ETV Bharat / sports

ಪದಕ ಗೆದ್ದ ತಂಡದ ಭಾಗವಾಗಿದ್ದು ನನ್ನ ಅದೃಷ್ಟ: ಭಾರತ ಹಾಕಿ ಕೋಚ್​ ಗ್ರಹಾಂ ರೀಡ್​

author img

By

Published : Aug 5, 2021, 4:08 PM IST

1992ರ ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಗ್ರಹಾಂ 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಯುವಕರಲ್ಲಿ ಗೆಲುವಿನ ಗೀಳನ್ನು ತುಂಬಿದ್ದ ಅವರು ಇಂದು ಒಲಿಂಪಿಕ್ಸ್‌ನಂತಹ ದೊಡ್ಡ ಹಂತದಲ್ಲಿ ಪದಕ ಪಡೆಯಲು ನೆರವಾಗಿದ್ದಾರೆ.

ಹಾಕಿಯಲ್ಲಿ ಪದಕ ಗೆದ್ದ ಭಾರತ
ಹಾಕಿಯಲ್ಲಿ ಪದಕ ಗೆದ್ದ ಭಾರತ

ಟೋಕಿಯೋ: ಭಾರತ ಹಾಕಿ ತಂಡ ಗುರುವಾರ ಜರ್ಮನಿಯನ್ನು 5-4 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ 41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕ ಸಾಧನೆ ಮಾಡಿದ್ದು, ಈ ಸಂಭ್ರಮದ ಭಾಗವಾಗುತ್ತಿರುವುದು ನನಗೆ ಸಿಕ್ಕ ಅದೃಷ್ಟ ಎಂದು ಟೀಮ್ ಇಂಡಿಯಾ ಕೋಚ್ ಆಗಿರುವ ಆಸ್ಟ್ರೇಲಿಯಾದ ಗ್ರಹಾಂ ರೀಡ್​ ಸಂತಸ ವ್ಯಕ್ತಪಡಿಸಿದ್ದಾರೆ.

1992ರ ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಗ್ರಹಾಂ 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಮಗೊಂಡಿದ್ದರು. ಯುವಕರಲ್ಲಿ ಗೆಲುವಿನ ಗೀಳನ್ನು ತುಂಬಿದ್ದ ಅವರು ಇಂದು ಒಲಿಂಪಿಕ್ಸ್‌ನಂತಹ ದೊಡ್ಡ ಹಂತದಲ್ಲಿ ಪದಕ ಪಡೆಯಲು ನೆರವಾಗಿದ್ದಾರೆ.

" ಇದೊಂದು ಅದ್ಭುತ ಭಾವನೆ, ಇಡೀ ತಂಡ ಮಾಡಿದ ಸಾಕಷ್ಟು ತ್ಯಾಗಗಳ ಪ್ರತಿಫಲವಾಗಿ ಇದು ಸಂದಿದೆ. ಇಂದು ಆಟಗಾರರು ಎಲ್ಲಿಗೆ ತಲುಪಿದ್ದಾರೋ ಅದರ ಹಿಂದೆ ಅವರೆಲ್ಲರ ತ್ಯಾಗವಿದೆ" ಎಂದು ರೀಡ್ ಆಟಗಾರರು ಮತ್ತು ಸಿಬ್ಬಂದಿ ಹಲವು ತಿಂಗಳುಗಳಿಂದ ತಮ್ಮ ಕುಟುಂಬದಿಂದ ದೂರ ಉಳಿದು ಒಲಿಂಪಿಕ್ಸ್​ಗಾಗಿ ಪಟ್ಟ ಶ್ರಮವನ್ನು ಉಲ್ಲೇಖಿಸಿ ಮತ್ತು ಕೋವಿಡ್ -19 ವಿರುದ್ಧ ಹೋರಾಡಿದ್ದನ್ನು ಸ್ಮರಿಸಿ ಹೇಳಿದರು.

ಇಡೀ ದೇಶವನ್ನು ಹೊರತುಪಡಿಸಿ ಈ ಗುಂಪು ಕೂಡ ಪದಕಕ್ಕಾಗಿ ತುಂಬಾ ದೀರ್ಘ ಸಮಯದಿಂದ ಕಾಯತ್ತಿತ್ತು. ಭಾರತದಲ್ಲಿ ಹಾಕಿ ಎಂದರೆ ಯಾವ ಭಾವನೆಯಿದೆ ಎಂದು ನನಗೆ ತಿಳಿದಿದೆ. ದೀರ್ಘಕಾಲದ ಅವರ ಕನಸು ನನಸಾದ ಈ ಸಂಭ್ರಮದ ಕ್ಷಣದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಜರ್ಮನಿಯ ವಿರುದ್ಧ 5-4ರಲ್ಲಿ ಗೆದ್ದ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗ್ರಹಾಂ ಹೇಳಿದರು.

ಭಾರತ ಒಂದು ಹಂತದಲ್ಲಿ 1-3ರಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ, ಗ್ರಹಾಂ ಭಾರತೀಯ ಆಟಗಾರರಿಗೆ ಗೆಲ್ಲಬೇಕೆಂಬ ಉದ್ದೇಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಹುರಿದುಂಬಿಸಿದರು. ನೀವು ಮುಂದಿನ ಹಂತಕ್ಕೆ ಹೋಗಬೇಕಾದರೆ ಉತ್ತಮವಾಗಿ ಆಡಬೇಕೆಂದು ಹೇಳಿದ್ದನ್ನು ಗ್ರಹಾಂ ನೆನಪಿಸಿಕೊಂಡರು.

