ETV Bharat / state

ಕಂದಾಯ & ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ 'ಗಿಚ್ಚಿ ಗಿಲಿಗಿಲಿ ಸ್ಟೆಪ್ಸ್'​: ಕೋವಿಡ್ ನಿಯಮ?

author img

By

Published : Jul 2, 2021, 6:28 PM IST

ಸರ್ಕಾರದ ಆದೇಶದಂತೆ, ಸಂಜೆ 7 ಗಂಟೆಯಿಂದ ರಾತ್ರಿ ಕರ್ಫ್ಯೂ ಜಾರಿ ಇದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ಇಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರು.

Covid rule violation by Revenue and Police Department officials
ಅಧಿಕಾರಿಗಳಿಂದ ಗಿಚ್ಚಿ ಗಿಲಿಗಿಲಿ ಸ್ಟೇಪ್ಸ್

ಬಾಗಲಕೋಟೆ: ಕೋವಿಡ್ ನಿಯಮಗಳನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘನೆ ಮಾಡಿರುವ ಘಟನೆ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಕಂದಾಯ ದಿನಾಚರಣೆ ಅಂಗವಾಗಿ ಕಂದಾಯ ಮತ್ತು ಪೊಲೀಸ್ ಇಲಾಖೆ ಮಧ್ಯೆ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳು ಕುಣಿದು ಕುಪ್ಪಳಿಸಿರುವ ವಿಡಿಯೋ ಇಲ್ಲಿದೆ.

ಅಧಿಕಾರಿಗಳಿಂದ ಗಿಚ್ಚಿ ಗಿಲಿಗಿಲಿ ಸ್ಟೆಪ್ಸ್

ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ ಗಳಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಉತ್ತರ ಕರ್ನಾಟಕ ಜಾನಪದ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದರು. ಕಂದಾಯ ಇಲಾಖೆಯ ಪರವಾಗಿ ಮುಧೋಳ ತಹಶೀಲ್ದಾರ್​ ಎಸ್.ಎಸ್.ಇಂಗಳೆ, ಜಮಖಂಡಿಯ ತಹಶೀಲ್ದಾರ್​ ಪ್ರಶಾಂತ ಚಿನ್ನಗೊಂಡ, ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಟ್ಟಿ ನೇತೃತ್ವದಲ್ಲಿ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.

ಪಂದ್ಯಾವಳಿಯಲ್ಲಿ ಮೊದಲು ಸ್ಥಾನ ಪಡೆದ ಪೊಲೀಸ್ ಇಲಾಖೆ ಸಿಬ್ಬಂದಿ ವಿಜಯೋತ್ಸವದ ಆಚರಣೆ ನೆಪದಲ್ಲಿ ಜಾನಪದ ಹಾಡಿಗೆ ಕುಣಿದಿದ್ದಾರೆ. ಸರ್ಕಾರದ ಆದೇಶದ ಪ್ರಕಾರ, ಸಂಜೆ 7 ಗಂಟೆಯಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳೇ ಇಲ್ಲಿ ಮಾಸ್ಕ್‌, ಸಾಮಾಜಿಕ ಅಂತರವನ್ನೆಲ್ಲಾ ಗಾಳಿಗೆ ತೂರಿ ಜವಾಬ್ದಾರಿ ಮರೆತರು.

ಇದನ್ನೂ ಓದಿ : ‘ಮುಂದಿನ ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ’ - ಶಾಸಕರ ಪುತ್ರಿ ಮದುವೆಯಲ್ಲಿ ಕೈ ಕಾರ್ಯಕರ್ತರ ಘೋಷಣೆ

ಬಾಗಲಕೋಟೆ: ಕೋವಿಡ್ ನಿಯಮಗಳನ್ನು ಸರ್ಕಾರಿ ಅಧಿಕಾರಿಗಳೇ ಉಲ್ಲಂಘನೆ ಮಾಡಿರುವ ಘಟನೆ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಕಂದಾಯ ದಿನಾಚರಣೆ ಅಂಗವಾಗಿ ಕಂದಾಯ ಮತ್ತು ಪೊಲೀಸ್ ಇಲಾಖೆ ಮಧ್ಯೆ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗಳು ಕುಣಿದು ಕುಪ್ಪಳಿಸಿರುವ ವಿಡಿಯೋ ಇಲ್ಲಿದೆ.

ಅಧಿಕಾರಿಗಳಿಂದ ಗಿಚ್ಚಿ ಗಿಲಿಗಿಲಿ ಸ್ಟೆಪ್ಸ್

ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ ಗಳಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಉತ್ತರ ಕರ್ನಾಟಕ ಜಾನಪದ ಹಾಡಿಗೆ ಭರ್ಜರಿ ಸ್ಟೆಪ್ಸ್‌ ಹಾಕಿದರು. ಕಂದಾಯ ಇಲಾಖೆಯ ಪರವಾಗಿ ಮುಧೋಳ ತಹಶೀಲ್ದಾರ್​ ಎಸ್.ಎಸ್.ಇಂಗಳೆ, ಜಮಖಂಡಿಯ ತಹಶೀಲ್ದಾರ್​ ಪ್ರಶಾಂತ ಚಿನ್ನಗೊಂಡ, ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಧರ್ಮಟ್ಟಿ ನೇತೃತ್ವದಲ್ಲಿ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿತ್ತು.

ಪಂದ್ಯಾವಳಿಯಲ್ಲಿ ಮೊದಲು ಸ್ಥಾನ ಪಡೆದ ಪೊಲೀಸ್ ಇಲಾಖೆ ಸಿಬ್ಬಂದಿ ವಿಜಯೋತ್ಸವದ ಆಚರಣೆ ನೆಪದಲ್ಲಿ ಜಾನಪದ ಹಾಡಿಗೆ ಕುಣಿದಿದ್ದಾರೆ. ಸರ್ಕಾರದ ಆದೇಶದ ಪ್ರಕಾರ, ಸಂಜೆ 7 ಗಂಟೆಯಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳೇ ಇಲ್ಲಿ ಮಾಸ್ಕ್‌, ಸಾಮಾಜಿಕ ಅಂತರವನ್ನೆಲ್ಲಾ ಗಾಳಿಗೆ ತೂರಿ ಜವಾಬ್ದಾರಿ ಮರೆತರು.

ಇದನ್ನೂ ಓದಿ : ‘ಮುಂದಿನ ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ’ - ಶಾಸಕರ ಪುತ್ರಿ ಮದುವೆಯಲ್ಲಿ ಕೈ ಕಾರ್ಯಕರ್ತರ ಘೋಷಣೆ

For All Latest Updates

TAGGED:

Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.