ETV Bharat / sports

ಮಲ್ಲೇಶ್ವರದ ಸೆಂಟ್ರಲ್​ ಟಿಫಿನ್​ ರೂಂನಲ್ಲಿ ದೋಸೆ ಸವಿದ ವಿರುಷ್ಕಾ.. - ETV Bharath Kannada news

ಬೆಂಗಳೂರಿನ ಹೋಟೆಲ್​ ತಿಂಡಿಗಳನ್ನು ತಿಂದ ಫೋಟೋವನ್ನು ಅನುಷ್ಕಾ ಶರ್ಮಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

virat kohli and Anushka Sharma Lunch Date In Bengaluru
ಮಲ್ಲೇಶ್ವರದ ಸೆಂಟ್ರೆಲ್​ ಟಿಫಿನ್​ ರೂಂನಲ್ಲಿ ದೋಸೆ ಸವಿದ ವಿರುಷ್ಕ...
author img

By

Published : Apr 22, 2023, 8:55 PM IST

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ ಈ ವರ್ಷ ಮತ್ತೆ ಕಳೆಗಟ್ಟಿದೆ. ಅದಕ್ಕೆ ಕಾರಣ ಕೋವಿಡ್​ ದೂರ ಸರಿದಿರುವುದು. 2018ರ ನಂತರ ಮತ್ತೆ ತವರು ಮೈದಾನ ಮತ್ತು ಪ್ರವಾಸಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ನಾಲ್ಕು ವರ್ಷಗಳ ನಂತರ ತವರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಇದರಿಂದ ಅಭಿಮಾನಿಗಳು ಫುಲ್​ ಖುಷ್​​​ ಆಗಿದ್ದಾರೆ.

ವಿರುಷ್ಕಾ ಜೋಡಿಯ ಬೆಂಗಳೂರು ಪಯಣ: ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ಐಪಿಎಲ್ ಟೂರ್ನಿಯ ಮಧ್ಯೆ ಕೊಂಚ ಸಮಯ ಮಾಡಿಕೊಂಡ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಮಲ್ಲೇಶ್ವರದ ಸಿಟಿಆರ್‌ (ಸೆಂಟ್ರಲ್​ ಟಿಫಿನ್​ ರೂಂ) ಹೋಟೆಲ್​ಗೆ ತೆರಳಿ ದೋಸೆ ಸವಿದಿದ್ದಾರೆ.

ಅನಿಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಸುಮಾರು 8 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೋಟೆಲ್​ನಲ್ಲಿ ಸವಿದ ಫುಡ್​ಗಳ ಜೊತೆಗೆ ಮೆನುವನ್ನು ಶೇರ್​ ಮಾಡಿಕೊಂಡಿದ್ದಾರೆ. ಮಸಾಲೆದೋಸೆ, ಮಂಗಳೂರು ಬೋಂಡಾ ಮತ್ತು ಕೇಸರಿಬಾತ್​ ಸ್ವಾದಿಷ್ಟಕರವಾಗಿತ್ತು ಎಂದು ಇಷ್ಟಪಟ್ಟು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದು, ಇನ್ನೊಮ್ಮ ಬರುವುದಾಗಿ ಹೇಳಿದ್ದಾರೆ. ಈ ಬಾರಿ ಬಹುತೇಕ ಪಂದ್ಯಗಳಲ್ಲಿ ವಿರಾಟ್​ ಜೊತೆ ಅನುಷ್ಕಾ ಪ್ರಯಾಣ ಮಾಡುತ್ತಿದ್ದಾರೆ.

virat kohli and Anushka Sharma Lunch Date In Bengaluru
ಮಲ್ಲೇಶ್ವರದ ಸೆಂಟ್ರಲ್​ ಟಿಫಿನ್​ ರೂಂನಲ್ಲಿ ದೋಸೆ ಸವಿದ ವಿರುಷ್ಕ

ಕೊಹ್ಲಿ ದಂಪತಿ ಒಳಗೆ ದೋಸೆ ಸವಿಯುತ್ತಿದ್ದರೆ ಹೊರಗಡೆ ಆರ್​ಸಿಬಿ ಎಂದು ಕೂಗು ಮೊಳಗಿತ್ತು. ಹೋಟೆಲ್‌ ಹೊರಗೆ ಸ್ಟಾರ್​ ದಂಪತಿ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.

