ETV Bharat / sports

ಚೆನ್ನೈ 'ಸೂಪರ್‌ ಸೂಪರ್‌' ಕಿಂಗ್ಸ್! 5ನೇ ಬಾರಿಗೆ ಐಪಿಎಲ್​ ಕಪ್​ ಎತ್ತಿ ಹಿಡಿದ ಧೋನಿ ಟೀಂ

author img

By

Published : May 30, 2023, 7:07 AM IST

Updated : May 30, 2023, 7:43 AM IST

ರವೀಂದ್ರ ಜಡೇಜಾರ ಸಾಹಸದಿಂದಾಗಿ ಮಳೆ ಕಾಟದ ನಡುವೆಯೂ ಚೆನ್ನೈ ಸೂಪರ್​ ಕಿಂಗ್ಸ್​ 5ನೇ ಬಾರಿಗೆ ಐಪಿಎಲ್​ ಪ್ರಶಸ್ತಿ ಜಯಿಸಿತು. ಮುಂಬೈ ಇಂಡಿಯನ್ಸ್ ತಂಡದ ದಾಖಲೆ ಸರಿಗಟ್ಟಿತು.

ಚೆನ್ನೈ ಸೂಪರ್​ ಕಿಂಗ್ಸ್​
ಚೆನ್ನೈ ಸೂಪರ್​ ಕಿಂಗ್ಸ್​

ಅಹಮದಾಬಾದ್ (ಗುಜರಾತ್) ​: ಮಳೆಯಾಟದ ನಡುವೆಯೂ ರವೀಂದ್ರ ಜಡೇಜಾರ ಸಾಹಸದಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಐಪಿಎಲ್​ 2023 ರ 16ನೇ ಆವೃತ್ತಿಯ ಚಾಂಪಿಯನ್​ ಆಗಿ ಪ್ರಶಸ್ತಿ ಎತ್ತಿ ಹಿಡಿಯಿತು. ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ವಿರುದ್ಧ ಚೆನ್ನೈ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಕೊನೆಯ ಎಸೆತದಲ್ಲಿ 5 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 5ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿ ಮುಂಬೈ ಇಂಡಿಯನ್ಸ್​ ದಾಖಲೆ ಸರಿಗಟ್ಟಿತು.

ಅಹಮದಾಬಾದ್‌ನಲ್ಲಿ ಕ್ರಿಕೆಟ್​ ಆಟಕ್ಕಿಂತಲೂ ಮಳೆಯಾಟವೇ ಜೋರಾಗಿತ್ತು. ಇದರಿಂದ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮೀಸಲು ದಿನ ಸೋಮವಾರಕ್ಕೆ ಮುಂದೂಡಲಾಗಿತ್ತು. ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಟೈಟಾನ್ಸ್​ 20 ಓವರ್​ಗಳಲ್ಲಿ ಯುವ ಆಟಗಾರ ಸಾಯಿ ಸುದರ್ಶನ್​ರ ಪರಾಕ್ರಮದಿಂದ 4 ವಿಕೆಟ್​ಗೆ 214 ರನ್​ ಗಳಿಸಿತು. ಚೆನ್ನೈ ಸೂಪರ್​ ಕಿಂಗ್ಸ್​ ಇನಿಂಗ್ಸ್​ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮಳೆ ಸುರಿಯಲಾರಂಭಿಸಿತು. 2 ಗಂಟೆ ಆಟ ನಿಂತ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಚೆನ್ನೈಗೆ 15 ಓವರ್​ಗಳಲ್ಲಿ 171 ರನ್​ ಗುರಿ ನೀಡಲಾಯಿತು. ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಬಾರಿಸುವ ಮೂಲಕ 171 ಗಳಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿತು.

