ETV Bharat / sports

ನನಗಿದು 'ಫೈನಲ್​' ಅಲ್ಲ, 8-9 ತಿಂಗಳು ಬಳಿಕ ನೋಡೋಣ: ನಿವೃತ್ತಿ ಬಗ್ಗೆ ಎಂ.ಎಸ್.ದೋನಿ

ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ದೋನಿ ನಿವೃತ್ತಿಯ ಅಂಚಿನಲ್ಲಿರುವ ಸುದ್ದಿ ಜೋರಾಗಿದೆ. ಆದರೆ, ನನಗಿನ್ನೂ ಟೈಂ ಇದೆ ಎಂದು ಮಾಜಿ ನಾಯಕ ಹೇಳಿದ್ದಾರೆ.

author img

By

Published : May 24, 2023, 12:30 PM IST

ನಿವೃತ್ತಿ ಬಗ್ಗೆ ಎಂಎಸ್​ ದೋನಿ
ನಿವೃತ್ತಿ ಬಗ್ಗೆ ಎಂಎಸ್​ ದೋನಿ

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ದೋನಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಒಂದೇ ಕಾರಣಕ್ಕಾಗಿ, ಅದು ನಿವೃತ್ತಿ. ಯಶಸ್ವಿ ನಾಯಕನಿಗೆ ಇದು ಕೊನೆಯ ಐಪಿಎಲ್​ ಎಂದು ಹೇಳಲಾಗಿದೆ. ಹೀಗಾಗಿಯೇ ಲೀಗ್​ ಹಂತದ ಕೊನೆಯ ಪಂದ್ಯದ ಗೆಲುವಿನ ಬಳಿಕ ಮೈದಾನವೆಲ್ಲ ಸುತ್ತಾಡಿ ಧನ್ಯವಾದ ಹೇಳಿದ್ದರು. ಆದರೀಗ "ತಮ್ಮ ನಿವೃತ್ತಿಗೆ ಇನ್ನೂ ಸಮಯವಿದೆ. ಈಗ್ಯಾಕೆ ಚರ್ಚೆ" ಎಂದೇಳುವ ಮೂಲಕ ಅಭಿಮಾನಿಗಳಲ್ಲಿನ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.

ನಿನ್ನೆ ನಡೆದ ಕ್ವಾಲಿಫೈಯರ್​ನಲ್ಲಿ ಗುಜರಾತ್​ ಎದುರು ಗೆಲುವು ಸಾಧಿಸುವ ಮೂಲಕ ಚೆನ್ನೈ ನೇರವಾಗಿ ಫೈನಲ್​ ಪ್ರವೇಶಿಸಿದೆ. ಪಂದ್ಯದ ಬಳಿಕ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಕೇಳಿದ ನಿವೃತ್ತಿ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ ಸಿಂಗ್ ದೋನಿ, ಮುಂದಿನ ಐಪಿಎಲ್​ ಹರಾಜಿಗೆ ಇನ್ನೂ 8 ರಿಂದ 9 ತಿಂಗಳ ಬಾಕಿ ಇದೆ. ಆ ಬಳಿಕವಷ್ಟೇ ನಿವೃತ್ತಿಯ ಬಗ್ಗೆ ನೋಡೋಣ ಎಂದು ತೇಲಿಬಿಟ್ಟರು.

2023 ರ ಐಪಿಎಲ್​ ದೋನಿಯ ಕೊನೆಯ ಸೀಸನ್​ ಎಂಬ ಊಹಾಪೋಹ ಜೋರಾಗಿದೆ. ನೀವು ಮತ್ತೆ ಚೆನ್ನೈಗೆ ಬಂದು ಕ್ರಿಕೆಟ್​ ಆಡ್ತೀರಾ ಎಂದು ಬೋಗ್ಲೆ ಅವರು ಕೇಳಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ. ನಿವೃತ್ತಿ ನಿರ್ಧರಿಸಲು ಇನ್ನೂ 8- 9 ತಿಂಗಳುಗಳಿವೆ. ಅಲ್ಲಿಯವರೆಗೆ ಈ ತಲೆನೋವಿನ ಮಾತ್ಯಾಕೆ. ಭವಿಷ್ಯದ ಬಗ್ಗೆ ನಿರ್ಧರಿಸಲು ಯಾವುದೇ ಆತುರವಿಲ್ಲ. ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದ್ದು, ಸಾಕಷ್ಟು ಸಮಯವಿದೆ. ನಂತರ ನಿರ್ಧರಿಸೋಣ ಎಂದರು.

