ETV Bharat / sports

ಟಿ20 ವಿಶ್ವಕಪ್‌ನಿಂದ ಮುಂದಿನ ವಾರ ಟೀಂ ಇಂಡಿಯಾ ಕೂಡ ಹೊರಬರಲಿದೆ: ಶೋಯಬ್ ಅಖ್ತರ್

author img

By

Published : Oct 28, 2022, 7:04 PM IST

ನಾನು ಈ ಹಿಂದೆಯೇ ಪಾಕಿಸ್ತಾನ ತಂಡ ಇದೇ ವಾರ ಮನೆಗೆ ಬರಲಿದೆ ಎಂದು ಹೇಳಿದ್ದೆ. ಭಾರತ ತಂಡವೂ ಕೂಡ ಸೆಮಿಫೈನಲ್ಸ್​ ಆಡಿ ಮುಂದಿನ ವಾರ ವಾಪಸ್​ ಬರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್​ ಅಖ್ತರ್​ ಹೇಳಿದ್ದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

india-will-be-back-home-next-week-shoaib-akhtar
ಮುಂದಿನ ವಾರ ಟೀಂ ಇಂಡಿಯಾ ಕೂಡ ವಾಪಸ್​ ಬರಲಿದೆ: ಶೋಯಬ್ ಅಖ್ತರ್

ಟಿ20 ವಿಶ್ವಕಪ್​ನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತು ಸುಣ್ಣವಾಗಿದೆ. ಹೀಗಾಗಿ ಪಾಕ್​ ನಾಯಕ ಬಾಬರ್​ ಅಜಂ ಹಾಗೂ ಬಳಗದ ವಿರುದ್ಧ ಇಡೀ ಪಾಕಿಸ್ತಾನವೇ ಬೆಂಕಿ ಉಗುಳುತ್ತಿದೆ. ಇದರ ನಡುವೆ ಮಾಜಿ ವೇಗಿ​ ಶೋಯಬ್​ ಅಖ್ತರ್​, ಟೀಂ ಇಂಡಿಯಾ ಬಗ್ಗೆ ಹೊಟ್ಟೆಕಿಚ್ಚಿನ ಮಾತುಗಳನ್ನಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ತಂಡ ಸೋಲು ನಿಜವಾಗಿಯೂ ಕಂಗೆಡುವಂತೆ ಮಾಡಿದೆ. ನಾನು ಈ ಹಿಂದೆಯೇ ಪಾಕಿಸ್ತಾನ ತಂಡ ಇದೇ ವಾರ ಮನೆಗೆ ಬರಲಿದೆ ಎಂದು ಹೇಳಿದ್ದೆ. ಭಾರತ ತಂಡವೂ ಕೂಡ ಸೆಮಿಫೈನಲ್ಸ್​ ಆಡಿ ಮುಂದಿನ ವಾರ ವಾಪಸ್​ ಬರಲಿದೆ. ಅವರು ಅಷ್ಟೇನೂ ತೀಸ್ ಮಾರ್​ಖಾನ್​ಗಳಲ್ಲ ಎಂದು ಅಖ್ತರ್ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಹೇಳಿದ್ದಾರೆ.

ಇದೇ ವೇಳೆ ಪಾಕ್ ತಂಡದ ಪ್ರದರ್ಶನ ಸಾಧಾರಣವಾಗಿತ್ತು. ಅನರ್ಹ ಆಟಗಾರರನ್ನು ಆಯ್ಕೆ ಮಾಡಿ, ಒಳ್ಳೆಯ ಆಟಗಾರರನ್ನು ಹೊರಗೆ ಕೂರಿಸಲಾಗಿದೆ. ನೀವು ಮಾಡಿದ ಕೆಲಸ ನಿಮ್ಮನ್ನು ನರಕಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ದೇಶಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ನನಗಿದೆ. ನೀವು ಎಲ್ಲವನ್ನೂ ಹಾಳು ಮಾಡಿದ್ದೀರಿ ಎಂದೂ ಮಾಜಿ ವೇಗಿ ಪಾಕ್ ಕ್ರಿಕೆಟ್‌ ಬೋರ್ಡ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಮುಖಭಂಗ: ಪಿಸಿಬಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಪಾಕ್ ಮಾಜಿ​ ಕ್ರಿಕೆಟಿಗ

ಟಿ20 ವಿಶ್ವಕಪ್​ನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಹೀನಾಯವಾಗಿ ಸೋತು ಸುಣ್ಣವಾಗಿದೆ. ಹೀಗಾಗಿ ಪಾಕ್​ ನಾಯಕ ಬಾಬರ್​ ಅಜಂ ಹಾಗೂ ಬಳಗದ ವಿರುದ್ಧ ಇಡೀ ಪಾಕಿಸ್ತಾನವೇ ಬೆಂಕಿ ಉಗುಳುತ್ತಿದೆ. ಇದರ ನಡುವೆ ಮಾಜಿ ವೇಗಿ​ ಶೋಯಬ್​ ಅಖ್ತರ್​, ಟೀಂ ಇಂಡಿಯಾ ಬಗ್ಗೆ ಹೊಟ್ಟೆಕಿಚ್ಚಿನ ಮಾತುಗಳನ್ನಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ತಂಡ ಸೋಲು ನಿಜವಾಗಿಯೂ ಕಂಗೆಡುವಂತೆ ಮಾಡಿದೆ. ನಾನು ಈ ಹಿಂದೆಯೇ ಪಾಕಿಸ್ತಾನ ತಂಡ ಇದೇ ವಾರ ಮನೆಗೆ ಬರಲಿದೆ ಎಂದು ಹೇಳಿದ್ದೆ. ಭಾರತ ತಂಡವೂ ಕೂಡ ಸೆಮಿಫೈನಲ್ಸ್​ ಆಡಿ ಮುಂದಿನ ವಾರ ವಾಪಸ್​ ಬರಲಿದೆ. ಅವರು ಅಷ್ಟೇನೂ ತೀಸ್ ಮಾರ್​ಖಾನ್​ಗಳಲ್ಲ ಎಂದು ಅಖ್ತರ್ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಹೇಳಿದ್ದಾರೆ.

ಇದೇ ವೇಳೆ ಪಾಕ್ ತಂಡದ ಪ್ರದರ್ಶನ ಸಾಧಾರಣವಾಗಿತ್ತು. ಅನರ್ಹ ಆಟಗಾರರನ್ನು ಆಯ್ಕೆ ಮಾಡಿ, ಒಳ್ಳೆಯ ಆಟಗಾರರನ್ನು ಹೊರಗೆ ಕೂರಿಸಲಾಗಿದೆ. ನೀವು ಮಾಡಿದ ಕೆಲಸ ನಿಮ್ಮನ್ನು ನರಕಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರಿಂದ ದೇಶಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ನನಗಿದೆ. ನೀವು ಎಲ್ಲವನ್ನೂ ಹಾಳು ಮಾಡಿದ್ದೀರಿ ಎಂದೂ ಮಾಜಿ ವೇಗಿ ಪಾಕ್ ಕ್ರಿಕೆಟ್‌ ಬೋರ್ಡ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಮುಖಭಂಗ: ಪಿಸಿಬಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಪಾಕ್ ಮಾಜಿ​ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.