ETV Bharat / sports

ಮುಷ್ತಾಕ್​ ಅಲಿ: ಕರ್ನಾಟಕಕ್ಕೆ ರೋಚಕ ಜಯ, 3ನೇ ಬಾರಿಗೆ ಫೈನಲ್ ಪ್ರವೇಶ

author img

By

Published : Nov 20, 2021, 5:17 PM IST

Updated : Nov 20, 2021, 5:36 PM IST

ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಮೂರನೇ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಫೈನಲ್ ತಲುಪಿತು. ಸೋಮವಾರ ನಡೆಯಲಿರುವ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ತಮಿಳುನಾಡಿನ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ. 2019ರ ಆವೃತ್ತಿಯಲ್ಲೂ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ರಾಜ್ಯ ತಂಡ 1 ರನ್​ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು.

Syed Mushtaq Ali
ವಿದರ್ಭ ವಿರುದ್ಧ ಕರ್ನಾಟಕಕ್ಕೆ ಜಯ

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ನಲ್ಲಿ ತನ್ನ ಅಮೋಘ ಆಟವನ್ನು ಮುಂದುವರಿಸಿರುವ ಕರ್ನಾಟಕ ತಂಡ ಇಂದು ನಡೆದ ಸೆಮಿಫೈನಲ್​ನಲ್ಲಿ ವಿದರ್ಭವನ್ನು 4 ರನ್​ಗಳಿಂದ ಮಣಿಸಿ 4 ವರ್ಷಗಳಲ್ಲಿ 3ನೇ ಬಾರಿಗೆ ಫೈನಲ್​ ಪ್ರವೇಶಿಸಿದೆ.

ನವದೆಹಲಿಯ ಅರುಣ್ ಜೇಟ್ಲೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್​ಗಳಿಸಿತ್ತು. ಆರಂಭಿಕ ರೋಹನ್ ಕಡಮ್ 56 ಎಸೆತಗಳಲ್ಲಿ 7 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ ಸಹಿತ 87 ರನ್​, ನಾಯಕ ಮನೀಶ್ ಪಾಂಡೆ 42 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 54 ಮತ್ತು ಅಭಿನವ್ ಮನೋಹರ್​ 23 ಎಸೆತಗಳಲ್ಲಿ 27 ರನ್​ಗಳಿಸಿದರು.

ವಿದರ್ಭ ಪರ ದರ್ಶನ ನಾಲ್ಕಂಡೆ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಲಲಿತ್ ಎಂ ಯಾದವ್ 36ಕ್ಕೆ2, ಯಶ್ ಠಾಕೂರ್ 35ಕ್ಕೆ 1 ವಿಕೆಟ್ ಪಡೆದರು.

177 ರನ್​ಗಳ ಗುರಿ ಬೆನ್ನಟ್ಟಿದ ವಿದರ್ಭ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಹೊರೆತಾಗಿಯೂ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್​ಗಳಿಸಲಷ್ಟೇ ಶಕ್ತವಾಯಿತು.

ಅಥರ್ವ ತೈದೆ 32, ಗಣೇಶ್ ಸತೀಶ್ 31, ಅಕ್ಷಯ್ ವಾಡ್ಕರ್​ 15, ಶುಭಮ್ ದುಬೆ 24, ಅಪೂರ್ವ ವಾಂಖೆಡೆ 27 ಮತ್ತು ಅಕ್ಷಯ್ ಕರ್ನೇವರ್​ 22 ರನ್​ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರಾದೂ ಗಡಿದಾಟಿಸುವಲ್ಲಿ ವಿಫಲರಾದರು.

ಕರ್ನಾಟಕ ಪರ ಕೆಸಿ ಕಾರಿಯಪ್ಪ 27 ರನ್​ ನೀಡಿ 2 ವಿಕೆಟ್ ಪಡೆದರೆ, ದರ್ಶನ್​ ಎಂಬಿ 39ಕ್ಕೆ1, ವಿದ್ಯಾದರ್ ಪಾಟೀಲ್ 29ಕ್ಕೆ1, ಸುಚೀತ್ 34ಕ್ಕೆ1 ಮತ್ತು ಕರುಣ್ ನಾಯರ್ 10ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಮೂರನೇ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಫೈನಲ್ ತಲುಪಿತು. ಸೋಮವಾರ ನಡೆಯಲಿರುವ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ತಮಿಳುನಾಡಿನ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ. 2019ರ ಆವೃತ್ತಿಯಲ್ಲೂ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ರಾಜ್ಯ ತಂಡ 1 ರನ್​ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು. ಸೋಮವಾರ ಯಾವುದೇ ತಂಡ ಗೆದ್ದರೂ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದನ್ನು ಓದಿ:ನಾಯಕ, ಉಪ ನಾಯಕನ ಸ್ಫೋಟಕ ಆಟಕ್ಕೆ ಒಲಿದ ಗೆಲುವು ; ಕಿವೀಸ್‌ ವಿರುದ್ಧ ಟಿ-20 ಸರಣಿ ಗೆದ್ದ ಟೀಂ ಇಂಡಿಯಾ