ವಿರಾಟ್​ ಕೊಹ್ಲಿ ಬೆಂಗಳೂರನ್ನು ಎರಡನೇ ತವರು ಎಂದು ಕರೆದಿದ್ದಾರೆ. ಅದಕ್ಕೆ ಕಾರಣ 2008 ರಿಂದ ಆರ್​ಸಿಬಿಯಲ್ಲಿ ಆಡುತ್ತಿರುವ ವಿರಾಟ್​ ಕೊಹ್ಲಿಗೆ ಇಲ್ಲಿಯ ಅಭಿಮಾನಿಗಳು ಕೊಟ್ಟಿರುವ ಪ್ರೀತಿ ಆ ರೀತಿಯದ್ದಾಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 10 ತಂಡಗಳಿವೆ. ಆದರೆ, ಆರ್​ಸಿಬಿಯ ಅಭಿಮಾನ ಬೇರೆ ಹಂತದಲ್ಲಿದೆ. ಆರ್​ಸಿಬಿಯ 16 ವರ್ಷಗಳ ಜರ್ನಿಯೇ ಹಾಗಿದೆ. ಐಪಿಎಲ್​ನ ಬಹುತೇಕ ದಾಖಲೆಗಳು ಈ ತಂಡದಲ್ಲಿದ್ದು, ಚಾಂಪಿಯನ್​ ಪಟ್ಟಕ್ಕೆ ಮಾತ್ರ ಏರಿಲ್ಲ. ಕಪ್​ ಗೆಲ್ಲದಿರುವುದೇ ಒಂದು ಸ್ಲೋಗನ್​ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ "ಈ ಸಲ ಕಪ್​ ನಮ್ದೆ" ಫೇಮಸ್​ ಆಗಿತ್ತು.

ನಾಳೆ ರಾಜಸ್ಥಾನ್ ರಾಯಲ್ಸ್ ಆರ್​ಸಿಬಿ ಪಂದ್ಯ: ನಾಳೆ ರಾಜಸ್ಥಾನ್​ ವಿರುದ್ಧದ ಆರ್​ಸಿಬಿ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್​ಸಿಬಿ ಮತ್ತು ರಾಜಸ್ಥಾನ ತಂಡಗಳು ನಗರಕ್ಕೆ ಬಂದು ತಲುಪಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಾಳೆ ಹಸಿರು ಜರ್ಸಿಯಲ್ಲಿ ರಾಜಸ್ಥಾನ ರಾಯಲ್​ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ನ್ನು ಸೋಲಿಸಿದ ಆರ್​ಸಿಬಿ ಗೆಲುವಿನ ಲಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.

ಇದಕ್ಕೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಏಪ್ರಿಲ್​ 17 ರಂದು ನಡೆದ ಪಂದ್ಯದಲ್ಲಿ ಬೆಂಗಳೂರಿನ ಈ ಪಿಚ್​ನಲ್ಲಿ ಸೋಲನುಭವಿಸಿತ್ತು. ಈ ತವರಿನ ಸೋಲಿನ ಕಹಿಯನ್ನು ಮರೆಸಲು ರಾಜಸ್ಥಾನವನ್ನು ಮಣಿಸಬೇಕಿದೆ. ಲಕ್ನೋ ವಿರುದ್ಧ ಸೋತಿರುವ ರಾಜಸ್ಥಾನ ನಾಳೆ ಗೆಲುವಿಗಾಗಿ ಹವಣಿಸುತ್ತಿದೆ.

