ETV Bharat / state

ಒಂದೂವರೆ ದಶಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಬ್ಲೇಡ್ ಬಾಬಾ.. ಯಾರಿವ? - ಬ್ಲೇಡ್ ಬಾಬಾ

ಸಿಎಎ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಪ್ರವೇಶ ದ್ವಾರದ ಬಳಿ ಸೋಮವಾರದಿಂದ ಆರಂಭವಾಗಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಬ್ಲೇಡ್ ಬಾಬಾ(ಅಸ್ಲಾಂಬಾಬಾ ಶಹಪುರಕರ) ಕಾಣಿಸಿಕೊಂಡಿದ್ದಾನೆ.

protest against CAA
ಒಂದುವರೆ ದಶಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಬ್ಲೇಡ್ ಬಾಬಾ..!
author img

By

Published : Feb 11, 2020, 4:34 AM IST

Updated : Feb 11, 2020, 4:56 AM IST

ಬಾಗಲಕೋಟೆ: ಜಿಲ್ಲಾಡಳಿತ ಭವನದ ಎದುರು ಮುಸ್ಲಿಂ ಹಾಗೂ ದಲಿತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಂದೂವರೆ ದಶಕದ ಬಳಿಕ ಸಾರ್ವಜನಿಕವಾಗಿ ಬ್ಲೇಡ್ ಬಾಬಾ(ಅಸ್ಲಾಂಬಾಬಾ ಶಹಪುರಕರ) ಕಾಣಿಸಿಕೊಂಡಿದ್ದಾನೆ. ಸಿಎಎ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಪ್ರವೇಶ ದ್ವಾರದ ಬಳಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಪ್ರಾರಂಭಿಸಿಲಾಗಿದೆ. ಈ ಪ್ರತಿಭಟನಾ ಸ್ಥಳದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷನಾಗಿದ್ದಾನೆ.

ಯಾರೀತ? :

ಸುಮಾರು ಹದಿನೈದು ವರ್ಷಗಳ ಹಿಂದೆ ವೈದ್ಯಲೋಕಕ್ಕೆ ಸೆಡ್ಡು ಹೊಡೆದು, ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂದು ಖ್ಯಾತಿ ಪಡೆದುಕೊಂಡಿದ್ದ. ಈ ಬಗ್ಗೆ ಬಾಗಲಕೋಟೆಯಲ್ಲಿ ದೊಡ್ಡಮಟ್ಟದ ಹೋರಾಟ ನಡೆದಿತ್ತು.

ಒಂದುವರೆ ದಶಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಬ್ಲೇಡ್ ಬಾಬಾ..!

2004 ರಲ್ಲಿ ವೈದ್ಯಕೀಯ ವಿಭಾಗ ಹಾಗೂ ವಿವಿಧ ಸಂಘಟನೆಗಳಿಂದ ಬಹಿರಂಗ ಸವಾಲು ಹಾಕಿದ ಹಿನ್ನೆಲೆ ಸವಾಲ್​ಗೆ ಬೆದರಿ ಕಣ್ಮರೆ ಆಗಿದ್ದ ಬ್ಲೇಡ್ ಬಾಬಾ ಈಗ ಪ್ರತ್ಯಕ್ಷ ಆಗಿದ್ದಾನೆ. ಇನ್ನು ಹಳೇ ಎಪಿಎಂಸಿಯಲ್ಲಿ ಬಾಬಾನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅಸ್ಲಂನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ದೆಹಲಿ, ಮುಂಬೈ, ಬೆಂಗಳೂರಲ್ಲಿ ಹಾಗೂ ಸೊಲ್ಲಾಪುರದಲ್ಲಿ ಇದ್ದಾನೆ ಅಂತ ಹೇಳಲಾಗುತ್ತಿತ್ತು. ಆಗಾಗ ಬಾಗಲಕೋಟೆಗೆ ಕದ್ದು ಮುಚ್ಚಿ ಬಂದು ಹೋಗ್ತಾನೆ ಅಂತ ಗುಮಾನಿ ಇತ್ತು. ಇದೆಲ್ಲಕ್ಕೂ ಇಂಬು ನೀಡುವಂತೆ ಈಗ ಕೆಲ ತಿಂಗಳಿಂದ ಬಾಗಲಕೋಟೆಯಲ್ಲೆ ಇದ್ದಾನೆ. ಸೋಮವಾರ ದಿಢೀರನೆ ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಇಳಿದಿದ್ದಾನೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾನೆ.

