ETV Bharat / sports

ಮೈದಾನ ದೊಡ್ಡದಿದ್ದದ್ದೇ ನಮ್ಮ ವೈಫಲ್ಯಕ್ಕೆ ಕಾರಣವಾಯಿತು: ಶ್ರೇಯಸ್ ಅಯ್ಯರ್​ - ಸನ್​ರೈಸರ್ಸ್ ಹೈದರಾಬಾದ್

ಸನ್​ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ನಮ್ಮನ್ನು ಮೂರು ವಿಭಾಗಗಳಲ್ಲಿ ಮೀರಿಸಿದರು ಅದಕ್ಕಾಗಿ ಅವರಿಗೆ ಯಶಸ್ಸು ದೊರೆಯಿತು ಎಂದು ಡೆಲ್ಲಿ ಕ್ಯಾಪಿಟಲ್ಸ್​ ನಾಯಕ​ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

Shreyas Iyer
ಶ್ರೇಯಸ್ ಅಯ್ಯರ್​
author img

By

Published : Sep 30, 2020, 11:54 AM IST

ಅಬುಧಾಬಿ: ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಸನ್​ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ನಮ್ಮನ್ನು ಮೀರಿಸಿದರು ಎಂದು ಡೆಲ್ಲಿ ತಂಡದ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೋತ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, 162 ರನ್​ಗಳ ಗುರಿ ನೋಡಿ ನಾವು ಸಂತಸ ಪಟ್ಟಿದ್ದೆವು, ಈ ಮೈದಾನದಲದಲ್ಲಿ ನಮ್ಮ ಮೊದಲನೇ ಪಂದ್ಯವಾದ್ದರಿಂದ ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಎಂದು ತಿಳಿದಿರಲಿಲ್ಲ. ಅವರು ನಮ್ಮನ್ನು ಮೂರು ವಿಭಾಗಗಳಲ್ಲಿ ಮೀರಿಸಿದರು ಅದಕ್ಕಾಗಿ ಅವರಿಗೆ ಯಶಸ್ಸು ದೊರೆಯಿತು ಎಂದಿದ್ದಾರೆ.

ಎರಡನೇ ಇನ್ನಿಂಗ್ಸ್ ವೇಳೆ ಪಿಚ್ ಎರಡು ರೀತಿಯಲ್ಲಿ ವರ್ತಿಸಿತು. ಮೊದಲು ಚೆಂಡು ಬ್ಯಾಟ್​ನತ್ತ ಬರುತ್ತಿರಲಿಲ್ಲ. ನಂತರ ಇಬ್ಬನಿ ಬರಲಿದೆ ಎಂದು ನಾವು ಯೋಚಿಸಿದ್ದೆವು. ಆದರೆ ಈ ಸಂದರ್ಭದಲ್ಲಿ ಯಾವುದೇ ಕಾರಣ ನೀಡುವುದಿಲ್ಲ ಎಂದಿದ್ದಾರೆ.​

ಮೈದಾನವು ತುಂಬಾ ದೊಡ್ಡದಾಗಿದೆ, ನಾವು ಹೆಚ್ಚಾಗಿ ಎರಡು ರನ್​ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಬೌಂಡರಿಗಳೂ ದೊಡ್ಡದಾಗಿವೆ ಹೀಗಾಗಿ ಡಬಲ್ಸ್ ನಮಗೆ ಪ್ರಮುಖವಾದುದು ಎಂದು ತಿಳಿದಿತ್ತು. ಮುಂದಿನ ಪಂದ್ಯದಲ್ಲಿ ನಾವು ಉತ್ತಮವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕಂಡು 147 ರನ್​ ಗಳಿಸಿ 15 ರನ್​ಗಳಿಂದ ವಾರ್ನರ್​ ಪಡೆಗೆ ಶರಣಾಯಿತು.

ಅಬುಧಾಬಿ: ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಸನ್​ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ನಮ್ಮನ್ನು ಮೀರಿಸಿದರು ಎಂದು ಡೆಲ್ಲಿ ತಂಡದ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೋತ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, 162 ರನ್​ಗಳ ಗುರಿ ನೋಡಿ ನಾವು ಸಂತಸ ಪಟ್ಟಿದ್ದೆವು, ಈ ಮೈದಾನದಲದಲ್ಲಿ ನಮ್ಮ ಮೊದಲನೇ ಪಂದ್ಯವಾದ್ದರಿಂದ ಇಲ್ಲಿನ ಪಿಚ್ ಹೇಗೆ ವರ್ತಿಸುತ್ತದೆ ಎಂದು ತಿಳಿದಿರಲಿಲ್ಲ. ಅವರು ನಮ್ಮನ್ನು ಮೂರು ವಿಭಾಗಗಳಲ್ಲಿ ಮೀರಿಸಿದರು ಅದಕ್ಕಾಗಿ ಅವರಿಗೆ ಯಶಸ್ಸು ದೊರೆಯಿತು ಎಂದಿದ್ದಾರೆ.

ಎರಡನೇ ಇನ್ನಿಂಗ್ಸ್ ವೇಳೆ ಪಿಚ್ ಎರಡು ರೀತಿಯಲ್ಲಿ ವರ್ತಿಸಿತು. ಮೊದಲು ಚೆಂಡು ಬ್ಯಾಟ್​ನತ್ತ ಬರುತ್ತಿರಲಿಲ್ಲ. ನಂತರ ಇಬ್ಬನಿ ಬರಲಿದೆ ಎಂದು ನಾವು ಯೋಚಿಸಿದ್ದೆವು. ಆದರೆ ಈ ಸಂದರ್ಭದಲ್ಲಿ ಯಾವುದೇ ಕಾರಣ ನೀಡುವುದಿಲ್ಲ ಎಂದಿದ್ದಾರೆ.​

ಮೈದಾನವು ತುಂಬಾ ದೊಡ್ಡದಾಗಿದೆ, ನಾವು ಹೆಚ್ಚಾಗಿ ಎರಡು ರನ್​ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಬೌಂಡರಿಗಳೂ ದೊಡ್ಡದಾಗಿವೆ ಹೀಗಾಗಿ ಡಬಲ್ಸ್ ನಮಗೆ ಪ್ರಮುಖವಾದುದು ಎಂದು ತಿಳಿದಿತ್ತು. ಮುಂದಿನ ಪಂದ್ಯದಲ್ಲಿ ನಾವು ಉತ್ತಮವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಮರುತ್ತರವಾಗಿ ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕಂಡು 147 ರನ್​ ಗಳಿಸಿ 15 ರನ್​ಗಳಿಂದ ವಾರ್ನರ್​ ಪಡೆಗೆ ಶರಣಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.