ETV Bharat / sports

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಶಾರುಖ್​ ಖಾನ್, ರಿಷಿ ಧವನ್​ಗೆ ಅವಕಾಶ ಸಾಧ್ಯತೆ

author img

By

Published : Jan 26, 2022, 6:34 PM IST

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಶಾರುಖ್​ ಖಾನ್​ಗೆ ವಿಂಡೀಸ್​ ವಿರುದ್ಧ ಟಿ20 ತಂಡದಲ್ಲಿ ಮತ್ತು ರಿಷಿ ಧವನ್​ಗೆ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ..

Rishi Dhawan and Shahrukh Khan
ಭಾರತ ತಂಡದಲ್ಲಿ ಶಾರುಖ್ ಖಾನ್ , ರಿಷಿ ಧವನ್​ಗೆ ಅವಕಾಶ ಸಾಧ್ಯತೆ

ಮುಂಬೈ : ವಿಜಯ ಹಜಾರೆ ಟ್ರೋಪಿಯಲ್ಲಿ ಆಲ್​ರೌಂಡರ್ ಪ್ರದರ್ಶನ ತೋರಿ ಹಿಮಾಚಲ ಪ್ರದೇಶ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿದ್ದ ರಿಷಿ ಧವನ್ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ತಮಿಳುನಾಡಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ದಕ್ಕಿಸಿಕೊಟ್ಟಿದ್ದ ಶಾರುಖ್ ಖಾನ್ ತವರಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.

ಈಗಾಗಲೇ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ ಅನುಭವವುಳ್ಳ ರಿಷಿ ಧವನ್​ ಕಳೆದ ವಿಜಯ ಹಜಾರೆ ಟ್ರೋಫಿಯಲ್ಲಿ 8 ಇನ್ನಿಂಗ್ಸ್​ಗಳಲ್ಲಿ 76ರ ಸರಾಸರಿ ಮತ್ತು 128ರ ಸ್ಟ್ರೈಕ್​ರೇಟ್​ನಲ್ಲಿ 458 ರನ್​ಗಳಿಸಿದ್ದರು. ಬೌಲಿಂಗ್​ನಲ್ಲೂ ಮಿಂಚಿದ್ದ ಅವರು 6ರ ಎಕಾನಮಿಯಲ್ಲಿ 17 ವಿಕೆಟ್​ ಪಡೆದಿದ್ದರು.

ಬೌಲಿಂಗ್ ಆಲ್​​ರೌಂಡರ್​ಗಳ ಹುಡುಕಾಟದಲ್ಲಿರುವ ಟೀಮ್​ ಇಂಡಿಯಾ ಧವನ್​ಗೆ ತವರಿನಲ್ಲಿ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶಾರುಖ್ ಖಾನ್ ಕಳೆದ ಎರಡು ಆವೃತ್ತಿಯ ಸೈಯದ್​ ಮುಷ್ತಾಕ್ ಅಲಿ ಟಿ20ಯಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಈ ಬಾರಿಯ ವಿಜಯ ಹಜಾರೆ ಫೈನಲ್​ನಲ್ಲಿ 21 ಎಸೆತಗಳಲ್ಲಿ 42, ಲೀಗ್​ನಲ್ಲಿ ಮುಂಬೈ ವಿರುದ್ಧ 35 ಎಸೆತಗಳಲ್ಲಿ 66, ಬೆಂಗಾಲ್ ವಿರುದ್ಧ 12 ಎಸೆತಗಳಲ್ಲಿ 32, ಕರ್ನಾಟಕ ವಿರುದ್ಧ 39 ಎಸೆತಗಳಲ್ಲಿ 79 ರನ್​ಗಳಿಸಿದ್ದರು. ಸೈಯದ್​ ಮುಷ್ತಾಕ್ ಅಲಿ ಟಿ20ಯ ಫೈನಲ್​ನಲ್ಲಿ ಕರ್ನಾಟಕ ವಿರುದ್ಧ 15 ಎಸೆತಗಳಲ್ಲಿ 33ರನ್​ಗಳಿಸಿ ಚಾಂಪಿಯನ್ ಆಗಲು ನೆರವಾಗಿದ್ದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಶಾರುಖ್​ ಖಾನ್​ಗೆ ವಿಂಡೀಸ್​ ವಿರುದ್ಧ ಟಿ20 ತಂಡದಲ್ಲಿ ಮತ್ತು ರಿಷಿ ಧವನ್​ಗೆ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಾನು ಕಂಡಂತಹ ತೀಕ್ಷ್ಣಕ್ರಿಕೆಟ್ ಮೈಂಡ್​ ಹೊಂದಿದವರಲ್ಲಿ ಎಂಎಸ್​ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್