ಇದನ್ನೂ ಓದಿ: ನಾಲ್ಕು ಇನ್ನಿಂಗ್ಸ್​ಗಳ ಏಕದಿನದ ಅಭಿಪ್ರಾಯ ತಿಳಿಸಿದ ಸಚಿನ್​: 50ನೇ ವಸಂತ ಪ್ರವೇಶಿಸುವ ಲಿಟಲ್​ ಮಾಸ್ಟರ್​ ವಿಶೇಷ ಸಂಭ್ರಮ

ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್​ ಈ ವರ್ಷ ಮತ್ತೆ ಕಳೆಗಟ್ಟಿದೆ. ಅದಕ್ಕೆ ಕಾರಣ ಕೋವಿಡ್​ ದೂರ ಸರಿದಿರುವುದು. 2018ರ ನಂತರ ಮತ್ತೆ ತವರು ಮೈದಾನ ಮತ್ತು ಪ್ರವಾಸಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ನಾಲ್ಕು ವರ್ಷಗಳ ನಂತರ ತವರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಇದರಿಂದ ಅಭಿಮಾನಿಗಳು ಫುಲ್​ ಖುಷ್​​​ ಆಗಿದ್ದಾರೆ.

ವಿರುಷ್ಕಾ ಜೋಡಿಯ ಬೆಂಗಳೂರು ಪಯಣ: ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಂದು ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ. ಐಪಿಎಲ್ ಟೂರ್ನಿಯ ಮಧ್ಯೆ ಕೊಂಚ ಸಮಯ ಮಾಡಿಕೊಂಡ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ಮಲ್ಲೇಶ್ವರದ ಸಿಟಿಆರ್‌ (ಸೆಂಟ್ರಲ್​ ಟಿಫಿನ್​ ರೂಂ) ಹೋಟೆಲ್​ಗೆ ತೆರಳಿ ದೋಸೆ ಸವಿದಿದ್ದಾರೆ.

ಅನಿಷ್ಕಾ ಶರ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಸುಮಾರು 8 ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೋಟೆಲ್​ನಲ್ಲಿ ಸವಿದ ಫುಡ್​ಗಳ ಜೊತೆಗೆ ಮೆನುವನ್ನು ಶೇರ್​ ಮಾಡಿಕೊಂಡಿದ್ದಾರೆ. ಮಸಾಲೆದೋಸೆ, ಮಂಗಳೂರು ಬೋಂಡಾ ಮತ್ತು ಕೇಸರಿಬಾತ್​ ಸ್ವಾದಿಷ್ಟಕರವಾಗಿತ್ತು ಎಂದು ಇಷ್ಟಪಟ್ಟು ಇನ್​ಸ್ಟಾದಲ್ಲಿ ಬರೆದುಕೊಂಡಿದ್ದು, ಇನ್ನೊಮ್ಮ ಬರುವುದಾಗಿ ಹೇಳಿದ್ದಾರೆ. ಈ ಬಾರಿ ಬಹುತೇಕ ಪಂದ್ಯಗಳಲ್ಲಿ ವಿರಾಟ್​ ಜೊತೆ ಅನುಷ್ಕಾ ಪ್ರಯಾಣ ಮಾಡುತ್ತಿದ್ದಾರೆ.

virat kohli and Anushka Sharma Lunch Date In Bengaluru
ಮಲ್ಲೇಶ್ವರದ ಸೆಂಟ್ರಲ್​ ಟಿಫಿನ್​ ರೂಂನಲ್ಲಿ ದೋಸೆ ಸವಿದ ವಿರುಷ್ಕ

ಕೊಹ್ಲಿ ದಂಪತಿ ಒಳಗೆ ದೋಸೆ ಸವಿಯುತ್ತಿದ್ದರೆ ಹೊರಗಡೆ ಆರ್​ಸಿಬಿ ಎಂದು ಕೂಗು ಮೊಳಗಿತ್ತು. ಹೋಟೆಲ್‌ ಹೊರಗೆ ಸ್ಟಾರ್​ ದಂಪತಿ ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.

