ತಿರುವನಂತಪುರಂ (ಕೇರಳ): ವಿಶ್ವಕಪ್ಗೂ ಮುನ್ನ ಆಯೋಜಿಸಲಾಗಿದ್ದ ಭಾರತ ಎರಡೂ ಅಭ್ಯಾಸ ಪಂದ್ಯಕ್ಕೆ ಮುಂಗಾರು ಮಳೆ ಕಾಡಿದ್ದು ಫಲಿತಾಂಶ ರಹಿತ ಮ್ಯಾಚ್ಗಳಾಗಿವೆ. ಮೊದಲ ಅಭ್ಯಾಸ ಪಂದ್ಯವನ್ನು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಸ್ಸೋಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್ ನಂತರ ಸುರಿದ ಮಳೆ ಒಂದು ಬಾಲ್ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.
ಭಾರತ ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೂರು ಪಂದ್ಯವೇ ಅಭ್ಯಾಸ ಪಂದ್ಯವಾಗಿದೆ. ಆದರೆ ಅದರಲ್ಲಿ ಸಂಪೂರ್ಣ ವಿಶ್ವಕಪ್ ತಂಡ ಭಾಗವಹಿಸಿರಲಿಲ್ಲ. ಮೊದಲೆಡು ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿತ್ತು. ಮೂರನೇ ಪಂದ್ಯದಲ್ಲಿ ಈ ನಾಲ್ವರು ತಂಡ ಸೇರಿದ್ದರು. ಆದರೆ, ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ವಿಶ್ವಕಪ್ ತಂಡದ ಆಟಗಾರರಿಗೆ ಮೂರನೇ ಪಂದ್ಯಕ್ಕೆ ರೆಸ್ಟ್ ಕೊಡಲಾಗಿತ್ತು.
-
UPDATE: The warm-up match between India & Netherlands is abandoned due to persistent rain. #TeamIndia | #CWC23 https://t.co/rbLo0WHrVJ pic.twitter.com/0y4Ey1Dvye
— BCCI (@BCCI) October 3, 2023 " class="align-text-top noRightClick twitterSection" data="
">UPDATE: The warm-up match between India & Netherlands is abandoned due to persistent rain. #TeamIndia | #CWC23 https://t.co/rbLo0WHrVJ pic.twitter.com/0y4Ey1Dvye
— BCCI (@BCCI) October 3, 2023UPDATE: The warm-up match between India & Netherlands is abandoned due to persistent rain. #TeamIndia | #CWC23 https://t.co/rbLo0WHrVJ pic.twitter.com/0y4Ey1Dvye
— BCCI (@BCCI) October 3, 2023