ETV Bharat / sports

IND vs SL ODI: ಮೂರನೇ ಪಂದ್ಯದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ

author img

By

Published : Jul 22, 2021, 10:24 PM IST

ಈಗಾಗಲೆ ಸರಣಿ ಗೆದ್ದಿರುವುದರಿಂದ ಚಹಲ್, ಕೃನಾಲ್ ಪಾಂಡ್ಯ ಬದಲಿಗೆ ಕೆ.ಗೌತಮ್, ಭುವನೇಶ್ವರ್ ಕುಮಾರ್​ ಅಥವಾ ದೀಪಕ್ ಚಹಾರ್​ ಬದಲಿಗೆ ಚೇತನ್ ಸಕಾರಿಯಾಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

India vs Sri Lanka 3rd ODI
ದೇವದತ್​ ಪಡಿಕ್ಕಲ್

ಕೊಲಂಬೊ: ಶುಕ್ರವಾರ ಭಾರತ ಮತ್ತು ಶ್ರೀಲಂಕಾ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಪ್ರವಾಸಿ ತಂಡ ಈಗಾಗಲೇ 2-0ಯಲ್ಲಿ ಸರಣಿಯನ್ನು ಗೆದ್ದುಕೊಂಡಿರುವುದರಿಂದ ಕೊನೆಯ ಔಪಚಾರಿಕ ಪಂದ್ಯದಲ್ಲಿ ಬೆಂಚ್​ ಕಾಯ್ದಿರುವ ದೇವದತ್ ಪಡಿಕ್ಕಲ್, ಕೆ.ಗೌತಮ್ ಹಾಗೂ ಚೇತನ್ ಸಕಾರಿಯ ಅಥವಾ ನವದೀಪ್ ಸೈನಿ ಅಂತಹ ಯುವ ಬೌಲರ್​ಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಈ ಸರಣಿಗೂ ಮುನ್ನ ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ತಂಡದಲ್ಲಿರುವ ಎಲ್ಲಾ ಆಟಗಾರರಿಗೂ ಈ ಸರಣಿಯಲ್ಲಿ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ, ಎ ಸರಣಿಯಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತಿದ್ದೆವು. ಆದರೆ ಇದು ಅಂತಾರಾಷ್ಟ್ರೀಯ ಸರಣಿಯಾಗಿದ್ದು, ಕೆಲವರು ಇನ್ನಷ್ಟು ದಿನ ಬೆಂಚ್​ ಕಾಯಬೇಕಾಗುತ್ತದೆ. ಆದರೆ ಆ ಎಲ್ಲಾ ಯುವ ಆಟಗಾರರಿಗೆ ಈ ಸರಣಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದರು.

ಆದರೆ ಭಾರತ ತಂಡ ಈಗಾಗಲೆ ಸರಣಿ ಗೆದ್ದಿರುವುದರಿಂದ ಚಹಲ್, ಕೃನಾಲ್ ಪಾಂಡ್ಯ ಬದಲಿಗೆ ಕೆ. ಗೌತಮ್, ಭುವನೇಶ್ವರ್ ಕುಮಾರ್​ ಅಥವಾ ದೀಪಕ್ ಚಹಾರ್​ ಬದಲಿಗೆ ಚೇತನ್ ಸಕಾರಿಯಾಗೆ ಅವಕಾಶ ಮಾಡಿಕೊಡುವ ಅವಕಾಶವಿದೆ. ಆದರೆ ಇದೆಲ್ಲಾ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್​ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿ ಮನೀಶ್ ಪಾಂಡೆ

ಮೊದಲ ಪಂದ್ಯದಲ್ಲಿ ರನ್​ಗಳಿಸಲು ಪರದಾಡಿದ್ದ ಕನ್ನಡಿಗ ಮನೀಶ್ ಪಾಂಡೆ ಎರಡನೇ ಪಂದ್ಯದಲ್ಲಿ ಉತ್ತಮ ರನ್​ಗಳಿಸುತ್ತಿರುವಾಗ ದುರದೃಷ್ಟಕರ ರೀತಿಯಲ್ಲಿ ರನ್​ಔಟ್​​ ಆಗಿದ್ದರು. ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನಿರೀಕ್ಷಿಸುತ್ತಿರವ ಮನೀಶ್ ಪಾಂಡೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶವನ್ನು ದ್ರಾವಿಡ್ ನೀಡಲಿದ್ದಾರಾ ಅಥವಾ ಯುವ ಕ್ರಿಕೆಟಿಗರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಪಡಿಕ್ಕಲ್/ರುತುರಾಜ್ ಗಾಯಕ್ವಾಡ್​ ನಡುವೆ ಪೈಪೋಟಿ

