ETV Bharat / sports

Vijay Hazare Trophy: ಹ್ಯಾಟ್ರಿಕ್​​ ಸೆಂಚುರಿ ಸಿಡಿಸಿದ ಗಾಯಕ್ವಾಡ್​.. ಆಫ್ರಿಕಾ ವಿರುದ್ಧದ ODI ಸರಣಿಗೆ ಸಿಗುತ್ತಾ ಚಾನ್ಸ್​!?

ದೇಶೀಯ ಕ್ರಿಕೆಟ್​ನಲ್ಲಿ ಮಿಂಚು ಹರಿಸುತ್ತಿರುವ ಮಹಾರಾಷ್ಟ್ರ ಕ್ರಿಕೆಟ್ ತಂಡದ ಕ್ಯಾಪ್ಟನ್​ ಋತುರಾಜ್ ಗಾಯಕ್ವಾಡ್​​ ಸತತ ಮೂರು ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.

author img

By

Published : Dec 11, 2021, 3:14 PM IST

Ruturaj Gaikwad ton
Ruturaj Gaikwad ton

ರಾಜ್​ಕೋಟ್​: ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಮಹಾರಾಷ್ಟ್ರದ ಉದಯೋನ್ಮುಖ ಬ್ಯಾಟರ್​​ ಋತುರಾಜ್​ ಗಾಯಕ್ವಾಡ್​​​ ದೇಶಿಯ ಕ್ರಿಕೆಟ್​​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಸಕ್ತ ಸಾಲಿನ ವಿಜಯ್​ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿರುವ ಈ ಪ್ಲೇಯರ್​ ಇಂದಿನ ಕೇರಳ ವಿರುದ್ಧದ ಪಂದ್ಯದಲ್ಲೂ ಶತಕ ಸಾಧನೆ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗಾಯಕ್ವಾಡ್​
ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗಾಯಕ್ವಾಡ್​

2021-22ನೇ ಸಾಲಿನ ವಿಜಯ್​​ ಹಜಾರೆ ಟ್ರೋಫಿಯಲ್ಲಿ ಕೇರಳ ವಿರುದ್ಧ ಮಾಧವ್ ರಾವ್ ಸಿಂಧಿಯಾ ಸ್ಟೇಡಿಯಂ ನಡೆದ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್​​, ತಾವು ಎದುರಿಸಿದ 129 ಎಸೆತಗಳಲ್ಲಿ 3 ಸಿಕ್ಸರ್​, 9 ಬೌಂಡರಿ ಸೇರಿದಂತೆ 124ರನ್​​ಗಳಿಕೆ ಮಾಡಿದ್ದಾರೆ.

ಈ ಮೂಲಕ ತಮ್ಮ ಬ್ಯಾಟಿಂಗ್​​ ಸಾಮರ್ಥ್ಯ ಹೊರಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್​ ಮುಡಿಗೇರಿಸಿಕೊಂಡಿರುವ ಮಹಾರಾಷ್ಟ್ರ ಋತುರಾಜ್ ಗಾಯಕ್ವಾಡ್‌ ಇದೀಗ ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಕಾರಣ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಗಾಯಕ್ವಾಡ್​ ಇದೀಗ ತಾವು ಆಡಿರುವ ಮೂರು ಪಂದ್ಯಗಳಿಂದ 414ರನ್​​ಗಳಿಕೆ ಮಾಡುವ ಮೂಲಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಗರಿಷ್ಠ ರನ್​​ ಬಾರಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿರಿ: ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್​ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್​

ಈಗಾಗಲೇ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 136 ರನ್​ ಸಿಡಿಸಿ 329 ರನ್​ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್​ ಮಾಡಲು ನೆರವಾಗಿದ್ದರು.

ಇದಾದ ಬಳಿಕ ಗುರುವಾರ ನಡೆದ ಛತ್ತೀಸ್​​​​​ಗಢ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್​ ಅಜೇಯ ಶತಕ​​ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್​ಗಳ ಜಯ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ ಗಾಯಕ್ವಾಡ್​ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 154 ರನ್​ಗಳಿಸಿದರು.

6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ

ಮಹಾರಾಷ್ಟ್ರ ತಂಡದ ನಾಯಕನಾಗಿ ಮಿಂಚು ಹರಿಸುತ್ತಿರುವ ಋತುರಾಜ್​ ಗಾಯಕ್ವಾಡ್​ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು.

2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್​ ಸಿಡಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.

ಪ್ರಮುಖರ ಸಾಲಿಗೆ ಸೇರುತ್ತಾರಾ ಗಾಯಕ್ವಾಡ್?

ದೇಶೀಯ ಕ್ರಿಕೆಟ್​​ನಲ್ಲಿ ಈಗಾಗಲೇ ಟೀಂ ಇಂಡಿಯಾದ ವಿರಾಟ್​​ ಕೊಹ್ಲಿ, ದೇವದತ್​ ಪಡಿಕ್ಕಲ್​ ಹಾಗೂ ಪೃಥ್ವಿ ಶಾ ಸತತ 4 ಸೆಂಚುರಿ ಬಾರಿಸಿ ರೆಕಾರ್ಡ್​ ಬರೆದಿದ್ದು, ಇದೀಗ ಗಾಯಕ್ವಾಡ್ ಮತ್ತೊಂದು ಶತಕ ಸಾಧನೆ ಮಾಡಿದ್ರೆ, ಪ್ರಮುಖರ ಸಾಲಿಗೆ ಸೇರಿಕೊಳ್ಳಲಿದ್ದಾರೆ. ಮಹಾರಾಷ್ಟ್ರ ತನ್ನ ಮುಂದಿನ ಪಂದ್ಯವನ್ನ ಉತ್ತರಾಖಂಡ ವಿರುದ್ಧ ಆಡಲಿದೆ.

