ETV Bharat / sports

ವಿರಾಟ್ 3ಕ್ಕೆ ಮರಳಲಿ, ದೇವದತ್ ಜೊತೆ ಈತ ಇನ್ನಿಂಗ್ಸ್ ಆರಂಭಿಸಿದ್ರೆ ಆರ್​ಸಿಬಿಗೆ ಉತ್ತಮ: ಸೆಹ್ವಾಗ್ ಸಲಹೆ

author img

By

Published : May 1, 2021, 7:40 PM IST

ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 34 ರನ್​ಗಳ ಸೋಲು ಕಂಡ ನಂತರ ವಿರೇಂದ್ರ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ತಂಡದಲ್ಲಿ ರಜತ್ ಪಾಟಿದಾರ್​ ಸ್ಥಾನ ಮತ್ತು ಮ್ಯಾಕ್ಸ್​ವೆಲ್ ಹಾಗೂ ವಿಲಿಯರ್ಸ್​ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಪ್ರಶ್ನಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮುಂಬೈ: ಕೇರಳದ ಉದಯೋನ್ಮುಖ ಪ್ರತಿಭೆ ಮೊಹಮ್ಮದ್ ಅಜರುದ್ದೀನ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯಬೇಕು, ವಿರಾಟ್ ಕೊಹ್ಲಿ ತಮ್ಮ 3ನೇ ಕ್ರಮಾಂಕಕ್ಕೆ ಮರಳಿದರೆ ತಂಡ ಸಮತೋಲನದಲ್ಲಿರುತ್ತದೆ. ಜೊತೆಗೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 34 ರನ್​ಗಳ ಸೋಲು ಕಂಡ ನಂತರ ವಿರೇಂದ್ರ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ತಂಡದಲ್ಲಿ ರಜತ್ ಪಾಟಿದಾರ್​ ಸ್ಥಾನ ಮತ್ತು ಮ್ಯಾಕ್ಸ್​ವೆಲ್ ಹಾಗೂ ವಿಲಿಯರ್ಸ್​ ಅವರ ಬ್ಯಾಟಿಂಗ್ ಕ್ರಮಾಂಕ ಪ್ರಶ್ನಿಸಿದ್ದಾರೆ.

"ನನ್ನ ಪ್ರಕಾರ ವಿರಾಟ್​ ತಮ್ಮ ಮೂಲ ಬ್ಯಾಟಿಂಗ್ ಕ್ರಮಾಂಕವಾದ 3ಕ್ಕೆ ಮರಳಿ ಮತ್ತು ಮೊಹಮ್ಮದ್ ಅಜರುದ್ದೀನ್​ಗೆ ಆರಂಭಿಕ ಜವಾಬ್ದಾರಿ ನೀಡಬೇಕು. ಪ್ರಸ್ತುತ ಪಾಟಿದಾರ್​ಗಿಂತಲೂ ಆರ್​ಸಿಬಿಯಲ್ಲಿ ಅಜರುದ್ದೀನ್ ಅತ್ಯುತ್ತಮ ಆಯ್ಕೆ. ಕೊಹ್ಲಿ ಮೂರರಲ್ಲಿ, ಮ್ಯಾಕ್ಸಿ ಮತ್ತು ಎಬಿಡಿ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು" ಎಂದು ಕ್ರಿಕ್​ಬಜ್ ಸಂವಾದದ ವೇಳೆ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ನಿಮಗೆ ಮೂವರು ವಿಶ್ವದರ್ಜೆಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಸಿಗಲಿದ್ದಾರೆ. ಒಂದು ವೇಳೆ ದೇವದತ್ ಪಡಿಕ್ಕಲ್ ಮತ್ತು ಅಜರುದ್ದೀನ್ ಆರಂಭಿಕರಾಗಿ ವಿಫಲರಾದರೆ ಈ ಮೂವರು ಸಮಸ್ಯೆಯಿಂದ ಹೊರತರಲು ಸಮರ್ಥರಾಗಲಿದ್ದಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಆರ್​ಸಿಬಿಯ ಯಾವೊಬ್ಬ ಬ್ಯಾಟ್ಸ್​ಮನ್ ಆಕ್ರಮಣಕಾರಿತಾಗಿ ಕಾಣಿಸಲಿಲ್ಲ, ವಿರಾಟ್​ 34 ಎಸೆತಕ್ಕೆ 35, ಪಾಟಿದಾರ್ 30 ಎಸೆತಗಳಿಗೆ 31 ರನ್​ಗಳಿಸಿದರೆ, ಪಡಿಕ್ಕಲ್ 7, ಮ್ಯಾಕ್ಸ್​ವೆಲ್ 0 ಹಾಗೂ ವಿಲಿಯರ್ಸ್ 3 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಬೌಲರ್​ ಹರ್ಷಲ್ ಪಟೇಲ್ 13 ಎಸೆತಗಳಲ್ಲಿ 31 ರನ್​ಗಳಿಸಿದರಾದರೂ ಅಷ್ಟರಲ್ಲಿ ಆರ್​ಸಿಗೆ ಸೋಲು ಖಚಿತವಾಗಿತ್ತು.

