ETV Bharat / sports

ನಿದ್ರೆಯ ಮಂಪರು, ಅತಿವೇಗದಿಂದ ಅಪಘಾತ: ರಿಷಭ್​​ ಪಂತ್​ ದೆಹಲಿಗೆ ಏರ್​ಲಿಫ್ಟ್​ ಸಾಧ್ಯತೆ

author img

By

Published : Dec 31, 2022, 11:16 AM IST

ಕ್ರಿಕೆಟಿಗ ರಿಷಭ್​​ ಪಂತ್​ ಕಾರು ಅಪಘಾತ - ನಿದ್ರೆಯ ಮಂಪರು ಅತಿ ವೇಗದಿಂದ ಅಪಘಾತ - ಪ್ಲಾಸ್ಟಿಕ್​ ಸರ್ಜರಿಗಾಗಿ ದೆಹಲಿಗೆ ಪಂತ್​ ಏರ್​ಲಿಫ್ಟ್​- ವೈದ್ಯರ ತಂಡದಿಂದ ಕ್ರಿಕೆಟಿಗನ ಮೇಲೆ ತೀವ್ರ ನಿಗಾ

rishabh-pant may-be-airlifted-to-delhi
ರಿಷಬ್​ ಪಂತ್​ ದೆಹಲಿಗೆ ಏರ್​ಲಿಫ್ಟ್​ ಸಾಧ್ಯತೆ

ನವದೆಹಲಿ: ಯುವ ಕ್ರಿಕೆಟಿಗ ರಿಷಬ್​ ಪಂತ್​ ತನ್ನ ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲು ಮನೆಗೆ ಹೊರಟಿದ್ದಾಗ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಬೆನ್ನು, ತಲೆ, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್​ ಅವರನ್ನು ದೆಹಲಿಗೆ ಏರ್​ಲಿಫ್ಟ್​ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರಿಷಬ್​ ಪಂತ್​ ದೆಹಲಿಯಿಂದ ತಮ್ಮ ನಿವಾಸವಿರುವ ಉತ್ತರಾಖಂಡದ ರೂರ್ಕಿಗೆ ತೆರಳುತ್ತಿದ್ದರು. ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಬೆಳಗಿನ ಜಾವದ ವೇಳೆ ಹೋಗುತ್ತಿದ್ದಾಗ 5.20 ರ ಸುಮಾರಿನಲ್ಲಿ ಡಿವೈಡರ್​ಗೆ ಗುದ್ದಿ ಭೀಕರ ಅಪಘಾತಕ್ಕೀಡಾಗಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಕಾರಿನ ಗಾಜು ಹೊಡೆದು ಹೊರಬಿದ್ದ ಪಂತ್​ ಜೀವ ಉಳಿಸಿಕೊಂಡಿದ್ದಾರೆ.

ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್​​ ಅಪಘಾತವನ್ನು ಗಮನಿಸಿ ಅದರ ಚಾಲಕ ಮತ್ತು ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ. ಆಂಬ್ಯುಲೆನ್ಸ್​ಗೆ ಕರೆ ಮಾಡಿ ಪಂತ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಯುವ ಕ್ರಿಕೆಟಿಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಏರ್​ಲಿಫ್ಟ್​: ಅಪಘಾತದಲ್ಲಿ ಪಂತ್​ ಬೆನ್ನು, ತಲೆ ಮತ್ತು ಪಾದಕ್ಕೆ ಗಾಯಗಳಾಗಿವೆ. ವೈದ್ಯರ ತಂಡ ಮೇಲ್ವಿಚಾರಣೆ ನಡೆಸುತ್ತಿದೆ. ಪ್ಲಾಸ್ಟಿಕ್​ ಸರ್ಜರಿ ಅಗತ್ಯವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗನನ್ನು ದೆಹಲಿಗೆ ವಿಮಾನದ ಮೂಲಕ ಕರೆದೊಯ್ಯುವ ಬಗ್ಗೆ ಚಿಂತನೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿದ್ರೆಯ ಮಂಪರು, ಅತಿವೇಗ ಕಾರಣ: ಕ್ರಿಕೆಟಿಗ ರಿಷಭ್​​ ಪಂತ್​ ಒಂಟಿಯಾಗಿ ಕಾರು ಚಲಾಯಿಸಿಕೊಂಡು ರೂರ್ಕಿಗೆ ಹೋಗುತ್ತಿದ್ದಾಗ ನಿದ್ರೆಯ ಮಂಪರು ಬಂದಿದೆ. ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ. ತಾಯಿಗೆ ಹೊಸವರ್ಷದ ಅಚ್ಚರಿ ನೀಡುವ ಉದ್ದೇಶದಿಂದ ಆತ ಕಾರಿನಲ್ಲಿ ಏಕಾಂಗಿಯಾಗಿ ಪಯಣಿಸಿದ್ದರು. ಈ ವೇಳೆ ನಿದ್ರೆಯ ಕಾರಣ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾರೆ. ಸೀಟ್​ ಬೆಲ್ಟ್​ ಕೂಡ ಹಾಕಿಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಂತ್​ ಚೇತರಿಕೆಗೆ ಪ್ರಧಾನಿ ಮೋದಿ ಶುಭಹಾರೈಕೆ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಬ್​ ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ. ಟ್ವೀಟ್​ ಮಾಡಿರುವ ಅವರು, ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅಪಘಾತಕ್ಕೀಡಾಗಿದ್ದು, ನೋವು ತಂದಿದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪಂತ್​ಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಆಘಾತದಿಂದ ಹೊರಬರಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ಅದರ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಸಿಐ ನೋಡಿಕೊಳ್ಳುತ್ತದೆ. ರಿಷಭ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ನಮ್ಮ ತಂಡ ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಓದಿ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್​​ ಪಂತ್​ ರಕ್ಷಿಸಿದ ಚಾಲಕ ಸುಶೀಲ್​: ಆಪತ್ಬಾಂಧವ ಹೇಳಿದ ಕರಾಳಕಥೆ