ಕಾನೂನು ಬಾಹಿರವಾಗಿ ನಾನು ಚಟುವಟಿಕೆ ಮಾಡಿದ್ರೆ ಕ್ರಮ ಜರುಗಿಸಲಿ. ಸದ್ಯ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಬಾಗಲಕೋಟೆಯಲ್ಲಿ ಇದ್ದೇನೆ, ನನ್ನ ಮಕ್ಕಳು ಉದ್ಯೋಗದಲ್ಲಿ ತೊಡಗಿದ್ದಾರೆ. ನಾನು ಆರಾಮವಾಗಿ ಮನೆಯಲ್ಲಿ ಇರುತ್ತೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾನೆ.

ಬಾಗಲಕೋಟೆ: ಜಿಲ್ಲಾಡಳಿತ ಭವನದ ಎದುರು ಮುಸ್ಲಿಂ ಹಾಗೂ ದಲಿತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಒಂದೂವರೆ ದಶಕದ ಬಳಿಕ ಸಾರ್ವಜನಿಕವಾಗಿ ಬ್ಲೇಡ್ ಬಾಬಾ(ಅಸ್ಲಾಂಬಾಬಾ ಶಹಪುರಕರ) ಕಾಣಿಸಿಕೊಂಡಿದ್ದಾನೆ. ಸಿಎಎ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಪ್ರವೇಶ ದ್ವಾರದ ಬಳಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಹೋರಾಟ ಪ್ರಾರಂಭಿಸಿಲಾಗಿದೆ. ಈ ಪ್ರತಿಭಟನಾ ಸ್ಥಳದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷನಾಗಿದ್ದಾನೆ.

ಯಾರೀತ? :

ಸುಮಾರು ಹದಿನೈದು ವರ್ಷಗಳ ಹಿಂದೆ ವೈದ್ಯಲೋಕಕ್ಕೆ ಸೆಡ್ಡು ಹೊಡೆದು, ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂದು ಖ್ಯಾತಿ ಪಡೆದುಕೊಂಡಿದ್ದ. ಈ ಬಗ್ಗೆ ಬಾಗಲಕೋಟೆಯಲ್ಲಿ ದೊಡ್ಡಮಟ್ಟದ ಹೋರಾಟ ನಡೆದಿತ್ತು.

ಒಂದುವರೆ ದಶಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಬ್ಲೇಡ್ ಬಾಬಾ..!

2004 ರಲ್ಲಿ ವೈದ್ಯಕೀಯ ವಿಭಾಗ ಹಾಗೂ ವಿವಿಧ ಸಂಘಟನೆಗಳಿಂದ ಬಹಿರಂಗ ಸವಾಲು ಹಾಕಿದ ಹಿನ್ನೆಲೆ ಸವಾಲ್​ಗೆ ಬೆದರಿ ಕಣ್ಮರೆ ಆಗಿದ್ದ ಬ್ಲೇಡ್ ಬಾಬಾ ಈಗ ಪ್ರತ್ಯಕ್ಷ ಆಗಿದ್ದಾನೆ. ಇನ್ನು ಹಳೇ ಎಪಿಎಂಸಿಯಲ್ಲಿ ಬಾಬಾನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅಸ್ಲಂನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ದೆಹಲಿ, ಮುಂಬೈ, ಬೆಂಗಳೂರಲ್ಲಿ ಹಾಗೂ ಸೊಲ್ಲಾಪುರದಲ್ಲಿ ಇದ್ದಾನೆ ಅಂತ ಹೇಳಲಾಗುತ್ತಿತ್ತು. ಆಗಾಗ ಬಾಗಲಕೋಟೆಗೆ ಕದ್ದು ಮುಚ್ಚಿ ಬಂದು ಹೋಗ್ತಾನೆ ಅಂತ ಗುಮಾನಿ ಇತ್ತು. ಇದೆಲ್ಲಕ್ಕೂ ಇಂಬು ನೀಡುವಂತೆ ಈಗ ಕೆಲ ತಿಂಗಳಿಂದ ಬಾಗಲಕೋಟೆಯಲ್ಲೆ ಇದ್ದಾನೆ. ಸೋಮವಾರ ದಿಢೀರನೆ ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಇಳಿದಿದ್ದಾನೆ. ಪೌರತ್ವ ಕಾಯ್ದೆ ವಿರೋಧಿಸಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾನೆ.