ವಿರಾಟ್​ ಕೊಹ್ಲಿ ಬೆಂಗಳೂರನ್ನು ಎರಡನೇ ತವರು ಎಂದು ಕರೆದಿದ್ದಾರೆ. ಅದಕ್ಕೆ ಕಾರಣ 2008 ರಿಂದ ಆರ್​ಸಿಬಿಯಲ್ಲಿ ಆಡುತ್ತಿರುವ ವಿರಾಟ್​ ಕೊಹ್ಲಿಗೆ ಇಲ್ಲಿಯ ಅಭಿಮಾನಿಗಳು ಕೊಟ್ಟಿರುವ ಪ್ರೀತಿ ಆ ರೀತಿಯದ್ದಾಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 10 ತಂಡಗಳಿವೆ. ಆದರೆ, ಆರ್​ಸಿಬಿಯ ಅಭಿಮಾನ ಬೇರೆ ಹಂತದಲ್ಲಿದೆ. ಆರ್​ಸಿಬಿಯ 16 ವರ್ಷಗಳ ಜರ್ನಿಯೇ ಹಾಗಿದೆ. ಐಪಿಎಲ್​ನ ಬಹುತೇಕ ದಾಖಲೆಗಳು ಈ ತಂಡದಲ್ಲಿದ್ದು, ಚಾಂಪಿಯನ್​ ಪಟ್ಟಕ್ಕೆ ಮಾತ್ರ ಏರಿಲ್ಲ. ಕಪ್​ ಗೆಲ್ಲದಿರುವುದೇ ಒಂದು ಸ್ಲೋಗನ್​ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ "ಈ ಸಲ ಕಪ್​ ನಮ್ದೆ" ಫೇಮಸ್​ ಆಗಿತ್ತು.

ನಾಳೆ ರಾಜಸ್ಥಾನ್ ರಾಯಲ್ಸ್ ಆರ್​ಸಿಬಿ ಪಂದ್ಯ: ನಾಳೆ ರಾಜಸ್ಥಾನ್​ ವಿರುದ್ಧದ ಆರ್​ಸಿಬಿ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಆರ್​ಸಿಬಿ ಮತ್ತು ರಾಜಸ್ಥಾನ ತಂಡಗಳು ನಗರಕ್ಕೆ ಬಂದು ತಲುಪಿವೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಾಳೆ ಹಸಿರು ಜರ್ಸಿಯಲ್ಲಿ ರಾಜಸ್ಥಾನ ರಾಯಲ್​ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ನ್ನು ಸೋಲಿಸಿದ ಆರ್​ಸಿಬಿ ಗೆಲುವಿನ ಲಯವನ್ನು ಮುಂದುವರೆಸುವ ಚಿಂತನೆಯಲ್ಲಿದೆ.

ಇದಕ್ಕೂ ಮುನ್ನ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಏಪ್ರಿಲ್​ 17 ರಂದು ನಡೆದ ಪಂದ್ಯದಲ್ಲಿ ಬೆಂಗಳೂರಿನ ಈ ಪಿಚ್​ನಲ್ಲಿ ಸೋಲನುಭವಿಸಿತ್ತು. ಈ ತವರಿನ ಸೋಲಿನ ಕಹಿಯನ್ನು ಮರೆಸಲು ರಾಜಸ್ಥಾನವನ್ನು ಮಣಿಸಬೇಕಿದೆ. ಲಕ್ನೋ ವಿರುದ್ಧ ಸೋತಿರುವ ರಾಜಸ್ಥಾನ ನಾಳೆ ಗೆಲುವಿಗಾಗಿ ಹವಣಿಸುತ್ತಿದೆ.

ಇದನ್ನೂ ಓದಿ: ನಾಲ್ಕು ಇನ್ನಿಂಗ್ಸ್​ಗಳ ಏಕದಿನದ ಅಭಿಪ್ರಾಯ ತಿಳಿಸಿದ ಸಚಿನ್​: 50ನೇ ವಸಂತ ಪ್ರವೇಶಿಸುವ ಲಿಟಲ್​ ಮಾಸ್ಟರ್​ ವಿಶೇಷ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.