ETV Bharat / sports

ಶಾರ್ದೂಲ್ ಠಾಕೂರ್ ಈಗಾಗಲೇ ಆಲ್​ರೌಂಡರ್ ಎಂದು ನಿರೂಪಿಸಿದ್ದಾರೆ: ಬೌಲಿಂಗ್ ಕೋಚ್ ಭರತ್

author img

By

Published : May 12, 2021, 8:43 PM IST

ಸೀಮಿತ ಓವರ್​ಗಳ ತಂಡದಲ್ಲಿ ಅವಕಾಶ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸ್ಥಾನದಲ್ಲಿ ಇಲ್ಲದಿರುವುದರಿಂದ ಅವರನ್ನು ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಅವರನ್ನು ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ ಆಗಿ ನಾವು ಎದುರು ನೋಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿತ್ತು.

ಶಾರ್ದುಲ್ ಠಾಕೂರ್
ಶಾರ್ದುಲ್ ಠಾಕೂರ್

ನವದೆಹಲಿ: ಶಾರ್ದೂಲ್ ಠಾಕೂರ್ ಈಗಾಗಲೇ ತಾನೊಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ ಎಂಬುದನ್ನು ನಿರೂಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದಾಗಿನಿಂದ ತಂಡಕ್ಕೆ ಅಗತ್ಯವಾಗಿದ್ದ ಸ್ಥಾನಕ್ಕೆ ಠಾಕೂರ್​ ಸೂಕ್ತವಾದ ಆಯ್ಕೆ ಎಂದು ಭಾರತ ತಂಡದ ಬೌಲಿಂಗ್ ಕೋಚ್​ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.

ಸೀಮಿತ ಓವರ್​ಗಳ ತಂಡದಲ್ಲಿ ಅವಕಾಶ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸ್ಥಾನದಲ್ಲಿ ಇಲ್ಲದಿರುವುದರಿಂದ ಅವರನ್ನು ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಅವರನ್ನು ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ ಆಗಿ ನಾವು ಎದುರು ನೋಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿತ್ತು.

ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ. ನಾವು ಅಂತಹ ಆಲ್ ರೌಂಡರ್‌ಗಳನ್ನು ಅಭಿವೃದ್ಧಿಪಡಿಸಬಹುದು. ಶಾರ್ದೂಲ್ ತಾನು ಆಲ್​​​ರೌಂಡರ್ ಆಗಬಲ್ಲೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿದ ರೀತಿ ಅದ್ಭುತವಾಗಿತ್ತು," ಎಂದು ಐರನ್​ವುಡ್​ ಶೈಕ್ಷಣಿಕ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅರುಣ್ ತಿಳಿಸಿದ್ದಾರೆ.

ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಠಾಕೂರ್ ಪ್ರದರ್ಶನ ಪ್ರಭಾವಶಾಲಿಯಾಗಿದೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿರುವ ಟೆಸ್ಟ್​ ಒಂದೇ ವಿದೇಶದಲ್ಲಿ ಆಡಿರುವುದಾಗಿದೆ. ಆದರೆ ಆ ಪಂದ್ಯದಲ್ಲೇ 7 ವಿಕೆಟ್ ಮತ್ತು ಒಂದು ಅರ್ಧಶತಕ ಕೂಡ ಸಿಡಿಸಿದ್ದರು.

ಹಾರ್ದಿಕ್ ಕೂಡ ಒಬ್ಬ ಅತ್ಯುತ್ತಮ ಪ್ರತಿಭೆ, ಆದರೆ ದುರದೃಷ್ಟವಶಾತ್, ಅವರು ಬೆನ್ನು ಆಪರೇಷನ್‌ಗೆ ಒಳಗಾಗಬೇಕಾಯಿತು. ಆ ನಂತರ ಹಿಂತಿರುಗುವುದು ತುಂಬಾ ಸುಲಭವಲ್ಲ. ಆದರೆ ಅವರು ಇಂಗ್ಲೆಂಡ್ ವಿರುದ್ದ ಉತ್ತಮ ಪ್ರದರ್ಶನ ತೋರಿದ್ದರು, ಆದರೆ, ಅವರು ಇನ್ನಷ್ಟು ಬಲಿಷ್ಟರಾಗುವುದನ್ನು ನಾವು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಆಕ್ಸಿಜನ್, ವೆಂಟಿಲೇಟರ್​ ಸೌಲಭ್ಯಕ್ಕಾಗಿ ₹70 ಲಕ್ಷದೇಣಿಗೆ ನೀಡಿದ ಪಂಜಾಬ್​ ಕಿಂಗ್ಸ್​