ನಾಳಿನ ಡೆಡ್​ ರಬ್ಬರ್​ನಲ್ಲಿ ದೇಶಿ ಕ್ರಿಕೆಟ್​ನ ರನ್​ ಸರದಾರರಾಗಿರುವ ರುತುರಾಜ್ ಗಾಯಕ್ವಾಡ್ ಮತ್ತು ಕರ್ನಾಟಕದ ದೇವದತ್​ ಪಡಿಕ್ಕಲ್​ಗೆ ಪೃಥ್ವಿ ಶಾ ಜಾಗದಲ್ಲಿ ಆಡಲು ತೀವ್ರ ಸ್ಪರ್ಧೆಯಿದೆ. ಇಬ್ಬರ ದೇಶಿ ಕ್ರಿಕೆಟ್ ಸರಾಸರಿ ಮತ್ತು ದಾಖಲೆಗಳನ್ನು ನೋಡಿದರೆ ಪಡಿಕ್ಕಲ್​ಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚಿದೆ.

ಆದರೆ ಗಾಯದಿಂದ ಚೇತರಿಸಿಕೊಂಡಿರುವ ವಿಕೆಟ್​ ಕೀಪರ್​ ಸಂಜು ಸಾಮ್ಸನ್​ಗೆ ಅವಕಾಶ ಮಾಡಿಕೊಡಬೇಕಾದರೆ ಮನೀಶ್​ ಪಾಂಡೆಯನ್ನು ಹೊರಗಿಟ್ಟು, ಸಂಜುಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಮಾಡಿಕೊಡಬಹುದು. ಸ್ಪೋಟಕ ಬ್ಯಾಟ್ಸ್​ಮನ್ ಇಶಾನ್​ ಕಿಶನ್​ ಬ್ಯಾಟ್ಸ್​ಮನ್ ಇನ್ನಿಂಗ್ಸ್​ ಆರಂಭಿಸಿದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ: 'ಇಂದಿರಾನಗರ ಮಾತ್ರವಲ್ಲ, ಅವರು ಇಡೀ ಭಾರತದ ಗೂಂಡಾ': ಕೋಚ್​​ ದ್ರಾವಿಡ್​ ಬಗ್ಗೆ ಚಹರ್ ಮಾತು

ಕೊಲಂಬೊ: ಶುಕ್ರವಾರ ಭಾರತ ಮತ್ತು ಶ್ರೀಲಂಕಾ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಪ್ರವಾಸಿ ತಂಡ ಈಗಾಗಲೇ 2-0ಯಲ್ಲಿ ಸರಣಿಯನ್ನು ಗೆದ್ದುಕೊಂಡಿರುವುದರಿಂದ ಕೊನೆಯ ಔಪಚಾರಿಕ ಪಂದ್ಯದಲ್ಲಿ ಬೆಂಚ್​ ಕಾಯ್ದಿರುವ ದೇವದತ್ ಪಡಿಕ್ಕಲ್, ಕೆ.ಗೌತಮ್ ಹಾಗೂ ಚೇತನ್ ಸಕಾರಿಯ ಅಥವಾ ನವದೀಪ್ ಸೈನಿ ಅಂತಹ ಯುವ ಬೌಲರ್​ಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಈ ಸರಣಿಗೂ ಮುನ್ನ ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ತಂಡದಲ್ಲಿರುವ ಎಲ್ಲಾ ಆಟಗಾರರಿಗೂ ಈ ಸರಣಿಯಲ್ಲಿ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ, ಎ ಸರಣಿಯಲ್ಲಿ ಎಲ್ಲರಿಗೂ ಅವಕಾಶ ಮಾಡಿಕೊಡುತ್ತಿದ್ದೆವು. ಆದರೆ ಇದು ಅಂತಾರಾಷ್ಟ್ರೀಯ ಸರಣಿಯಾಗಿದ್ದು, ಕೆಲವರು ಇನ್ನಷ್ಟು ದಿನ ಬೆಂಚ್​ ಕಾಯಬೇಕಾಗುತ್ತದೆ. ಆದರೆ ಆ ಎಲ್ಲಾ ಯುವ ಆಟಗಾರರಿಗೆ ಈ ಸರಣಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದರು.