ಮೈ ಚಳಿ ಬಿಟ್ಟು ಬ್ಯಾಟಿಂಗ್​: ಮಳೆ ಅಡ್ಡಿಯಾದ್ದರಿಂದ ಡಕ್ವರ್ಥ್​ ಲೂಯಿಸ್ ನಿಯಮದನ್ವಯ​ 171 ರನ್​ ಗುರಿ ಪಡೆದ ಸಿಎಸ್​ಕೆ ಬ್ಯಾಟರ್​ಗಳು ಗೆಲುವೊಂದೇ ಗುರಿ ಎಂಬಂತೆ ಬ್ಯಾಟ್​ ಬೀಸಿದರು. ಬೌಂಡರಿ, ಸಿಕ್ಸರ್​ಗಳಿಂದಲೇ ರನ್​ ಗಳಿಸಿದರು. ಕಾನ್ವೆ ಮತ್ತು ಗಾಯಕ್ವಾಡ್​ ಮೊದಲ ವಿಕೆಟ್​ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್​ 16 ಎಸೆತಗಳಲ್ಲಿ 26 ರನ್​ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್​ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19, ವಿಜಯಪತಾಕೆ ಹಾರಿಸಿದ ರವೀಂದ್ರ ಜಡೇಜಾ 15 ರನ್​ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಾಯಿ ಸುದರ್ಶನ್​ ಶೋ: ಇದಕ್ಕೂ ಮೊದಲು ಗುಜರಾತ್​ ಟೈಟಾನ್ಸ್ ತಂಡ ಐಪಿಎಲ್​ ಇತಿಹಾಸದಲ್ಲೇ ಫೈನಲ್​ ಪಂದ್ಯದಲ್ಲಿ ಗರಿಷ್ಠ ರನ್​ ಮಾಡಿದ ತಂಡದ ಎಂಬ ದಾಖಲೆ ಬರೆಯಿತು. ಯುವ ಆಟಗಾರ ಸಾಯಿ ಸುದರ್ಶನ್​ ಅವರ ಬಿರುಸಾದ ಬ್ಯಾಟಿಂಗ್​ನಿಂದಾಗಿ 200 ರನ್​ ಗಡಿ ದಾಟಿತು. 96 ರನ್​ ಮಾಡಿದ ಸುದರ್ಶನ್​ ಫೈನಲ್​ ಪಂದ್ಯದ ಹೀರೋ ಆದರು. ಶತಕದ ಅಂಚಿನಲ್ಲಿ ಔಟಾದರೂ ಅವರ ಆಟ ತಂಡಕ್ಕೆ ಬಲ ನೀಡಿತು. ಇದಲ್ಲದೇ, ವೃದ್ಧಿಮಾನ್​ ಸಾಹ 54, ಶುಭಮನ್​ ಗಿಲ್​ 39, ಹಾರ್ದಿಕ್​ ಪಾಂಡ್ಯ 21 ರನ್​ ಮಾಡಿದರು.

ಕೊನೆಯ ಓವರ್​ ಥ್ರಿಲ್ಲರ್​: ರೋಚಕವಾಗಿ ಸಾಗಿದ್ದ ಪಂದ್ಯದಲ್ಲಿ ಚೆನ್ನೈ ಗೆಲುವಿಗೆ ಕೊನೆಯ ಓವರ್​ನಲ್ಲಿ 13 ರನ್​ ಬೇಕಿತ್ತು. ರವೀಂದ್ರ ಜಡೇಜಾ, ಶಿವಂ ದುಬೆ ಕ್ರೀಸ್​ನಲ್ಲಿದ್ದರು. ಮೋಹಿತ್​ ಶರ್ಮಾಗೆ ಚೆಂಡು ನೀಡಿದ ನಾಯಕ ಹಾರ್ದಿಕ್​ ಪಾಂಡ್ಯ, ಗೆಲುವಿನ ಭರವಸೆಯಲ್ಲಿದ್ದರು. ಮೊದಲ ಎಸೆತ ಡಾಟ್​ ಆದರೆ, ಮುಂದಿನ ಮೂರು ಎಸೆತದಲ್ಲಿ ತಲಾ 1 ರನ್​ ಮಾತ್ರ ಬಂದವು. ಇದು ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಇನ್ನೇನು ಪಂದ್ಯ ಸೋತೆವು ಎನ್ನುವಷ್ಟರಲ್ಲಿ ಭಾರತದ ಸ್ಟಾರ್​ ಆಲ್​ರೌಂಡರ್ ರವೀಂದ್ರ ಜಡೇಜಾ ಜಾದೂ ಮಾಡಿದಂತೆ 5 ಎಸೆತವನ್ನು ಸಿಕ್ಸರ್​ ಬಾರಿಸಿದರೆ, ಕೊನೆಯ ಎಸೆತವನ್ನು ಬೌಂಡರಿ ಬಾರಿಸಿ ಮೈದಾನದ ತುಂಬಾ ಮೆರೆದಾಡಿದರು.