ಇದನ್ನು ಓದಿ:ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿಗೆ ಈ ಸಂಗತಿಗಳು ಕಾರಣವಾಯ್ತು ಎಂದ ವಿರಾಟ್​ ಕೊಹ್ಲಿ

ಮುಂಬೈ: ಕೇರಳದ ಉದಯೋನ್ಮುಖ ಪ್ರತಿಭೆ ಮೊಹಮ್ಮದ್ ಅಜರುದ್ದೀನ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಯಬೇಕು, ವಿರಾಟ್ ಕೊಹ್ಲಿ ತಮ್ಮ 3ನೇ ಕ್ರಮಾಂಕಕ್ಕೆ ಮರಳಿದರೆ ತಂಡ ಸಮತೋಲನದಲ್ಲಿರುತ್ತದೆ. ಜೊತೆಗೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 34 ರನ್​ಗಳ ಸೋಲು ಕಂಡ ನಂತರ ವಿರೇಂದ್ರ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ತಂಡದಲ್ಲಿ ರಜತ್ ಪಾಟಿದಾರ್​ ಸ್ಥಾನ ಮತ್ತು ಮ್ಯಾಕ್ಸ್​ವೆಲ್ ಹಾಗೂ ವಿಲಿಯರ್ಸ್​ ಅವರ ಬ್ಯಾಟಿಂಗ್ ಕ್ರಮಾಂಕ ಪ್ರಶ್ನಿಸಿದ್ದಾರೆ.

"ನನ್ನ ಪ್ರಕಾರ ವಿರಾಟ್​ ತಮ್ಮ ಮೂಲ ಬ್ಯಾಟಿಂಗ್ ಕ್ರಮಾಂಕವಾದ 3ಕ್ಕೆ ಮರಳಿ ಮತ್ತು ಮೊಹಮ್ಮದ್ ಅಜರುದ್ದೀನ್​ಗೆ ಆರಂಭಿಕ ಜವಾಬ್ದಾರಿ ನೀಡಬೇಕು. ಪ್ರಸ್ತುತ ಪಾಟಿದಾರ್​ಗಿಂತಲೂ ಆರ್​ಸಿಬಿಯಲ್ಲಿ ಅಜರುದ್ದೀನ್ ಅತ್ಯುತ್ತಮ ಆಯ್ಕೆ. ಕೊಹ್ಲಿ ಮೂರರಲ್ಲಿ, ಮ್ಯಾಕ್ಸಿ ಮತ್ತು ಎಬಿಡಿ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು" ಎಂದು ಕ್ರಿಕ್​ಬಜ್ ಸಂವಾದದ ವೇಳೆ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ನಿಮಗೆ ಮೂವರು ವಿಶ್ವದರ್ಜೆಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಸಿಗಲಿದ್ದಾರೆ. ಒಂದು ವೇಳೆ ದೇವದತ್ ಪಡಿಕ್ಕಲ್ ಮತ್ತು ಅಜರುದ್ದೀನ್ ಆರಂಭಿಕರಾಗಿ ವಿಫಲರಾದರೆ ಈ ಮೂವರು ಸಮಸ್ಯೆಯಿಂದ ಹೊರತರಲು ಸಮರ್ಥರಾಗಲಿದ್ದಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಆರ್​ಸಿಬಿಯ ಯಾವೊಬ್ಬ ಬ್ಯಾಟ್ಸ್​ಮನ್ ಆಕ್ರಮಣಕಾರಿತಾಗಿ ಕಾಣಿಸಲಿಲ್ಲ, ವಿರಾಟ್​ 34 ಎಸೆತಕ್ಕೆ 35, ಪಾಟಿದಾರ್ 30 ಎಸೆತಗಳಿಗೆ 31 ರನ್​ಗಳಿಸಿದರೆ, ಪಡಿಕ್ಕಲ್ 7, ಮ್ಯಾಕ್ಸ್​ವೆಲ್ 0 ಹಾಗೂ ವಿಲಿಯರ್ಸ್ 3 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಬೌಲರ್​ ಹರ್ಷಲ್ ಪಟೇಲ್ 13 ಎಸೆತಗಳಲ್ಲಿ 31 ರನ್​ಗಳಿಸಿದರಾದರೂ ಅಷ್ಟರಲ್ಲಿ ಆರ್​ಸಿಗೆ ಸೋಲು ಖಚಿತವಾಗಿತ್ತು.

ಇದನ್ನು ಓದಿ:ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿಗೆ ಈ ಸಂಗತಿಗಳು ಕಾರಣವಾಯ್ತು ಎಂದ ವಿರಾಟ್​ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.