ಇದನ್ನೂ ಓದಿ: IPL ನಲ್ಲಿ ಇಂದು: ಮುಂಬೈ- ಲಖನೌ ಸೆಣಸಾಟದಲ್ಲಿ ಎಲಿಮಿನೇಟ್​ ಆಗೋರ್ಯಾರು?

ನಾನು ಎಂದಿಗೂ ಸಿಎಸ್‌ಕೆ ಜೊತೆಗೆ ಇರುತ್ತೇನೆ. ಈ ಸೀಸನ್​ಗಾಗಿ ಜನವರಿಯಿಂದ ಮನೆಯಿಂದ ಹೊರಗಿದ್ದೇನೆ. ಮಾರ್ಚ್‌ನಿಂದ ಅಭ್ಯಾಸ ಆರಂಭಿಸಿದ್ದೆವು. ಈಗ ನಾವು ಫೈನಲ್​ ಪ್ರವೇಶಿಸಿದ್ದೇವೆ. ಈ ಬಗ್ಗೆ ಮಾತ್ರ ಯೋಚಿಸೋಣ. 10 ತಂಡಗಳನ್ನು ಎದುರಿಸಿ ಇಲ್ಲಿಗೆ ಬಂದಿದ್ದೇವೆ. 2 ತಿಂಗಳಿಗಿಂತ ಕಠಿಣ ಶ್ರಮ ಹಾಕಿದ್ದೇವೆ. ಆಟಗಾರರೆಲ್ಲರೂ ಕೊಡುಗೆ ನೀಡಿದ್ದಾರೆ ಎಂದರು.

ನಾನು ಕಿರಿಕಿರಿ ನಾಯಕ: ನಾನು ತುಸು 'ಕಿರಿಕಿರಿ' ಮಾಡುವ ನಾಯಕರಾಗಬಹುದು. ಏಕೆಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬೌಲರ್‌ ಮತ್ತು ಫೀಲ್ಡರ್‌ಗಳನ್ನು ಬದಲಾಯಿಸುತ್ತಲೇ ಇರುವೆ. ಆಟಗಾರ, ಫೀಲ್ಡಿಂಗ್​, ಬೌಲರ್​ ಮತ್ತು ಪರಿಸ್ಥಿತಿಯನ್ನು ಆಧರಿಸಿ ಮೈದಾನವನ್ನು ಸೆಟ್​ ಮಾಡಬೇಕು. ಹೀಗಾಗಿ ಇದರಲ್ಲಿ ನಾನು ಇತರರಿಗೆ ಕಿರಿಕಿರಿ ಉಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ತಂತ್ರದ ಭಾಗವಾಗಿ ನಾನು ಮೈದಾನದಲ್ಲಿ ಫೀಲ್ಡರ್​ಗಳನ್ನು ಪ್ರತಿ ಸಾರಿ ಬದಲಿಸುವೆ. ಅದಕ್ಕಾಗಿಯೇ ಫೀಲ್ಡರ್‌ಗಳಿಗೆ ನನ್ನ ಮೇಲೆ ಕಣ್ಣಿಡಲು ಹೇಳುತ್ತಿರುತ್ತೇನೆ. ವೇಗದ ಬೌಲಿಂಗ್​ ಬಗ್ಗೆ ಮಾತನಾಡಿ, ತಂಡದ ವೇಗಿಗಳು ಅನುಭವಿಗಳಲ್ಲದ ಕಾರಣ, ತಪ್ಪುಗಳಾಗುತ್ತವೆ. ಅವರನ್ನು ಹುರಿದುಂಬಿಸಲು ಸಪೋರ್ಟಿಂಗ್​ ಸಿಬ್ಬಂದಿ ಇದ್ದಾರೆ, ಡ್ವೇನ್​ ಬ್ರಾವೋ ಮತ್ತು ಎರಿಕ್ ಇದ್ದಾರೆ ಎಂದರು.