ಸಿಎಸ್​ಕೆ ಅನುಭವ: ಮಹೇಂದ್ರ ಸಿಂಗ್​ ದೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ತನ್ನೆಲ್ಲ ಅನುಭವವನ್ನು ಪಂದ್ಯದಲ್ಲಿ ಧಾರೆ ಎರೆಯಿತು. ಪಂದ್ಯಕ್ಕೂ ಮೊದಲೇ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯುಡು, ನಿವೃತ್ತಿ ಅಂಚಿನಲ್ಲಿರುವ ಧೋನಿ, ಮೊಯೀನ್​ ಅಲಿ, ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ, ಡೆವೋನ್​ ಕಾನ್ವೆಯಂತಹ ಹಿರಿಯ ಆಟಗಾರರು ಅಮೂಲ್ಯ ಕಾಣಿಕೆ ನೀಡುವ ಮೂಲಕ ಪಂದ್ಯ ಗೆದ್ದು ಪ್ರಶಸ್ತಿ ಜಯಿಸಿದರು.

ಧೋನಿ ಸಂಭ್ರಮ: ಮೈದಾನದಲ್ಲಿ ತುಂಬಾ ಸಾತ್ವಿಕತೆಯಿಂದ ನಡೆದುಕೊಳ್ಳುವ ಧೋನಿ ಮೊದಲ ಬಾರಿಗೆ ತಮ್ಮ ಎಮೋಷನ್​ ಹೊರಹಾಕಿದರು. ಪಂದ್ಯದ ಕೊನೆಯಲ್ಲಿ ತಂಡ ಸೋಲಲಿದೆ ಎಂಬಂತಿದ್ದಾಗ ಕಣ್ಣು ಮುಚ್ಚಿಕೊಂಡು ಕೂತಿದ್ದರು. ಇದು ಕ್ಯಾಮರಾದಲ್ಲಿ ಪದೇ ಪದೇ ಸೆರೆಯಾಯಿತು. ಪವಾಡ ಎಂಬಂತೆ ಜಡೇಜಾ ಸಿಕ್ಸರ್​, ಬೌಂಡರಿಗಳಿಂದ ಗೆಲುವು ತಂದ ಬಳಿಕ ಓಡಿ ಬಂದು ಜಡೇಜಾರನ್ನು ಎತ್ತಿಕೊಂಡು ಸಂಭ್ರಮಿಸಿದರು. ಧೋನಿ ಇದೇ ಮೊದಲ ಬಾರಿಗೆ ಗೆಲುವಿಗಾಗಿ ತಹತಹಿಸಿದರು.

ಅಹಮದಾಬಾದ್ (ಗುಜರಾತ್) ​: ಮಳೆಯಾಟದ ನಡುವೆಯೂ ರವೀಂದ್ರ ಜಡೇಜಾರ ಸಾಹಸದಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಐಪಿಎಲ್​ 2023 ರ 16ನೇ ಆವೃತ್ತಿಯ ಚಾಂಪಿಯನ್​ ಆಗಿ ಪ್ರಶಸ್ತಿ ಎತ್ತಿ ಹಿಡಿಯಿತು. ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ವಿರುದ್ಧ ಚೆನ್ನೈ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಕೊನೆಯ ಎಸೆತದಲ್ಲಿ 5 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 5ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿ ಮುಂಬೈ ಇಂಡಿಯನ್ಸ್​ ದಾಖಲೆ ಸರಿಗಟ್ಟಿತು.

ಅಹಮದಾಬಾದ್‌ನಲ್ಲಿ ಕ್ರಿಕೆಟ್​ ಆಟಕ್ಕಿಂತಲೂ ಮಳೆಯಾಟವೇ ಜೋರಾಗಿತ್ತು. ಇದರಿಂದ ಭಾನುವಾರ ನಡೆಯಬೇಕಿದ್ದ ಫೈನಲ್ ಪಂದ್ಯ ಮೀಸಲು ದಿನ ಸೋಮವಾರಕ್ಕೆ ಮುಂದೂಡಲಾಗಿತ್ತು. ಮೊದಲು ಬ್ಯಾಟ್​ ಮಾಡಿದ ಗುಜರಾತ್​ ಟೈಟಾನ್ಸ್​ 20 ಓವರ್​ಗಳಲ್ಲಿ ಯುವ ಆಟಗಾರ ಸಾಯಿ ಸುದರ್ಶನ್​ರ ಪರಾಕ್ರಮದಿಂದ 4 ವಿಕೆಟ್​ಗೆ 214 ರನ್​ ಗಳಿಸಿತು. ಚೆನ್ನೈ ಸೂಪರ್​ ಕಿಂಗ್ಸ್​ ಇನಿಂಗ್ಸ್​ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮಳೆ ಸುರಿಯಲಾರಂಭಿಸಿತು. 2 ಗಂಟೆ ಆಟ ನಿಂತ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದನ್ವಯ ಚೆನ್ನೈಗೆ 15 ಓವರ್​ಗಳಲ್ಲಿ 171 ರನ್​ ಗುರಿ ನೀಡಲಾಯಿತು. ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಬಾರಿಸುವ ಮೂಲಕ 171 ಗಳಿಸಿ ಚಾಂಪಿಯನ್​ ಆಗಿ ಹೊರಹೊಮ್ಮಿತು.