ಕಾನೂನು ಬಾಹಿರವಾಗಿ ನಾನು ಚಟುವಟಿಕೆ ಮಾಡಿದ್ರೆ ಕ್ರಮ ಜರುಗಿಸಲಿ. ಸದ್ಯ ನಾನು ಯಾವುದೇ ಕೆಲಸ ಮಾಡುತ್ತಿಲ್ಲ. ಬಾಗಲಕೋಟೆಯಲ್ಲಿ ಇದ್ದೇನೆ, ನನ್ನ ಮಕ್ಕಳು ಉದ್ಯೋಗದಲ್ಲಿ ತೊಡಗಿದ್ದಾರೆ. ನಾನು ಆರಾಮವಾಗಿ ಮನೆಯಲ್ಲಿ ಇರುತ್ತೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾನೆ.

Intro:AnchorBody:ಬಾಗಲಕೋಟೆ--ಜಿಲ್ಲಾಡಳಿತ ಭವನ ಎದುರು ಮುಸ್ಲಿಂ ಹಾಗೂ ದಲಿತ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಿಎಎ ವಿರೋಧಿ ಹೋರಾಟದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷವಾಗಿದ್ದು,ಸಾರ್ವಜನಿಕ ವಲಯ ದಲ್ಲಿ ಚರ್ಚೆ ಗೆ ಗ್ರಾಸವಾಗಿದೆ.
ಒಂದುವರೆ ದಶಕದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡು ಬ್ಲೇಡ್ ಬಾಬಾ(ಅಸ್ಲಾಂಬಾಬಾ ಶಹಪುರಕರ).ಸಿಎಎ ವಿರೋಧಿಸಿ
ಬಾಗಲಕೋಟೆ ಜಿಲ್ಲಾಡಳಿತ ಪ್ರವೇಶ ದ್ವಾರದ ಬಳಿ ಇಂದಿನಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಹೋರಾಟ ಪ್ರಾರಂಭಿಸಿಲಾಗಿದೆ.ಈ ಪ್ರತಿಭಟನಾ ಸ್ಥಳದಲ್ಲಿ ಬ್ಲೇಡ್ ಬಾಬಾ ಪ್ರತ್ಯಕ್ಷನಾಗಿದ್ದಾನೆ.
ವೈದ್ಯಲೋಕಕ್ಕೆ ಸೆಡ್ಡು ಹೊಡೆದು ಬ್ಲೇಡ್ ನಿಂದ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂದು ಸುಮಾರು ಹದಿನೈದು ವರ್ಷಗಳ ಹಿಂದೆ ಖ್ಯಾತಿ ಪಡೆದುಕೊಂಡಿದ್ದ ಈ ಬಗ್ಗೆ ಬಾಗಲಕೋಟೆಯಲ್ಲಿ ದೊಡ್ಡಮಟ್ಟದ ಹೋರಾಟ ನಡೆದಿತ್ತು.ಮುಗ್ದಜನರನ್ನು ವಂಚಿಸುತ್ತಿದ್ದಾನೆ ಎನ್ನುವ ಆರೋಪ ಇತ್ತು.