ಮುಂಬೈ : ವಿಜಯ ಹಜಾರೆ ಟ್ರೋಪಿಯಲ್ಲಿ ಆಲ್​ರೌಂಡರ್ ಪ್ರದರ್ಶನ ತೋರಿ ಹಿಮಾಚಲ ಪ್ರದೇಶ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿದ್ದ ರಿಷಿ ಧವನ್ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಿ ತಮಿಳುನಾಡಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ದಕ್ಕಿಸಿಕೊಟ್ಟಿದ್ದ ಶಾರುಖ್ ಖಾನ್ ತವರಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.

ಈಗಾಗಲೇ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ ಅನುಭವವುಳ್ಳ ರಿಷಿ ಧವನ್​ ಕಳೆದ ವಿಜಯ ಹಜಾರೆ ಟ್ರೋಫಿಯಲ್ಲಿ 8 ಇನ್ನಿಂಗ್ಸ್​ಗಳಲ್ಲಿ 76ರ ಸರಾಸರಿ ಮತ್ತು 128ರ ಸ್ಟ್ರೈಕ್​ರೇಟ್​ನಲ್ಲಿ 458 ರನ್​ಗಳಿಸಿದ್ದರು. ಬೌಲಿಂಗ್​ನಲ್ಲೂ ಮಿಂಚಿದ್ದ ಅವರು 6ರ ಎಕಾನಮಿಯಲ್ಲಿ 17 ವಿಕೆಟ್​ ಪಡೆದಿದ್ದರು.

ಬೌಲಿಂಗ್ ಆಲ್​​ರೌಂಡರ್​ಗಳ ಹುಡುಕಾಟದಲ್ಲಿರುವ ಟೀಮ್​ ಇಂಡಿಯಾ ಧವನ್​ಗೆ ತವರಿನಲ್ಲಿ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶಾರುಖ್ ಖಾನ್ ಕಳೆದ ಎರಡು ಆವೃತ್ತಿಯ ಸೈಯದ್​ ಮುಷ್ತಾಕ್ ಅಲಿ ಟಿ20ಯಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಈ ಬಾರಿಯ ವಿಜಯ ಹಜಾರೆ ಫೈನಲ್​ನಲ್ಲಿ 21 ಎಸೆತಗಳಲ್ಲಿ 42, ಲೀಗ್​ನಲ್ಲಿ ಮುಂಬೈ ವಿರುದ್ಧ 35 ಎಸೆತಗಳಲ್ಲಿ 66, ಬೆಂಗಾಲ್ ವಿರುದ್ಧ 12 ಎಸೆತಗಳಲ್ಲಿ 32, ಕರ್ನಾಟಕ ವಿರುದ್ಧ 39 ಎಸೆತಗಳಲ್ಲಿ 79 ರನ್​ಗಳಿಸಿದ್ದರು. ಸೈಯದ್​ ಮುಷ್ತಾಕ್ ಅಲಿ ಟಿ20ಯ ಫೈನಲ್​ನಲ್ಲಿ ಕರ್ನಾಟಕ ವಿರುದ್ಧ 15 ಎಸೆತಗಳಲ್ಲಿ 33ರನ್​ಗಳಿಸಿ ಚಾಂಪಿಯನ್ ಆಗಲು ನೆರವಾಗಿದ್ದರು.

ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಶಾರುಖ್​ ಖಾನ್​ಗೆ ವಿಂಡೀಸ್​ ವಿರುದ್ಧ ಟಿ20 ತಂಡದಲ್ಲಿ ಮತ್ತು ರಿಷಿ ಧವನ್​ಗೆ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಾನು ಕಂಡಂತಹ ತೀಕ್ಷ್ಣಕ್ರಿಕೆಟ್ ಮೈಂಡ್​ ಹೊಂದಿದವರಲ್ಲಿ ಎಂಎಸ್​ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.