ಮೈ ಚಳಿ ಬಿಟ್ಟು ಬ್ಯಾಟಿಂಗ್​: ಮಳೆ ಅಡ್ಡಿಯಾದ್ದರಿಂದ ಡಕ್ವರ್ಥ್​ ಲೂಯಿಸ್ ನಿಯಮದನ್ವಯ​ 171 ರನ್​ ಗುರಿ ಪಡೆದ ಸಿಎಸ್​ಕೆ ಬ್ಯಾಟರ್​ಗಳು ಗೆಲುವೊಂದೇ ಗುರಿ ಎಂಬಂತೆ ಬ್ಯಾಟ್​ ಬೀಸಿದರು. ಬೌಂಡರಿ, ಸಿಕ್ಸರ್​ಗಳಿಂದಲೇ ರನ್​ ಗಳಿಸಿದರು. ಕಾನ್ವೆ ಮತ್ತು ಗಾಯಕ್ವಾಡ್​ ಮೊದಲ ವಿಕೆಟ್​ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್​ 16 ಎಸೆತಗಳಲ್ಲಿ 26 ರನ್​ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್​ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19, ವಿಜಯಪತಾಕೆ ಹಾರಿಸಿದ ರವೀಂದ್ರ ಜಡೇಜಾ 15 ರನ್​ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಾಯಿ ಸುದರ್ಶನ್​ ಶೋ: ಇದಕ್ಕೂ ಮೊದಲು ಗುಜರಾತ್​ ಟೈಟಾನ್ಸ್ ತಂಡ ಐಪಿಎಲ್​ ಇತಿಹಾಸದಲ್ಲೇ ಫೈನಲ್​ ಪಂದ್ಯದಲ್ಲಿ ಗರಿಷ್ಠ ರನ್​ ಮಾಡಿದ ತಂಡದ ಎಂಬ ದಾಖಲೆ ಬರೆಯಿತು. ಯುವ ಆಟಗಾರ ಸಾಯಿ ಸುದರ್ಶನ್​ ಅವರ ಬಿರುಸಾದ ಬ್ಯಾಟಿಂಗ್​ನಿಂದಾಗಿ 200 ರನ್​ ಗಡಿ ದಾಟಿತು. 96 ರನ್​ ಮಾಡಿದ ಸುದರ್ಶನ್​ ಫೈನಲ್​ ಪಂದ್ಯದ ಹೀರೋ ಆದರು. ಶತಕದ ಅಂಚಿನಲ್ಲಿ ಔಟಾದರೂ ಅವರ ಆಟ ತಂಡಕ್ಕೆ ಬಲ ನೀಡಿತು. ಇದಲ್ಲದೇ, ವೃದ್ಧಿಮಾನ್​ ಸಾಹ 54, ಶುಭಮನ್​ ಗಿಲ್​ 39, ಹಾರ್ದಿಕ್​ ಪಾಂಡ್ಯ 21 ರನ್​ ಮಾಡಿದರು.