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ನಲ್ಲಿ ತನ್ನ ಅಮೋಘ ಆಟವನ್ನು ಮುಂದುವರಿಸಿರುವ ಕರ್ನಾಟಕ ತಂಡ ಇಂದು ನಡೆದ ಸೆಮಿಫೈನಲ್​ನಲ್ಲಿ ವಿದರ್ಭವನ್ನು 4 ರನ್​ಗಳಿಂದ ಮಣಿಸಿ 4 ವರ್ಷಗಳಲ್ಲಿ 3ನೇ ಬಾರಿಗೆ ಫೈನಲ್​ ಪ್ರವೇಶಿಸಿದೆ.

ನವದೆಹಲಿಯ ಅರುಣ್ ಜೇಟ್ಲೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್​ಗಳಿಸಿತ್ತು. ಆರಂಭಿಕ ರೋಹನ್ ಕಡಮ್ 56 ಎಸೆತಗಳಲ್ಲಿ 7 ಬೌಂಡರಿ ಮತ್ತು ನಾಲ್ಕು ಸಿಕ್ಸರ್​ ಸಹಿತ 87 ರನ್​, ನಾಯಕ ಮನೀಶ್ ಪಾಂಡೆ 42 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 54 ಮತ್ತು ಅಭಿನವ್ ಮನೋಹರ್​ 23 ಎಸೆತಗಳಲ್ಲಿ 27 ರನ್​ಗಳಿಸಿದರು.

ವಿದರ್ಭ ಪರ ದರ್ಶನ ನಾಲ್ಕಂಡೆ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದರು. ಲಲಿತ್ ಎಂ ಯಾದವ್ 36ಕ್ಕೆ2, ಯಶ್ ಠಾಕೂರ್ 35ಕ್ಕೆ 1 ವಿಕೆಟ್ ಪಡೆದರು.

177 ರನ್​ಗಳ ಗುರಿ ಬೆನ್ನಟ್ಟಿದ ವಿದರ್ಭ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ಹೊರೆತಾಗಿಯೂ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 172 ರನ್​ಗಳಿಸಲಷ್ಟೇ ಶಕ್ತವಾಯಿತು.

ಅಥರ್ವ ತೈದೆ 32, ಗಣೇಶ್ ಸತೀಶ್ 31, ಅಕ್ಷಯ್ ವಾಡ್ಕರ್​ 15, ಶುಭಮ್ ದುಬೆ 24, ಅಪೂರ್ವ ವಾಂಖೆಡೆ 27 ಮತ್ತು ಅಕ್ಷಯ್ ಕರ್ನೇವರ್​ 22 ರನ್​ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರಾದೂ ಗಡಿದಾಟಿಸುವಲ್ಲಿ ವಿಫಲರಾದರು.

ಕರ್ನಾಟಕ ಪರ ಕೆಸಿ ಕಾರಿಯಪ್ಪ 27 ರನ್​ ನೀಡಿ 2 ವಿಕೆಟ್ ಪಡೆದರೆ, ದರ್ಶನ್​ ಎಂಬಿ 39ಕ್ಕೆ1, ವಿದ್ಯಾದರ್ ಪಾಟೀಲ್ 29ಕ್ಕೆ1, ಸುಚೀತ್ 34ಕ್ಕೆ1 ಮತ್ತು ಕರುಣ್ ನಾಯರ್ 10ಕ್ಕೆ 1 ವಿಕೆಟ್ ಪಡೆದು ಮಿಂಚಿದರು.

ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಮೂರನೇ ಬಾರಿ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಫೈನಲ್ ತಲುಪಿತು. ಸೋಮವಾರ ನಡೆಯಲಿರುವ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ತಮಿಳುನಾಡಿನ ವಿರುದ್ಧ ಟ್ರೋಫಿಗಾಗಿ ಕಾದಾಡಲಿದೆ. 2019ರ ಆವೃತ್ತಿಯಲ್ಲೂ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ರಾಜ್ಯ ತಂಡ 1 ರನ್​ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು. ಸೋಮವಾರ ಯಾವುದೇ ತಂಡ ಗೆದ್ದರೂ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದನ್ನು ಓದಿ:ನಾಯಕ, ಉಪ ನಾಯಕನ ಸ್ಫೋಟಕ ಆಟಕ್ಕೆ ಒಲಿದ ಗೆಲುವು ; ಕಿವೀಸ್‌ ವಿರುದ್ಧ ಟಿ-20 ಸರಣಿ ಗೆದ್ದ ಟೀಂ ಇಂಡಿಯಾ

Last Updated : Nov 20, 2021, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.