ಇದನ್ನೂ ಓದಿ: IPL ಪ್ಲೇಆಫ್‌ನ ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ದೋನಿ ಸದ್ಯಕ್ಕೆ ಸುದ್ದಿಯಲ್ಲಿರುವುದು ಒಂದೇ ಕಾರಣಕ್ಕಾಗಿ, ಅದು ನಿವೃತ್ತಿ. ಯಶಸ್ವಿ ನಾಯಕನಿಗೆ ಇದು ಕೊನೆಯ ಐಪಿಎಲ್​ ಎಂದು ಹೇಳಲಾಗಿದೆ. ಹೀಗಾಗಿಯೇ ಲೀಗ್​ ಹಂತದ ಕೊನೆಯ ಪಂದ್ಯದ ಗೆಲುವಿನ ಬಳಿಕ ಮೈದಾನವೆಲ್ಲ ಸುತ್ತಾಡಿ ಧನ್ಯವಾದ ಹೇಳಿದ್ದರು. ಆದರೀಗ "ತಮ್ಮ ನಿವೃತ್ತಿಗೆ ಇನ್ನೂ ಸಮಯವಿದೆ. ಈಗ್ಯಾಕೆ ಚರ್ಚೆ" ಎಂದೇಳುವ ಮೂಲಕ ಅಭಿಮಾನಿಗಳಲ್ಲಿನ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.

ನಿನ್ನೆ ನಡೆದ ಕ್ವಾಲಿಫೈಯರ್​ನಲ್ಲಿ ಗುಜರಾತ್​ ಎದುರು ಗೆಲುವು ಸಾಧಿಸುವ ಮೂಲಕ ಚೆನ್ನೈ ನೇರವಾಗಿ ಫೈನಲ್​ ಪ್ರವೇಶಿಸಿದೆ. ಪಂದ್ಯದ ಬಳಿಕ ಖ್ಯಾತ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಅವರು ಕೇಳಿದ ನಿವೃತ್ತಿ ಪ್ರಶ್ನೆಗೆ ಉತ್ತರಿಸಿದ ಮಹೇಂದ್ರ ಸಿಂಗ್ ದೋನಿ, ಮುಂದಿನ ಐಪಿಎಲ್​ ಹರಾಜಿಗೆ ಇನ್ನೂ 8 ರಿಂದ 9 ತಿಂಗಳ ಬಾಕಿ ಇದೆ. ಆ ಬಳಿಕವಷ್ಟೇ ನಿವೃತ್ತಿಯ ಬಗ್ಗೆ ನೋಡೋಣ ಎಂದು ತೇಲಿಬಿಟ್ಟರು.

2023 ರ ಐಪಿಎಲ್​ ದೋನಿಯ ಕೊನೆಯ ಸೀಸನ್​ ಎಂಬ ಊಹಾಪೋಹ ಜೋರಾಗಿದೆ. ನೀವು ಮತ್ತೆ ಚೆನ್ನೈಗೆ ಬಂದು ಕ್ರಿಕೆಟ್​ ಆಡ್ತೀರಾ ಎಂದು ಬೋಗ್ಲೆ ಅವರು ಕೇಳಿದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ. ನಿವೃತ್ತಿ ನಿರ್ಧರಿಸಲು ಇನ್ನೂ 8- 9 ತಿಂಗಳುಗಳಿವೆ. ಅಲ್ಲಿಯವರೆಗೆ ಈ ತಲೆನೋವಿನ ಮಾತ್ಯಾಕೆ. ಭವಿಷ್ಯದ ಬಗ್ಗೆ ನಿರ್ಧರಿಸಲು ಯಾವುದೇ ಆತುರವಿಲ್ಲ. ಡಿಸೆಂಬರ್‌ನಲ್ಲಿ ಹರಾಜು ನಡೆಯಲಿದ್ದು, ಸಾಕಷ್ಟು ಸಮಯವಿದೆ. ನಂತರ ನಿರ್ಧರಿಸೋಣ ಎಂದರು.

