ETV Bharat / sports

ಭಾರತಕ್ಕೆ ವಿಶ್ವಕಪ್​ ಸಿದ್ಧತೆಗೆ ಅಡ್ಡಿ ಪಡಿಸಿದ ವರುಣ.. ಎರಡೂ ಅಭ್ಯಾಸ ಪಂದ್ಯಗಳು ಫಲಿತಾಂಶ ರಹಿತ

author img

By ETV Bharat Karnataka Team

Published : Oct 3, 2023, 5:48 PM IST

ವಿಶ್ವಕಪ್​ನ ಭಾರತದ ಎರಡು ಅಭ್ಯಾಸ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಫಲಿತಾಂಶ ರಹಿತವಾಗಿ ಅಂತ್ಯವಾಗಿದೆ.

world cup 2023 warm up match india vs netherlands
world cup 2023 warm up match india vs netherlands

ತಿರುವನಂತಪುರಂ (ಕೇರಳ): ವಿಶ್ವಕಪ್​ಗೂ ಮುನ್ನ ಆಯೋಜಿಸಲಾಗಿದ್ದ ಭಾರತ ಎರಡೂ ಅಭ್ಯಾಸ ಪಂದ್ಯಕ್ಕೆ ಮುಂಗಾರು ಮಳೆ ಕಾಡಿದ್ದು ಫಲಿತಾಂಶ ರಹಿತ ಮ್ಯಾಚ್​ಗಳಾಗಿವೆ. ಮೊದಲ ಅಭ್ಯಾಸ ಪಂದ್ಯವನ್ನು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಅಸ್ಸೋಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್​ ನಂತರ ಸುರಿದ ಮಳೆ ಒಂದು ಬಾಲ್​ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್​ಲ್ಯಾಂಡ್ಸ್​ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.

ಭಾರತ ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೂರು ಪಂದ್ಯವೇ ಅಭ್ಯಾಸ ಪಂದ್ಯವಾಗಿದೆ. ಆದರೆ ಅದರಲ್ಲಿ ಸಂಪೂರ್ಣ ವಿಶ್ವಕಪ್​ ತಂಡ ಭಾಗವಹಿಸಿರಲಿಲ್ಲ. ಮೊದಲೆಡು ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಮತ್ತು ಕುಲ್ದೀಪ್​ ಯಾದವ್​ಗೆ ವಿಶ್ರಾಂತಿ ನೀಡಲಾಗಿತ್ತು. ಮೂರನೇ ಪಂದ್ಯದಲ್ಲಿ ಈ ನಾಲ್ವರು ತಂಡ ಸೇರಿದ್ದರು. ಆದರೆ, ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ವಿಶ್ವಕಪ್​ ತಂಡದ ಆಟಗಾರರಿಗೆ ಮೂರನೇ ಪಂದ್ಯಕ್ಕೆ ರೆಸ್ಟ್​ ಕೊಡಲಾಗಿತ್ತು.

ತಿರುವನಂತರಪುರ ಮೈದಾನದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಪಂದ್ಯಗಳಿಗು ಮಳೆ ಅಡ್ಡಿ ಉಂಟುಮಾಡಿದೆ. ಸಪ್ಟೆಂಬರ್​ 29 ರಂದು ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಸೆ.30 ಆಸ್ಟ್ರೇಲಿಯಾ vs ನೆದರ್​ಲ್ಯಾಂಡ್ಸ್​ ಮತ್ತು ಅಕ್ಟೋಬರ್​ 3 ರಂದು ಭಾರತ vs ನೆದರ್​ಲ್ಯಾಂಡ್ಸ್​ ಪಂದ್ಯ ಸಂಪೂರ್ಣ ಫಲಿತಾಂಶ ರಹಿತವಾದರೆ, ನಿನ್ನೆ (ಅಕ್ಟೋಬರ್​ 2) ನ್ಯೂಜಿಲೆಂಡ್​ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆ ಬಂದರೂ ಡಿಎಲ್​ಎಸ್​ ನಿಯಮದನ್ವಯ ಪಂದ್ಯವನ್ನು ನಡೆಸಲಾಯಿತು.