2004ರಲ್ಲಿ ವೈದ್ಯಕೀಯರಂಗ ಹಾಗೂ ವಿವಿಧ ಸಂಘಟನೆಗಳಿಂದ ಬಹಿರಂಗ ಸವಾಲು ಹಾಕಿದ್ದ ಸಮಯದಲ್ಲಿ ಸವಾಲ್ ಗೆ ಬೆದರಿ ಕಣ್ಮರೆ ಆಗಿದ್ದ ಬ್ಲೇಡ್ ಬಾಬಾ.ಈ ಘಟನೆಯಿಂದ ಹಳೇ ಎಪಿಎಂಸಿ ಯಲ್ಲಿಬಾಬಾನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.
ಅಸ್ಲಂ ನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ದೆಹಲಿ, ಮುಂಬೈ, ಬೆಂಗಳೂರಲ್ಲಿ, ಸೊಲ್ಲಾಪುರದಲ್ಲಿ ಇದ್ದಾನೆ ಅಂತ ಹೇಳುತ್ತಿದ್ದಾನೆ.
ಆಗಾಗ ಬಾಗಲಕೋಟೆಗೆ ಕದ್ದುಮುಚ್ಚಿ ಬಂದು ಹೋಗ್ತಾನೆ ಅಂತ ಗುಮಾಣಿ ಇತ್ತು.
ಈಗ್ಗೆ ಕೆಲ ತಿಂಗಳಿಂದ ಬಾಗಲಕೋಟೆಯಲ್ಲೆ ಇದ್ದಾನೆ.ಇಂದು ದಿಢೀರನೆ ಪೌರತ್ವ ಕಾಯ್ದೆ ವಿರೋಧಿ ಹೋರಾಟಕ್ಕೆ ಇಳಿದಿದ್ದಾನೆ.ಪೌರತ್ವ ಕಾಯ್ದೆ ವಿರೋಧಿಸಿ ಮಾಧ್ಯಮಗಳ ಎದುರು ಹೇಳಿಕೆ ನೀಡಿ, ಪೌರತ್ವ ಕಾಯ್ದೆಯಿಂದ
ಪಾಕ್, ಬಾಂಗ್ಲಾ ಮತ್ತಿತರ ಕಡೆಯಿಂದ ಭಯೋತ್ಪಾದಕರ ಬಿಡಲ್ಲ ಅಂತ ಏನು ಗ್ಯಾರಂಟಿ ಎನ್ನುವ ಪ್ರಶ್ನೆ ಮಾಡಿದ ಅಸ್ಲಂ,
ತನ್ನ ಆಸ್ತಿ ಮುಟ್ಟುಗೋಲು ವಿಚಾರ ನ್ಯಾಯಾಲಯದಲ್ಲಿದೆ.
ಕಾನೂನು ಬಾಹಿರವಾಗಿ ತಾನು ಚಟುವಟಿಕೆ ಮಾಡಿದ್ರೆ ಕ್ರಮ ಜರುಗಿಸಲಿ.ಸದ್ಯ ನಾನು ಯಾವುದೆ ಕೆಲಸ ಮಾಡುತ್ತಿಲ್ಲ.ಬಾಗಲಕೋಟೆ ಯಲ್ಲಿ ಇದ್ದು,ನನ್ನ ಮಕ್ಕಳು ಉದ್ಯೋಗ ದಲ್ಲಿ ತೊಡಗಿದ್ದಾರೆ.ನಾನು ಆರಾಮವಾಗಿ ಮನೆಯಲ್ಲಿ ಇರುತ್ತೇನೆ ಎಂದು ತಿಳಿಸಿದ್ದಾನೆ. ಸಿಎಎ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾದ ಅಸ್ಲಂ ಪ್ರಕರಣ..

ಬೈಟ್--ಅಸ್ಲಂ ಶಹಾಪೂರಕರ್Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Feb 11, 2020, 4:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.