ನವದೆಹಲಿ: ಯುವ ಕ್ರಿಕೆಟಿಗ ರಿಷಬ್​ ಪಂತ್​ ತನ್ನ ತಾಯಿಗೆ ಹೊಸ ವರ್ಷದ ಸರ್​ಪ್ರೈಸ್​ ನೀಡಲು ಮನೆಗೆ ಹೊರಟಿದ್ದಾಗ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಬೆನ್ನು, ತಲೆ, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್​ ಅವರನ್ನು ದೆಹಲಿಗೆ ಏರ್​ಲಿಫ್ಟ್​ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರಿಷಬ್​ ಪಂತ್​ ದೆಹಲಿಯಿಂದ ತಮ್ಮ ನಿವಾಸವಿರುವ ಉತ್ತರಾಖಂಡದ ರೂರ್ಕಿಗೆ ತೆರಳುತ್ತಿದ್ದರು. ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಬೆಳಗಿನ ಜಾವದ ವೇಳೆ ಹೋಗುತ್ತಿದ್ದಾಗ 5.20 ರ ಸುಮಾರಿನಲ್ಲಿ ಡಿವೈಡರ್​ಗೆ ಗುದ್ದಿ ಭೀಕರ ಅಪಘಾತಕ್ಕೀಡಾಗಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಕಾರಿನ ಗಾಜು ಹೊಡೆದು ಹೊರಬಿದ್ದ ಪಂತ್​ ಜೀವ ಉಳಿಸಿಕೊಂಡಿದ್ದಾರೆ.

ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್​​ ಅಪಘಾತವನ್ನು ಗಮನಿಸಿ ಅದರ ಚಾಲಕ ಮತ್ತು ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ. ಆಂಬ್ಯುಲೆನ್ಸ್​ಗೆ ಕರೆ ಮಾಡಿ ಪಂತ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಯಲ್ಲಿ ಯುವ ಕ್ರಿಕೆಟಿಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಏರ್​ಲಿಫ್ಟ್​: ಅಪಘಾತದಲ್ಲಿ ಪಂತ್​ ಬೆನ್ನು, ತಲೆ ಮತ್ತು ಪಾದಕ್ಕೆ ಗಾಯಗಳಾಗಿವೆ. ವೈದ್ಯರ ತಂಡ ಮೇಲ್ವಿಚಾರಣೆ ನಡೆಸುತ್ತಿದೆ. ಪ್ಲಾಸ್ಟಿಕ್​ ಸರ್ಜರಿ ಅಗತ್ಯವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗನನ್ನು ದೆಹಲಿಗೆ ವಿಮಾನದ ಮೂಲಕ ಕರೆದೊಯ್ಯುವ ಬಗ್ಗೆ ಚಿಂತನೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿದ್ರೆಯ ಮಂಪರು, ಅತಿವೇಗ ಕಾರಣ: ಕ್ರಿಕೆಟಿಗ ರಿಷಭ್​​ ಪಂತ್​ ಒಂಟಿಯಾಗಿ ಕಾರು ಚಲಾಯಿಸಿಕೊಂಡು ರೂರ್ಕಿಗೆ ಹೋಗುತ್ತಿದ್ದಾಗ ನಿದ್ರೆಯ ಮಂಪರು ಬಂದಿದೆ. ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ. ತಾಯಿಗೆ ಹೊಸವರ್ಷದ ಅಚ್ಚರಿ ನೀಡುವ ಉದ್ದೇಶದಿಂದ ಆತ ಕಾರಿನಲ್ಲಿ ಏಕಾಂಗಿಯಾಗಿ ಪಯಣಿಸಿದ್ದರು. ಈ ವೇಳೆ ನಿದ್ರೆಯ ಕಾರಣ ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದಾರೆ. ಸೀಟ್​ ಬೆಲ್ಟ್​ ಕೂಡ ಹಾಕಿಕೊಂಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಂತ್​ ಚೇತರಿಕೆಗೆ ಪ್ರಧಾನಿ ಮೋದಿ ಶುಭಹಾರೈಕೆ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಬ್​ ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ. ಟ್ವೀಟ್​ ಮಾಡಿರುವ ಅವರು, ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅಪಘಾತಕ್ಕೀಡಾಗಿದ್ದು, ನೋವು ತಂದಿದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪಂತ್​ಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಆಘಾತದಿಂದ ಹೊರಬರಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ಅದರ ಸಂಪೂರ್ಣ ಜವಾಬ್ದಾರಿಯನ್ನು ಬಿಸಿಸಿಐ ನೋಡಿಕೊಳ್ಳುತ್ತದೆ. ರಿಷಭ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ನಮ್ಮ ತಂಡ ಮತ್ತು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಓದಿ: ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್​​ ಪಂತ್​ ರಕ್ಷಿಸಿದ ಚಾಲಕ ಸುಶೀಲ್​: ಆಪತ್ಬಾಂಧವ ಹೇಳಿದ ಕರಾಳಕಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.