ETV Bharat / sports

ಐಸೊಲೇಷನ್​ನಿಂದ ಹೊರಬಂದ ರುತುರಾಜ್:  ಕೊನೆ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ

author img

By

Published : Feb 10, 2022, 6:56 PM IST

ರುತುರಾಜ್​ ಅವರನ್ನು ಟಿ-20 ತಂಡಕ್ಕೆ ಆಯ್ಕೆಯಾಗಿಲ್ಲದಿರುವುದರಿಂದ, ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ರಾಜ್ಯಕ್ಕೆ ಮರಳುವ ಸಾಧ್ಯತೆಯಿದೆ.

Ruturaj Gaikwad Out Of Isolation
ರುತುರಾಜ್ ಗಾಯಕ್ವಾಡ್

ಅಹ್ಮದಾಬಾದ್​: ಭಾರತ ತಂಡದ ಉದಯೋನ್ಮುಖ ಬ್ಯಾಟರ್​ ರುತುರಾಜ್​ ಗಾಯಕ್ವಾಡ್​ ಕೋವಿಡ್​ 19 ನಿಂದ ಚೇತರಿಸಿಕೊಂಡಿದ್ದು, ಐಸೊಲೇಸನ್​ನಿಂದ ಹೊರಬಂದಿದ್ದಾರೆ. ಶಿಖರ್​ ಧವನ್​ ಕೂಡ ಸೋಂಕಿನಿಂದ ಗುಣಮುಖರಾಗಿದ್ದು, ಶುಕ್ರವಾರ ನಡೆಯಲಿರುವ ವಿಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ರೋಹಿತ್ ಖಚಿತಪಡಿಸಿದ್ದಾರೆ.

ರುತುರಾಜ್​ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಅವಕಾಶ ಪಡೆದಿದ್ದರೂ, ಒಂದು ಪಂದ್ಯದಲ್ಲೂ ಅವಕಾಶ ಪಡೆದಿರಲಿಲ್ಲ. ವಿಂಡೀಸ್​ ವಿರುದ್ಧದ ಏಕದಿನ ಸರಣಿಗೆ ಅವಕಾಶ ಪಡೆದರಾದರೂ ಪಂದ್ಯಕ್ಕೆ ಮೂರು ದಿನಗಳಿರುವಾಗ ಶಿಖರ್​ ಧವನ್​, ಶ್ರೇಯಸ್​ ಜೊತೆಗೆ ಕೋವಿಡ್​ 19ಗೆ ತುತ್ತಾಗಿದ್ದರಿಂದ ಈ ಸರಣಿಯಲ್ಲೂ ಆಡುವ ಅವಕಾಶ ಕಳೆದುಕೊಂಡರು.

ಇನ್ನು ರುತುರಾಜ್​ ಅವರನ್ನು ಟಿ-20 ತಂಡಕ್ಕೆ ಆಯ್ಕೆಯಾಗಿಲ್ಲದಿರುವುದರಿಂದ, ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ರಾಜ್ಯಕ್ಕೆ ಮರಳುವ ಸಾಧ್ಯತೆಯಿದೆ. ರುತುರಾಜ್​ ಐಪಿಎಲ್​ 2021ರಲ್ಲಿ ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದರು. ಅಲ್ಲದೇ ವಿಜಯ್ ಹಜಾರೆ ಮತ್ತು ಸೈಯದ್​ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರಿಂದ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ

ಅಹ್ಮದಾಬಾದ್​: ಭಾರತ ತಂಡದ ಉದಯೋನ್ಮುಖ ಬ್ಯಾಟರ್​ ರುತುರಾಜ್​ ಗಾಯಕ್ವಾಡ್​ ಕೋವಿಡ್​ 19 ನಿಂದ ಚೇತರಿಸಿಕೊಂಡಿದ್ದು, ಐಸೊಲೇಸನ್​ನಿಂದ ಹೊರಬಂದಿದ್ದಾರೆ. ಶಿಖರ್​ ಧವನ್​ ಕೂಡ ಸೋಂಕಿನಿಂದ ಗುಣಮುಖರಾಗಿದ್ದು, ಶುಕ್ರವಾರ ನಡೆಯಲಿರುವ ವಿಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ರೋಹಿತ್ ಖಚಿತಪಡಿಸಿದ್ದಾರೆ.

ರುತುರಾಜ್​ ನ್ಯೂಜಿಲ್ಯಾಂಡ್​ ವಿರುದ್ಧದ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಅವಕಾಶ ಪಡೆದಿದ್ದರೂ, ಒಂದು ಪಂದ್ಯದಲ್ಲೂ ಅವಕಾಶ ಪಡೆದಿರಲಿಲ್ಲ. ವಿಂಡೀಸ್​ ವಿರುದ್ಧದ ಏಕದಿನ ಸರಣಿಗೆ ಅವಕಾಶ ಪಡೆದರಾದರೂ ಪಂದ್ಯಕ್ಕೆ ಮೂರು ದಿನಗಳಿರುವಾಗ ಶಿಖರ್​ ಧವನ್​, ಶ್ರೇಯಸ್​ ಜೊತೆಗೆ ಕೋವಿಡ್​ 19ಗೆ ತುತ್ತಾಗಿದ್ದರಿಂದ ಈ ಸರಣಿಯಲ್ಲೂ ಆಡುವ ಅವಕಾಶ ಕಳೆದುಕೊಂಡರು.

ಇನ್ನು ರುತುರಾಜ್​ ಅವರನ್ನು ಟಿ-20 ತಂಡಕ್ಕೆ ಆಯ್ಕೆಯಾಗಿಲ್ಲದಿರುವುದರಿಂದ, ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ರಾಜ್ಯಕ್ಕೆ ಮರಳುವ ಸಾಧ್ಯತೆಯಿದೆ. ರುತುರಾಜ್​ ಐಪಿಎಲ್​ 2021ರಲ್ಲಿ ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದರು. ಅಲ್ಲದೇ ವಿಜಯ್ ಹಜಾರೆ ಮತ್ತು ಸೈಯದ್​ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರಿಂದ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.