ETV Bharat / state

ಪಂಚಮಸಾಲಿ ಪೀಠಗಳ ನಡುವೆ ಪೈಪೋಟಿ...ಒಂದೇ ಎರಡು ಪೀಠಗಳಲ್ಲಿ ಸಮಾರಂಭ - National Basava Agriculture Awards Ceremony on January 14

ಪಂಚಮಸಾಲಿ ಸಮುದಾಯದ ಎರಡೂ ಪೀಠಗಳಲ್ಲಿ ಒಂದೇ ದಿನ ಸಮಾರಂಭ ನಡೆಯುತ್ತಿದೆ. ಇದು ರಾಜ್ಯದಲ್ಲಿಯೇ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಪ್ರಪ್ರಥಮ ಹರ ಜಾತ್ರಾ ಮಹೋತ್ಸವ
ಪ್ರಪ್ರಥಮ ಹರ ಜಾತ್ರಾ ಮಹೋತ್ಸವ
author img

By

Published : Jan 9, 2020, 8:46 PM IST

ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ, ಜನವರಿ 14ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತೆಲಂಗಾಣ ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.

ಇನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಅದೇ 14ರಂದು, ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವ ಸಮಾರಂಭವು ಆಯೋಜಿಸಲಾಗಿದೆ. ಹರಿಹರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ. ಟಿ. ರವಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಭಾಗವಹಿಸಲಿದ್ದಾರೆ.

ಈ ಮೊದಲೇ ಪಂಚಮಸಾಲಿಯ ಎರಡು ಪೀಠಗಳಾಗಿದ್ದರಿಂದ ಸಮುದಾಯದವರಿಗೆ ಅಸಮಾಧಾನವಿತ್ತು. ಯಾವ ಪೀಠಕ್ಕೆ ನಡೆದುಕೊಳ್ಳಬೇಕು ಎಂಬುದು ರಾಜ್ಯದಲ್ಲಿ ಚರ್ಚೆಯ ವಿಷಯವಾಗಿತ್ತು.ಇದೀಗ ಮತ್ತೆ ಎರಡು ಪ್ರತೇಕ ಪೀಠದಿಂದ ಜನವರಿ 14ರಂದು ಒಂದೇ ದಿನ ಸಮಾರಂಭ ಇರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಒಂದೇ ಎರಡು ಪೀಠಗಳಲ್ಲಿ ಸಮಾರಂಭ
ಒಂದೇ ಎರಡು ಪೀಠಗಳಲ್ಲಿ ಸಮಾರಂಭ

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಮುರಗೇಶ ನಿರಾಣಿ ಅವರ ಸಹಕಾರದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇತ್ತ ಕೂಡಲಸಂಗಮದಲ್ಲಿ ಪ್ರತಿವರ್ಷ ಜನವರಿ 14 ರಂದು ಬಸವ ಕೃಷಿ ಪ್ರಶಸ್ತಿ ಸಮಾರಂಭ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಹರಿಹರ ಪೀಠದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡು ಟಾಂಗ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ, ಜನವರಿ 14ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ತೆಲಂಗಾಣ ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪ್ರಕಾಶರಾವ್ ವೀರಮಲ್ಲ ಅವರಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.

ಇನ್ನು ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಅದೇ 14ರಂದು, ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವ ಸಮಾರಂಭವು ಆಯೋಜಿಸಲಾಗಿದೆ. ಹರಿಹರದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ. ಟಿ. ರವಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಭಾಗವಹಿಸಲಿದ್ದಾರೆ.

ಈ ಮೊದಲೇ ಪಂಚಮಸಾಲಿಯ ಎರಡು ಪೀಠಗಳಾಗಿದ್ದರಿಂದ ಸಮುದಾಯದವರಿಗೆ ಅಸಮಾಧಾನವಿತ್ತು. ಯಾವ ಪೀಠಕ್ಕೆ ನಡೆದುಕೊಳ್ಳಬೇಕು ಎಂಬುದು ರಾಜ್ಯದಲ್ಲಿ ಚರ್ಚೆಯ ವಿಷಯವಾಗಿತ್ತು.ಇದೀಗ ಮತ್ತೆ ಎರಡು ಪ್ರತೇಕ ಪೀಠದಿಂದ ಜನವರಿ 14ರಂದು ಒಂದೇ ದಿನ ಸಮಾರಂಭ ಇರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಒಂದೇ ಎರಡು ಪೀಠಗಳಲ್ಲಿ ಸಮಾರಂಭ
ಒಂದೇ ಎರಡು ಪೀಠಗಳಲ್ಲಿ ಸಮಾರಂಭ

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಮುರಗೇಶ ನಿರಾಣಿ ಅವರ ಸಹಕಾರದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇತ್ತ ಕೂಡಲಸಂಗಮದಲ್ಲಿ ಪ್ರತಿವರ್ಷ ಜನವರಿ 14 ರಂದು ಬಸವ ಕೃಷಿ ಪ್ರಶಸ್ತಿ ಸಮಾರಂಭ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಹರಿಹರ ಪೀಠದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡು ಟಾಂಗ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