ಇಂದು ಅಭ್ಯಾಸ ಪಂದ್ಯದ ಕೊನೆಯ ದಿನವಾಗಿದೆ. ಅಕ್ಟೋಬರ್​ 5 ರಂದು ವಿಶ್ವಕಪ್​ನ ಉದ್ಘಾನೆ ಆಗಲಿದೆ. ಅಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​ ಸೆಣಸಲಿದೆ. ಈ ಮ್ಯಾಚ್​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೈದಾನ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಆಡಿರುವುದೇ ಭಾರತ ತಂಡಕ್ಕೆ ಬಲವಾಗಿದೆ. ಅಲ್ಲದೇ ಏಷ್ಯಾಕಪ್​ನ್ನು 5 ವರ್ಷಗಳ ನಂತರ ಟೀಮ್​ ಇಂಡಿಯಾ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡು, ವಿಶ್ವಕಪ್​ಗೂ ಮುನ್ನ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ವಿಶ್ವಕಪ್​ ತಂಡದಲ್ಲಿ ಒಂದು ಹುಮ್ಮಸ್ಸಿದ್ದು, ಸತತ ಗೆಲುವು ಕಂಡಿರುವ ಟೀಮ್​ ಇಂಡಿಯಾ ಅಕ್ಟೋಬರ್​ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ವಿಶ್ವಕಪ್​ ಪಂದ್ಯಗಳ ಖಾತೆಯನ್ನು ತೆರೆಯಲಿದೆ.

ವಿಶ್ವಕಪ್​ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

ಇದನ್ನೂ ಓದಿ: ಕಮಿನ್ಸ್​ ಪಡೆಗೆ ಒಲಿಯುವುದೇ 6ನೇ ವಿಶ್ವಕಪ್‌? ಭಾರತದಲ್ಲಿ ಆಸ್ಟ್ರೇಲಿಯಾಗೆ ಎದುರಾಗುವ ಸವಾಲುಗಳೇನು?

ತಿರುವನಂತಪುರಂ (ಕೇರಳ): ವಿಶ್ವಕಪ್​ಗೂ ಮುನ್ನ ಆಯೋಜಿಸಲಾಗಿದ್ದ ಭಾರತ ಎರಡೂ ಅಭ್ಯಾಸ ಪಂದ್ಯಕ್ಕೆ ಮುಂಗಾರು ಮಳೆ ಕಾಡಿದ್ದು ಫಲಿತಾಂಶ ರಹಿತ ಮ್ಯಾಚ್​ಗಳಾಗಿವೆ. ಮೊದಲ ಅಭ್ಯಾಸ ಪಂದ್ಯವನ್ನು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಅಸ್ಸೋಂನ ಗುವಾಹಟಿ ಮೈದಾನದಲ್ಲಿ ನಡೆಸಲಾಗಿತ್ತು. ಈ ಪಂದ್ಯಕ್ಕೆ ಟಾಸ್​ ನಂತರ ಸುರಿದ ಮಳೆ ಒಂದು ಬಾಲ್​ ಆಡಲು ಬಿಡಲಿಲ್ಲ. ಇಂದು ಕೇರಳದ ತಿರುವನಂತಪುರಂನಲ್ಲಿ ನೆದರ್​ಲ್ಯಾಂಡ್ಸ್​ ವಿರುದ್ಧ ಇದ್ದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದೆ.

ಭಾರತ ಆಸ್ಟ್ರೇಲಿಯಾದ ವಿರುದ್ಧ ಆಡಿದ ಮೂರು ಪಂದ್ಯವೇ ಅಭ್ಯಾಸ ಪಂದ್ಯವಾಗಿದೆ. ಆದರೆ ಅದರಲ್ಲಿ ಸಂಪೂರ್ಣ ವಿಶ್ವಕಪ್​ ತಂಡ ಭಾಗವಹಿಸಿರಲಿಲ್ಲ. ಮೊದಲೆಡು ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಹಾರ್ದಿಕ್​ ಪಾಂಡ್ಯ ಮತ್ತು ಕುಲ್ದೀಪ್​ ಯಾದವ್​ಗೆ ವಿಶ್ರಾಂತಿ ನೀಡಲಾಗಿತ್ತು. ಮೂರನೇ ಪಂದ್ಯದಲ್ಲಿ ಈ ನಾಲ್ವರು ತಂಡ ಸೇರಿದ್ದರು. ಆದರೆ, ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ ವಿಶ್ವಕಪ್​ ತಂಡದ ಆಟಗಾರರಿಗೆ ಮೂರನೇ ಪಂದ್ಯಕ್ಕೆ ರೆಸ್ಟ್​ ಕೊಡಲಾಗಿತ್ತು.

