ಆಲೆಪ್ಪಿ: ಕೇರಳದ ಆಲೆಪ್ಪಿ ಜಿಲ್ಲೆಯಲ್ಲಿ ಪ್ರಸಿದ್ಧ 67ನೇ ನೆಹರೂ ಟ್ರೋಫಿ ದೋಣಿ ಸ್ಪರ್ಧೆಯಲ್ಲಿ ಪಲ್ಲಥುರುತಿ ಬೋಟ್ ಕ್ಲಬ್ನ ಹಾವಿನ ದೋಣಿ 'ನಾಡುಭಾಗಂ ಚುಂಡನ್' ಜಯ ಗಳಿಸಿದೆ.
ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನ ಟ್ರೋಫಿ ಬೋಟ್ ರೇಸ್ಅನ್ನು ಪ್ರತಿ ವರ್ಷ ಆಲೆಪ್ಪಿಯ ಪುನ್ನಮಾಡ ಸರೋವರದಲ್ಲಿ ನಡೆಸಲಾಗುತ್ತದೆ. ಇದು ಕೇರಳದ ಪ್ರವಾಸೋದ್ಯಮದ ಮುಖ್ಯ ಕ್ರೀಡಾಕೂಟವಾಗಿದೆ.
ಕೆರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಬೋಟ್ ರೇಸ್ಗೆ ಹಸಿರು ನಿಶಾನೆ ತೋರಿಸಿದ್ರು. ಕ್ರೀಡಾಕೂಟದ ಉದ್ಘಾಟನೆಗೂ ಮೊದಲು ಚಿಕ್ಕ ಬೋಟ್ಗಳ ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
67ನೇ ಬೋಟ್ ರೇಸ್ನಲ್ಲಿ ಸುಮಾರು 79 ಬೋಟ್ಗಳು ಪಾಲ್ಗೊಳ್ಳಲಿದ್ದು, ಚುಂಡನ್ ವಲ್ಲಂ (ಹಾವಿನ ದೋಣಿ ಸ್ಪರ್ಧೆ), ಚುರುಲನ್ ವಲ್ಲಂ, ಇರುಟ್ಟುಕುತಿ ವಲ್ಲಂ, ಒಡಿ ವಲ್ಲಂ, ವೆಪ್ಪು ವಲ್ಲಂ, ವಡಕ್ಕನೋಡಿ ವಲ್ಲಂ ಮತ್ತು ಕೊಚು ವಲ್ಲಂ ಎಂಬ ದೋಣಿ ಸ್ಪರ್ಧೆಗಳನ್ನ ನಡೆಸಲಾಯಿತು.