Intro:AnchorBody:ಬಾಗಲಕೋಟೆ--ಪಂಚಮಸಾಲಿ ಸಮುದಾಯ ಎರಡೂ ಪೀಠಗಳಲ್ಲಿ ಒಂದೇ ದಿನ ಸಮಾರಂಭ ಹಾಕಿಕೊಳ್ಳುವ ಮೂಲಕ ರಾಜ್ಯದಲ್ಲಿ ಯೇ ಮತ್ತೆ ಚರ್ಚೆಯ ವಿಷಯವಾಗುತ್ತಿದೆ.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ವತಿಯಿಂದ ಜನವರಿ 14 ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸಮಾರಂಭ ಹಮ್ಮಿಕೊಂಡು,ತೆಲಂಗಾಣ ರಾಜ್ಯದ ಜಲ ಸಂಪನ್ಮೂಲ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪ್ರಕಾಶರಾವ್ ವೀರಮಲ್ಲ ಎಂಬುವವರಿಗೆ ನೀಡುತ್ತಿದ್ದಾರೆ. ಇದರ ಅಂಗವಾಗಿ ಬಸವ ಕೃಷಿ ಪ್ರಶಸ್ತಿ ಸಮಾರಂಭ ಹಮ್ಮಿಕೊಂಡಿದ್ದಾರೆ.
ಇವರ ವಿರುದ್ಧ ಆಗಿ ಹರಿಹರ ದ ಪಂಚಮಸಾಲಿ ಜಗದ್ಗುರು ಪೀಠದ ವತಿಯಿಂದ ಅದೇ 14 ರಂದು ಪ್ರಪ್ರಥಮ ಹರ ಜಾತ್ರಾ ಮಹೋತ್ಸವ ಹಾಗೂ ಅಕ್ಕಮಹಾದೇವಿ ವಚನ ವಿಜಯೋತ್ಸವ ಸಮಾರಂಭ ವು ಹರಿಹರ ದಲ್ಲಿ ಆಯೋಜಿಸಿದ್ದಾರೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸಿ ಟಿ ರವಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದವರಿಗೆ ಕೂಡಲಸಂಗಮ ಹಾಗೂ ಹರಿಹರ ಎರಡು ಪೀಠವಾಗಿ ಮೊದಲೇ ಅಸಮಾಧಾನ ವ್ಯಕ್ತವಾಗಿತ್ತು.
ಇದರಿಂದ ಹರಿಹರ ದಿಂದ ಬಂದು ಕೂಡಲಸಂಗಮ ದಲ್ಲಿ ಪಂಚಮಪೀಠ ಸ್ಥಾಪನೆ ಮಾಡಿಕೊಂಡು‌ ಬಸವಜಯ ಮೃತ್ಯುಂಜಯ ಪ್ರತೇಕ ಪೀಠ ಸ್ಥಾಪನೆ ಮಾಡಿದರು. ಇದರಿಂದ ಪಂಚಮಸಾಲಿ ಸಮುದಾಯದಲ್ಲಿ ಎರಡು ಪೀಠಗಳಾಗಿ ಯಾವ ಪೀಠಕ್ಕೆ ನಡೆದುಕೊಳ್ಳಬೇಕು ಎಂಬುದು ರಾಜ್ಯದಲ್ಲಿ ಯೇ ಚರ್ಚೆಯ ವಿಷಯವಾಗಿತ್ತು. ಈಗ ಮತ್ತೆ ಎರಡೂ ಪ್ರತೇಕ ಪೀಠದಿಂದ ಜನವರಿ 14 ರಂದು ಒಂದೇ ದಿನ ಸಮಾರಂಭ ಹಾಕಿಕೊಳ್ಳುವ ಮೂಲಕ ಚರ್ಚೆಯ ವಿಷಯವಾಗಿದೆ.
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ ಅವರ ಸಹಕಾರ ದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದ್ದಾರೆ.
ಕೂಡಲಸಂಗಮ ದಲ್ಲಿ ಪ್ರತಿ ವರ್ಷ 14 ರಂದು ಬಸವ ಕೃಷಿ ಪ್ರಶಸ್ತಿ ಸಮಾರಂಭ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷ ಮಾತ್ರ ಹರಿಹರ ಪೀಠದಿಂದ ಜಾತ್ರಾ ಮಹೋತ್ಸವ ಹಮ್ಮಿಕೊಂಡು ಟಾಂಗ್ ನೀಡಲು ಸಜ್ಜಾಗಿದ್ದಾರೆ.ಆದರೆ ನಿರಾಣಿ ಕುಟುಂಬದವರ ಯಾವ ಪೀಠಕ್ಕೆ ನಿಷ್ಠೆ ಆಗಿದ್ದಾರೆ ಎಂಬುದು ಮತ್ತು ಎರಡು ಕಡೆ ಒಂದೇ ದಿನ ಸಮಾರಂಭ ಹಮ್ಮಿಕೊಳ್ಳುವ ಮೂಲಕ ಸಮುದಾಯದವರು ಯಾವ ಪೀಠದ ಸಮಾರಂಭ ಕ್ಕೆ ಭಾಗವಹಿಸಬೇಕು ಎಂಬುದು ಪ್ರಶ್ನೆ ಕಾಡುತ್ತಿದೆ. ಎರಡು ಮಠಗಳು ಒಂದಾಗುವ ಬಗ್ಗೆ ಪ್ರಯತ್ನ ಮಾಡಲಾಗಿತ್ತು.ಆದರೆ ಆ ಪ್ರಯತ್ನ ಯಶಸ್ಸು ಆಗಿಲ್ಲ.ಈಗ ಮತ್ತೆ ಚರ್ಚೆಯ ವಿಷಯವಾಗಿದ್ದು,ಜನವರಿ 14 ರಂದು ಯಾವ ಪೀಠದ ಸಮಾರಂಭ ಯಶಸ್ಸು ಆಗುತ್ತಿದೆ.ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದು ಚರ್ಚೆಯ ಗ್ರಾಸವಾಗಿದೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.