ತಿರುವನಂತರಪುರ ಮೈದಾನದಲ್ಲಿ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಎಲ್ಲಾ ಪಂದ್ಯಗಳಿಗು ಮಳೆ ಅಡ್ಡಿ ಉಂಟುಮಾಡಿದೆ. ಸಪ್ಟೆಂಬರ್​ 29 ರಂದು ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ, ಸೆ.30 ಆಸ್ಟ್ರೇಲಿಯಾ vs ನೆದರ್​ಲ್ಯಾಂಡ್ಸ್​ ಮತ್ತು ಅಕ್ಟೋಬರ್​ 3 ರಂದು ಭಾರತ vs ನೆದರ್​ಲ್ಯಾಂಡ್ಸ್​ ಪಂದ್ಯ ಸಂಪೂರ್ಣ ಫಲಿತಾಂಶ ರಹಿತವಾದರೆ, ನಿನ್ನೆ (ಅಕ್ಟೋಬರ್​ 2) ನ್ಯೂಜಿಲೆಂಡ್​ vs ದಕ್ಷಿಣ ಆಫ್ರಿಕಾ ಪಂದ್ಯ ಮಳೆ ಬಂದರೂ ಡಿಎಲ್​ಎಸ್​ ನಿಯಮದನ್ವಯ ಪಂದ್ಯವನ್ನು ನಡೆಸಲಾಯಿತು.

ಇಂದು ಅಭ್ಯಾಸ ಪಂದ್ಯದ ಕೊನೆಯ ದಿನವಾಗಿದೆ. ಅಕ್ಟೋಬರ್​ 5 ರಂದು ವಿಶ್ವಕಪ್​ನ ಉದ್ಘಾನೆ ಆಗಲಿದೆ. ಅಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಹಾಲಿ ರನ್ನರ್​ ಅಪ್​ ನ್ಯೂಜಿಲೆಂಡ್​ ಸೆಣಸಲಿದೆ. ಈ ಮ್ಯಾಚ್​ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೈದಾನ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.

ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಆಡಿರುವುದೇ ಭಾರತ ತಂಡಕ್ಕೆ ಬಲವಾಗಿದೆ. ಅಲ್ಲದೇ ಏಷ್ಯಾಕಪ್​ನ್ನು 5 ವರ್ಷಗಳ ನಂತರ ಟೀಮ್​ ಇಂಡಿಯಾ ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡು, ವಿಶ್ವಕಪ್​ಗೂ ಮುನ್ನ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿ ಹೊರಹೊಮ್ಮಿದೆ. ಹೀಗಾಗಿ ವಿಶ್ವಕಪ್​ ತಂಡದಲ್ಲಿ ಒಂದು ಹುಮ್ಮಸ್ಸಿದ್ದು, ಸತತ ಗೆಲುವು ಕಂಡಿರುವ ಟೀಮ್​ ಇಂಡಿಯಾ ಅಕ್ಟೋಬರ್​ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ವಿಶ್ವಕಪ್​ ಪಂದ್ಯಗಳ ಖಾತೆಯನ್ನು ತೆರೆಯಲಿದೆ.

ವಿಶ್ವಕಪ್​ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್​, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

ಇದನ್ನೂ ಓದಿ: ಕಮಿನ್ಸ್​ ಪಡೆಗೆ ಒಲಿಯುವುದೇ 6ನೇ ವಿಶ್ವಕಪ್‌? ಭಾರತದಲ್ಲಿ ಆಸ್ಟ್ರೇಲಿಯಾಗೆ ಎದುರಾಗುವ ಸವಾಲುಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.