ಆದರೆ ಭಾರತ ತಂಡ ಈಗಾಗಲೆ ಸರಣಿ ಗೆದ್ದಿರುವುದರಿಂದ ಚಹಲ್, ಕೃನಾಲ್ ಪಾಂಡ್ಯ ಬದಲಿಗೆ ಕೆ. ಗೌತಮ್, ಭುವನೇಶ್ವರ್ ಕುಮಾರ್​ ಅಥವಾ ದೀಪಕ್ ಚಹಾರ್​ ಬದಲಿಗೆ ಚೇತನ್ ಸಕಾರಿಯಾಗೆ ಅವಕಾಶ ಮಾಡಿಕೊಡುವ ಅವಕಾಶವಿದೆ. ಆದರೆ ಇದೆಲ್ಲಾ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್​ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.

ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿ ಮನೀಶ್ ಪಾಂಡೆ

ಮೊದಲ ಪಂದ್ಯದಲ್ಲಿ ರನ್​ಗಳಿಸಲು ಪರದಾಡಿದ್ದ ಕನ್ನಡಿಗ ಮನೀಶ್ ಪಾಂಡೆ ಎರಡನೇ ಪಂದ್ಯದಲ್ಲಿ ಉತ್ತಮ ರನ್​ಗಳಿಸುತ್ತಿರುವಾಗ ದುರದೃಷ್ಟಕರ ರೀತಿಯಲ್ಲಿ ರನ್​ಔಟ್​​ ಆಗಿದ್ದರು. ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನಿರೀಕ್ಷಿಸುತ್ತಿರವ ಮನೀಶ್ ಪಾಂಡೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶವನ್ನು ದ್ರಾವಿಡ್ ನೀಡಲಿದ್ದಾರಾ ಅಥವಾ ಯುವ ಕ್ರಿಕೆಟಿಗರಿಗೆ ಮಣೆ ಹಾಕಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಪಡಿಕ್ಕಲ್/ರುತುರಾಜ್ ಗಾಯಕ್ವಾಡ್​ ನಡುವೆ ಪೈಪೋಟಿ

ನಾಳಿನ ಡೆಡ್​ ರಬ್ಬರ್​ನಲ್ಲಿ ದೇಶಿ ಕ್ರಿಕೆಟ್​ನ ರನ್​ ಸರದಾರರಾಗಿರುವ ರುತುರಾಜ್ ಗಾಯಕ್ವಾಡ್ ಮತ್ತು ಕರ್ನಾಟಕದ ದೇವದತ್​ ಪಡಿಕ್ಕಲ್​ಗೆ ಪೃಥ್ವಿ ಶಾ ಜಾಗದಲ್ಲಿ ಆಡಲು ತೀವ್ರ ಸ್ಪರ್ಧೆಯಿದೆ. ಇಬ್ಬರ ದೇಶಿ ಕ್ರಿಕೆಟ್ ಸರಾಸರಿ ಮತ್ತು ದಾಖಲೆಗಳನ್ನು ನೋಡಿದರೆ ಪಡಿಕ್ಕಲ್​ಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚಿದೆ.

ಆದರೆ ಗಾಯದಿಂದ ಚೇತರಿಸಿಕೊಂಡಿರುವ ವಿಕೆಟ್​ ಕೀಪರ್​ ಸಂಜು ಸಾಮ್ಸನ್​ಗೆ ಅವಕಾಶ ಮಾಡಿಕೊಡಬೇಕಾದರೆ ಮನೀಶ್​ ಪಾಂಡೆಯನ್ನು ಹೊರಗಿಟ್ಟು, ಸಂಜುಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಮಾಡಿಕೊಡಬಹುದು. ಸ್ಪೋಟಕ ಬ್ಯಾಟ್ಸ್​ಮನ್ ಇಶಾನ್​ ಕಿಶನ್​ ಬ್ಯಾಟ್ಸ್​ಮನ್ ಇನ್ನಿಂಗ್ಸ್​ ಆರಂಭಿಸಿದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ: 'ಇಂದಿರಾನಗರ ಮಾತ್ರವಲ್ಲ, ಅವರು ಇಡೀ ಭಾರತದ ಗೂಂಡಾ': ಕೋಚ್​​ ದ್ರಾವಿಡ್​ ಬಗ್ಗೆ ಚಹರ್ ಮಾತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.