ರಾಜ್​ಕೋಟ್​: ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಮಹಾರಾಷ್ಟ್ರದ ಉದಯೋನ್ಮುಖ ಬ್ಯಾಟರ್​​ ಋತುರಾಜ್​ ಗಾಯಕ್ವಾಡ್​​​ ದೇಶಿಯ ಕ್ರಿಕೆಟ್​​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.

ಪ್ರಸಕ್ತ ಸಾಲಿನ ವಿಜಯ್​ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿರುವ ಈ ಪ್ಲೇಯರ್​ ಇಂದಿನ ಕೇರಳ ವಿರುದ್ಧದ ಪಂದ್ಯದಲ್ಲೂ ಶತಕ ಸಾಧನೆ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗಾಯಕ್ವಾಡ್​
ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಗಾಯಕ್ವಾಡ್​

2021-22ನೇ ಸಾಲಿನ ವಿಜಯ್​​ ಹಜಾರೆ ಟ್ರೋಫಿಯಲ್ಲಿ ಕೇರಳ ವಿರುದ್ಧ ಮಾಧವ್ ರಾವ್ ಸಿಂಧಿಯಾ ಸ್ಟೇಡಿಯಂ ನಡೆದ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್​​, ತಾವು ಎದುರಿಸಿದ 129 ಎಸೆತಗಳಲ್ಲಿ 3 ಸಿಕ್ಸರ್​, 9 ಬೌಂಡರಿ ಸೇರಿದಂತೆ 124ರನ್​​ಗಳಿಕೆ ಮಾಡಿದ್ದಾರೆ.

ಈ ಮೂಲಕ ತಮ್ಮ ಬ್ಯಾಟಿಂಗ್​​ ಸಾಮರ್ಥ್ಯ ಹೊರಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್​ ಮುಡಿಗೇರಿಸಿಕೊಂಡಿರುವ ಮಹಾರಾಷ್ಟ್ರ ಋತುರಾಜ್ ಗಾಯಕ್ವಾಡ್‌ ಇದೀಗ ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಕಾರಣ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಗಾಯಕ್ವಾಡ್​ ಇದೀಗ ತಾವು ಆಡಿರುವ ಮೂರು ಪಂದ್ಯಗಳಿಂದ 414ರನ್​​ಗಳಿಕೆ ಮಾಡುವ ಮೂಲಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಗರಿಷ್ಠ ರನ್​​ ಬಾರಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿರಿ: ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್​ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್​

ಈಗಾಗಲೇ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 136 ರನ್​ ಸಿಡಿಸಿ 329 ರನ್​ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್​ ಮಾಡಲು ನೆರವಾಗಿದ್ದರು.

ಇದಾದ ಬಳಿಕ ಗುರುವಾರ ನಡೆದ ಛತ್ತೀಸ್​​​​​ಗಢ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್​ ಅಜೇಯ ಶತಕ​​ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್​ಗಳ ಜಯ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ ಗಾಯಕ್ವಾಡ್​ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 154 ರನ್​ಗಳಿಸಿದರು.

6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ

ಮಹಾರಾಷ್ಟ್ರ ತಂಡದ ನಾಯಕನಾಗಿ ಮಿಂಚು ಹರಿಸುತ್ತಿರುವ ಋತುರಾಜ್​ ಗಾಯಕ್ವಾಡ್​ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್​ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು.

2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್​ ಸಿಡಿಸಿ ಆರೆಂಜ್​ ಕ್ಯಾಪ್​ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.

ಪ್ರಮುಖರ ಸಾಲಿಗೆ ಸೇರುತ್ತಾರಾ ಗಾಯಕ್ವಾಡ್?

ದೇಶೀಯ ಕ್ರಿಕೆಟ್​​ನಲ್ಲಿ ಈಗಾಗಲೇ ಟೀಂ ಇಂಡಿಯಾದ ವಿರಾಟ್​​ ಕೊಹ್ಲಿ, ದೇವದತ್​ ಪಡಿಕ್ಕಲ್​ ಹಾಗೂ ಪೃಥ್ವಿ ಶಾ ಸತತ 4 ಸೆಂಚುರಿ ಬಾರಿಸಿ ರೆಕಾರ್ಡ್​ ಬರೆದಿದ್ದು, ಇದೀಗ ಗಾಯಕ್ವಾಡ್ ಮತ್ತೊಂದು ಶತಕ ಸಾಧನೆ ಮಾಡಿದ್ರೆ, ಪ್ರಮುಖರ ಸಾಲಿಗೆ ಸೇರಿಕೊಳ್ಳಲಿದ್ದಾರೆ. ಮಹಾರಾಷ್ಟ್ರ ತನ್ನ ಮುಂದಿನ ಪಂದ್ಯವನ್ನ ಉತ್ತರಾಖಂಡ ವಿರುದ್ಧ ಆಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.