ಕೊನೆಯ ಓವರ್​ ಥ್ರಿಲ್ಲರ್​: ರೋಚಕವಾಗಿ ಸಾಗಿದ್ದ ಪಂದ್ಯದಲ್ಲಿ ಚೆನ್ನೈ ಗೆಲುವಿಗೆ ಕೊನೆಯ ಓವರ್​ನಲ್ಲಿ 13 ರನ್​ ಬೇಕಿತ್ತು. ರವೀಂದ್ರ ಜಡೇಜಾ, ಶಿವಂ ದುಬೆ ಕ್ರೀಸ್​ನಲ್ಲಿದ್ದರು. ಮೋಹಿತ್​ ಶರ್ಮಾಗೆ ಚೆಂಡು ನೀಡಿದ ನಾಯಕ ಹಾರ್ದಿಕ್​ ಪಾಂಡ್ಯ, ಗೆಲುವಿನ ಭರವಸೆಯಲ್ಲಿದ್ದರು. ಮೊದಲ ಎಸೆತ ಡಾಟ್​ ಆದರೆ, ಮುಂದಿನ ಮೂರು ಎಸೆತದಲ್ಲಿ ತಲಾ 1 ರನ್​ ಮಾತ್ರ ಬಂದವು. ಇದು ತಂಡದ ಮೇಲೆ ಒತ್ತಡ ಹೆಚ್ಚಿಸಿತು. ಇನ್ನೇನು ಪಂದ್ಯ ಸೋತೆವು ಎನ್ನುವಷ್ಟರಲ್ಲಿ ಭಾರತದ ಸ್ಟಾರ್​ ಆಲ್​ರೌಂಡರ್ ರವೀಂದ್ರ ಜಡೇಜಾ ಜಾದೂ ಮಾಡಿದಂತೆ 5 ಎಸೆತವನ್ನು ಸಿಕ್ಸರ್​ ಬಾರಿಸಿದರೆ, ಕೊನೆಯ ಎಸೆತವನ್ನು ಬೌಂಡರಿ ಬಾರಿಸಿ ಮೈದಾನದ ತುಂಬಾ ಮೆರೆದಾಡಿದರು.

ಸಿಎಸ್​ಕೆ ಅನುಭವ: ಮಹೇಂದ್ರ ಸಿಂಗ್​ ದೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ತನ್ನೆಲ್ಲ ಅನುಭವವನ್ನು ಪಂದ್ಯದಲ್ಲಿ ಧಾರೆ ಎರೆಯಿತು. ಪಂದ್ಯಕ್ಕೂ ಮೊದಲೇ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯುಡು, ನಿವೃತ್ತಿ ಅಂಚಿನಲ್ಲಿರುವ ಧೋನಿ, ಮೊಯೀನ್​ ಅಲಿ, ರವೀಂದ್ರ ಜಡೇಜಾ, ಅಜಿಂಕ್ಯಾ ರಹಾನೆ, ಡೆವೋನ್​ ಕಾನ್ವೆಯಂತಹ ಹಿರಿಯ ಆಟಗಾರರು ಅಮೂಲ್ಯ ಕಾಣಿಕೆ ನೀಡುವ ಮೂಲಕ ಪಂದ್ಯ ಗೆದ್ದು ಪ್ರಶಸ್ತಿ ಜಯಿಸಿದರು.

ಧೋನಿ ಸಂಭ್ರಮ: ಮೈದಾನದಲ್ಲಿ ತುಂಬಾ ಸಾತ್ವಿಕತೆಯಿಂದ ನಡೆದುಕೊಳ್ಳುವ ಧೋನಿ ಮೊದಲ ಬಾರಿಗೆ ತಮ್ಮ ಎಮೋಷನ್​ ಹೊರಹಾಕಿದರು. ಪಂದ್ಯದ ಕೊನೆಯಲ್ಲಿ ತಂಡ ಸೋಲಲಿದೆ ಎಂಬಂತಿದ್ದಾಗ ಕಣ್ಣು ಮುಚ್ಚಿಕೊಂಡು ಕೂತಿದ್ದರು. ಇದು ಕ್ಯಾಮರಾದಲ್ಲಿ ಪದೇ ಪದೇ ಸೆರೆಯಾಯಿತು. ಪವಾಡ ಎಂಬಂತೆ ಜಡೇಜಾ ಸಿಕ್ಸರ್​, ಬೌಂಡರಿಗಳಿಂದ ಗೆಲುವು ತಂದ ಬಳಿಕ ಓಡಿ ಬಂದು ಜಡೇಜಾರನ್ನು ಎತ್ತಿಕೊಂಡು ಸಂಭ್ರಮಿಸಿದರು. ಧೋನಿ ಇದೇ ಮೊದಲ ಬಾರಿಗೆ ಗೆಲುವಿಗಾಗಿ ತಹತಹಿಸಿದರು.

Last Updated : May 30, 2023, 7:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.