾಗಿದೆ. ಗ್ರಾಮದ ಜನತೆಗೆ ಮಾತ್ರ ಹಲ್ಲೆಯ ನಂತರ ಆತಂಕ ಮೂಡಿಸಿದ್ದು,ಗ್ರಾಮದ ಕೆಲ ಯುವಕರು ಊರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಆಗಿ ವಿದೇಶಿಗ ಹಲ್ಲೆ ಪ್ರಕರಣವು ಗ್ರಾಮಸ್ಥರಿಗೂ ಹಾಗೂ ಪೊಲೀಸರಿಗೂ ಕಿರಿಕಿರಿ ಉಂಟಾಗಿದ್ದು,ಮಾತ್ರ ಸತ್ಯ.


Conclusion:ಈ ಟಿವಿ,ಭಾರತ,ಬಾಗಲಕೋಟೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.