ETV Bharat / sports

IPL 2021: ಗೆಲುವಿನ ಹಳಿಗೆ ಮರಳಲು ಮುಂಬೈ ಕಾತರ; ಕೆಕೆಆರ್​ಗೆ ಗೆಲುವು ಅನಿವಾರ್ಯ

author img

By

Published : Sep 22, 2021, 10:00 PM IST

8 ಪಂದ್ಯಗಳಿಂದ 6 ಅಂಕ ಹೊಂದಿರುವ ಕೆಕೆಆರ್​ಗೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈಗಾಗಲೇ ಡೆಲ್ಲಿ ಮತ್ತು ಸಿಎಸ್​ಕೆ ಪ್ಲೇ ಆಫ್​ಗೆ ತುಂಬಾ ಹತ್ತಿರದಲ್ಲಿವೆ. ಆರ್​ಸಿಬಿ 10 ಅಂಕ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಪಂದ್ಯಗಳು ಮಾರ್ಗನ್​ ಪಡೆಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.

Kolkata knight riders vs Mumbai Indians
ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟರ್​ ರೈಡರ್ಸ್

ಅಬುಧಾಬಿ: ನಾಯಕ ರೋಹಿತ್​ ಶರ್ಮಾ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾಗಿರುವ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಮಣಿಸಿರುವ ವಿಶ್ವಾಸದಲ್ಲಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಕಣಕ್ಕಿಳಿಯಲಿದೆ.

ಯುಎಇಯಲ್ಲಿ ಐಪಿಎಲ್ ಪುನಾರಂಭಗೊಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಆ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಗುರುವಾರದ ಪಂದ್ಯಕ್ಕೆ ರೋಹಿತ್​ ಲಭ್ಯರಿದ್ದಾರೆ ಎಂದು ಕೋಚ್​ ಜಯವರ್ದನೆ ಈಗಾಗಲೇ ತಿಳಿಸಿದ್ದಾರೆ.

ಮತ್ತೊಂದೆಡೆ, ಕೆಕೆಆರ್ ಬಲಿಷ್ಠ ಆರ್​ಸಿಬಿ ವಿರುದ್ಧ 9 ವಿಕೆಟ್​​ಗಳ ಸುಲಭ ಜಯ ಸಾಧಿಸಿದ ಆತ್ಮ ವಿಶ್ವಾಸದಲ್ಲಿದೆ. ಬೌಲರ್​ಗಳು ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಹಾಗಾಗಿ ಚಾಂಪಿಯನ್​ ತಂಡದ ವಿರುದ್ಧ ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದಾರೆ.

ಮುಂಬೈ ಪ್ರಸ್ತುತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬಲಿಷ್ಠ ತಂಡವಾದರೂ ಸಿಎಸ್​ಕೆ ವಿರುದ್ಧ ಕೇವಲ 157 ರನ್​ಗಳ ಗುರಿ ಬೆನ್ನಟ್ಟಲಾಗದೇ ಸೋಲು ಕಂಡಿದ್ದು ತಂಡದ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ. ಸೌರಭ್ ತಿವಾರಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್​ಮನ್​​ಗಳ ವೈಫಲ್ಯ ಅನುಭವಿಸಿದ್ದರು. ಇದೀಗ ಅತ್ಯುತ್ತಮ ಬೌಲಿಂಗ್ ಪಡೆಯಾಗಿರುವ ಕೆಕೆಆರ್ ವಿರುದ್ಧ ಜವಾಬ್ದಾರಿ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯಿದೆ.

ಇನ್ನು 8 ಪಂದ್ಯಗಳಿಂದ 6 ಅಂಕ ಹೊಂದಿರು ಕೆಕೆಆರ್​ಗೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈಗಾಗಲೇ ಡೆಲ್ಲಿ ಮತ್ತು ಸಿಎಸ್​ಕೆ ಪ್ಲೇ ಆಫ್​ಗೆ ತುಂಬಾ ಹತ್ತಿರದಲ್ಲಿವೆ. ಆರ್​ಸಿಬಿ 10 ಅಂಕ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಪಂದ್ಯಗಳು ಮಾರ್ಗನ್​ ಪಡೆಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ಗೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗನ​ ಮೇಲೆ ಭ್ರಷ್ಟಾಚಾರ ಆರೋಪ

ಅಬುಧಾಬಿ: ನಾಯಕ ರೋಹಿತ್​ ಶರ್ಮಾ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾಗಿರುವ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಮಣಿಸಿರುವ ವಿಶ್ವಾಸದಲ್ಲಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಕಣಕ್ಕಿಳಿಯಲಿದೆ.

ಯುಎಇಯಲ್ಲಿ ಐಪಿಎಲ್ ಪುನಾರಂಭಗೊಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಆ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಗುರುವಾರದ ಪಂದ್ಯಕ್ಕೆ ರೋಹಿತ್​ ಲಭ್ಯರಿದ್ದಾರೆ ಎಂದು ಕೋಚ್​ ಜಯವರ್ದನೆ ಈಗಾಗಲೇ ತಿಳಿಸಿದ್ದಾರೆ.

ಮತ್ತೊಂದೆಡೆ, ಕೆಕೆಆರ್ ಬಲಿಷ್ಠ ಆರ್​ಸಿಬಿ ವಿರುದ್ಧ 9 ವಿಕೆಟ್​​ಗಳ ಸುಲಭ ಜಯ ಸಾಧಿಸಿದ ಆತ್ಮ ವಿಶ್ವಾಸದಲ್ಲಿದೆ. ಬೌಲರ್​ಗಳು ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಹಾಗಾಗಿ ಚಾಂಪಿಯನ್​ ತಂಡದ ವಿರುದ್ಧ ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದಾರೆ.

ಮುಂಬೈ ಪ್ರಸ್ತುತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬಲಿಷ್ಠ ತಂಡವಾದರೂ ಸಿಎಸ್​ಕೆ ವಿರುದ್ಧ ಕೇವಲ 157 ರನ್​ಗಳ ಗುರಿ ಬೆನ್ನಟ್ಟಲಾಗದೇ ಸೋಲು ಕಂಡಿದ್ದು ತಂಡದ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ. ಸೌರಭ್ ತಿವಾರಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್​ಮನ್​​ಗಳ ವೈಫಲ್ಯ ಅನುಭವಿಸಿದ್ದರು. ಇದೀಗ ಅತ್ಯುತ್ತಮ ಬೌಲಿಂಗ್ ಪಡೆಯಾಗಿರುವ ಕೆಕೆಆರ್ ವಿರುದ್ಧ ಜವಾಬ್ದಾರಿ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯಿದೆ.

ಇನ್ನು 8 ಪಂದ್ಯಗಳಿಂದ 6 ಅಂಕ ಹೊಂದಿರು ಕೆಕೆಆರ್​ಗೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈಗಾಗಲೇ ಡೆಲ್ಲಿ ಮತ್ತು ಸಿಎಸ್​ಕೆ ಪ್ಲೇ ಆಫ್​ಗೆ ತುಂಬಾ ಹತ್ತಿರದಲ್ಲಿವೆ. ಆರ್​ಸಿಬಿ 10 ಅಂಕ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಪಂದ್ಯಗಳು ಮಾರ್ಗನ್​ ಪಡೆಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.

ಇದನ್ನೂ ಓದಿ: ವೆಸ್ಟ್​ ಇಂಡೀಸ್​ಗೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗನ​ ಮೇಲೆ ಭ್ರಷ್ಟಾಚಾರ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.