ನವದೆಹಲಿ: ಶಾರ್ದೂಲ್ ಠಾಕೂರ್ ಈಗಾಗಲೇ ತಾನೊಬ್ಬ ವೇಗದ ಬೌಲಿಂಗ್ ಆಲ್ ರೌಂಡರ್ ಎಂಬುದನ್ನು ನಿರೂಪಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದಾಗಿನಿಂದ ತಂಡಕ್ಕೆ ಅಗತ್ಯವಾಗಿದ್ದ ಸ್ಥಾನಕ್ಕೆ ಠಾಕೂರ್​ ಸೂಕ್ತವಾದ ಆಯ್ಕೆ ಎಂದು ಭಾರತ ತಂಡದ ಬೌಲಿಂಗ್ ಕೋಚ್​ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.

ಸೀಮಿತ ಓವರ್​ಗಳ ತಂಡದಲ್ಲಿ ಅವಕಾಶ ಪಡೆದಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸ್ಥಾನದಲ್ಲಿ ಇಲ್ಲದಿರುವುದರಿಂದ ಅವರನ್ನು ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಅವರನ್ನು ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್​ ಆಗಿ ನಾವು ಎದುರು ನೋಡುತ್ತಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿತ್ತು.

ಉತ್ತಮ ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆಗಾರರ ಕೆಲಸ. ನಾವು ಅಂತಹ ಆಲ್ ರೌಂಡರ್‌ಗಳನ್ನು ಅಭಿವೃದ್ಧಿಪಡಿಸಬಹುದು. ಶಾರ್ದೂಲ್ ತಾನು ಆಲ್​​​ರೌಂಡರ್ ಆಗಬಲ್ಲೆ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿದ ರೀತಿ ಅದ್ಭುತವಾಗಿತ್ತು," ಎಂದು ಐರನ್​ವುಡ್​ ಶೈಕ್ಷಣಿಕ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅರುಣ್ ತಿಳಿಸಿದ್ದಾರೆ.

ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಠಾಕೂರ್ ಪ್ರದರ್ಶನ ಪ್ರಭಾವಶಾಲಿಯಾಗಿದೆ. ಅವರು ಆಸ್ಟ್ರೇಲಿಯಾದಲ್ಲಿ ಆಡಿರುವ ಟೆಸ್ಟ್​ ಒಂದೇ ವಿದೇಶದಲ್ಲಿ ಆಡಿರುವುದಾಗಿದೆ. ಆದರೆ ಆ ಪಂದ್ಯದಲ್ಲೇ 7 ವಿಕೆಟ್ ಮತ್ತು ಒಂದು ಅರ್ಧಶತಕ ಕೂಡ ಸಿಡಿಸಿದ್ದರು.

ಹಾರ್ದಿಕ್ ಕೂಡ ಒಬ್ಬ ಅತ್ಯುತ್ತಮ ಪ್ರತಿಭೆ, ಆದರೆ ದುರದೃಷ್ಟವಶಾತ್, ಅವರು ಬೆನ್ನು ಆಪರೇಷನ್‌ಗೆ ಒಳಗಾಗಬೇಕಾಯಿತು. ಆ ನಂತರ ಹಿಂತಿರುಗುವುದು ತುಂಬಾ ಸುಲಭವಲ್ಲ. ಆದರೆ ಅವರು ಇಂಗ್ಲೆಂಡ್ ವಿರುದ್ದ ಉತ್ತಮ ಪ್ರದರ್ಶನ ತೋರಿದ್ದರು, ಆದರೆ, ಅವರು ಇನ್ನಷ್ಟು ಬಲಿಷ್ಟರಾಗುವುದನ್ನು ನಾವು ಬಯಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಆಕ್ಸಿಜನ್, ವೆಂಟಿಲೇಟರ್​ ಸೌಲಭ್ಯಕ್ಕಾಗಿ ₹70 ಲಕ್ಷದೇಣಿಗೆ ನೀಡಿದ ಪಂಜಾಬ್​ ಕಿಂಗ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.