ಇದನ್ನೂ ಓದಿ:ದೇಶಕ್ಕಾಗಿ ಹಗಲಿರುಳು ದುಡಿದ ಕೊರೊನಾ ವಾರಿಯರ್ಸ್​ಗೆ ಈ ಪದಕ ಅರ್ಪಣೆ: ನಾಯಕ ಮನ್​ಪ್ರೀತ್​ ಸಿಂಗ್

ಟೋಕಿಯೋ: ಭಾರತ ಹಾಕಿ ತಂಡ ಗುರುವಾರ ಜರ್ಮನಿಯನ್ನು 5-4 ಗೋಲುಗಳ ಅಂತರದಲ್ಲಿ ಮಣಿಸುವ ಮೂಲಕ 41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಪದಕ ಸಾಧನೆ ಮಾಡಿದ್ದು, ಈ ಸಂಭ್ರಮದ ಭಾಗವಾಗುತ್ತಿರುವುದು ನನಗೆ ಸಿಕ್ಕ ಅದೃಷ್ಟ ಎಂದು ಟೀಮ್ ಇಂಡಿಯಾ ಕೋಚ್ ಆಗಿರುವ ಆಸ್ಟ್ರೇಲಿಯಾದ ಗ್ರಹಾಂ ರೀಡ್​ ಸಂತಸ ವ್ಯಕ್ತಪಡಿಸಿದ್ದಾರೆ.

1992ರ ಬಾರ್ಸಿಲೋನಾ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಗ್ರಹಾಂ 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಮಗೊಂಡಿದ್ದರು. ಯುವಕರಲ್ಲಿ ಗೆಲುವಿನ ಗೀಳನ್ನು ತುಂಬಿದ್ದ ಅವರು ಇಂದು ಒಲಿಂಪಿಕ್ಸ್‌ನಂತಹ ದೊಡ್ಡ ಹಂತದಲ್ಲಿ ಪದಕ ಪಡೆಯಲು ನೆರವಾಗಿದ್ದಾರೆ.

" ಇದೊಂದು ಅದ್ಭುತ ಭಾವನೆ, ಇಡೀ ತಂಡ ಮಾಡಿದ ಸಾಕಷ್ಟು ತ್ಯಾಗಗಳ ಪ್ರತಿಫಲವಾಗಿ ಇದು ಸಂದಿದೆ. ಇಂದು ಆಟಗಾರರು ಎಲ್ಲಿಗೆ ತಲುಪಿದ್ದಾರೋ ಅದರ ಹಿಂದೆ ಅವರೆಲ್ಲರ ತ್ಯಾಗವಿದೆ" ಎಂದು ರೀಡ್ ಆಟಗಾರರು ಮತ್ತು ಸಿಬ್ಬಂದಿ ಹಲವು ತಿಂಗಳುಗಳಿಂದ ತಮ್ಮ ಕುಟುಂಬದಿಂದ ದೂರ ಉಳಿದು ಒಲಿಂಪಿಕ್ಸ್​ಗಾಗಿ ಪಟ್ಟ ಶ್ರಮವನ್ನು ಉಲ್ಲೇಖಿಸಿ ಮತ್ತು ಕೋವಿಡ್ -19 ವಿರುದ್ಧ ಹೋರಾಡಿದ್ದನ್ನು ಸ್ಮರಿಸಿ ಹೇಳಿದರು.

ಇಡೀ ದೇಶವನ್ನು ಹೊರತುಪಡಿಸಿ ಈ ಗುಂಪು ಕೂಡ ಪದಕಕ್ಕಾಗಿ ತುಂಬಾ ದೀರ್ಘ ಸಮಯದಿಂದ ಕಾಯತ್ತಿತ್ತು. ಭಾರತದಲ್ಲಿ ಹಾಕಿ ಎಂದರೆ ಯಾವ ಭಾವನೆಯಿದೆ ಎಂದು ನನಗೆ ತಿಳಿದಿದೆ. ದೀರ್ಘಕಾಲದ ಅವರ ಕನಸು ನನಸಾದ ಈ ಸಂಭ್ರಮದ ಕ್ಷಣದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಜರ್ಮನಿಯ ವಿರುದ್ಧ 5-4ರಲ್ಲಿ ಗೆದ್ದ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಗ್ರಹಾಂ ಹೇಳಿದರು.

ಭಾರತ ಒಂದು ಹಂತದಲ್ಲಿ 1-3ರಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ, ಗ್ರಹಾಂ ಭಾರತೀಯ ಆಟಗಾರರಿಗೆ ಗೆಲ್ಲಬೇಕೆಂಬ ಉದ್ದೇಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಹುರಿದುಂಬಿಸಿದರು. ನೀವು ಮುಂದಿನ ಹಂತಕ್ಕೆ ಹೋಗಬೇಕಾದರೆ ಉತ್ತಮವಾಗಿ ಆಡಬೇಕೆಂದು ಹೇಳಿದ್ದನ್ನು ಗ್ರಹಾಂ ನೆನಪಿಸಿಕೊಂಡರು.

ಇದನ್ನೂ ಓದಿ:ದೇಶಕ್ಕಾಗಿ ಹಗಲಿರುಳು ದುಡಿದ ಕೊರೊನಾ ವಾರಿಯರ್ಸ್​ಗೆ ಈ ಪದಕ ಅರ್ಪಣೆ: ನಾಯಕ ಮನ್​ಪ್ರೀತ್​ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.