ETV Bharat / sports

ಮುಂಬೈನಲ್ಲಿ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ : ವಾರದಲ್ಲಿ ತಂಡಕ್ಕೆ ಸೇರ್ಪಡೆ ಸಾಧ್ಯತೆ - ಇಂಡಿಯನ್ ಪ್ರೀಮಿಯರ್ ಲೀಗ್

ಔಷದಿಯನ್ನು ತೆಗೆದುಕೊಂಡರೂ ನೋವು ಶಮನವಾಗದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಾಗಿ, ಡೆಲ್ಲಿ ವಿರುದ್ಧ ಮಯಾಂಕ್ ಅಗರ್​ವಾಲ್ ತಂಡವನ್ನು ಮುನ್ನಡೆಸಿದ್ದರು..

ಮುಂಬೈನಲ್ಲಿ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಮುಂಬೈನಲ್ಲಿ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ
author img

By

Published : May 3, 2021, 7:07 PM IST

ಮುಂಬೈ : ಪಂಜಾಬ್ ಕಿಂಗ್ಸ್​ ತಂಡದ ನಾಯಕ ಕೆ ಎಲ್ ರಾಹುಲ್ ಸೋಮವಾರ ಯಶಸ್ವಿ ಅಪೆಂಡಿಕ್ಸ್​ ಸರ್ಜರಿಗೆ ಒಳಗಾಗಿದ್ದಾರೆ. ಒಂದು ವಾರ ಕ್ವಾರಂಟೈನ್ ಮುಗಿಸಿ ಬಯೋಬಬಲ್​ನಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಕೆ ಎಲ್​ ರಾಹುಲ್ ಚಾರ್ಟರ್ ಫ್ಲೈಟ್ ಮೂಲಕ ಮುಂಬೈಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ವಾರದೊಳಗೆ ರಾಹುಲ್​ ಮತ್ತೆ ದೈಹಿಕ ಚಟುವಟಿಕೆ ಆರಂಭಿಸಬಹುದೆಂದು ವೈದ್ಯರು ತಿಳಿಸಿದ್ದಾರೆಂದು ಇಎಸ್​ಪಿಎನ್ ಕ್ರಿಕ್​ಇನ್ಫೋ ವರದಿ ಮಾಡಿದೆ.

ಭಾನುವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮುಂದಿನ ಒಂದೆರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಶನಿವಾರ ರಾತ್ರಿ ಅವರು ಹೊಟ್ಟೆ ನೋವೆಂದು ತಿಳಿಸಿದ್ದರು.

ಔಷದಿಯನ್ನು ತೆಗೆದುಕೊಂಡರೂ ನೋವು ಶಮನವಾಗದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಾಗಿ, ಡೆಲ್ಲಿ ವಿರುದ್ಧ ಮಯಾಂಕ್ ಅಗರ್​ವಾಲ್ ತಂಡವನ್ನು ಮುನ್ನಡೆಸಿದ್ದರು.

ಈ ಪಂದ್ಯದಲ್ಲಿ ಪಂಜಾಬ್ ನಾಯಕ ಮಯಾಂಕ್ ಅವರ 99 ರನ್​ಗಳ ನೆರವಿನಿಂದ 166 ರನ್​ಗಳಿಸಿತ್ತು. ಆದರೆ, ಪೃಥ್ವಿ ಶಾ ಮತ್ತು ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 14 ಎಸೆತಗಳಿರುವಂತೆಯೇ ಡೆಲ್ಲಿ ಚೇಸ್ ಮಾಡಿ ಗೆದ್ದಿತ್ತು.

ಇದನ್ನು ಓದಿ:ಐಪಿಎಲ್​ಗೆ ಕೊರೊನಾತಂಕ!!: ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲೂ ಮೂವರಿಗೆ ಕೊರೊನಾ ದೃಢ

ಮುಂಬೈ : ಪಂಜಾಬ್ ಕಿಂಗ್ಸ್​ ತಂಡದ ನಾಯಕ ಕೆ ಎಲ್ ರಾಹುಲ್ ಸೋಮವಾರ ಯಶಸ್ವಿ ಅಪೆಂಡಿಕ್ಸ್​ ಸರ್ಜರಿಗೆ ಒಳಗಾಗಿದ್ದಾರೆ. ಒಂದು ವಾರ ಕ್ವಾರಂಟೈನ್ ಮುಗಿಸಿ ಬಯೋಬಬಲ್​ನಲ್ಲಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಕೆ ಎಲ್​ ರಾಹುಲ್ ಚಾರ್ಟರ್ ಫ್ಲೈಟ್ ಮೂಲಕ ಮುಂಬೈಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ವಾರದೊಳಗೆ ರಾಹುಲ್​ ಮತ್ತೆ ದೈಹಿಕ ಚಟುವಟಿಕೆ ಆರಂಭಿಸಬಹುದೆಂದು ವೈದ್ಯರು ತಿಳಿಸಿದ್ದಾರೆಂದು ಇಎಸ್​ಪಿಎನ್ ಕ್ರಿಕ್​ಇನ್ಫೋ ವರದಿ ಮಾಡಿದೆ.

ಭಾನುವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮುಂದಿನ ಒಂದೆರಡು ಪಂದ್ಯಗಳಿಗೆ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಶನಿವಾರ ರಾತ್ರಿ ಅವರು ಹೊಟ್ಟೆ ನೋವೆಂದು ತಿಳಿಸಿದ್ದರು.

ಔಷದಿಯನ್ನು ತೆಗೆದುಕೊಂಡರೂ ನೋವು ಶಮನವಾಗದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಾಗಿ, ಡೆಲ್ಲಿ ವಿರುದ್ಧ ಮಯಾಂಕ್ ಅಗರ್​ವಾಲ್ ತಂಡವನ್ನು ಮುನ್ನಡೆಸಿದ್ದರು.

ಈ ಪಂದ್ಯದಲ್ಲಿ ಪಂಜಾಬ್ ನಾಯಕ ಮಯಾಂಕ್ ಅವರ 99 ರನ್​ಗಳ ನೆರವಿನಿಂದ 166 ರನ್​ಗಳಿಸಿತ್ತು. ಆದರೆ, ಪೃಥ್ವಿ ಶಾ ಮತ್ತು ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇನ್ನು 14 ಎಸೆತಗಳಿರುವಂತೆಯೇ ಡೆಲ್ಲಿ ಚೇಸ್ ಮಾಡಿ ಗೆದ್ದಿತ್ತು.

ಇದನ್ನು ಓದಿ:ಐಪಿಎಲ್​ಗೆ ಕೊರೊನಾತಂಕ!!: ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲೂ ಮೂವರಿಗೆ ಕೊರೊನಾ ದೃಢ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.