ಇದನ್ನೂ ಓದಿ: IPL ನಲ್ಲಿ ಇಂದು: ಮುಂಬೈ- ಲಖನೌ ಸೆಣಸಾಟದಲ್ಲಿ ಎಲಿಮಿನೇಟ್​ ಆಗೋರ್ಯಾರು?

ನಾನು ಎಂದಿಗೂ ಸಿಎಸ್‌ಕೆ ಜೊತೆಗೆ ಇರುತ್ತೇನೆ. ಈ ಸೀಸನ್​ಗಾಗಿ ಜನವರಿಯಿಂದ ಮನೆಯಿಂದ ಹೊರಗಿದ್ದೇನೆ. ಮಾರ್ಚ್‌ನಿಂದ ಅಭ್ಯಾಸ ಆರಂಭಿಸಿದ್ದೆವು. ಈಗ ನಾವು ಫೈನಲ್​ ಪ್ರವೇಶಿಸಿದ್ದೇವೆ. ಈ ಬಗ್ಗೆ ಮಾತ್ರ ಯೋಚಿಸೋಣ. 10 ತಂಡಗಳನ್ನು ಎದುರಿಸಿ ಇಲ್ಲಿಗೆ ಬಂದಿದ್ದೇವೆ. 2 ತಿಂಗಳಿಗಿಂತ ಕಠಿಣ ಶ್ರಮ ಹಾಕಿದ್ದೇವೆ. ಆಟಗಾರರೆಲ್ಲರೂ ಕೊಡುಗೆ ನೀಡಿದ್ದಾರೆ ಎಂದರು.

ನಾನು ಕಿರಿಕಿರಿ ನಾಯಕ: ನಾನು ತುಸು 'ಕಿರಿಕಿರಿ' ಮಾಡುವ ನಾಯಕರಾಗಬಹುದು. ಏಕೆಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಬೌಲರ್‌ ಮತ್ತು ಫೀಲ್ಡರ್‌ಗಳನ್ನು ಬದಲಾಯಿಸುತ್ತಲೇ ಇರುವೆ. ಆಟಗಾರ, ಫೀಲ್ಡಿಂಗ್​, ಬೌಲರ್​ ಮತ್ತು ಪರಿಸ್ಥಿತಿಯನ್ನು ಆಧರಿಸಿ ಮೈದಾನವನ್ನು ಸೆಟ್​ ಮಾಡಬೇಕು. ಹೀಗಾಗಿ ಇದರಲ್ಲಿ ನಾನು ಇತರರಿಗೆ ಕಿರಿಕಿರಿ ಉಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ತಂತ್ರದ ಭಾಗವಾಗಿ ನಾನು ಮೈದಾನದಲ್ಲಿ ಫೀಲ್ಡರ್​ಗಳನ್ನು ಪ್ರತಿ ಸಾರಿ ಬದಲಿಸುವೆ. ಅದಕ್ಕಾಗಿಯೇ ಫೀಲ್ಡರ್‌ಗಳಿಗೆ ನನ್ನ ಮೇಲೆ ಕಣ್ಣಿಡಲು ಹೇಳುತ್ತಿರುತ್ತೇನೆ. ವೇಗದ ಬೌಲಿಂಗ್​ ಬಗ್ಗೆ ಮಾತನಾಡಿ, ತಂಡದ ವೇಗಿಗಳು ಅನುಭವಿಗಳಲ್ಲದ ಕಾರಣ, ತಪ್ಪುಗಳಾಗುತ್ತವೆ. ಅವರನ್ನು ಹುರಿದುಂಬಿಸಲು ಸಪೋರ್ಟಿಂಗ್​ ಸಿಬ್ಬಂದಿ ಇದ್ದಾರೆ, ಡ್ವೇನ್​ ಬ್ರಾವೋ ಮತ್ತು ಎರಿಕ್ ಇದ್ದಾರೆ ಎಂದರು.

ಇದನ್ನೂ ಓದಿ: IPL ಪ್ಲೇಆಫ್‌ನ ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.